<p>ಪರ್ವತಪ್ಪ ಅವರಿಗೆ ಎರಡು ಎಕರೆ ಜಮೀನಿದೆ. ಮಳೆ ಬಿದ್ದರಷ್ಟೇ ವ್ಯವಸಾಯ. ರಾಗಿ ಪ್ರಮಖ ಬೆಳೆ. ತೊಗರಿ, ಹುರುಳಿ, ಸಾಸಿವೆ, ಜತೆಗೆ ಜೋಳ, ಅಕ್ಕಡಿ (ಮಿಶ್ರ ಬೆಳೆ) ಸಾಲುಗಳಲ್ಲಿ ಬೆಳೆಯುತ್ತಾರೆ. <br /> <br /> ಕೂಲಿಕಾರರ ಕೊರತೆ, ಅಕಾಲಿಕ ಮಳೆ ಹೀಗೆ ಏನೇನೋ ಕಾರಣಗಳಿಂದ ನಾಲ್ಕೈದು ವರ್ಷಗಳಿಂದ ಅಕ್ಕಡಿ ಸಾಲು ಬೆಳೆ ಬಿಟ್ಟು ಎರಡು ಎಕರೆ ಪೂರ್ತಿ ರಾಗಿ ಬಿತ್ತುತ್ತಿದ್ದರು. <br /> <br /> ಎರಡು ವರ್ಷ ಹಿಂದೆ ನಬಾರ್ಡ್ ಹಾಗೂ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಬುಕ್ಕಸಾಗರದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನ ಆರಂಭಿಸಿದವು. ಅದರಲ್ಲಿ ಪರ್ವತಪ್ಪ ಅವರ ಜಮೀನು ಒಳಪಟ್ಟಿತು. <br /> <br /> ಯೋಜನೆಯಲ್ಲಿ ನೆಲ-ಜಲ ಸಂರಕ್ಷಣೆಗೆ ಆದ್ಯತೆ ನೀಡಲಾಯಿತು. ಹುದಿ-ಬದು (ಟ್ರಂಚ್ ಕಮ್ ಬಂಡ್), ಕೃಷಿಹೊಂಡ ಸೇರಿದಂತೆ ವಿವಿಧ ಮಣ್ಣು-ನೀರಿನ ಸಂರಕ್ಷಣೆ ಅಳವಡಿಸಲು ಸಂಸ್ಥೆ ಮುಂದಾಯಿತು.<br /> <br /> `ಗುಂಡಿ ತೆಗೆದು ಬದು ಹಾಕಿದರೆ ಅಲ್ಲೇನೂ ಬೆಳೆಯಲಾಗುವುದಿಲ್ಲ. ನಮಗೆ ನಷ್ಟವಾಗುತ್ತದೆ~ ಎಂದು ಪರ್ವತಪ್ಪ ಸೇರಿದಂತೆ ಎಲ್ಲಾ ಫಲಾನುಭವಿ ರೈತರು ಹುದಿ-ಬದುಗಳ ನಿರ್ಮಾಣಕ್ಕೆ ಒಲ್ಲೆ ಎಂದರು. <br /> <br /> ಯೋಜನೆ ಅನುಷ್ಠಾನ ಅನಿವಾರ್ಯವಾಗಿತ್ತು. ಹಾಗಾಗಿ ರೈತರ ಮನವೊಲಿಸುವ ಸಲುವಾಗಿ ಭೂಮಿ ಸಂಸ್ಥೆಯವರು ರೈತರನ್ನೆಲ್ಲ `ಯಶಸ್ವಿ ಜಲಾನಯನ ಪ್ರದೇಶಗಳಿಗೆ~ ಪ್ರವಾಸ ಕರೆದೊಯ್ದರು. <br /> <br /> ಪ್ರವಾಸದಲ್ಲಿ ವಿವಿಧೆಡೆ ರೈತರು ಬದುಗಳ ಮೇಲೆ ಬೆಳೆಸಿದ್ದ ಹಣ್ಣಿನ ಗಿಡ, ಮೇವಿನ ಬೆಳೆ, ಅವುಗಳಿಂದ ಗಳಿಸಿದ ಆದಾಯದ ಕುರಿತು ಮಾಹಿತಿ ನೀಡಿದರು. ಹುದಿ- ಬದುಗಳಿಂದ ಉಂಟಾದ ಜಾಗದ ನಷ್ಟವನ್ನು ಬೆಳೆಗಳು ತುಂಬಿ ಕೊಡುತ್ತವೆ ಎಂಬ ವಿಷಯ ಬುಕ್ಕಸಾಗರ ರೈತರ ಮನಸ್ಸನ್ನು ಪರಿವರ್ತಿಸಿತು. <br /> <br /> ಪ್ರವಾಸದಿಂದ ವಾಪಸ್ಸಾದ ರೈತರು ಹುದಿ-ಬದುಗಳ ನಿರ್ಮಾಣಕ್ಕೆ ಸನ್ನದ್ಧರಾದರು. ಆದರೆ ಬದುಗಳ ಮೇಲೆ ಬೆಳೆ ಬೆಳೆಯುವುದಕ್ಕೆ ಒಪ್ಪಲಿಲ್ಲ. ಪರ್ವತಪ್ಪ ಅವರು ಮಾತ್ರ ಬದುಗಳ ಮೇಲೆ ಬೆಳೆ ಬೆಳೆಯುವುದಾಗಿ ಸಂಕಲ್ಪ ಮಾಡಿದರು. ಅದರಂತೆ 270 ಮೀಟರ್ (800 ಅಡಿ) ಹುದಿ ತೆಗೆಸಿ, ಬದು ನಿರ್ಮಿಸಿದರು. <br /> <br /> ಹದ ಮಳೆ ಬಿದ್ದನಂತರ ಬದುಗಳ ಮೇಲೆ ನಾಲ್ಕು ಕೆ.ಜಿ. ಹೈಬ್ರಿಡ್ ತೊಗರಿ ಬೀಜಗಳನ್ನು ಎರಡು ಸಾಲುಗಳಲ್ಲಿ ನಾಟಿ ಮಾಡಿದರು. ಜೊತೆಗೆ ಎರಡು ಎಕರೆ ಹೊಲದಲ್ಲಿ ಎರಡು ಗಾಡಿ ಕೊಟ್ಟಿಗೆ ಗೊಬ್ಬರದೊಂದಿಗೆ ರಾಗಿ ಬಿತ್ತಿದರು.<br /> <strong><br /> ನಾಲ್ಕು ತಿಂಗಳ ನಂತರ:</strong>ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತಿದ ತೊಗರಿ ಜನವರಿ ಹೊತ್ತಿಗೆ ಕೊಯ್ಲಿಗೆ ಬಂತು. ರಾಗಿ ಕೊಯ್ಲಾಗಿ ಹದಿನೈದು ದಿನಗಳ ನಂತರ ತೊಗರಿ ಕೊಯ್ದರು. ಎಂಟನೂರು ಅಡಿ ಬದುಗಳ 70 ರಿಂದ 80 ಕೆ.ಜಿಯಷ್ಟು ತೊಗರಿ ಇಳುವರಿ ಬಂತು. <br /> <br /> `ರಾಗಿಗೆ ಕೊಟ್ಟಿಗೆ ಗೊಬ್ಬರ ಹಾಕಿದ್ದೆ. ಹುದಿ(ಟ್ರಂಚ್)ಗೆ ಒಂದು ಮೀಟರ್ ಜಾಗ ಬಿಟ್ಟರೂ ಇಳುವರಿಯಲ್ಲೇನ್ನೂ ವ್ಯತ್ಯಾಸವಾಗಿಲ್ಲ. ಹಾಗೆಯೇ ಬದುಗಳ ಮೇಲೆ ತೊಗರಿ ಬೆಳೆಯಲು ಹೆಚ್ಚುಶ್ರಮ ವಹಿಸಿಲ್ಲ. ಹೆಚ್ಚು ಖರ್ಚನ್ನೂ ಮಾಡಿಲ್ಲ~ ಎಂದು ಪರ್ವತಪ್ಪ ಸಂತಸದಿಂದ ಹೇಳುತ್ತಾರೆ. <br /> <br /> `ಅಕ್ಕಡಿ ಬೆಳೆ ಬೆಳೆಯುತ್ತಿದ್ದಾಗ ಎಷ್ಟೆಲ್ಲ ಗೊಬ್ಬರ -ಗೋಡು ಹಾಕಿ, ಕೂಲಿ ಕೊಟ್ಟು, ಕಳೆ-ಕಿತ್ತು ಆರೈಕೆ ಮಾಡಿದರೂ 8 ಕ್ವಿಂಟಲ್ ರಾಗಿ, 50 ರಿಂದ 60 ಕೆ.ಜಿ ತೊಗರಿ ಸಿಕ್ತಿತ್ತು. ಈಗ ಕೇವಲ ಎರಡು ಗಾಡಿ ಕೊಟ್ಟಿಗೆ ಗೊಬ್ಬರಕ್ಕೆ 10 ಕ್ವಿಂಟಲ್ ರಾಗಿ ಇಳುವರಿ ಬಂದಿದೆ. <br /> <br /> ಬದುಗಳ ಮೇಲೆ 80 ಕೆ.ಜಿ ತೊಗರಿ, ಎರಡು ಗಾಡಿ ತೊಗರಿ ಕಟ್ಟಿಗೆ, ಆರು ಚೀಲ ತೌಡು (ಹೊಟ್ಟು) ಸಿಕ್ಕಿದೆ~ ಎಂದು ಲೆಕ್ಕ ಹೇಳುವ ಪರ್ವತಪ್ಪ, ಹುದಿಯಲ್ಲಿ ನೀರಿಂಗಿದ್ದು, ಹೊಲದ ಮಣ್ಣಿನ ಫಲವತ್ತತೆ ಹೆಚ್ಚಿದ್ದು ತಮಗೆ ಬೋನಸ್ ಎಂದು ಹೇಳುವುದನ್ನು ಮರೆಯುವುದಿಲ್ಲ. <br /> <br /> ಪರ್ವತಪ್ಪ ಅವರ ಈ ಯಶೋಗಾಥೆ, ಬುಕ್ಕಸಾಗರ ಹಾಗೂ ಸುತ್ತಲಿನ ರೈತರನ್ನು ಜಾಗೃತಗೊಳಿಸಿದೆ. ಈ ಬಾರಿ ಜಲಾನಯನ ಪ್ರದೇಶದ ಫಲಾನುಭವಿಗಳೆಲ್ಲ ಸ್ವಯಂ ಪ್ರೇರಿತರಾಗಿ ಹುದಿ-ಬದು ನಿರ್ಮಿಸಿದ್ದಾರೆ. <br /> <br /> ಅದರ ಮೇಲೆ ತೊಗರಿ, ಹಣ್ಣಿನ ಗಿಡಗಳು, ಮೇವಿನ ಬೀಜಗಳ ಬಿತ್ತನೆಗೆ ಮುಂದಾಗಿದ್ದಾರೆ. ಪರ್ವತಪ್ಪ ಕೂಡ, ಬದುಗಳ ಮೇಲೆ ಕಾಯಂ ಆಗಿ ಫಲ- ಫಸಲು ಕೊಡುವ ಬೆಳೆಗಳನ್ನು ಬೆಳೆಸಲು ಯೋಜನೆ ರೂಪಿಸುತ್ತಿದ್ದಾರೆ. <br /> <br /> <strong>ಪರೋಕ್ಷ ಆದಾಯ <br /> <br /> ಹುದಿ-ಬದು ಲೆಕ್ಕಾಚಾರವನ್ನು ಕೇವಲ ಬೆಳೆಯ ಇಳುವರಿಯಲ್ಲಿ ಅಳೆಯಬೇಡಿ. ಒಳಸುರಿಗೆ ವ್ಯಯಿಸುವ ಹಣದ ಉಳಿತಾಯ ಜೊತೆಗೆ ಟ್ರಂಚ್ಗಳಲ್ಲಿ ಇಂಗುವ ಲಕ್ಷಾಂತರ ಲೀಟರ್ ಮಳೆ ನೀರನ್ನೂ ಪರಿಗಣಿಸಿ~ ಎನ್ನುತ್ತಾರೆ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ.<br /> <br /> ಅವರ ಪ್ರಕಾರ ನೀರಿಂಗಿಸುವ ಪ್ರಕ್ರಿಯೆಯಿಂದ ರೈತರಿಗೆ ಪ್ರತ್ಯಕ್ಷವಾಗಿ ಮತ್ತು ಪ್ರಕೃತಿಗೆ ಪರೋಕ್ಷವಾಗಿ ನೆರವಾಗುತ್ತದೆ. ಪ್ರತಿ ಹದ ಮಳೆಗೆ ಒಂದು ಘನ ಮೀಟರ್(ಸಿಎಂಟಿ- 1ಮೀ*1ಮೀ*1ಮೀ) ಅಳತೆಯ ಟ್ರಂಚ್ನಲ್ಲಿ ಒಂದು ಸಾವಿರ ಲೀಟರ್ ನೀರು ಇಂಗುತ್ತದೆ. <br /> <br /> ನಬಾರ್ಡ್ ಯೋಜನೆಯಲ್ಲಿ ತುಸು ದೊಡ್ಡದಾಗಿ `ಟ್ರಂಚ್ ಮತ್ತು ಬಂಡ್~ ಹಾಕಿಸಿರುವುದರಿಂದ 2000 ದಿಂದ 3000 ಲೀಟರ್ ನೀರು ಇಂಗುತ್ತದೆ. ಒಂದೊಂದು ಜಮೀನಿನಲ್ಲಿ ಹತ್ತಿಪ್ಪತ್ತು ಗುಂಡಿಗಳಿರುತ್ತವೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿಯೊಬ್ಬರ ಜಮೀನಿನಲ್ಲಿ ಒಂದು ಮಳೆಗೆ 2 ರಿಂದ 3 ಲಕ್ಷ ಲೀಟರ್ ನೀರು ಭೂಮಿಗಿಳಿಯುತ್ತದೆ. <br /> <br /> ಮೇಲ್ಮಣ್ಣು (ಫಲವತ್ತಾದ ಮಣ್ಣು) ಕೊಚ್ಚಣೆ ನಿಯಂತ್ರಣವಾಗುತ್ತದೆ. ಪ್ರತಿ ಮುಂಗಾರಿಗೆ ಮುನ್ನ ಮಣ್ಣು ಹೊಡೆಸುವುದು ತಪ್ಪುತ್ತದೆ ಎನ್ನುವುದು ಅವರ ಅಭಿಪ್ರಾಯ. ನಿರಂತರ ನೀರು ಇಂಗುವಿಕೆಯಿಂದ ಜಮೀನಿನಲ್ಲಿ ತೇವಾಂಶ ಸ್ಥಿರವಾಗುತ್ತದೆ.<br /> <br /> ಜೊತೆಗೆ ಬದು ಮೇಲಿನ ಗಿಡಗಳಿಂದ ಉದುರುವ ಎಲೆ, ಜಮೀನಿನಲ್ಲಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಟ್ರಂಚ್ಗಳಲ್ಲಿ ತುಂಬುವುದರಿಂದ, ಮಳೆ ನೀರಿನಲ್ಲಿ ಕೊಳೆತು ಕಾಂಪೋಸ್ಟ್ ಆಗುತ್ತವೆ. ಈ ಕಾಂಪೋಸ್ಟ್ ಬೆಳೆಗಳಿಗೆ ಬೋನಸ್ ರೂಪದಲ್ಲಿ ಪೋಷಕಾಂಶ ಸರಬರಾಜು ಮಾಡುತ್ತವೆ.<br /> <br /> ಎಂಟನೂರು ಅಡಿ ಉದ್ದದ ಬದುಗಳ ಮೇಲೆ ತೊಗರಿ ಬಿತ್ತನೆ ಮಾಡಿದಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ತಾಲ್ಲೂಕಿನ ಬುಕ್ಕಸಾಗರದ ರೈತರೊಬ್ಬರು 80 ಕೆ.ಜಿ ಇಳುವರಿ ಪಡೆದಿದ್ದಾರೆ.<br /> <br /> <br /> </strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪರ್ವತಪ್ಪ ಅವರಿಗೆ ಎರಡು ಎಕರೆ ಜಮೀನಿದೆ. ಮಳೆ ಬಿದ್ದರಷ್ಟೇ ವ್ಯವಸಾಯ. ರಾಗಿ ಪ್ರಮಖ ಬೆಳೆ. ತೊಗರಿ, ಹುರುಳಿ, ಸಾಸಿವೆ, ಜತೆಗೆ ಜೋಳ, ಅಕ್ಕಡಿ (ಮಿಶ್ರ ಬೆಳೆ) ಸಾಲುಗಳಲ್ಲಿ ಬೆಳೆಯುತ್ತಾರೆ. <br /> <br /> ಕೂಲಿಕಾರರ ಕೊರತೆ, ಅಕಾಲಿಕ ಮಳೆ ಹೀಗೆ ಏನೇನೋ ಕಾರಣಗಳಿಂದ ನಾಲ್ಕೈದು ವರ್ಷಗಳಿಂದ ಅಕ್ಕಡಿ ಸಾಲು ಬೆಳೆ ಬಿಟ್ಟು ಎರಡು ಎಕರೆ ಪೂರ್ತಿ ರಾಗಿ ಬಿತ್ತುತ್ತಿದ್ದರು. <br /> <br /> ಎರಡು ವರ್ಷ ಹಿಂದೆ ನಬಾರ್ಡ್ ಹಾಗೂ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಬುಕ್ಕಸಾಗರದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನ ಆರಂಭಿಸಿದವು. ಅದರಲ್ಲಿ ಪರ್ವತಪ್ಪ ಅವರ ಜಮೀನು ಒಳಪಟ್ಟಿತು. <br /> <br /> ಯೋಜನೆಯಲ್ಲಿ ನೆಲ-ಜಲ ಸಂರಕ್ಷಣೆಗೆ ಆದ್ಯತೆ ನೀಡಲಾಯಿತು. ಹುದಿ-ಬದು (ಟ್ರಂಚ್ ಕಮ್ ಬಂಡ್), ಕೃಷಿಹೊಂಡ ಸೇರಿದಂತೆ ವಿವಿಧ ಮಣ್ಣು-ನೀರಿನ ಸಂರಕ್ಷಣೆ ಅಳವಡಿಸಲು ಸಂಸ್ಥೆ ಮುಂದಾಯಿತು.<br /> <br /> `ಗುಂಡಿ ತೆಗೆದು ಬದು ಹಾಕಿದರೆ ಅಲ್ಲೇನೂ ಬೆಳೆಯಲಾಗುವುದಿಲ್ಲ. ನಮಗೆ ನಷ್ಟವಾಗುತ್ತದೆ~ ಎಂದು ಪರ್ವತಪ್ಪ ಸೇರಿದಂತೆ ಎಲ್ಲಾ ಫಲಾನುಭವಿ ರೈತರು ಹುದಿ-ಬದುಗಳ ನಿರ್ಮಾಣಕ್ಕೆ ಒಲ್ಲೆ ಎಂದರು. <br /> <br /> ಯೋಜನೆ ಅನುಷ್ಠಾನ ಅನಿವಾರ್ಯವಾಗಿತ್ತು. ಹಾಗಾಗಿ ರೈತರ ಮನವೊಲಿಸುವ ಸಲುವಾಗಿ ಭೂಮಿ ಸಂಸ್ಥೆಯವರು ರೈತರನ್ನೆಲ್ಲ `ಯಶಸ್ವಿ ಜಲಾನಯನ ಪ್ರದೇಶಗಳಿಗೆ~ ಪ್ರವಾಸ ಕರೆದೊಯ್ದರು. <br /> <br /> ಪ್ರವಾಸದಲ್ಲಿ ವಿವಿಧೆಡೆ ರೈತರು ಬದುಗಳ ಮೇಲೆ ಬೆಳೆಸಿದ್ದ ಹಣ್ಣಿನ ಗಿಡ, ಮೇವಿನ ಬೆಳೆ, ಅವುಗಳಿಂದ ಗಳಿಸಿದ ಆದಾಯದ ಕುರಿತು ಮಾಹಿತಿ ನೀಡಿದರು. ಹುದಿ- ಬದುಗಳಿಂದ ಉಂಟಾದ ಜಾಗದ ನಷ್ಟವನ್ನು ಬೆಳೆಗಳು ತುಂಬಿ ಕೊಡುತ್ತವೆ ಎಂಬ ವಿಷಯ ಬುಕ್ಕಸಾಗರ ರೈತರ ಮನಸ್ಸನ್ನು ಪರಿವರ್ತಿಸಿತು. <br /> <br /> ಪ್ರವಾಸದಿಂದ ವಾಪಸ್ಸಾದ ರೈತರು ಹುದಿ-ಬದುಗಳ ನಿರ್ಮಾಣಕ್ಕೆ ಸನ್ನದ್ಧರಾದರು. ಆದರೆ ಬದುಗಳ ಮೇಲೆ ಬೆಳೆ ಬೆಳೆಯುವುದಕ್ಕೆ ಒಪ್ಪಲಿಲ್ಲ. ಪರ್ವತಪ್ಪ ಅವರು ಮಾತ್ರ ಬದುಗಳ ಮೇಲೆ ಬೆಳೆ ಬೆಳೆಯುವುದಾಗಿ ಸಂಕಲ್ಪ ಮಾಡಿದರು. ಅದರಂತೆ 270 ಮೀಟರ್ (800 ಅಡಿ) ಹುದಿ ತೆಗೆಸಿ, ಬದು ನಿರ್ಮಿಸಿದರು. <br /> <br /> ಹದ ಮಳೆ ಬಿದ್ದನಂತರ ಬದುಗಳ ಮೇಲೆ ನಾಲ್ಕು ಕೆ.ಜಿ. ಹೈಬ್ರಿಡ್ ತೊಗರಿ ಬೀಜಗಳನ್ನು ಎರಡು ಸಾಲುಗಳಲ್ಲಿ ನಾಟಿ ಮಾಡಿದರು. ಜೊತೆಗೆ ಎರಡು ಎಕರೆ ಹೊಲದಲ್ಲಿ ಎರಡು ಗಾಡಿ ಕೊಟ್ಟಿಗೆ ಗೊಬ್ಬರದೊಂದಿಗೆ ರಾಗಿ ಬಿತ್ತಿದರು.<br /> <strong><br /> ನಾಲ್ಕು ತಿಂಗಳ ನಂತರ:</strong>ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತಿದ ತೊಗರಿ ಜನವರಿ ಹೊತ್ತಿಗೆ ಕೊಯ್ಲಿಗೆ ಬಂತು. ರಾಗಿ ಕೊಯ್ಲಾಗಿ ಹದಿನೈದು ದಿನಗಳ ನಂತರ ತೊಗರಿ ಕೊಯ್ದರು. ಎಂಟನೂರು ಅಡಿ ಬದುಗಳ 70 ರಿಂದ 80 ಕೆ.ಜಿಯಷ್ಟು ತೊಗರಿ ಇಳುವರಿ ಬಂತು. <br /> <br /> `ರಾಗಿಗೆ ಕೊಟ್ಟಿಗೆ ಗೊಬ್ಬರ ಹಾಕಿದ್ದೆ. ಹುದಿ(ಟ್ರಂಚ್)ಗೆ ಒಂದು ಮೀಟರ್ ಜಾಗ ಬಿಟ್ಟರೂ ಇಳುವರಿಯಲ್ಲೇನ್ನೂ ವ್ಯತ್ಯಾಸವಾಗಿಲ್ಲ. ಹಾಗೆಯೇ ಬದುಗಳ ಮೇಲೆ ತೊಗರಿ ಬೆಳೆಯಲು ಹೆಚ್ಚುಶ್ರಮ ವಹಿಸಿಲ್ಲ. ಹೆಚ್ಚು ಖರ್ಚನ್ನೂ ಮಾಡಿಲ್ಲ~ ಎಂದು ಪರ್ವತಪ್ಪ ಸಂತಸದಿಂದ ಹೇಳುತ್ತಾರೆ. <br /> <br /> `ಅಕ್ಕಡಿ ಬೆಳೆ ಬೆಳೆಯುತ್ತಿದ್ದಾಗ ಎಷ್ಟೆಲ್ಲ ಗೊಬ್ಬರ -ಗೋಡು ಹಾಕಿ, ಕೂಲಿ ಕೊಟ್ಟು, ಕಳೆ-ಕಿತ್ತು ಆರೈಕೆ ಮಾಡಿದರೂ 8 ಕ್ವಿಂಟಲ್ ರಾಗಿ, 50 ರಿಂದ 60 ಕೆ.ಜಿ ತೊಗರಿ ಸಿಕ್ತಿತ್ತು. ಈಗ ಕೇವಲ ಎರಡು ಗಾಡಿ ಕೊಟ್ಟಿಗೆ ಗೊಬ್ಬರಕ್ಕೆ 10 ಕ್ವಿಂಟಲ್ ರಾಗಿ ಇಳುವರಿ ಬಂದಿದೆ. <br /> <br /> ಬದುಗಳ ಮೇಲೆ 80 ಕೆ.ಜಿ ತೊಗರಿ, ಎರಡು ಗಾಡಿ ತೊಗರಿ ಕಟ್ಟಿಗೆ, ಆರು ಚೀಲ ತೌಡು (ಹೊಟ್ಟು) ಸಿಕ್ಕಿದೆ~ ಎಂದು ಲೆಕ್ಕ ಹೇಳುವ ಪರ್ವತಪ್ಪ, ಹುದಿಯಲ್ಲಿ ನೀರಿಂಗಿದ್ದು, ಹೊಲದ ಮಣ್ಣಿನ ಫಲವತ್ತತೆ ಹೆಚ್ಚಿದ್ದು ತಮಗೆ ಬೋನಸ್ ಎಂದು ಹೇಳುವುದನ್ನು ಮರೆಯುವುದಿಲ್ಲ. <br /> <br /> ಪರ್ವತಪ್ಪ ಅವರ ಈ ಯಶೋಗಾಥೆ, ಬುಕ್ಕಸಾಗರ ಹಾಗೂ ಸುತ್ತಲಿನ ರೈತರನ್ನು ಜಾಗೃತಗೊಳಿಸಿದೆ. ಈ ಬಾರಿ ಜಲಾನಯನ ಪ್ರದೇಶದ ಫಲಾನುಭವಿಗಳೆಲ್ಲ ಸ್ವಯಂ ಪ್ರೇರಿತರಾಗಿ ಹುದಿ-ಬದು ನಿರ್ಮಿಸಿದ್ದಾರೆ. <br /> <br /> ಅದರ ಮೇಲೆ ತೊಗರಿ, ಹಣ್ಣಿನ ಗಿಡಗಳು, ಮೇವಿನ ಬೀಜಗಳ ಬಿತ್ತನೆಗೆ ಮುಂದಾಗಿದ್ದಾರೆ. ಪರ್ವತಪ್ಪ ಕೂಡ, ಬದುಗಳ ಮೇಲೆ ಕಾಯಂ ಆಗಿ ಫಲ- ಫಸಲು ಕೊಡುವ ಬೆಳೆಗಳನ್ನು ಬೆಳೆಸಲು ಯೋಜನೆ ರೂಪಿಸುತ್ತಿದ್ದಾರೆ. <br /> <br /> <strong>ಪರೋಕ್ಷ ಆದಾಯ <br /> <br /> ಹುದಿ-ಬದು ಲೆಕ್ಕಾಚಾರವನ್ನು ಕೇವಲ ಬೆಳೆಯ ಇಳುವರಿಯಲ್ಲಿ ಅಳೆಯಬೇಡಿ. ಒಳಸುರಿಗೆ ವ್ಯಯಿಸುವ ಹಣದ ಉಳಿತಾಯ ಜೊತೆಗೆ ಟ್ರಂಚ್ಗಳಲ್ಲಿ ಇಂಗುವ ಲಕ್ಷಾಂತರ ಲೀಟರ್ ಮಳೆ ನೀರನ್ನೂ ಪರಿಗಣಿಸಿ~ ಎನ್ನುತ್ತಾರೆ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ.<br /> <br /> ಅವರ ಪ್ರಕಾರ ನೀರಿಂಗಿಸುವ ಪ್ರಕ್ರಿಯೆಯಿಂದ ರೈತರಿಗೆ ಪ್ರತ್ಯಕ್ಷವಾಗಿ ಮತ್ತು ಪ್ರಕೃತಿಗೆ ಪರೋಕ್ಷವಾಗಿ ನೆರವಾಗುತ್ತದೆ. ಪ್ರತಿ ಹದ ಮಳೆಗೆ ಒಂದು ಘನ ಮೀಟರ್(ಸಿಎಂಟಿ- 1ಮೀ*1ಮೀ*1ಮೀ) ಅಳತೆಯ ಟ್ರಂಚ್ನಲ್ಲಿ ಒಂದು ಸಾವಿರ ಲೀಟರ್ ನೀರು ಇಂಗುತ್ತದೆ. <br /> <br /> ನಬಾರ್ಡ್ ಯೋಜನೆಯಲ್ಲಿ ತುಸು ದೊಡ್ಡದಾಗಿ `ಟ್ರಂಚ್ ಮತ್ತು ಬಂಡ್~ ಹಾಕಿಸಿರುವುದರಿಂದ 2000 ದಿಂದ 3000 ಲೀಟರ್ ನೀರು ಇಂಗುತ್ತದೆ. ಒಂದೊಂದು ಜಮೀನಿನಲ್ಲಿ ಹತ್ತಿಪ್ಪತ್ತು ಗುಂಡಿಗಳಿರುತ್ತವೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿಯೊಬ್ಬರ ಜಮೀನಿನಲ್ಲಿ ಒಂದು ಮಳೆಗೆ 2 ರಿಂದ 3 ಲಕ್ಷ ಲೀಟರ್ ನೀರು ಭೂಮಿಗಿಳಿಯುತ್ತದೆ. <br /> <br /> ಮೇಲ್ಮಣ್ಣು (ಫಲವತ್ತಾದ ಮಣ್ಣು) ಕೊಚ್ಚಣೆ ನಿಯಂತ್ರಣವಾಗುತ್ತದೆ. ಪ್ರತಿ ಮುಂಗಾರಿಗೆ ಮುನ್ನ ಮಣ್ಣು ಹೊಡೆಸುವುದು ತಪ್ಪುತ್ತದೆ ಎನ್ನುವುದು ಅವರ ಅಭಿಪ್ರಾಯ. ನಿರಂತರ ನೀರು ಇಂಗುವಿಕೆಯಿಂದ ಜಮೀನಿನಲ್ಲಿ ತೇವಾಂಶ ಸ್ಥಿರವಾಗುತ್ತದೆ.<br /> <br /> ಜೊತೆಗೆ ಬದು ಮೇಲಿನ ಗಿಡಗಳಿಂದ ಉದುರುವ ಎಲೆ, ಜಮೀನಿನಲ್ಲಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಟ್ರಂಚ್ಗಳಲ್ಲಿ ತುಂಬುವುದರಿಂದ, ಮಳೆ ನೀರಿನಲ್ಲಿ ಕೊಳೆತು ಕಾಂಪೋಸ್ಟ್ ಆಗುತ್ತವೆ. ಈ ಕಾಂಪೋಸ್ಟ್ ಬೆಳೆಗಳಿಗೆ ಬೋನಸ್ ರೂಪದಲ್ಲಿ ಪೋಷಕಾಂಶ ಸರಬರಾಜು ಮಾಡುತ್ತವೆ.<br /> <br /> ಎಂಟನೂರು ಅಡಿ ಉದ್ದದ ಬದುಗಳ ಮೇಲೆ ತೊಗರಿ ಬಿತ್ತನೆ ಮಾಡಿದಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ತಾಲ್ಲೂಕಿನ ಬುಕ್ಕಸಾಗರದ ರೈತರೊಬ್ಬರು 80 ಕೆ.ಜಿ ಇಳುವರಿ ಪಡೆದಿದ್ದಾರೆ.<br /> <br /> <br /> </strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>