<p>ಫೇಸ್ಲೆಸ್ ಫೇಸ್ಬುಕ್- ಹೀಗೆಂದು ತಮ್ಮ ಚಿತ್ರ `12 ಎಎಂ~ ಅನ್ನು ಬಣ್ಣಿಸಿದ್ದು ಯುವ ನಿರ್ದೇಶಕ ಕಾರ್ತೀಕ್. ವಿಶ್ಲೇಷಣೆ ವಿಚಿತ್ರವಾಗಿದೆಯಲ್ಲ ಎನ್ನುವ ಪ್ರಶ್ನೆಗೆ ಅವರು ನೀಡಿದ ಉತ್ತರ- `ನಮ್ಮ ಚಿತ್ರದಲ್ಲಿ ಇರುವ ಬಹುತೇಕರು ಹೊಸಬರು. ಅವರ ಮುಖಗಳಿಗೆ ತಾರಾ ವರ್ಚಸ್ಸಿಲ್ಲ. ಆ ಕಾರಣದಿಂದಲೇ ನಮ್ಮ ಸಿನಿಮಾ ಫೇಸ್ಲೆಸ್ ಫೇಸ್ಬುಕ್~.<br /> <br /> `12 ಎಎಂ~ ಸಿನಿಮಾದ ಕಥೆಯ ಗುಟ್ಟು ಬಿಟ್ಟುಕೊಡಲು ಒಪ್ಪದ ಕಾರ್ತೀಕ್, ಎಲ್ಲವನ್ನೂ ತೆರೆಯೇ ಮೇಲೆಯೇ ನೋಡಿ ಎಂದರು. ಕಾಶಿನಾಥ್ ಗರಡಿಯಲ್ಲಿ ಪಳಗಿರುವ ಅವರು, ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಶಿಷ್ಯನ ಮೇಲಿನ ಪ್ರೀತಿಯಿಂದ ಕಾಶಿನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವುದು ಚಿತ್ರದ ವಿಶೇಷಗಳಲ್ಲೊಂದು. ಈ ವಿಷಯವನ್ನು ಹೆಮ್ಮೆಯಿಂದ ತಿಳಿಸಿದ ಕಾಶಿ, `ಚಿತ್ರದಲ್ಲಿ ತಾವೆಲ್ಲೂ ಹಸ್ತಕ್ಷೇಪ ಮಾಡಿಲ್ಲ~ ಎಂದರು.<br /> <br /> ಅಂದಹಾಗೆ, `12 ಎಎಂ~ ಕಾಶಿನಾಥ್ರ ಪರಿಕಲ್ಪನೆಯಾದ `ನಿರ್ಮಾಪಕರ ತರಬೇತಿ ಸಂಸ್ಥೆ~ಯಡಿ ಸಿದ್ಧವಾಗುತ್ತಿದೆ. ಚಿತ್ರದ ಮೂಲಕ ವಿಜಯಕುಮಾರ್ ಎನ್ನುವ ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. <br /> <br /> ನಿರ್ಮಾಪಕರಿಗೆ ಸಿನಿಮಾ ನಿರ್ಮಾಣದ ಗುಟ್ಟುಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡುವುದು ಈ ಸಂಸ್ಥೆಯ ಉದ್ದೇಶವಂತೆ. ಕಾಶಿನಾಥ್ರ ಸಲಹೆಗಳಿಂದ `12 ಎಎಂ~ ನಿರ್ಮಾಣದಲ್ಲಿ ಸುಮಾರು ಶೇ. 20ರಷ್ಟು ಮಿಗಿತಾಯ ಸಾಧ್ಯವಾಗಬಹುದು ಎನ್ನುವುದು ನಿರ್ಮಾಪಕರ ಅಂದಾಜು. <br /> <br /> ಸಲಹೆ-ತರಬೇತಿಯ ಜೊತೆಗೆ ಪುಟ್ಟ ಪಾತ್ರವೊಂದರಲ್ಲಿ ಕಾಶಿನಾಥ್ ನಟಿಸುತ್ತಿದ್ದಾರೆ. ಅವರ ಪುತ್ರ ಅಭಿಮನ್ಯು ಚಿತ್ರದ ನಾಯಕ. `ಬಾಜಿ~ ಚಿತ್ರದಲ್ಲಿ ನಿರ್ಮಾಪಕರ ಸಂಖ್ಯಾಶಾಸ್ತ್ರದ ನಂಬಿಕೆಯ ಮೇರೆಗೆ ಅಲೋಕ್ ಎಂದು ಹೆಸರು ಬದಲಿಸಿಕೊಂಡಿದ್ದ ಅಭಿಮನ್ಯು, ಇದೀಗ ಮೂಲ ಹೆಸರಿಗೆ ಮರಳಿದ್ದಾರೆ. `ಹೆಸರು ಬದಲಿಸಿಕೊಳ್ಳುವುದು ಮುಜುಗರದ ಸಂಗತಿ~ ಎನ್ನುವುದು ಅವರ ಅನುಭವ. ಅಭಿಗೆ ನಾಯಕಿಯಾಗಿ ದಿವ್ಯಾ ಶ್ರೀಧರ್ ನಟಿಸುತ್ತಿದ್ದಾರೆ. <br /> <br /> ಚಿತ್ರದಲ್ಲಿ ಅಭಿ-ದಿವ್ಯಾ ಅವರದ್ದು ಕಾಲೇಜು ವಿದ್ಯಾರ್ಥಿಗಳ ಪಾತ್ರ. `ಹಾಗಿದ್ದರೆ ಲವ್ವ-ಸಾವು ಇರಲೇಬೇಕಲ್ಲವಾ? ಚಿತ್ರದ ಶೀರ್ಷಿಕೆ `12 ಎಎಂ~ನೊಂದಿಗೆ ಮಧ್ಯರಾತ್ರಿ ಎನ್ನುವ ವಿಶೇಷಣ ಬೇರೆ ಇದೆ...~ ಎಂದು ಪತ್ರಕರ್ತರು ಎಷ್ಟು ಕೆಣಕಿದರೂ ಹೊಸ ಜೋಡಿ ಬಾಯಿಬಿಡಲಿಲ್ಲ. ಯಾಕೆಂದರೆ ಚಿತ್ರದ ಕಥೆಯನ್ನು ನಿರ್ದೇಶಕರು ಪೂರ್ಣವಾಗಿ ಹೇಳಿಲ್ಲವಂತೆ. ವಿ.ಮನೋಹರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಹಾಡುಗಳಿಲ್ಲ. ಹಾಗಾಗಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭವೂ ಇಲ್ಲ.<br /> <br /> ಅದರ ಬದಲಿಗೆ ಪ್ರಚಾರ ಸಾಮಗ್ರಿಗಳ ಬಿಡುಗಡೆ ಮಾಡಿದರೆ ಹೇಗೆ ಎಂದು ಕಾಶಿನಾಥ್ರಿಗೆ ಅನ್ನಿಸಿದೆ. ಅದರ ಫಲವಾಗಿ, ಚಿತ್ರತಂಡ ಪ್ರಚಾರದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿತು. ಈ ಪೋಸ್ಟರ್ಗಳನ್ನು ರಾಜ್ಯದ ಎಲ್ಲ ಭಾಗಗಳಲ್ಲೂ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದಂತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಫೇಸ್ಲೆಸ್ ಫೇಸ್ಬುಕ್- ಹೀಗೆಂದು ತಮ್ಮ ಚಿತ್ರ `12 ಎಎಂ~ ಅನ್ನು ಬಣ್ಣಿಸಿದ್ದು ಯುವ ನಿರ್ದೇಶಕ ಕಾರ್ತೀಕ್. ವಿಶ್ಲೇಷಣೆ ವಿಚಿತ್ರವಾಗಿದೆಯಲ್ಲ ಎನ್ನುವ ಪ್ರಶ್ನೆಗೆ ಅವರು ನೀಡಿದ ಉತ್ತರ- `ನಮ್ಮ ಚಿತ್ರದಲ್ಲಿ ಇರುವ ಬಹುತೇಕರು ಹೊಸಬರು. ಅವರ ಮುಖಗಳಿಗೆ ತಾರಾ ವರ್ಚಸ್ಸಿಲ್ಲ. ಆ ಕಾರಣದಿಂದಲೇ ನಮ್ಮ ಸಿನಿಮಾ ಫೇಸ್ಲೆಸ್ ಫೇಸ್ಬುಕ್~.<br /> <br /> `12 ಎಎಂ~ ಸಿನಿಮಾದ ಕಥೆಯ ಗುಟ್ಟು ಬಿಟ್ಟುಕೊಡಲು ಒಪ್ಪದ ಕಾರ್ತೀಕ್, ಎಲ್ಲವನ್ನೂ ತೆರೆಯೇ ಮೇಲೆಯೇ ನೋಡಿ ಎಂದರು. ಕಾಶಿನಾಥ್ ಗರಡಿಯಲ್ಲಿ ಪಳಗಿರುವ ಅವರು, ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಶಿಷ್ಯನ ಮೇಲಿನ ಪ್ರೀತಿಯಿಂದ ಕಾಶಿನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವುದು ಚಿತ್ರದ ವಿಶೇಷಗಳಲ್ಲೊಂದು. ಈ ವಿಷಯವನ್ನು ಹೆಮ್ಮೆಯಿಂದ ತಿಳಿಸಿದ ಕಾಶಿ, `ಚಿತ್ರದಲ್ಲಿ ತಾವೆಲ್ಲೂ ಹಸ್ತಕ್ಷೇಪ ಮಾಡಿಲ್ಲ~ ಎಂದರು.<br /> <br /> ಅಂದಹಾಗೆ, `12 ಎಎಂ~ ಕಾಶಿನಾಥ್ರ ಪರಿಕಲ್ಪನೆಯಾದ `ನಿರ್ಮಾಪಕರ ತರಬೇತಿ ಸಂಸ್ಥೆ~ಯಡಿ ಸಿದ್ಧವಾಗುತ್ತಿದೆ. ಚಿತ್ರದ ಮೂಲಕ ವಿಜಯಕುಮಾರ್ ಎನ್ನುವ ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. <br /> <br /> ನಿರ್ಮಾಪಕರಿಗೆ ಸಿನಿಮಾ ನಿರ್ಮಾಣದ ಗುಟ್ಟುಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡುವುದು ಈ ಸಂಸ್ಥೆಯ ಉದ್ದೇಶವಂತೆ. ಕಾಶಿನಾಥ್ರ ಸಲಹೆಗಳಿಂದ `12 ಎಎಂ~ ನಿರ್ಮಾಣದಲ್ಲಿ ಸುಮಾರು ಶೇ. 20ರಷ್ಟು ಮಿಗಿತಾಯ ಸಾಧ್ಯವಾಗಬಹುದು ಎನ್ನುವುದು ನಿರ್ಮಾಪಕರ ಅಂದಾಜು. <br /> <br /> ಸಲಹೆ-ತರಬೇತಿಯ ಜೊತೆಗೆ ಪುಟ್ಟ ಪಾತ್ರವೊಂದರಲ್ಲಿ ಕಾಶಿನಾಥ್ ನಟಿಸುತ್ತಿದ್ದಾರೆ. ಅವರ ಪುತ್ರ ಅಭಿಮನ್ಯು ಚಿತ್ರದ ನಾಯಕ. `ಬಾಜಿ~ ಚಿತ್ರದಲ್ಲಿ ನಿರ್ಮಾಪಕರ ಸಂಖ್ಯಾಶಾಸ್ತ್ರದ ನಂಬಿಕೆಯ ಮೇರೆಗೆ ಅಲೋಕ್ ಎಂದು ಹೆಸರು ಬದಲಿಸಿಕೊಂಡಿದ್ದ ಅಭಿಮನ್ಯು, ಇದೀಗ ಮೂಲ ಹೆಸರಿಗೆ ಮರಳಿದ್ದಾರೆ. `ಹೆಸರು ಬದಲಿಸಿಕೊಳ್ಳುವುದು ಮುಜುಗರದ ಸಂಗತಿ~ ಎನ್ನುವುದು ಅವರ ಅನುಭವ. ಅಭಿಗೆ ನಾಯಕಿಯಾಗಿ ದಿವ್ಯಾ ಶ್ರೀಧರ್ ನಟಿಸುತ್ತಿದ್ದಾರೆ. <br /> <br /> ಚಿತ್ರದಲ್ಲಿ ಅಭಿ-ದಿವ್ಯಾ ಅವರದ್ದು ಕಾಲೇಜು ವಿದ್ಯಾರ್ಥಿಗಳ ಪಾತ್ರ. `ಹಾಗಿದ್ದರೆ ಲವ್ವ-ಸಾವು ಇರಲೇಬೇಕಲ್ಲವಾ? ಚಿತ್ರದ ಶೀರ್ಷಿಕೆ `12 ಎಎಂ~ನೊಂದಿಗೆ ಮಧ್ಯರಾತ್ರಿ ಎನ್ನುವ ವಿಶೇಷಣ ಬೇರೆ ಇದೆ...~ ಎಂದು ಪತ್ರಕರ್ತರು ಎಷ್ಟು ಕೆಣಕಿದರೂ ಹೊಸ ಜೋಡಿ ಬಾಯಿಬಿಡಲಿಲ್ಲ. ಯಾಕೆಂದರೆ ಚಿತ್ರದ ಕಥೆಯನ್ನು ನಿರ್ದೇಶಕರು ಪೂರ್ಣವಾಗಿ ಹೇಳಿಲ್ಲವಂತೆ. ವಿ.ಮನೋಹರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಹಾಡುಗಳಿಲ್ಲ. ಹಾಗಾಗಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭವೂ ಇಲ್ಲ.<br /> <br /> ಅದರ ಬದಲಿಗೆ ಪ್ರಚಾರ ಸಾಮಗ್ರಿಗಳ ಬಿಡುಗಡೆ ಮಾಡಿದರೆ ಹೇಗೆ ಎಂದು ಕಾಶಿನಾಥ್ರಿಗೆ ಅನ್ನಿಸಿದೆ. ಅದರ ಫಲವಾಗಿ, ಚಿತ್ರತಂಡ ಪ್ರಚಾರದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿತು. ಈ ಪೋಸ್ಟರ್ಗಳನ್ನು ರಾಜ್ಯದ ಎಲ್ಲ ಭಾಗಗಳಲ್ಲೂ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದಂತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>