<p><strong>ನವದೆಹಲಿ (ಐಎಎನ್ಎಸ್):</strong> 2008ರಲ್ಲಿ ಸರ್ಕಾರದ ಪರ ವಿಶ್ವಾಸಮತ ಯಾಚನೆಗಾಗಿ ಸಂಸದರಿಗೆ ಲಂಚ ನೀಡಿದ್ದುದು ವಿಕಿಲೀಕ್ಸ್ ಮಾಹಿತಿಯಿಂದ ದೃಢವಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಡಳಿತ ನಡೆಸುವ ಹಕ್ಕು ಕಳೆದುಕೊಂಡಿದ್ದಾರೆ; ಆದ್ದರಿಂದ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎನ್ಡಿಎ ನಾಯಕ ಎಲ್.ಕೆ.ಅಡ್ವಾಣಿ ಆಗ್ರಹಿಸಿದ್ದಾರೆ.<br /> <br /> ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಅವಧಿಯ ಯುಪಿಎ ಸರ್ಕಾರ ರಾಜಕೀಯ ಪಾಪದ ಬಲದಿಂದ ಬದುಕುಳಿದಿದ್ದು ಈಗಿನ ಸರ್ಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ. ಈ ಮಾಹಿತಿ ಸೋರಿಕೆಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಬಂದಿದೆ ಎಂದು ಹೇಳಿದರು.<br /> <br /> 14ನೇ ಲೋಕಸಭೆಯಲ್ಲಿ ಸಂಸತ್ತಿನ ಹೊರಗೆ ಲಂಚ ನೀಡಿರುವುದರಿಂದ ಅದಕ್ಕೂ ಈಗಿನ 15ನೇ ಲೋಕಸಭೆಗೂ ಸಂಬಂಧವಿಲ್ಲ ಎಂಬ ಪ್ರಣವ್ ಮುಖರ್ಜಿ ಅವರ ಹೇಳಿಕೆಯನ್ನು ಅಡ್ವಾಣಿ ತಳ್ಳಿಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> 2008ರಲ್ಲಿ ಸರ್ಕಾರದ ಪರ ವಿಶ್ವಾಸಮತ ಯಾಚನೆಗಾಗಿ ಸಂಸದರಿಗೆ ಲಂಚ ನೀಡಿದ್ದುದು ವಿಕಿಲೀಕ್ಸ್ ಮಾಹಿತಿಯಿಂದ ದೃಢವಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಡಳಿತ ನಡೆಸುವ ಹಕ್ಕು ಕಳೆದುಕೊಂಡಿದ್ದಾರೆ; ಆದ್ದರಿಂದ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎನ್ಡಿಎ ನಾಯಕ ಎಲ್.ಕೆ.ಅಡ್ವಾಣಿ ಆಗ್ರಹಿಸಿದ್ದಾರೆ.<br /> <br /> ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಅವಧಿಯ ಯುಪಿಎ ಸರ್ಕಾರ ರಾಜಕೀಯ ಪಾಪದ ಬಲದಿಂದ ಬದುಕುಳಿದಿದ್ದು ಈಗಿನ ಸರ್ಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ. ಈ ಮಾಹಿತಿ ಸೋರಿಕೆಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಬಂದಿದೆ ಎಂದು ಹೇಳಿದರು.<br /> <br /> 14ನೇ ಲೋಕಸಭೆಯಲ್ಲಿ ಸಂಸತ್ತಿನ ಹೊರಗೆ ಲಂಚ ನೀಡಿರುವುದರಿಂದ ಅದಕ್ಕೂ ಈಗಿನ 15ನೇ ಲೋಕಸಭೆಗೂ ಸಂಬಂಧವಿಲ್ಲ ಎಂಬ ಪ್ರಣವ್ ಮುಖರ್ಜಿ ಅವರ ಹೇಳಿಕೆಯನ್ನು ಅಡ್ವಾಣಿ ತಳ್ಳಿಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>