<p><strong>ಹುಕ್ಕೇರಿ: </strong>ತಾಲ್ಲೂಕಿನ ಶಿಂಧಿಹಟ್ಟಿಯ ಲಕ್ಷ್ಮೀ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡುವುದನ್ನು ಜನರು ನಿಲ್ಲಿಸಿ ಮೂರು ಕೋಣಗಳನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ನಡೆದಿದೆ.<br /> <br /> ದೇವರ ಹೆಸರಿನಲ್ಲಿ ಬಿಟ್ಟಿದ್ದ ಮೂರು ಕೋಣಗಳನ್ನು ದೇವಿಗೆ ಬಲಿ ಕೊಡುವುದನ್ನು ನಿಲ್ಲಿಸಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಗೋವಂಶ ರಕ್ಷಾ ದಳಕ್ಕೆ ಜನರು ಒಪ್ಪಿಸಿದರು.<br /> <br /> ಶಿಂಧಿಹಟ್ಟಿ-ಹೊಸಪೇಟೆ ಗ್ರಾಮಗಳಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆಯರಾದ ಲಕ್ಷ್ಮೀ ದೇವಿ, ಬಂಡೆಮ್ಮ ದೇವಿ ಹಾಗೂ ಕಮಲಮ್ಮ ದೇವತೆಗಳಿಗೆ ಐದು ದಿನಗಳವರೆಗೆ ಜಾತ್ರೆ ನಡೆಯುತ್ತದೆ. ಜಾತ್ರೆ ಅಂಗವಾಗಿ ಕೋಣ, ಕುರಿ-ಆಡು, ಮತ್ತಿತರ ಪ್ರಾಣಿಗಳನ್ನು ಬಲಿಕೊಡುವ ಸಂಪ್ರದಾಯ ಇತ್ತು.<br /> <br /> ಬೆಂಗಳೂರಿನಿಂದ ಆಗಮಿಸಿದ್ದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಗೋವಂಶ ರಕ್ಷಾ ದಳದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಮಂಗಳವಾರವೇ ಗ್ರಾಮದಲ್ಲಿ ಸಂಚರಿಸಿ ಪ್ರಾಣಿ ದಯಾ ಸಂದೇಶ ಜಾಥಾ ನಡೆಸಿದ್ದರು. <br /> ಜಾಥಾದಿಂದ <br /> ಮನ ಪರಿವರ್ತನೆಗೊಂಡು ಗ್ರಾಮಸ್ಥರು ಸ್ವಇಚ್ಛೆಯಿಂದ ಮೂರು ಕೋಣಗಳನ್ನು ಸ್ವಾಮೀಜಿ ಅವರಿಗೆ ಒಪ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ: </strong>ತಾಲ್ಲೂಕಿನ ಶಿಂಧಿಹಟ್ಟಿಯ ಲಕ್ಷ್ಮೀ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡುವುದನ್ನು ಜನರು ನಿಲ್ಲಿಸಿ ಮೂರು ಕೋಣಗಳನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ನಡೆದಿದೆ.<br /> <br /> ದೇವರ ಹೆಸರಿನಲ್ಲಿ ಬಿಟ್ಟಿದ್ದ ಮೂರು ಕೋಣಗಳನ್ನು ದೇವಿಗೆ ಬಲಿ ಕೊಡುವುದನ್ನು ನಿಲ್ಲಿಸಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಗೋವಂಶ ರಕ್ಷಾ ದಳಕ್ಕೆ ಜನರು ಒಪ್ಪಿಸಿದರು.<br /> <br /> ಶಿಂಧಿಹಟ್ಟಿ-ಹೊಸಪೇಟೆ ಗ್ರಾಮಗಳಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆಯರಾದ ಲಕ್ಷ್ಮೀ ದೇವಿ, ಬಂಡೆಮ್ಮ ದೇವಿ ಹಾಗೂ ಕಮಲಮ್ಮ ದೇವತೆಗಳಿಗೆ ಐದು ದಿನಗಳವರೆಗೆ ಜಾತ್ರೆ ನಡೆಯುತ್ತದೆ. ಜಾತ್ರೆ ಅಂಗವಾಗಿ ಕೋಣ, ಕುರಿ-ಆಡು, ಮತ್ತಿತರ ಪ್ರಾಣಿಗಳನ್ನು ಬಲಿಕೊಡುವ ಸಂಪ್ರದಾಯ ಇತ್ತು.<br /> <br /> ಬೆಂಗಳೂರಿನಿಂದ ಆಗಮಿಸಿದ್ದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಗೋವಂಶ ರಕ್ಷಾ ದಳದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಮಂಗಳವಾರವೇ ಗ್ರಾಮದಲ್ಲಿ ಸಂಚರಿಸಿ ಪ್ರಾಣಿ ದಯಾ ಸಂದೇಶ ಜಾಥಾ ನಡೆಸಿದ್ದರು. <br /> ಜಾಥಾದಿಂದ <br /> ಮನ ಪರಿವರ್ತನೆಗೊಂಡು ಗ್ರಾಮಸ್ಥರು ಸ್ವಇಚ್ಛೆಯಿಂದ ಮೂರು ಕೋಣಗಳನ್ನು ಸ್ವಾಮೀಜಿ ಅವರಿಗೆ ಒಪ್ಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>