<p><span style="color:#b22222;"><strong>ಕೃಷಿ</strong></span><br /> * 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ.<br /> * ಹನಿ ನೀರಾವರಿ ಅಳವಡಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ ಶೇ 90 ಹಾಗೂ ಇತರರಿಗೆ ಶೇ 75 ಸಹಾಯ ಧನ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯ.<br /> * ಸಾವಯವ ಕೃಷಿ ಯೋಜನೆ ಹೋಬಳಿ ಮಟ್ಟಕ್ಕೆ ವಿಸ್ತರಣೆ.<br /> * ಇಕ್ರಿಸ್ಯಾಟ್ ನೇತೃತ್ವದಲ್ಲಿ ಪ್ರತಿ ಕಂದಾಯ ವಿಭಾಗದ ಒಂದು ಜಿಲ್ಲೆಯಲ್ಲಿ ಸಂಶೋಧನೆ ಆಧಾರಿತ ಕೃಷಿ ಪದ್ಧತಿ ಅನುಷ್ಠಾನ.<br /> * ಐದು ಅಶ್ವಶಕ್ತಿವರೆಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಯೋಜನೆ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ತಲಾ ಒಂದು ಜಿಲ್ಲೆಯಲ್ಲಿ ಜಾರಿ.<br /> * ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೃಷಿ ವಿಷಯದ ಅಳವಡಿಕೆ.<br /> * ಹೊಸತಳಿ ಆವಿಷ್ಕಾರ ಹಾಗೂ ತಂತ್ರಜ್ಞಾನ ಸುಧಾರಣೆ ಕುರಿತ ಅಧ್ಯಯನಕ್ಕಾಗಿ ಕೃಷಿ ವಿ.ವಿಗಳಿಗೆ 5 ಕೋಟಿ.<br /> * ಮೈಸೂರು ಮತ್ತು ರಾಯಚೂರಿನಲ್ಲಿ ವೈಜ್ಞಾನಿಕ ವರ್ಗೀಕರಣ ಕೇಂದ್ರಕ್ಕೆ 3.5 ಕೋಟಿ.<br /> * 100 ಕೇಂದ್ರಗಳಲ್ಲಿ ಉಗ್ರಾಣ ಆಧಾರಿತ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲು 5 ಕೋಟಿ<br /> * ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ ವರದಿ ಪ್ರಸಕ್ತ ವರ್ಷ ಜಾರಿ.<br /> * ರೈತರಿಗೆ ಹೊಸ ತಂತ್ರಜ್ಞಾನ ಕುರಿತು ಮಾಹಿತಿ ಒದಗಿಸಲು ಏಕಗವಾಕ್ಷಿ ಯೋಜನೆ.<br /> * ಬಿತ್ತನೆ ಬೀಜ ಸ್ವಂತ ಅಭಿವೃದ್ಧಿ ಮಾಡಿಕೊಳ್ಳವ ರೈತರಿಗೆ ಉತ್ತೇಜನ; ಈ ಯೋಜನೆಗೆ 10 ಕೋಟಿ<br /> * ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಕೃಷಿ ಯಂತ್ರೋಪಕರಣ ಹಾಗೂ ಕೃಷಿ ಸಂಸ್ಕರಣಾ ಘಟಕ ಸ್ಥಾಪನೆಗೆ ರೂ 150 ಕೋಟಿ.<br /> * ಆಯ್ದ 4 ಜಿಲ್ಲೆಗಳಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿ.<br /> * ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಳೆಮಾಪನ ಕೇಂದ್ರ.<br /> <br /> <span style="color:#b22222;">ತೋಟಗಾರಿಕೆ</span><br /> * ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನಲ್ಲಿ ಚಾಮರಾಜನಗರ ಜಿಲ್ಲೆ ಹೊಂಡರಬಾಳು ಗ್ರಾಮದಲ್ಲಿ ಸ್ಥಾಪಿಸಿರುವ `ಅಮೃತಭೂಮಿ' ಟ್ರಸ್ಟ್ಗೆ 5 ಕೋಟಿ.<br /> * ಅಡಿಕೆ ತೋಟಗಳಲ್ಲಿ ಲಾಭದಾಯಕ ಪರ್ಯಾಯ ಬೆಳೆ ಕೃಷಿ ಪ್ರಾತ್ಯಕ್ಷಿಕೆಗೆ 2 ಕೋಟಿ.<br /> * ದುಂಡಾಣು ರೋಗದ ಸಮಸ್ಯೆ ಎದುರಿಸುತ್ತಿರುವ ದಾಳಿಂಬೆ ಬೆಳೆಗಾರರಿಗೆ ಸಹಾಯಧನ ಒದಗಿಸಲು ರಾಜ್ಯದ ಪಾಲಿನ ಬಾಕಿ 12.5 ಕೋಟಿ ಬಿಡುಗಡೆ.<br /> <br /> <span style="color:#ff0000;"><strong>ಪಶುಸಂಗೋಪನೆ</strong></span><br /> * ಬೀದರ್, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯ ಕಾಲೇಜುಗಳು ಹಾಗೂ ಗುಲ್ಬರ್ಗ ಡೇರಿ ಕಾಲೇಜಿಗೆ ಮೂಲಸೌಕರ್ಯ ಒದಗಿಸಲು 73 ಕೋಟಿ.<br /> * 391 ಪಶುವೈದ್ಯರು ಹಾಗೂ 642 ಪಶು ವೈದ್ಯಕೀಯ ಸಹಾಯಕರ ನೇಮಕ.<br /> * ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಾನುವಾರು ಮತ್ತು ಕುಕ್ಕುಟ ಅಭಿವೃದ್ಧಿಗಾಗಿ 75 ಕೋಟಿ.<br /> * ಪ್ರತಿ ಕಂದಾಯ ವಿಭಾಗದಲ್ಲಿ ಒಂದು ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬೆಂಗಳೂರಿನ ದಂಡು ಪ್ರದೇಶದಲ್ಲಿ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ಂಗಳೂರಿನಲ್ಲಿ ಪಶುಭವನ ನಿರ್ಮಾಣ.<br /> * ಎಮ್ಮೆ, ಕುರಿ, ಮೇಕೆ ತಳಿಗಳ ಸಂರಕ್ಷಣೆ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ 2 ಕೋಟಿ.<br /> * 174 ತಾಲ್ಲೂಕುಗಳಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ವಾಹನ ಒದಗಿಸಲು4.2 ಕೋಟಿ.<br /> <br /> <span style="color:#ff0000;"><strong>ರೇಷ್ಮೆ</strong></span><br /> * ರೇಷ್ಮೆ ಗೂಡಿನ ಮಾರುಕಟ್ಟೆಗಳ ಆಧುನೀಕರಣಕ್ಕೆ 5 ಕೋಟಿ.<br /> * ಕಚ್ಚಾ ರೇಷ್ಮೆ ಮೇಲೆ ಅದರ ಮೌಲ್ಯದ ಶೇ 70ರಷ್ಟು ಒತ್ತೆ ಸಾಲ.<br /> * 3 ಎ.ಆರ್.ಎಂ. ಘಟಕಗಳ ಸ್ಥಾಪನೆ.<br /> ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಉಪಕರಣ ಖರೀದಿ ಹಾಗೂ ಶೆಡ್ಗಳ ನಿರ್ಮಾಣಕ್ಕೆ ನೆರವು.<br /> * ಮೈಸೂರು ಜಿಲ್ಲೆಯಲ್ಲಿರುವ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಹಳೆಯ ಘಟಕಗಳ ಆಧುನೀಕರಣಕ್ಕೆ 5 ಕೋಟಿ.<br /> <br /> <span style="color:#ff0000;"><strong>ಮೀನುಗಾರಿಕೆ</strong></span><br /> * ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಸಿವಿಲ್ ಕಾಮಗಾರಿಗಳ ಯೋಜನಾ ಅನುಷ್ಠಾನ ಘಟಕ ಸ್ಥಾಪನೆ.<br /> * ಒಳನಾಡಿನ 2 ಸಾವಿರ ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು.<br /> * ಮೀನುಗಾರರಿಗೆ ಉಚಿತವಾಗಿ ನೀಡುವ ಸಲಕರಣೆಗಳ ಕಿಟ್ನ ಮೌಲ್ಯ ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗೆ ಹೆಚ್ಚಳ.<br /> * ಬಲೆ ದುರಸ್ತಿ ಶೆಡ್ಗಳ ನಿರ್ಮಾಣಕ್ಕೆ 2 ಕೋಟಿ.<br /> * ಮೀನುಗಾರಿಕೆಯಲ್ಲಿ ತೊಡಗಿರುವ 5,000 ಮಹಿಳೆಯರಿಗೆ ಮಂಜುಗಡ್ಡೆ ಪೆಟ್ಟಿಗೆ ವಿತರಿಸಲು 2 ಕೋಟಿ.<br /> * ಮೀನುಗಾರಿಕೆ ತಾಣಗಳ ಸಂಪರ್ಕ ರಸ್ತೆ ನಿರ್ಮಾಣಕ್ಕೆ 30 ಕೋಟಿ.<br /> * ಮಂಗಳೂರು ಮೀನುಗಾರಿಕೆ ಕಾಲೇಜು ಅಭಿವೃದ್ಧಿಗೆ 4 ಕೋಟಿ.<br /> * ಸಿಹಿನೀರು ಮೀನುಮರಿ ಬಿತ್ತನೆಗೆ 2 ಕೋಟಿ.<br /> * ಮಂಗಳೂರಿನ ಕುಳಾಯಿ ಹಾಗೂ ಉಡುಪಿ ಜಿಲ್ಲೆ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.<br /> * ಭಟ್ಕಳ ಮತ್ತು ಕಾರವಾರ ಮೀನುಗಾರಿಕೆ ಬಂದರುಗಳಲ್ಲಿ ಧಕ್ಕೆಗಳ ವಿಸ್ತರಣೆ.<br /> * ಏಳು ಅಳಿವೆಗಳಲ್ಲಿ ತಡೆಗೋಡೆಗಳ ನಿರ್ಮಾಣ.<br /> <br /> <span style="color:#ff0000;"><strong>ಸಹಕಾರ</strong></span><br /> * ಸಹಕಾರ ಚುನಾವಣಾ ಆಯೋಗಕ್ಕೆ 3 ಕೋಟಿ.<br /> * ಸಹಕಾರ ಸಂಸ್ಥೆಗಳಿಂದ ರಚನೆಯಾಗಿರುವ ಸ್ವಸಹಾಯ ಗುಂಪುಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಮುಂದುವರಿಕೆ.<br /> * ಪಿಕಾರ್ಡ್ ಬ್ಯಾಂಕ್ಗಳು, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘಗಳು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಹೊಸ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ 10 ಕೋಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="color:#b22222;"><strong>ಕೃಷಿ</strong></span><br /> * 130 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ.<br /> * ಹನಿ ನೀರಾವರಿ ಅಳವಡಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈತರಿಗೆ ಶೇ 90 ಹಾಗೂ ಇತರರಿಗೆ ಶೇ 75 ಸಹಾಯ ಧನ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯ.<br /> * ಸಾವಯವ ಕೃಷಿ ಯೋಜನೆ ಹೋಬಳಿ ಮಟ್ಟಕ್ಕೆ ವಿಸ್ತರಣೆ.<br /> * ಇಕ್ರಿಸ್ಯಾಟ್ ನೇತೃತ್ವದಲ್ಲಿ ಪ್ರತಿ ಕಂದಾಯ ವಿಭಾಗದ ಒಂದು ಜಿಲ್ಲೆಯಲ್ಲಿ ಸಂಶೋಧನೆ ಆಧಾರಿತ ಕೃಷಿ ಪದ್ಧತಿ ಅನುಷ್ಠಾನ.<br /> * ಐದು ಅಶ್ವಶಕ್ತಿವರೆಗೆ ಸೌರಶಕ್ತಿ ಚಾಲಿತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಯೋಜನೆ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ತಲಾ ಒಂದು ಜಿಲ್ಲೆಯಲ್ಲಿ ಜಾರಿ.<br /> * ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೃಷಿ ವಿಷಯದ ಅಳವಡಿಕೆ.<br /> * ಹೊಸತಳಿ ಆವಿಷ್ಕಾರ ಹಾಗೂ ತಂತ್ರಜ್ಞಾನ ಸುಧಾರಣೆ ಕುರಿತ ಅಧ್ಯಯನಕ್ಕಾಗಿ ಕೃಷಿ ವಿ.ವಿಗಳಿಗೆ 5 ಕೋಟಿ.<br /> * ಮೈಸೂರು ಮತ್ತು ರಾಯಚೂರಿನಲ್ಲಿ ವೈಜ್ಞಾನಿಕ ವರ್ಗೀಕರಣ ಕೇಂದ್ರಕ್ಕೆ 3.5 ಕೋಟಿ.<br /> * 100 ಕೇಂದ್ರಗಳಲ್ಲಿ ಉಗ್ರಾಣ ಆಧಾರಿತ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಲು 5 ಕೋಟಿ<br /> * ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ ವರದಿ ಪ್ರಸಕ್ತ ವರ್ಷ ಜಾರಿ.<br /> * ರೈತರಿಗೆ ಹೊಸ ತಂತ್ರಜ್ಞಾನ ಕುರಿತು ಮಾಹಿತಿ ಒದಗಿಸಲು ಏಕಗವಾಕ್ಷಿ ಯೋಜನೆ.<br /> * ಬಿತ್ತನೆ ಬೀಜ ಸ್ವಂತ ಅಭಿವೃದ್ಧಿ ಮಾಡಿಕೊಳ್ಳವ ರೈತರಿಗೆ ಉತ್ತೇಜನ; ಈ ಯೋಜನೆಗೆ 10 ಕೋಟಿ<br /> * ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಕೃಷಿ ಯಂತ್ರೋಪಕರಣ ಹಾಗೂ ಕೃಷಿ ಸಂಸ್ಕರಣಾ ಘಟಕ ಸ್ಥಾಪನೆಗೆ ರೂ 150 ಕೋಟಿ.<br /> * ಆಯ್ದ 4 ಜಿಲ್ಲೆಗಳಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿ.<br /> * ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಳೆಮಾಪನ ಕೇಂದ್ರ.<br /> <br /> <span style="color:#b22222;">ತೋಟಗಾರಿಕೆ</span><br /> * ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನಲ್ಲಿ ಚಾಮರಾಜನಗರ ಜಿಲ್ಲೆ ಹೊಂಡರಬಾಳು ಗ್ರಾಮದಲ್ಲಿ ಸ್ಥಾಪಿಸಿರುವ `ಅಮೃತಭೂಮಿ' ಟ್ರಸ್ಟ್ಗೆ 5 ಕೋಟಿ.<br /> * ಅಡಿಕೆ ತೋಟಗಳಲ್ಲಿ ಲಾಭದಾಯಕ ಪರ್ಯಾಯ ಬೆಳೆ ಕೃಷಿ ಪ್ರಾತ್ಯಕ್ಷಿಕೆಗೆ 2 ಕೋಟಿ.<br /> * ದುಂಡಾಣು ರೋಗದ ಸಮಸ್ಯೆ ಎದುರಿಸುತ್ತಿರುವ ದಾಳಿಂಬೆ ಬೆಳೆಗಾರರಿಗೆ ಸಹಾಯಧನ ಒದಗಿಸಲು ರಾಜ್ಯದ ಪಾಲಿನ ಬಾಕಿ 12.5 ಕೋಟಿ ಬಿಡುಗಡೆ.<br /> <br /> <span style="color:#ff0000;"><strong>ಪಶುಸಂಗೋಪನೆ</strong></span><br /> * ಬೀದರ್, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯ ಕಾಲೇಜುಗಳು ಹಾಗೂ ಗುಲ್ಬರ್ಗ ಡೇರಿ ಕಾಲೇಜಿಗೆ ಮೂಲಸೌಕರ್ಯ ಒದಗಿಸಲು 73 ಕೋಟಿ.<br /> * 391 ಪಶುವೈದ್ಯರು ಹಾಗೂ 642 ಪಶು ವೈದ್ಯಕೀಯ ಸಹಾಯಕರ ನೇಮಕ.<br /> * ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಾನುವಾರು ಮತ್ತು ಕುಕ್ಕುಟ ಅಭಿವೃದ್ಧಿಗಾಗಿ 75 ಕೋಟಿ.<br /> * ಪ್ರತಿ ಕಂದಾಯ ವಿಭಾಗದಲ್ಲಿ ಒಂದು ಪಶು ವೈದ್ಯಕೀಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬೆಂಗಳೂರಿನ ದಂಡು ಪ್ರದೇಶದಲ್ಲಿ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ಂಗಳೂರಿನಲ್ಲಿ ಪಶುಭವನ ನಿರ್ಮಾಣ.<br /> * ಎಮ್ಮೆ, ಕುರಿ, ಮೇಕೆ ತಳಿಗಳ ಸಂರಕ್ಷಣೆ ಹಾಗೂ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ 2 ಕೋಟಿ.<br /> * 174 ತಾಲ್ಲೂಕುಗಳಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ವಾಹನ ಒದಗಿಸಲು4.2 ಕೋಟಿ.<br /> <br /> <span style="color:#ff0000;"><strong>ರೇಷ್ಮೆ</strong></span><br /> * ರೇಷ್ಮೆ ಗೂಡಿನ ಮಾರುಕಟ್ಟೆಗಳ ಆಧುನೀಕರಣಕ್ಕೆ 5 ಕೋಟಿ.<br /> * ಕಚ್ಚಾ ರೇಷ್ಮೆ ಮೇಲೆ ಅದರ ಮೌಲ್ಯದ ಶೇ 70ರಷ್ಟು ಒತ್ತೆ ಸಾಲ.<br /> * 3 ಎ.ಆರ್.ಎಂ. ಘಟಕಗಳ ಸ್ಥಾಪನೆ.<br /> ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಉಪಕರಣ ಖರೀದಿ ಹಾಗೂ ಶೆಡ್ಗಳ ನಿರ್ಮಾಣಕ್ಕೆ ನೆರವು.<br /> * ಮೈಸೂರು ಜಿಲ್ಲೆಯಲ್ಲಿರುವ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಹಳೆಯ ಘಟಕಗಳ ಆಧುನೀಕರಣಕ್ಕೆ 5 ಕೋಟಿ.<br /> <br /> <span style="color:#ff0000;"><strong>ಮೀನುಗಾರಿಕೆ</strong></span><br /> * ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಸಿವಿಲ್ ಕಾಮಗಾರಿಗಳ ಯೋಜನಾ ಅನುಷ್ಠಾನ ಘಟಕ ಸ್ಥಾಪನೆ.<br /> * ಒಳನಾಡಿನ 2 ಸಾವಿರ ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು.<br /> * ಮೀನುಗಾರರಿಗೆ ಉಚಿತವಾಗಿ ನೀಡುವ ಸಲಕರಣೆಗಳ ಕಿಟ್ನ ಮೌಲ್ಯ ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗೆ ಹೆಚ್ಚಳ.<br /> * ಬಲೆ ದುರಸ್ತಿ ಶೆಡ್ಗಳ ನಿರ್ಮಾಣಕ್ಕೆ 2 ಕೋಟಿ.<br /> * ಮೀನುಗಾರಿಕೆಯಲ್ಲಿ ತೊಡಗಿರುವ 5,000 ಮಹಿಳೆಯರಿಗೆ ಮಂಜುಗಡ್ಡೆ ಪೆಟ್ಟಿಗೆ ವಿತರಿಸಲು 2 ಕೋಟಿ.<br /> * ಮೀನುಗಾರಿಕೆ ತಾಣಗಳ ಸಂಪರ್ಕ ರಸ್ತೆ ನಿರ್ಮಾಣಕ್ಕೆ 30 ಕೋಟಿ.<br /> * ಮಂಗಳೂರು ಮೀನುಗಾರಿಕೆ ಕಾಲೇಜು ಅಭಿವೃದ್ಧಿಗೆ 4 ಕೋಟಿ.<br /> * ಸಿಹಿನೀರು ಮೀನುಮರಿ ಬಿತ್ತನೆಗೆ 2 ಕೋಟಿ.<br /> * ಮಂಗಳೂರಿನ ಕುಳಾಯಿ ಹಾಗೂ ಉಡುಪಿ ಜಿಲ್ಲೆ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.<br /> * ಭಟ್ಕಳ ಮತ್ತು ಕಾರವಾರ ಮೀನುಗಾರಿಕೆ ಬಂದರುಗಳಲ್ಲಿ ಧಕ್ಕೆಗಳ ವಿಸ್ತರಣೆ.<br /> * ಏಳು ಅಳಿವೆಗಳಲ್ಲಿ ತಡೆಗೋಡೆಗಳ ನಿರ್ಮಾಣ.<br /> <br /> <span style="color:#ff0000;"><strong>ಸಹಕಾರ</strong></span><br /> * ಸಹಕಾರ ಚುನಾವಣಾ ಆಯೋಗಕ್ಕೆ 3 ಕೋಟಿ.<br /> * ಸಹಕಾರ ಸಂಸ್ಥೆಗಳಿಂದ ರಚನೆಯಾಗಿರುವ ಸ್ವಸಹಾಯ ಗುಂಪುಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಮುಂದುವರಿಕೆ.<br /> * ಪಿಕಾರ್ಡ್ ಬ್ಯಾಂಕ್ಗಳು, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘಗಳು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಹೊಸ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ 10 ಕೋಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>