<p><strong>ಬೆಂಗಳೂರು: </strong>`ಮಾಹಿತಿ ನೀಡುವ ಭರಾಟೆಯಲ್ಲಿ ಈ ದಿನ ಬೇರೆಯವರಿಗೆ ನೋವಾಗುವಂತಹ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ರೀತಿ ಆಗಬಾರದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹೇಳಿದರು.<br /> ಶುಕ್ರವಾರ ಪ್ರೆಸ್ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಪ್ರೆಸ್ಕ್ಲಬ್ ಭವನ~ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಈ ಪ್ರೆಸ್ಕ್ಲಬ್ ಭವನ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ಹಣ ವೆಚ್ಚವಾಗಿದೆ~ ಎಂದು ಹೇಳಿದರು.<br /> ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, 24 ಗಂಟೆಯೂ ಪತ್ರಕರ್ತರಾಗಿರಬಾರದು. ಏಕೆಂದರೆ, ಅವರಿಗೂ ಒಂದು ಜೀವನವಿದೆ. ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವಂತಹ ಕೆಲಸವನ್ನು ಮಾಡಬಾರದು. ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು~ ಎಂದು ಸಲಹೆ ನೀಡಿದರು.<br /> <br /> `ಮಳೆ ಬಂದರೆ ಈ ಸ್ಥಳದಿಂದ ಹೋಗೋದಕ್ಕೆ ಆಗಲ್ಲ ಎಂದು ಪ್ರೆಸ್ಕ್ಲಬ್ ಸಿಬ್ಬಂದಿ ಹೇಳುತ್ತಿದ್ದರು. ಅವತ್ತು ನೋಡಿ ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದಾಗ, ಎಲ್ಲರೂ ಹೇಳಿ ಹೋದರು ಇವರೂ ಸಹ ಹಾಗೇ ಆಶ್ವಾಸನೆ ನೀಡಿ ಮರೆಯುತ್ತಾರೆ ಎಂದು ಸ್ವಲ್ಪ ಜನ ಮಾತನಾಡಿಕೊಂಡಿದ್ದರು. <br /> <br /> ಅವರ ಮಾತಿಗೆ ಇಂದು ಉತ್ತರ ಸಿಕ್ಕಿರಬೇಕು~ ಎಂದರು. `ಪ್ರೆಸ್ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್, ಮೇಯರ್ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ, ಉಪ ಮೇಯರ್ ಎಸ್.ಹರೀಶ್ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಮಾಹಿತಿ ನೀಡುವ ಭರಾಟೆಯಲ್ಲಿ ಈ ದಿನ ಬೇರೆಯವರಿಗೆ ನೋವಾಗುವಂತಹ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ರೀತಿ ಆಗಬಾರದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹೇಳಿದರು.<br /> ಶುಕ್ರವಾರ ಪ್ರೆಸ್ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಪ್ರೆಸ್ಕ್ಲಬ್ ಭವನ~ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಈ ಪ್ರೆಸ್ಕ್ಲಬ್ ಭವನ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ಹಣ ವೆಚ್ಚವಾಗಿದೆ~ ಎಂದು ಹೇಳಿದರು.<br /> ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, 24 ಗಂಟೆಯೂ ಪತ್ರಕರ್ತರಾಗಿರಬಾರದು. ಏಕೆಂದರೆ, ಅವರಿಗೂ ಒಂದು ಜೀವನವಿದೆ. ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವಂತಹ ಕೆಲಸವನ್ನು ಮಾಡಬಾರದು. ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು~ ಎಂದು ಸಲಹೆ ನೀಡಿದರು.<br /> <br /> `ಮಳೆ ಬಂದರೆ ಈ ಸ್ಥಳದಿಂದ ಹೋಗೋದಕ್ಕೆ ಆಗಲ್ಲ ಎಂದು ಪ್ರೆಸ್ಕ್ಲಬ್ ಸಿಬ್ಬಂದಿ ಹೇಳುತ್ತಿದ್ದರು. ಅವತ್ತು ನೋಡಿ ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದಾಗ, ಎಲ್ಲರೂ ಹೇಳಿ ಹೋದರು ಇವರೂ ಸಹ ಹಾಗೇ ಆಶ್ವಾಸನೆ ನೀಡಿ ಮರೆಯುತ್ತಾರೆ ಎಂದು ಸ್ವಲ್ಪ ಜನ ಮಾತನಾಡಿಕೊಂಡಿದ್ದರು. <br /> <br /> ಅವರ ಮಾತಿಗೆ ಇಂದು ಉತ್ತರ ಸಿಕ್ಕಿರಬೇಕು~ ಎಂದರು. `ಪ್ರೆಸ್ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್, ಮೇಯರ್ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ, ಉಪ ಮೇಯರ್ ಎಸ್.ಹರೀಶ್ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>