<p>ಯಾಂತ್ರಿಕ ದಿನಚರಿ ಅನುಸರಿಸುವುದು ನಿಮಗೆ ಸ್ಥಿರತೆ ನೀಡುತ್ತದೆ. ಸೃಜನಶೀಲವಾದುದ್ದನ್ನು ಮಾಡುವುದು ನಿಮ್ಮಲ್ಲಿ ಆಸಕ್ತಿ ಕೆರಳಿಸುತ್ತದೆ. ನಿಮ್ಮನ್ನು ಬೆಳೆಸುತ್ತದೆ.ಶಿಸ್ತುಬದ್ಧ ಜೀವನ ನಮ್ಮನ್ನು ಹೇಗೆ ಚಟುವಟಿಕೆಯಿಂದ, ಆರೋಗ್ಯದಿಂದ ಇಡುತ್ತದೆ ಎಂಬುದು ಅಚ್ಚರಿ ಹುಟ್ಟಿಸುತ್ತದೆ.<br /> <br /> ನೈಜವಾದ ಕಥೆಯ ಸಾರಾಂಶ ಇಲ್ಲಿದೆ. ವ್ಯಕ್ತಿಯೊಬ್ಬರು ತಪ್ಪದೇ ದಿನಚರಿ ಪಾಲಿಸುತ್ತಿದ್ದರು. ಬೆಳಗಿನ ನಡಿಗೆಯನ್ನಂತೂ ಅವರು ತಪ್ಪಿಸುತ್ತಲೇ ಇರಲಿಲ್ಲ. ಹಾಗೆ ಒಂದು ದಿನ ಆ ವ್ಯಕ್ತಿ ಪಾರ್ಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದೆ ನೋವಿನಿಂದ ಕುಸಿದು ಬಿದ್ದರು.<br /> <br /> ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆ ವ್ಯಕ್ತಿ ಕೋಮಾಗೆ ಜಾರಿದರು.<br /> ಹಾಗೆಯೇ ದಿನಗಳು ಉರುಳಿದವು. ಅವರ ಆರೋಗ್ಯ ಇನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಒಂದು ದಿನ ಬೆಳಿಗ್ಗೆ 4.45ಕ್ಕೆ ಅವರ ಪತ್ನಿ ತನ್ನ ಆರು ಮಕ್ಕಳನ್ನು ಕರೆದುಕೊಂಡು `ಐಸಿಯು~ಗೆ ನಡೆದರು. <br /> <br /> ವೈದ್ಯರು, ನರ್ಸ್ಗಳ ಎಚ್ಚರಿಕೆಯ ಮಾತನ್ನು ಕೇಳಿಸಿಕೊಳ್ಳದೇ ಆ ತಾಯಿ, ಮಕ್ಕಳು ಬೆಳಗಿನ ಪ್ರಾರ್ಥನೆ ಹೇಳತೊಡಗಿದರು. ಆ ವ್ಯಕ್ತಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಇದೇ ಮಂತ್ರ ಜಪಿಸುತ್ತಿದ್ದರು. 15 ನಿಮಿಷ ಕಳೆಯಿತು, ಸ್ಪಂದನೆ ಕಾಣಲಿಲ್ಲ. ಮತ್ತೈದು ನಿಮಿಷ ಉರುಳಿದವು. ವ್ಯಕ್ತಿಯ ತುಟಿಯಲ್ಲಿ ಚಲನೆ ಕಾಣಿಸಿತು. ಅವರು ಪ್ರಾರ್ಥನೆ ಹೇಳತೊಡಗಿದರು.<br /> <br /> ತಾಯಿ ಮತ್ತು ಮಕ್ಕಳು ಅವರು ಕುಳಿತುಕೊಳ್ಳಲು ಅನುವಾಗುವಂತೆ ಹಾಸಿಗೆಯನ್ನು ಮೇಲಕ್ಕೆ ಎತ್ತರಿಸಿದರು. ಪ್ರಾರ್ಥನೆ ಮುಂದುವರಿಸಿದರು. ನಿಧಾನವಾಗಿ ಕಣ್ಣು ತೆರೆದು ಹಾಸಿಗೆಯಲ್ಲೇ ಎದ್ದು ಕುಳಿತ ಆ ವ್ಯಕ್ತಿ ಗಡಿಯಾರದತ್ತ ನೋಡಿದರು. <br /> <br /> ಅದಾಗಲೇ ಗಂಟೆ 5.30. ನನ್ನನ್ನು ಏಕೆ ಮೊದಲೇ ಏಳಿಸಲಿಲ್ಲ ಎಂದು ಪತ್ನಿಯನ್ನು ಪ್ರಶ್ನಿಸಿದರು.<br /> <br /> ತಮ್ಮ ದಿನಚರಿಗೆ ಅವರು ಎಷ್ಟು ಬದ್ಧರಾಗಿದ್ದರು ಎಂಬುದನ್ನು ಈ ಘಟನೆ ವಿವರಿಸುತ್ತದೆ. ಕೋಮಾದಿಂದ ಅವರನ್ನು ಹೊರಕ್ಕೆ ತರಲು ಅವರ ಪತ್ನಿ ಈ ದಿನಚರಿಯನ್ನು ಬಳಸಿಕೊಂಡರು.<br /> <br /> ಯಾವುದೋ ದಿನಚರಿಗೆ, ವಿಚಾರಕ್ಕೆ ಬದ್ಧರಾಗಿರುವುದು ನಮಗೆ ಅಂತಹ ಬಲ ಕೊಡುತ್ತದೆ. ಸ್ವಯಂ ನಿಯಂತ್ರಣ, ಸ್ವಯಂ ಶುದ್ಧೀಕರಣ, ಸ್ವಯಂ ಉತ್ತೇಜನ, ಉತ್ಸಾಹಕ್ಕೆ ಕಾರಣವಾಗುತ್ತದೆ. <br /> <br /> ಯಾವುದಕ್ಕೂ ಬದ್ಧವಾಗಿ ಇರದ ಕೆಲಸವಿಲ್ಲದ ಮನಸ್ಸು ವಿನಾಕಾರಣ ಕೊರಗುತ್ತದೆ. ಇಲ್ಲಸಲ್ಲದ ಸಂಗತಿಗಳನ್ನು ಊಹಿಸಿಕೊಳ್ಳುತ್ತದೆ. ಭಯ, ಸ್ವಯಂ ಮರುಕದ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ. ಆದರೆ, ಯಾವುದೋ ಕೆಲಸಕ್ಕೆ ಬದ್ಧರಾಗಿರುವುದು ಇಂತಹ ಕಪೋಲಕಲ್ಪಿತ ಭಯಗಳನ್ನು ದೂರ ಮಾಡುತ್ತದೆ.<br /> <br /> ಉಪಯುಕ್ತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತದೆ. ಮನಸ್ಸಿಗೊಂದು ಘನತೆ ನೀಡುತ್ತದೆ. ಅದರ ಬುದ್ಧಿವಂತಿಕೆ, ಚೈತನ್ಯ ಹಾಗೂ ಶಕ್ತಿಯನ್ನು ತೊಡಗಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ.<br /> <br /> ಯಾವುದೋ ಒಂದರಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂಬುದೇ ನಮಗೆ ಶಕ್ತಿ ನೀಡುತ್ತದೆ. ಅಧ್ಯಯನ ಮಾಡುವ ಟೇಬಲ್, ಧ್ಯಾನ ಮಾಡುವ ಕೋಣೆ, ಸೈಕ್ಲಿಂಗ್ ಮಾಡುವ ಮೂಲೆ ಎಲ್ಲವೂ ನಿಮ್ಮಲ್ಲಿ ಉತ್ಸಾಹ ಮೂಡಿಸುತ್ತದೆ. ನೀವು ಆಯ್ದುಕೊಂಡ ಹವ್ಯಾಸ, ಚಟುವಟಿಕೆಗೆ ನಿಮ್ಮ ಬದ್ಧತೆಯೇ ಶಕ್ತಿ ಮೂಲವಾಗುತ್ತದೆ. <br /> <br /> ಅದನ್ನು ನಿಮ್ಮ ಮೇಲೆ ಹೇರಲಾಗಿದೆ ಎಂದು ಅಂದುಕೊಳ್ಳುವುದಕ್ಕಿಂತ ಈ ದಿನಚರಿ ನನಗೆ ಋಣಾತ್ಮಕ ಸಂಗತಿಗಳಿಂದ ಸ್ವಾತಂತ್ರ್ಯ ನೀಡುತ್ತದೆ ಎಂದುಕೊಂಡಾಗ ನಿಮ್ಮಲ್ಲಿ ಚೈತನ್ಯ ಪುಟಿದೇಳುತ್ತದೆ. ಮನಸ್ಸು ಆತ್ಮದಷ್ಟು ಕ್ರಿಯಾಶೀಲವಲ್ಲ. ಮನಸ್ಸಿಗೆ ಸದಾ ಭರವಸೆ ದೊರೆಯುತ್ತಿರಬೇಕು. ಮಾರ್ಗದರ್ಶನ, ಬದ್ಧತೆ, ಒಂದು ನಿರ್ದಿಷ್ಟ ದಿನಚರಿ ಬೇಕು.<br /> <br /> ನಿಮ್ಮ ದಿನಚರಿಯಲ್ಲಿ ಎರಡು ಭಾಗಗಳಿರಲಿ. ಒಂದು ನಿತ್ಯ ವ್ಯಾಯಾಮ ಮಾಡುವ, ಧ್ಯಾನ ಮಾಡುವ, ಮಂತ್ರ ಪಠಿಸುವ, ಅಡುಗೆ ಮಾಡುವ, ಬಟ್ಟೆ ತೊಳೆಯುವ, ಬಿಲ್ ಪಾವತಿಸುವ, ಫೋನ್ ಕರೆಗಳಿಗೆ ಉತ್ತರಿಸುವ ಯಾಂತ್ರಿಕ ದಿನಚರಿ. <br /> <br /> ಇನ್ನೊಂದು ಮತ್ತಷ್ಟು ಸೃಜನಶೀಲವಾದ, ಪ್ರಗತಿಪರವಾದ ದಿನಚರಿ. ನಿತ್ಯ ಹೊಸ ಹಾಡು ಕಲಿಯುವುದು, ಪುಸ್ತಕ ಓದುವುದು, ಪೇಂಟ್ ಮಾಡುವುದು, ನಿಮಗಿಷ್ಟವಾದ ಆಧ್ಯಾತ್ಮಿಕ ಪುಸ್ತಕದ ಸಾಲುಗಳನ್ನು ಬರೆದಿಟ್ಟುಕೊಳ್ಳುವುದು ಇತ್ಯಾದಿ.<br /> <br /> ನನ್ನ ವಿದ್ಯಾರ್ಥಿಯೊಬ್ಬಳಿಗೆ ಆಕೆಗೆ ಪ್ರಿಯವಾದ `ಎಕಾರ್ಟ್ ಟೊಲೆ~ಯ `ಪವರ್ ಆಫ್ ನೌ~ ಪುಸ್ತಕದ ಸಾಲುಗಳನ್ನು ಬರೆಯುವಂತೆ ಸೂಚಿಸಿದೆ. ಬರೆಯುತ್ತ, ಬರೆಯುತ್ತ ಆಕೆಯಲ್ಲಿ ಉತ್ಸಾಹ ಮೂಡಿತು. ಆಕೆ ತನ್ನದೇ ವಿಚಾರಗಳನ್ನು ಡೈರಿಯಲ್ಲಿ ಮೂಡಿಸತೊಡಗಿದಳು. <br /> <br /> ಆಕೆಯ ಮೊಣಕಾಲ ನೋವು ಪವಾಡ ನಡೆದಂತೆ ಮಾಯವಾಯಿತು. ಆಕೆಯಲ್ಲಿ ಶಾಂತಿ ಮೂಡಿತು. ಆಕೆ ಆರೋಗ್ಯವಂತಳಾದಳು.ಯಾಂತ್ರಿಕ ದಿನಚರಿ ಅನುಸರಿಸುವುದು ನಿಮಗೆ ಸ್ಥಿರತೆ ನೀಡುತ್ತದೆ. ಸೃಜನಶೀಲವಾದುದ್ದನ್ನು ಮಾಡುವುದು ನಿಮ್ಮಲ್ಲಿ ಆಸಕ್ತಿ ಕೆರಳಿಸುತ್ತದೆ. ನಿಮ್ಮನ್ನು ಬೆಳೆಸುತ್ತದೆ.<br /> <br /> ಪ್ರತಿ ಕ್ಷಣವನ್ನೂ ದೈವಿಕ ಉಡುಗೊರೆ ಎಂಬಂತೆ ಸ್ವೀಕರಿಸಿ. ಟೀಕಿಸುವ ಗುಣದ ಬದಲಾಗಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಿ. ಜಗತ್ತಿನಲ್ಲಿ ನಡೆಯುವ ದುರಂತದ ಬಗ್ಗೆ ಚಿಂತಿಸಬೇಡಿ. ನಿಮ್ಮ ಮನದಲ್ಲಿ ಪುಟ್ಟ ಸ್ವರ್ಗವೊಂದನ್ನು ಸೃಷ್ಟಿಸಿಕೊಂಡು ಶಾಂತಿಯಿಂದ ಇರಿ. <br /> <br /> ನೀವೊಂದು ಆ ಅಗಾಧ ದೈವಿಕ ಶಕ್ತಿಯ ಸಲಕರಣೆ ಎಂದುಕೊಳ್ಳಿ. ಆ ಭಾವ ನಿಮ್ಮಲ್ಲಿ ಸಮಾಧಾನ, ಯಶಸ್ಸಿಗೆ ಕಾರಣವಾಗುತ್ತದೆ. ನಿಮ್ಮ ಮನಸ್ಸಿಗೆ ಸಕಾರಾತ್ಮಕ ಸಂಗತಿ, ಭಾವನೆಗಳನ್ನೇ ನೀಡಿ. ಆ ಸಂಗತಿಗಳನ್ನು ಅದು ಒಳಗೆ ಎಳೆದುಕೊಂಡು ಋಣಾತ್ಮಕ, ಸಿನಿಕ ಭಾವನೆಗಳನ್ನೆಲ್ಲ ಹೊರ ಹಾಕಲಿ.<br /> <br /> ನಿರಾಸೆಯ ಒಂದೇ ಒಂದು ಚಿಕ್ಕ ನೆರಳು ನಿಮ್ಮ ಮೇಲೆ ಬೀಳದಿರಲಿ. ನಿಮಗೆ ಅನಾನುಕುಲವಾದ ಒಂದು ವಿಚಾರದ ಮೇಲೆ ಗಮನ ಕೇಂದ್ರೀಕರಿಸುವ ಬದಲು, ನಿಮ್ಮ ಪರವಾಗಿರುವ ಹಲವು ವಿಚಾರಗಳನ್ನು ನೆನಪಿಸಿಕೊಳ್ಳಿ.<br /> <br /> ಇಂತಹ ಅದ್ಭುತ ದಿನಚರಿ, ಚಟುವಟಿಕೆಗಳಿಂದ ನಾನು ಯಾವಾಗಲೂ ಸಂತಸದಿಂದ ಇರುತ್ತೇನೆ. ಆರೋಗ್ಯಕರವಾಗಿ ಇರುತ್ತೇನೆ. ದಿನ ಕಳೆದಂತೆ ಬದುಕು ಸುಂದರವಾಗುತ್ತ ಹೋಗುತ್ತದೆ ಎಂದುಕೊಳ್ಳಿ. ಅದು ಹಾಗೆಯೇ ಆಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾಂತ್ರಿಕ ದಿನಚರಿ ಅನುಸರಿಸುವುದು ನಿಮಗೆ ಸ್ಥಿರತೆ ನೀಡುತ್ತದೆ. ಸೃಜನಶೀಲವಾದುದ್ದನ್ನು ಮಾಡುವುದು ನಿಮ್ಮಲ್ಲಿ ಆಸಕ್ತಿ ಕೆರಳಿಸುತ್ತದೆ. ನಿಮ್ಮನ್ನು ಬೆಳೆಸುತ್ತದೆ.ಶಿಸ್ತುಬದ್ಧ ಜೀವನ ನಮ್ಮನ್ನು ಹೇಗೆ ಚಟುವಟಿಕೆಯಿಂದ, ಆರೋಗ್ಯದಿಂದ ಇಡುತ್ತದೆ ಎಂಬುದು ಅಚ್ಚರಿ ಹುಟ್ಟಿಸುತ್ತದೆ.<br /> <br /> ನೈಜವಾದ ಕಥೆಯ ಸಾರಾಂಶ ಇಲ್ಲಿದೆ. ವ್ಯಕ್ತಿಯೊಬ್ಬರು ತಪ್ಪದೇ ದಿನಚರಿ ಪಾಲಿಸುತ್ತಿದ್ದರು. ಬೆಳಗಿನ ನಡಿಗೆಯನ್ನಂತೂ ಅವರು ತಪ್ಪಿಸುತ್ತಲೇ ಇರಲಿಲ್ಲ. ಹಾಗೆ ಒಂದು ದಿನ ಆ ವ್ಯಕ್ತಿ ಪಾರ್ಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದೆ ನೋವಿನಿಂದ ಕುಸಿದು ಬಿದ್ದರು.<br /> <br /> ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆ ವ್ಯಕ್ತಿ ಕೋಮಾಗೆ ಜಾರಿದರು.<br /> ಹಾಗೆಯೇ ದಿನಗಳು ಉರುಳಿದವು. ಅವರ ಆರೋಗ್ಯ ಇನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಒಂದು ದಿನ ಬೆಳಿಗ್ಗೆ 4.45ಕ್ಕೆ ಅವರ ಪತ್ನಿ ತನ್ನ ಆರು ಮಕ್ಕಳನ್ನು ಕರೆದುಕೊಂಡು `ಐಸಿಯು~ಗೆ ನಡೆದರು. <br /> <br /> ವೈದ್ಯರು, ನರ್ಸ್ಗಳ ಎಚ್ಚರಿಕೆಯ ಮಾತನ್ನು ಕೇಳಿಸಿಕೊಳ್ಳದೇ ಆ ತಾಯಿ, ಮಕ್ಕಳು ಬೆಳಗಿನ ಪ್ರಾರ್ಥನೆ ಹೇಳತೊಡಗಿದರು. ಆ ವ್ಯಕ್ತಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಇದೇ ಮಂತ್ರ ಜಪಿಸುತ್ತಿದ್ದರು. 15 ನಿಮಿಷ ಕಳೆಯಿತು, ಸ್ಪಂದನೆ ಕಾಣಲಿಲ್ಲ. ಮತ್ತೈದು ನಿಮಿಷ ಉರುಳಿದವು. ವ್ಯಕ್ತಿಯ ತುಟಿಯಲ್ಲಿ ಚಲನೆ ಕಾಣಿಸಿತು. ಅವರು ಪ್ರಾರ್ಥನೆ ಹೇಳತೊಡಗಿದರು.<br /> <br /> ತಾಯಿ ಮತ್ತು ಮಕ್ಕಳು ಅವರು ಕುಳಿತುಕೊಳ್ಳಲು ಅನುವಾಗುವಂತೆ ಹಾಸಿಗೆಯನ್ನು ಮೇಲಕ್ಕೆ ಎತ್ತರಿಸಿದರು. ಪ್ರಾರ್ಥನೆ ಮುಂದುವರಿಸಿದರು. ನಿಧಾನವಾಗಿ ಕಣ್ಣು ತೆರೆದು ಹಾಸಿಗೆಯಲ್ಲೇ ಎದ್ದು ಕುಳಿತ ಆ ವ್ಯಕ್ತಿ ಗಡಿಯಾರದತ್ತ ನೋಡಿದರು. <br /> <br /> ಅದಾಗಲೇ ಗಂಟೆ 5.30. ನನ್ನನ್ನು ಏಕೆ ಮೊದಲೇ ಏಳಿಸಲಿಲ್ಲ ಎಂದು ಪತ್ನಿಯನ್ನು ಪ್ರಶ್ನಿಸಿದರು.<br /> <br /> ತಮ್ಮ ದಿನಚರಿಗೆ ಅವರು ಎಷ್ಟು ಬದ್ಧರಾಗಿದ್ದರು ಎಂಬುದನ್ನು ಈ ಘಟನೆ ವಿವರಿಸುತ್ತದೆ. ಕೋಮಾದಿಂದ ಅವರನ್ನು ಹೊರಕ್ಕೆ ತರಲು ಅವರ ಪತ್ನಿ ಈ ದಿನಚರಿಯನ್ನು ಬಳಸಿಕೊಂಡರು.<br /> <br /> ಯಾವುದೋ ದಿನಚರಿಗೆ, ವಿಚಾರಕ್ಕೆ ಬದ್ಧರಾಗಿರುವುದು ನಮಗೆ ಅಂತಹ ಬಲ ಕೊಡುತ್ತದೆ. ಸ್ವಯಂ ನಿಯಂತ್ರಣ, ಸ್ವಯಂ ಶುದ್ಧೀಕರಣ, ಸ್ವಯಂ ಉತ್ತೇಜನ, ಉತ್ಸಾಹಕ್ಕೆ ಕಾರಣವಾಗುತ್ತದೆ. <br /> <br /> ಯಾವುದಕ್ಕೂ ಬದ್ಧವಾಗಿ ಇರದ ಕೆಲಸವಿಲ್ಲದ ಮನಸ್ಸು ವಿನಾಕಾರಣ ಕೊರಗುತ್ತದೆ. ಇಲ್ಲಸಲ್ಲದ ಸಂಗತಿಗಳನ್ನು ಊಹಿಸಿಕೊಳ್ಳುತ್ತದೆ. ಭಯ, ಸ್ವಯಂ ಮರುಕದ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ. ಆದರೆ, ಯಾವುದೋ ಕೆಲಸಕ್ಕೆ ಬದ್ಧರಾಗಿರುವುದು ಇಂತಹ ಕಪೋಲಕಲ್ಪಿತ ಭಯಗಳನ್ನು ದೂರ ಮಾಡುತ್ತದೆ.<br /> <br /> ಉಪಯುಕ್ತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತದೆ. ಮನಸ್ಸಿಗೊಂದು ಘನತೆ ನೀಡುತ್ತದೆ. ಅದರ ಬುದ್ಧಿವಂತಿಕೆ, ಚೈತನ್ಯ ಹಾಗೂ ಶಕ್ತಿಯನ್ನು ತೊಡಗಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ.<br /> <br /> ಯಾವುದೋ ಒಂದರಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂಬುದೇ ನಮಗೆ ಶಕ್ತಿ ನೀಡುತ್ತದೆ. ಅಧ್ಯಯನ ಮಾಡುವ ಟೇಬಲ್, ಧ್ಯಾನ ಮಾಡುವ ಕೋಣೆ, ಸೈಕ್ಲಿಂಗ್ ಮಾಡುವ ಮೂಲೆ ಎಲ್ಲವೂ ನಿಮ್ಮಲ್ಲಿ ಉತ್ಸಾಹ ಮೂಡಿಸುತ್ತದೆ. ನೀವು ಆಯ್ದುಕೊಂಡ ಹವ್ಯಾಸ, ಚಟುವಟಿಕೆಗೆ ನಿಮ್ಮ ಬದ್ಧತೆಯೇ ಶಕ್ತಿ ಮೂಲವಾಗುತ್ತದೆ. <br /> <br /> ಅದನ್ನು ನಿಮ್ಮ ಮೇಲೆ ಹೇರಲಾಗಿದೆ ಎಂದು ಅಂದುಕೊಳ್ಳುವುದಕ್ಕಿಂತ ಈ ದಿನಚರಿ ನನಗೆ ಋಣಾತ್ಮಕ ಸಂಗತಿಗಳಿಂದ ಸ್ವಾತಂತ್ರ್ಯ ನೀಡುತ್ತದೆ ಎಂದುಕೊಂಡಾಗ ನಿಮ್ಮಲ್ಲಿ ಚೈತನ್ಯ ಪುಟಿದೇಳುತ್ತದೆ. ಮನಸ್ಸು ಆತ್ಮದಷ್ಟು ಕ್ರಿಯಾಶೀಲವಲ್ಲ. ಮನಸ್ಸಿಗೆ ಸದಾ ಭರವಸೆ ದೊರೆಯುತ್ತಿರಬೇಕು. ಮಾರ್ಗದರ್ಶನ, ಬದ್ಧತೆ, ಒಂದು ನಿರ್ದಿಷ್ಟ ದಿನಚರಿ ಬೇಕು.<br /> <br /> ನಿಮ್ಮ ದಿನಚರಿಯಲ್ಲಿ ಎರಡು ಭಾಗಗಳಿರಲಿ. ಒಂದು ನಿತ್ಯ ವ್ಯಾಯಾಮ ಮಾಡುವ, ಧ್ಯಾನ ಮಾಡುವ, ಮಂತ್ರ ಪಠಿಸುವ, ಅಡುಗೆ ಮಾಡುವ, ಬಟ್ಟೆ ತೊಳೆಯುವ, ಬಿಲ್ ಪಾವತಿಸುವ, ಫೋನ್ ಕರೆಗಳಿಗೆ ಉತ್ತರಿಸುವ ಯಾಂತ್ರಿಕ ದಿನಚರಿ. <br /> <br /> ಇನ್ನೊಂದು ಮತ್ತಷ್ಟು ಸೃಜನಶೀಲವಾದ, ಪ್ರಗತಿಪರವಾದ ದಿನಚರಿ. ನಿತ್ಯ ಹೊಸ ಹಾಡು ಕಲಿಯುವುದು, ಪುಸ್ತಕ ಓದುವುದು, ಪೇಂಟ್ ಮಾಡುವುದು, ನಿಮಗಿಷ್ಟವಾದ ಆಧ್ಯಾತ್ಮಿಕ ಪುಸ್ತಕದ ಸಾಲುಗಳನ್ನು ಬರೆದಿಟ್ಟುಕೊಳ್ಳುವುದು ಇತ್ಯಾದಿ.<br /> <br /> ನನ್ನ ವಿದ್ಯಾರ್ಥಿಯೊಬ್ಬಳಿಗೆ ಆಕೆಗೆ ಪ್ರಿಯವಾದ `ಎಕಾರ್ಟ್ ಟೊಲೆ~ಯ `ಪವರ್ ಆಫ್ ನೌ~ ಪುಸ್ತಕದ ಸಾಲುಗಳನ್ನು ಬರೆಯುವಂತೆ ಸೂಚಿಸಿದೆ. ಬರೆಯುತ್ತ, ಬರೆಯುತ್ತ ಆಕೆಯಲ್ಲಿ ಉತ್ಸಾಹ ಮೂಡಿತು. ಆಕೆ ತನ್ನದೇ ವಿಚಾರಗಳನ್ನು ಡೈರಿಯಲ್ಲಿ ಮೂಡಿಸತೊಡಗಿದಳು. <br /> <br /> ಆಕೆಯ ಮೊಣಕಾಲ ನೋವು ಪವಾಡ ನಡೆದಂತೆ ಮಾಯವಾಯಿತು. ಆಕೆಯಲ್ಲಿ ಶಾಂತಿ ಮೂಡಿತು. ಆಕೆ ಆರೋಗ್ಯವಂತಳಾದಳು.ಯಾಂತ್ರಿಕ ದಿನಚರಿ ಅನುಸರಿಸುವುದು ನಿಮಗೆ ಸ್ಥಿರತೆ ನೀಡುತ್ತದೆ. ಸೃಜನಶೀಲವಾದುದ್ದನ್ನು ಮಾಡುವುದು ನಿಮ್ಮಲ್ಲಿ ಆಸಕ್ತಿ ಕೆರಳಿಸುತ್ತದೆ. ನಿಮ್ಮನ್ನು ಬೆಳೆಸುತ್ತದೆ.<br /> <br /> ಪ್ರತಿ ಕ್ಷಣವನ್ನೂ ದೈವಿಕ ಉಡುಗೊರೆ ಎಂಬಂತೆ ಸ್ವೀಕರಿಸಿ. ಟೀಕಿಸುವ ಗುಣದ ಬದಲಾಗಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಿ. ಜಗತ್ತಿನಲ್ಲಿ ನಡೆಯುವ ದುರಂತದ ಬಗ್ಗೆ ಚಿಂತಿಸಬೇಡಿ. ನಿಮ್ಮ ಮನದಲ್ಲಿ ಪುಟ್ಟ ಸ್ವರ್ಗವೊಂದನ್ನು ಸೃಷ್ಟಿಸಿಕೊಂಡು ಶಾಂತಿಯಿಂದ ಇರಿ. <br /> <br /> ನೀವೊಂದು ಆ ಅಗಾಧ ದೈವಿಕ ಶಕ್ತಿಯ ಸಲಕರಣೆ ಎಂದುಕೊಳ್ಳಿ. ಆ ಭಾವ ನಿಮ್ಮಲ್ಲಿ ಸಮಾಧಾನ, ಯಶಸ್ಸಿಗೆ ಕಾರಣವಾಗುತ್ತದೆ. ನಿಮ್ಮ ಮನಸ್ಸಿಗೆ ಸಕಾರಾತ್ಮಕ ಸಂಗತಿ, ಭಾವನೆಗಳನ್ನೇ ನೀಡಿ. ಆ ಸಂಗತಿಗಳನ್ನು ಅದು ಒಳಗೆ ಎಳೆದುಕೊಂಡು ಋಣಾತ್ಮಕ, ಸಿನಿಕ ಭಾವನೆಗಳನ್ನೆಲ್ಲ ಹೊರ ಹಾಕಲಿ.<br /> <br /> ನಿರಾಸೆಯ ಒಂದೇ ಒಂದು ಚಿಕ್ಕ ನೆರಳು ನಿಮ್ಮ ಮೇಲೆ ಬೀಳದಿರಲಿ. ನಿಮಗೆ ಅನಾನುಕುಲವಾದ ಒಂದು ವಿಚಾರದ ಮೇಲೆ ಗಮನ ಕೇಂದ್ರೀಕರಿಸುವ ಬದಲು, ನಿಮ್ಮ ಪರವಾಗಿರುವ ಹಲವು ವಿಚಾರಗಳನ್ನು ನೆನಪಿಸಿಕೊಳ್ಳಿ.<br /> <br /> ಇಂತಹ ಅದ್ಭುತ ದಿನಚರಿ, ಚಟುವಟಿಕೆಗಳಿಂದ ನಾನು ಯಾವಾಗಲೂ ಸಂತಸದಿಂದ ಇರುತ್ತೇನೆ. ಆರೋಗ್ಯಕರವಾಗಿ ಇರುತ್ತೇನೆ. ದಿನ ಕಳೆದಂತೆ ಬದುಕು ಸುಂದರವಾಗುತ್ತ ಹೋಗುತ್ತದೆ ಎಂದುಕೊಳ್ಳಿ. ಅದು ಹಾಗೆಯೇ ಆಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>