ಪ್ರಧಾನಿ ರಾಜೀನಾಮೆಗೆ ಅಡ್ವಾಣಿ ಆಗ್ರಹ
ನವದೆಹಲಿ (ಐಎಎನ್ಎಸ್): 2008ರಲ್ಲಿ ಸರ್ಕಾರದ ಪರ ವಿಶ್ವಾಸಮತ ಯಾಚನೆಗಾಗಿ ಸಂಸದರಿಗೆ ಲಂಚ ನೀಡಿದ್ದುದು ವಿಕಿಲೀಕ್ಸ್ ಮಾಹಿತಿಯಿಂದ ದೃಢವಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಡಳಿತ ನಡೆಸುವ ಹಕ್ಕು ಕಳೆದುಕೊಂಡಿದ್ದಾರೆ; ಆದ್ದರಿಂದ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎನ್ಡಿಎ ನಾಯಕ ಎಲ್.ಕೆ.ಅಡ್ವಾಣಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಅವಧಿಯ ಯುಪಿಎ ಸರ್ಕಾರ ರಾಜಕೀಯ ಪಾಪದ ಬಲದಿಂದ ಬದುಕುಳಿದಿದ್ದು ಈಗಿನ ಸರ್ಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ. ಈ ಮಾಹಿತಿ ಸೋರಿಕೆಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಬಂದಿದೆ ಎಂದು ಹೇಳಿದರು.
14ನೇ ಲೋಕಸಭೆಯಲ್ಲಿ ಸಂಸತ್ತಿನ ಹೊರಗೆ ಲಂಚ ನೀಡಿರುವುದರಿಂದ ಅದಕ್ಕೂ ಈಗಿನ 15ನೇ ಲೋಕಸಭೆಗೂ ಸಂಬಂಧವಿಲ್ಲ ಎಂಬ ಪ್ರಣವ್ ಮುಖರ್ಜಿ ಅವರ ಹೇಳಿಕೆಯನ್ನು ಅಡ್ವಾಣಿ ತಳ್ಳಿಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.