<p><strong>ಚನ್ನಗಿರಿ:</strong> ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ತೋಟದಲ್ಲಿ ಮಾವು, ಹಲಸಿನ ಮರಗಳಲ್ಲಿ ಗೊಂಚಲು, ಗೊಂಚಲು ಹಣ್ಣು ಬಿಟ್ಟು ಕಂಗೊಳಿಸುತ್ತಿವೆ.<br /> <br /> 2004 ರಲ್ಲಿ ಈ ವಿದ್ಯಾಲಯದಲ್ಲಿ ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ನೆಡಲಾಗಿತ್ತು.<br /> <br /> 100 ಮಾವು, 75 ಹಲಸು, 25 ನೇರಳೆ ಹಾಗೂ 25 ಸಸಿ ಬೆಟ್ಟದ ನೆಲ್ಲಿಕಾಯಿ ಸಸಿಗಳನ್ನು ಹಾಕಲಾಗಿತ್ತು. ಇದರ ಜತೆಗೆ ತೇಗ, ಬೇವು ಮುಂತಾದ 2000 ಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಅಂದರೆ ಈ ವಿದ್ಯಾಲಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ ಒಂದು ಸಸಿ ನೆಟ್ಟು ಪಾಲನೆ ಫೋಷಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಈ ತೋಟದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳಲಾಗಿದೆ. ಇದುವರೆಗೂ ಯಾವುದೇ<br /> ರಾಸಾಯನಿಕಗಳನ್ನು ಬಳಸಿರುವುದಿಲ್ಲ.<br /> <br /> ಈಗ ಮಾವು ಹಾಗೂ ಹಲಸು ಹಣ್ಣು ಬಿಡಲು ಆರಂಭಿಸಿವೆ. ಇದುವರೆಗೆ 500 ಕೆ.ಜಿಗಿಂತಲೂ ಹೆಚ್ಚು ಮಾವಿನ ಹಣ್ಣುಗಳು ಬಿಟ್ಟಿವೆ. ಈ ಎಲ್ಲಾ ಮಾವಿನ ಹಣ್ಣುಗಳನ್ನು ಹಣ್ಣು ಮಾಡಿ, ನಂತರ ವಿದ್ಯಾಲಯದಲ್ಲಿರುವ 480 ವಿದ್ಯಾರ್ಥಿಗಳಿಗೆ ತಿನ್ನಲು ವಿತರಣೆ ಮಾಡಲಾಗಿದೆ.<br /> <br /> ಅದೇ ರೀತಿ ಹಲಸಿನ ಹಣ್ಣನ್ನು ಕೂಡ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮತ್ತೆ ಈ ಬಾರಿ ಸಪೋಟ, ತೆಂಗು, ಮಾವು, ನಿಂಬೆ, ನೆಲ್ಲಿ ಸಸಿಗಳನ್ನು ಅರಣ್ಯ ಇಲಾಖೆಯವರ ಸಹಯೋಗದೊಂದಿಗೆ ಬೆಳೆಸಲು ತೀರ್ಮಾನಿಸಲಾಗಿದೆ.<br /> <br /> ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗುತ್ತದೆ. ಈ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆಲ್ಲಾ ಪ್ರಾಂಶುಪಾಲ ಹಾಗೂ ಸಿಬ್ಬಂದಿ ಸಹಕಾರವೇ ಕಾರಣವಾಗಿದೆ. ಒಟ್ಟಾರೆ ಹಲವಾರು ಜಾತಿಯ ಸಸಿಗಳನ್ನು ಬೆಳೆಸಿ ವಿದ್ಯಾಲಯದಲ್ಲಿ ಉತ್ತಮ ಪರಿಸರವನ್ನು ರೂಪಿಸಲಾಗಿದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎ.ರವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ:</strong> ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ತೋಟದಲ್ಲಿ ಮಾವು, ಹಲಸಿನ ಮರಗಳಲ್ಲಿ ಗೊಂಚಲು, ಗೊಂಚಲು ಹಣ್ಣು ಬಿಟ್ಟು ಕಂಗೊಳಿಸುತ್ತಿವೆ.<br /> <br /> 2004 ರಲ್ಲಿ ಈ ವಿದ್ಯಾಲಯದಲ್ಲಿ ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ನೆಡಲಾಗಿತ್ತು.<br /> <br /> 100 ಮಾವು, 75 ಹಲಸು, 25 ನೇರಳೆ ಹಾಗೂ 25 ಸಸಿ ಬೆಟ್ಟದ ನೆಲ್ಲಿಕಾಯಿ ಸಸಿಗಳನ್ನು ಹಾಕಲಾಗಿತ್ತು. ಇದರ ಜತೆಗೆ ತೇಗ, ಬೇವು ಮುಂತಾದ 2000 ಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಅಂದರೆ ಈ ವಿದ್ಯಾಲಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ ಒಂದು ಸಸಿ ನೆಟ್ಟು ಪಾಲನೆ ಫೋಷಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಈ ತೋಟದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳಲಾಗಿದೆ. ಇದುವರೆಗೂ ಯಾವುದೇ<br /> ರಾಸಾಯನಿಕಗಳನ್ನು ಬಳಸಿರುವುದಿಲ್ಲ.<br /> <br /> ಈಗ ಮಾವು ಹಾಗೂ ಹಲಸು ಹಣ್ಣು ಬಿಡಲು ಆರಂಭಿಸಿವೆ. ಇದುವರೆಗೆ 500 ಕೆ.ಜಿಗಿಂತಲೂ ಹೆಚ್ಚು ಮಾವಿನ ಹಣ್ಣುಗಳು ಬಿಟ್ಟಿವೆ. ಈ ಎಲ್ಲಾ ಮಾವಿನ ಹಣ್ಣುಗಳನ್ನು ಹಣ್ಣು ಮಾಡಿ, ನಂತರ ವಿದ್ಯಾಲಯದಲ್ಲಿರುವ 480 ವಿದ್ಯಾರ್ಥಿಗಳಿಗೆ ತಿನ್ನಲು ವಿತರಣೆ ಮಾಡಲಾಗಿದೆ.<br /> <br /> ಅದೇ ರೀತಿ ಹಲಸಿನ ಹಣ್ಣನ್ನು ಕೂಡ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮತ್ತೆ ಈ ಬಾರಿ ಸಪೋಟ, ತೆಂಗು, ಮಾವು, ನಿಂಬೆ, ನೆಲ್ಲಿ ಸಸಿಗಳನ್ನು ಅರಣ್ಯ ಇಲಾಖೆಯವರ ಸಹಯೋಗದೊಂದಿಗೆ ಬೆಳೆಸಲು ತೀರ್ಮಾನಿಸಲಾಗಿದೆ.<br /> <br /> ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗುತ್ತದೆ. ಈ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆಲ್ಲಾ ಪ್ರಾಂಶುಪಾಲ ಹಾಗೂ ಸಿಬ್ಬಂದಿ ಸಹಕಾರವೇ ಕಾರಣವಾಗಿದೆ. ಒಟ್ಟಾರೆ ಹಲವಾರು ಜಾತಿಯ ಸಸಿಗಳನ್ನು ಬೆಳೆಸಿ ವಿದ್ಯಾಲಯದಲ್ಲಿ ಉತ್ತಮ ಪರಿಸರವನ್ನು ರೂಪಿಸಲಾಗಿದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎ.ರವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>