<p>ಶೋಭಾ ಡೆವಲಪರ್ಸ್ ಸಂಸ್ಥೆಯ ಚೇರ್ಮನ್ ಎಮಿರೇಟ್ಸ್ ಆಗಿರುವ ಪಿಎನ್ಸಿ ಮೆನನ್ ಅವರು ಫೋರ್ಬ್ಸ್ ಏಷ್ಯ ನಿಯತಕಾಲಿಕೆ ರೂಪಿಸಿರುವ `ಹೀರೋಸ್ ಆಫ್ ಫಿಲಾಂತರಪಿ' ದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.<br /> <br /> ಈ ಪಟ್ಟಿಯಲ್ಲಿ ಭಾರತ, ಚೀನಾ , ಸಿಂಗಾಪುರ, ಹಾಂಗ್ಕಾಂಗ್, ಇಂಡೋನೇಷ್ಯ ಸೇರಿದಂತೆ ವಿವಿಧ ರಾಷ್ಟ್ರಗಳ 48 ಮಂದಿ ಪ್ರಮುಖರ ಹೆಸರುಗಳು ಸೇರಿವೆ. ಮೆನನ್ ಅಲ್ಲದೆ ಕಿರಣ್ ಮುಜುಂದಾರ್ ಷಾ, ವಿನೀತ್ ನಾಯರ್, ರಾನಿ ಸ್ಕ್ರೂವಾಲಾ ಸೇರಿದ್ದಾರೆ.<br /> <br /> ಮೆನನ್ ಅವರು ಕುರುಂಬಾ ಟ್ರಸ್ಟ್ ರೂಪಿಸಿದ್ದ `ಗ್ರಾಮಶೋಭಾ' ಹೆಸರಿನ ವಿಭಿನ್ನ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡ್ಡಕ್ಕೆಚೆರಿ ಮತ್ತು ಕಿಜಾಕ್ಕೆಚರಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2,500 ಬಿಪಿಎಲ್ ಕುಟುಂಬಗಳನ್ನು ದತ್ತು ಪಡೆದು 2020ರ ಒಳಗೆ ಸಂಪೂರ್ಣ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಂಡಿದ್ದಾರೆ.<br /> <br /> ಅರ್ಹ ಬಡ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡುವುದು, ಶಿಕ್ಷಣ ,ಆರೋಗ್ಯ, ಉದ್ಯೋಗ, ನೀರು, ಒಳಚರಂಡಿ, ವಸತಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶೋಭಾ ಡೆವಲಪರ್ಸ್ ಸಂಸ್ಥೆಯ ಚೇರ್ಮನ್ ಎಮಿರೇಟ್ಸ್ ಆಗಿರುವ ಪಿಎನ್ಸಿ ಮೆನನ್ ಅವರು ಫೋರ್ಬ್ಸ್ ಏಷ್ಯ ನಿಯತಕಾಲಿಕೆ ರೂಪಿಸಿರುವ `ಹೀರೋಸ್ ಆಫ್ ಫಿಲಾಂತರಪಿ' ದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.<br /> <br /> ಈ ಪಟ್ಟಿಯಲ್ಲಿ ಭಾರತ, ಚೀನಾ , ಸಿಂಗಾಪುರ, ಹಾಂಗ್ಕಾಂಗ್, ಇಂಡೋನೇಷ್ಯ ಸೇರಿದಂತೆ ವಿವಿಧ ರಾಷ್ಟ್ರಗಳ 48 ಮಂದಿ ಪ್ರಮುಖರ ಹೆಸರುಗಳು ಸೇರಿವೆ. ಮೆನನ್ ಅಲ್ಲದೆ ಕಿರಣ್ ಮುಜುಂದಾರ್ ಷಾ, ವಿನೀತ್ ನಾಯರ್, ರಾನಿ ಸ್ಕ್ರೂವಾಲಾ ಸೇರಿದ್ದಾರೆ.<br /> <br /> ಮೆನನ್ ಅವರು ಕುರುಂಬಾ ಟ್ರಸ್ಟ್ ರೂಪಿಸಿದ್ದ `ಗ್ರಾಮಶೋಭಾ' ಹೆಸರಿನ ವಿಭಿನ್ನ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡ್ಡಕ್ಕೆಚೆರಿ ಮತ್ತು ಕಿಜಾಕ್ಕೆಚರಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2,500 ಬಿಪಿಎಲ್ ಕುಟುಂಬಗಳನ್ನು ದತ್ತು ಪಡೆದು 2020ರ ಒಳಗೆ ಸಂಪೂರ್ಣ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಂಡಿದ್ದಾರೆ.<br /> <br /> ಅರ್ಹ ಬಡ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡುವುದು, ಶಿಕ್ಷಣ ,ಆರೋಗ್ಯ, ಉದ್ಯೋಗ, ನೀರು, ಒಳಚರಂಡಿ, ವಸತಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>