<p>ನವದೆಹಲಿ (ಪಿಟಿಐ): ನಗರ ಪ್ರದೇಶದಲ್ಲಿ ಬಡವರ ನಿತ್ಯದ ಕನಿಷ್ಠ ತಲಾ ಖರ್ಚು 32 ರೂಪಾಯಿಗಳಿಗೂ ಹೆಚ್ಚಾಗಿದೆ ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಯೋಜನಾ ಆಯೋಗವು ದೇಶದಲ್ಲಿ ಬಡತನದ ಶೇಕಡಾವಾರು ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಸೋಮವಾರ ಹೇಳಿದೆ.<br /> <br /> ಯೋಜನಾ ಆಯೋಗದ ತೆಂಡೂಲ್ಕರ್ ಸಮಿತಿಯು ಬಡತನ ರೇಖೆ ಕುರಿತಂತೆ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ವ್ಯಕ್ತವಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಈ ಸಮಿತಿ ಸದಸ್ಯರಾದ ಅರುಣ್ ಮೀರಾ ಸುದ್ದಿಗಾರರಿಗೆ ತಿಳಿಸಿದರು.<br /> <br /> ಬಡವರು ಆರೋಗ್ಯದ ವಿಚಾರದಲ್ಲಿ, ಶಿಕ್ಷಣಕ್ಕಾಗಿ ಮತ್ತು ಪೌಷ್ಟಿಕಾಂಶ ಆಹಾರ ಸೇವನೆಗಾಗಿ ಮಾಡುವ ಖರ್ಚುಗಳನ್ನು ಈ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆ ಬಡತನ ಶೇಕಾಡವಾರು ಪ್ರಮಾಣ ಇಳಿಮುಖವಾಗಿದೆ ಎಂದರು.<br /> <br /> ನಗರ ಪ್ರದೇಶಗಳಲ್ಲಿ ಜೀವನ ನಡೆಸುವವರ ಗರಿಷ್ಠ ತಲಾ ಆದಾಯ 32 ರೂಪಾಯಿಗಳಷ್ಟಿದ್ದರೆ ಅಂತಹವರನ್ನು ಬಡವರೆಂದು ಗುರುತಿಸಬಹುದು ಎಂದು ಯೋಜನಾ ಆಯೋಗವು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ನಗರ ಪ್ರದೇಶದಲ್ಲಿ ಬಡವರ ನಿತ್ಯದ ಕನಿಷ್ಠ ತಲಾ ಖರ್ಚು 32 ರೂಪಾಯಿಗಳಿಗೂ ಹೆಚ್ಚಾಗಿದೆ ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಯೋಜನಾ ಆಯೋಗವು ದೇಶದಲ್ಲಿ ಬಡತನದ ಶೇಕಡಾವಾರು ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಸೋಮವಾರ ಹೇಳಿದೆ.<br /> <br /> ಯೋಜನಾ ಆಯೋಗದ ತೆಂಡೂಲ್ಕರ್ ಸಮಿತಿಯು ಬಡತನ ರೇಖೆ ಕುರಿತಂತೆ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ವ್ಯಕ್ತವಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಈ ಸಮಿತಿ ಸದಸ್ಯರಾದ ಅರುಣ್ ಮೀರಾ ಸುದ್ದಿಗಾರರಿಗೆ ತಿಳಿಸಿದರು.<br /> <br /> ಬಡವರು ಆರೋಗ್ಯದ ವಿಚಾರದಲ್ಲಿ, ಶಿಕ್ಷಣಕ್ಕಾಗಿ ಮತ್ತು ಪೌಷ್ಟಿಕಾಂಶ ಆಹಾರ ಸೇವನೆಗಾಗಿ ಮಾಡುವ ಖರ್ಚುಗಳನ್ನು ಈ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆ ಬಡತನ ಶೇಕಾಡವಾರು ಪ್ರಮಾಣ ಇಳಿಮುಖವಾಗಿದೆ ಎಂದರು.<br /> <br /> ನಗರ ಪ್ರದೇಶಗಳಲ್ಲಿ ಜೀವನ ನಡೆಸುವವರ ಗರಿಷ್ಠ ತಲಾ ಆದಾಯ 32 ರೂಪಾಯಿಗಳಷ್ಟಿದ್ದರೆ ಅಂತಹವರನ್ನು ಬಡವರೆಂದು ಗುರುತಿಸಬಹುದು ಎಂದು ಯೋಜನಾ ಆಯೋಗವು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>