<p><strong>ಮುಂಡರಗಿ: </strong>ತಾಲ್ಲೂಕಿನ ನದಿಯಾಶ್ರಿತ ನೀರಾವರಿ ಜಮೀನಿನಲ್ಲಿ ರೈತರು ಬಿತ್ತಿರುವ ಗೆಜ್ಜೆಶೇಂಗಾ (ಬೇಸಿಗೆ ಶೇಂಗಾ) ಪ್ರಸ್ತುತ ವರ್ಷ ಸಮೃದ್ಧವಾಗಿ ಬೆಳೆದಿದ್ದು, ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. <br /> <br /> ಶೇಂಗಾ ಬೆಳೆಗೆ ಈವರೆಗೂ ತೀವ್ರ ಹಾನಿ ಮಾಡುವಂತಹ ಯಾವುದೆ ರೋಗ ರುಜಿನಗಳು, ಕೀಟಭಾದೆಗಳು ಕಾಣಿಸಿ ಕೊಳ್ಳದೆ ಇರುವುದರಿಂದ ರೈತರೆಲ್ಲ ಸದ್ಯ ನಿರಾತಂಕವಾಗಿದ್ದು, ಇನ್ನು 15-20 ದಿನಗಳಲ್ಲಿ ಕೆಲವು ರೈತರು ಶೇಂಗಾ ಕೀಳಲು ಪ್ರಾರಂಭಿಸಲಿದ್ದಾರೆ.<br /> <br /> ತಾಲ್ಲೂಕಿನ ನದಿ ದಂಡೆ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಶಿಂಗ ಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ಬಹುತೇಕ ರೈತರು ಗೆಜ್ಜೆಶೇಂಗಾ ಬಿತ್ತಿದ್ದಾರೆ.<br /> <br /> ಭತ್ತ ಮತ್ತು ಕಬ್ಬು ನಾಟಿ ಮಾಡುವುದು, ವಿದ್ಯುತ್ ಕಣ್ಣಾ ಮುಚ್ಚಾಲೆ, ಬೆಳೆ ಕಟಾವು, ಅನಿಶ್ಚಿತ ಬೆಲೆ, ಕೂಲಿ ಕಾರ್ಮಿಕರ ಸಮಸ್ಯೆ ಮೊದಲಾದವುಗಳಿಂದ ಬೇಸರ ಗೊಂಡಿದ್ದ ಭಾಗಶಃ ರೈತರು ಈ ವರ್ಷ ಕಬ್ಬು ಮತ್ತು ಭತ್ತದ ಬದಲಾಗಿ ಶೇಂಗಾ ಬಿತ್ತನೆ ಮಾಡಿದ್ದಾರೆ. <br /> <br /> ತಾಲ್ಲೂಕಿನಲ್ಲಿ ಈ ವರ್ಷ ಬೋರ್ವೆಲ್ ಮತ್ತು ನದಿಯಾಶ್ರಿತ ನೀರಾವರಿ ಜಮೀನಿನಲ್ಲಿ ರೈತರು ಒಟ್ಟು 2300ಹೆಕ್ಟೇರ್ (ಡಂಬಳ ಹೊಬಳಿ 931ಹೆಕ್ಟೇರ್ ಮತ್ತು ಮುಂಡರಗಿ ಹೊಬಳಿ 1369ಹೆಕ್ಟೇರ್) ಪ್ರದೇಶದಲ್ಲಿ ಗೆಜ್ಜೆಶೇಂಗಾ ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ ಈ ವರ್ಷ ಹೆಚ್ಚು ಶೇಂಗಾ ಆವಕವಾಗುವ ನಿರೀಕ್ಷೆ ಇದೆ.<br /> <br /> ಇಡೀ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತುಂಗಭದ್ರಾ ನದಿಗೆ ಕಾಲಕಾಲಕ್ಕೆ ಭದ್ರಾ ಜಲಾ ಶಯದಿಂದ ಸಾಕಷ್ಟು ಪ್ರಮಾಣದ ನೀರು ಬಿಡುಗಡೆಗೊಳಿಸಿದ್ದು, ನದಿ ಯಾಶ್ರಿತ ನೀರಾವರಿ ಜಮೀನುಳ್ಳ ರೈತರಿಗೆ ವರದಾನವಾಗಿ ಪರಿಣಮಿಸಿದೆ. <br /> <br /> ವಿದ್ಯುತ್ ಕಣ್ಣಾಮುಚ್ಚಾಲೆ ಯೊಂದನ್ನು ಹೊರತು ಪಡಿಸಿದರೆ ಈ ವರ್ಷ ನದಿಯಾಶ್ರಿತ ನೀರಾವರಿ ಜಮೀನುಳ್ಳ ರೈತರಿಗೆ ಅಷ್ಟೇನೂ ತೊಂದರೆಯಾಗಿಲ್ಲ ಎಂದು ಹೇಳ ಲಾಗುತ್ತಿದೆ.<br /> <br /> ಮಾರುಕಟ್ಟೆಯಲ್ಲಿ ಈ ವರ್ಷ ಒಂದು ಕ್ವಿಂಟಾಲ್ ಶೇಂಗಾಕ್ಕೆ 4800 ರೂಪಾಯಿ ಬೆಲೆ ಇದ್ದು, ಬರಲಿರುವ ದಿನಗಳಲ್ಲಿ ಕ್ವಿಂಟಾಲ್ಗೆ 5000 ರೂಪಾಯಿ ಗಡಿದಾಟುವ ಸಾಧ್ಯತೆ ಇದೆ ಎಂದು ಎಪಿಎಂಸಿ ಖರೀದಿದಾರ ಈಶ್ವರಪ್ಪ ಬೆಟಗೇರಿ ಹಾಗೂ ಮತ್ತಿತರರು ಭವಿಷ್ಯ ನುಡಿಯುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. <br /> <br /> ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಶೇಂಗಾ ಒಕ್ಕಲು ಬರದಿಂದ ಸಾಗಲಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ. `ಸದ್ಯಕ್ಕಂತೂ ಶೇಂಗಾ ಬೆಳೆ ಭಾಳ ಚಲೋಐತ್ರಿ, ಯುಗಾದಿ ಹಬ್ಬದಾಗ ಅಕಾಲಿಕ ಮಳೆ ಬರದಿದ್ರ ಬೆಳೆ ಹಾನಿ ಆಗೋದಿಲ್ರಿ. ಆದ್ರ ಎಪಿಎಂಸಿಗೆ ಭಾಳ ಶೇಂಗಾ ಒಟ್ಟಿಗೆ ಬಂದ್ವಂದ್ರ ರೇಟ್ ಏಕದಮ್ ಕಡಿಮಿಯಾಕೈತ್ರಿ. <br /> <br /> ಹಂಗಾದ್ರ ಮತ್ತ ರೈತಗ ಲಾಸ್ ಆಕೈತ್ರಿ~ ಎನ್ನುತ್ತಾರೆ ಪಟ್ಟಣದ ಯುವ ರೈತ ಶಿವಾನಂದ ಇಟಗಿ. ಹೆಚ್ಚು ಬೆಳೆ ಮಾರುಕಟ್ಟೆಗೆ ಆವಕವಾದಲ್ಲಿ ಬೆಲೆ ಖಂಡಿತ ಕಡಿಮೆಯಾಗುತ್ತದೆ ಎನ್ನುವುದನ್ನೂ ಯಾರೂ ಅಲ್ಲಗಳೆಯುತ್ತಿಲ್ಲವಾದರೂ ರೈತರು ಮಾತ್ರ ಹಾಗಾಗುವುದಿಲ್ಲ ಎನ್ನುವ ಆಶಾ ಭಾವನೆ ಹೊಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ: </strong>ತಾಲ್ಲೂಕಿನ ನದಿಯಾಶ್ರಿತ ನೀರಾವರಿ ಜಮೀನಿನಲ್ಲಿ ರೈತರು ಬಿತ್ತಿರುವ ಗೆಜ್ಜೆಶೇಂಗಾ (ಬೇಸಿಗೆ ಶೇಂಗಾ) ಪ್ರಸ್ತುತ ವರ್ಷ ಸಮೃದ್ಧವಾಗಿ ಬೆಳೆದಿದ್ದು, ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. <br /> <br /> ಶೇಂಗಾ ಬೆಳೆಗೆ ಈವರೆಗೂ ತೀವ್ರ ಹಾನಿ ಮಾಡುವಂತಹ ಯಾವುದೆ ರೋಗ ರುಜಿನಗಳು, ಕೀಟಭಾದೆಗಳು ಕಾಣಿಸಿ ಕೊಳ್ಳದೆ ಇರುವುದರಿಂದ ರೈತರೆಲ್ಲ ಸದ್ಯ ನಿರಾತಂಕವಾಗಿದ್ದು, ಇನ್ನು 15-20 ದಿನಗಳಲ್ಲಿ ಕೆಲವು ರೈತರು ಶೇಂಗಾ ಕೀಳಲು ಪ್ರಾರಂಭಿಸಲಿದ್ದಾರೆ.<br /> <br /> ತಾಲ್ಲೂಕಿನ ನದಿ ದಂಡೆ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಶಿಂಗ ಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ಬಹುತೇಕ ರೈತರು ಗೆಜ್ಜೆಶೇಂಗಾ ಬಿತ್ತಿದ್ದಾರೆ.<br /> <br /> ಭತ್ತ ಮತ್ತು ಕಬ್ಬು ನಾಟಿ ಮಾಡುವುದು, ವಿದ್ಯುತ್ ಕಣ್ಣಾ ಮುಚ್ಚಾಲೆ, ಬೆಳೆ ಕಟಾವು, ಅನಿಶ್ಚಿತ ಬೆಲೆ, ಕೂಲಿ ಕಾರ್ಮಿಕರ ಸಮಸ್ಯೆ ಮೊದಲಾದವುಗಳಿಂದ ಬೇಸರ ಗೊಂಡಿದ್ದ ಭಾಗಶಃ ರೈತರು ಈ ವರ್ಷ ಕಬ್ಬು ಮತ್ತು ಭತ್ತದ ಬದಲಾಗಿ ಶೇಂಗಾ ಬಿತ್ತನೆ ಮಾಡಿದ್ದಾರೆ. <br /> <br /> ತಾಲ್ಲೂಕಿನಲ್ಲಿ ಈ ವರ್ಷ ಬೋರ್ವೆಲ್ ಮತ್ತು ನದಿಯಾಶ್ರಿತ ನೀರಾವರಿ ಜಮೀನಿನಲ್ಲಿ ರೈತರು ಒಟ್ಟು 2300ಹೆಕ್ಟೇರ್ (ಡಂಬಳ ಹೊಬಳಿ 931ಹೆಕ್ಟೇರ್ ಮತ್ತು ಮುಂಡರಗಿ ಹೊಬಳಿ 1369ಹೆಕ್ಟೇರ್) ಪ್ರದೇಶದಲ್ಲಿ ಗೆಜ್ಜೆಶೇಂಗಾ ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ ಈ ವರ್ಷ ಹೆಚ್ಚು ಶೇಂಗಾ ಆವಕವಾಗುವ ನಿರೀಕ್ಷೆ ಇದೆ.<br /> <br /> ಇಡೀ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತುಂಗಭದ್ರಾ ನದಿಗೆ ಕಾಲಕಾಲಕ್ಕೆ ಭದ್ರಾ ಜಲಾ ಶಯದಿಂದ ಸಾಕಷ್ಟು ಪ್ರಮಾಣದ ನೀರು ಬಿಡುಗಡೆಗೊಳಿಸಿದ್ದು, ನದಿ ಯಾಶ್ರಿತ ನೀರಾವರಿ ಜಮೀನುಳ್ಳ ರೈತರಿಗೆ ವರದಾನವಾಗಿ ಪರಿಣಮಿಸಿದೆ. <br /> <br /> ವಿದ್ಯುತ್ ಕಣ್ಣಾಮುಚ್ಚಾಲೆ ಯೊಂದನ್ನು ಹೊರತು ಪಡಿಸಿದರೆ ಈ ವರ್ಷ ನದಿಯಾಶ್ರಿತ ನೀರಾವರಿ ಜಮೀನುಳ್ಳ ರೈತರಿಗೆ ಅಷ್ಟೇನೂ ತೊಂದರೆಯಾಗಿಲ್ಲ ಎಂದು ಹೇಳ ಲಾಗುತ್ತಿದೆ.<br /> <br /> ಮಾರುಕಟ್ಟೆಯಲ್ಲಿ ಈ ವರ್ಷ ಒಂದು ಕ್ವಿಂಟಾಲ್ ಶೇಂಗಾಕ್ಕೆ 4800 ರೂಪಾಯಿ ಬೆಲೆ ಇದ್ದು, ಬರಲಿರುವ ದಿನಗಳಲ್ಲಿ ಕ್ವಿಂಟಾಲ್ಗೆ 5000 ರೂಪಾಯಿ ಗಡಿದಾಟುವ ಸಾಧ್ಯತೆ ಇದೆ ಎಂದು ಎಪಿಎಂಸಿ ಖರೀದಿದಾರ ಈಶ್ವರಪ್ಪ ಬೆಟಗೇರಿ ಹಾಗೂ ಮತ್ತಿತರರು ಭವಿಷ್ಯ ನುಡಿಯುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. <br /> <br /> ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಶೇಂಗಾ ಒಕ್ಕಲು ಬರದಿಂದ ಸಾಗಲಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ. `ಸದ್ಯಕ್ಕಂತೂ ಶೇಂಗಾ ಬೆಳೆ ಭಾಳ ಚಲೋಐತ್ರಿ, ಯುಗಾದಿ ಹಬ್ಬದಾಗ ಅಕಾಲಿಕ ಮಳೆ ಬರದಿದ್ರ ಬೆಳೆ ಹಾನಿ ಆಗೋದಿಲ್ರಿ. ಆದ್ರ ಎಪಿಎಂಸಿಗೆ ಭಾಳ ಶೇಂಗಾ ಒಟ್ಟಿಗೆ ಬಂದ್ವಂದ್ರ ರೇಟ್ ಏಕದಮ್ ಕಡಿಮಿಯಾಕೈತ್ರಿ. <br /> <br /> ಹಂಗಾದ್ರ ಮತ್ತ ರೈತಗ ಲಾಸ್ ಆಕೈತ್ರಿ~ ಎನ್ನುತ್ತಾರೆ ಪಟ್ಟಣದ ಯುವ ರೈತ ಶಿವಾನಂದ ಇಟಗಿ. ಹೆಚ್ಚು ಬೆಳೆ ಮಾರುಕಟ್ಟೆಗೆ ಆವಕವಾದಲ್ಲಿ ಬೆಲೆ ಖಂಡಿತ ಕಡಿಮೆಯಾಗುತ್ತದೆ ಎನ್ನುವುದನ್ನೂ ಯಾರೂ ಅಲ್ಲಗಳೆಯುತ್ತಿಲ್ಲವಾದರೂ ರೈತರು ಮಾತ್ರ ಹಾಗಾಗುವುದಿಲ್ಲ ಎನ್ನುವ ಆಶಾ ಭಾವನೆ ಹೊಂದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>