<p>ಬೆಂಗಳೂರು: ಆಗಸ್ಟ್ 14ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನ (ಐಬಿಎಲ್) ಫ್ರಾಂಚೈಸ್ ಆಗಿರುವ ಬೆಂಗಳೂರಿನ `ಬಂಗಾ ಬೀಟ್ಸ್' ತಂಡ ಶುಕ್ರವಾರ ತನ್ನ ಲಾಂಛನ ಬಿಡುಗಡೆಗೊಳಿಸಿತು.<br /> <br /> ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಲಿಂಪಿಯನ್ ಅಶ್ವಿನಿ ಪೊನ್ನಪ್ಪ ಹಾಗೂ ನಟ ಪುನೀತ್ ರಾಜಕುಮಾರ್ ಬಂಗಾ ಬೀಟ್ಸ್ ತಂಡದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅಶ್ವಿನಿ ಅವರು `ಐಪಿಎಲ್ನಂತೆ ಐಬಿಎಲ್ ಕೂಡ ಉದಯೋನ್ಮುಖ ಆಟಗಾರರಿಗೆ ಉತ್ತಮ ವೇದಿಕೆಯಾಗುವ ವಿಶ್ವಾಸವಿದೆ' ಎಂದು ಅಭಿಪ್ರಾಯ ಪಟ್ಟರು.<br /> <br /> ನಟ ಪುನೀತ್ ಮಾತನಾಡಿ `ಬ್ಯಾಡ್ಮಿಂಟನ್ ಅಂದ್ರೆ ಇಷ್ಟ. ನಾನೂ ಆಡುತ್ತಿದ್ದೆ. ಇದೀಗ ಬ್ಯಾಡ್ಮಿಂಟನ್ ಲೀಗ್ ಶುರುವಾಗುತ್ತಿರುವುದು ಸಂತಸ ತಂದಿದೆ' ಎಂದರು. ಮೂಲತಃ ರಿಯಲ್ ಎಸ್ಟೇಟ್ ಕಂಪೆನಿಯಾಗಿರುವ ಬಿಒಪಿ, ಬೆಂಗಳೂರಿನ `ಬಂಗಾ ಬೀಟ್ಸ್' ತಂಡದ ಫ್ರಾಂಚೈಸ್ ಪಡೆದಿದೆ.<br /> <br /> ತಂಡದ ಕೋಚ್ ಯು. ವಿನಯ್ ಕುಮಾರ್, ಸಿಇಒ ವಿಜಯ್ ಲ್ಯಾನ್ಸಿ, ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಜಿ. ಜೈರಾಜ್, ಸಂಸ್ಥೆಯ ಕಾರ್ಯದರ್ಶಿ ಎನ್.ಸಿ. ಸುಧೀರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಆಗಸ್ಟ್ 14ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನ (ಐಬಿಎಲ್) ಫ್ರಾಂಚೈಸ್ ಆಗಿರುವ ಬೆಂಗಳೂರಿನ `ಬಂಗಾ ಬೀಟ್ಸ್' ತಂಡ ಶುಕ್ರವಾರ ತನ್ನ ಲಾಂಛನ ಬಿಡುಗಡೆಗೊಳಿಸಿತು.<br /> <br /> ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಲಿಂಪಿಯನ್ ಅಶ್ವಿನಿ ಪೊನ್ನಪ್ಪ ಹಾಗೂ ನಟ ಪುನೀತ್ ರಾಜಕುಮಾರ್ ಬಂಗಾ ಬೀಟ್ಸ್ ತಂಡದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅಶ್ವಿನಿ ಅವರು `ಐಪಿಎಲ್ನಂತೆ ಐಬಿಎಲ್ ಕೂಡ ಉದಯೋನ್ಮುಖ ಆಟಗಾರರಿಗೆ ಉತ್ತಮ ವೇದಿಕೆಯಾಗುವ ವಿಶ್ವಾಸವಿದೆ' ಎಂದು ಅಭಿಪ್ರಾಯ ಪಟ್ಟರು.<br /> <br /> ನಟ ಪುನೀತ್ ಮಾತನಾಡಿ `ಬ್ಯಾಡ್ಮಿಂಟನ್ ಅಂದ್ರೆ ಇಷ್ಟ. ನಾನೂ ಆಡುತ್ತಿದ್ದೆ. ಇದೀಗ ಬ್ಯಾಡ್ಮಿಂಟನ್ ಲೀಗ್ ಶುರುವಾಗುತ್ತಿರುವುದು ಸಂತಸ ತಂದಿದೆ' ಎಂದರು. ಮೂಲತಃ ರಿಯಲ್ ಎಸ್ಟೇಟ್ ಕಂಪೆನಿಯಾಗಿರುವ ಬಿಒಪಿ, ಬೆಂಗಳೂರಿನ `ಬಂಗಾ ಬೀಟ್ಸ್' ತಂಡದ ಫ್ರಾಂಚೈಸ್ ಪಡೆದಿದೆ.<br /> <br /> ತಂಡದ ಕೋಚ್ ಯು. ವಿನಯ್ ಕುಮಾರ್, ಸಿಇಒ ವಿಜಯ್ ಲ್ಯಾನ್ಸಿ, ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಜಿ. ಜೈರಾಜ್, ಸಂಸ್ಥೆಯ ಕಾರ್ಯದರ್ಶಿ ಎನ್.ಸಿ. ಸುಧೀರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>