<p><strong>ಬಾಗಲಕೋಟೆ:</strong> ದಿನದಿಂದ ದಿನಕ್ಕೆ ಬರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಹೊಸದಾಗಿ 11 ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.<br /> <br /> ನವನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಬರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.<br /> <strong><br /> ಗೋಶಾಲೆ ಎಲ್ಲೆಲ್ಲಿ <br /> </strong>ಜಮಖಂಡಿ ತಾಲ್ಲೂಕಿನ ಗೋಟೆ, ಸಾವಳಗಿ, ಕನ್ನೊಳ್ಳಿ, ಕಲಬೀಳಗಿ. ಹುನಗುಂದ ತಾಲ್ಲೂಕಿನ ಸಿದ್ದನಕೊಳ್ಳ, ಇಲಾಳ. ಬಾಗಲಕೋಟೆ ತಾಲ್ಲೂಕಿನ ರಾಮತಾಳ, ನಾಯನೇಗಲಿ ಹಾಗೂ ಮುಧೋಳ ತಾಲ್ಲೂಕಿನ ಲೋಕಾಪುರ, ಸೈದಾಪುರ ಮತ್ತು ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದಲ್ಲಿ ವಾರದೊಳಗೆ ಗೋಶಾಲೆ ತೆರೆಯುವುದಾಗಿ ಹೇಳಿದರು.<br /> <br /> ಗೋಶಾಲೆಯಲ್ಲಿ ವಾರದಲ್ಲಿ ಎರಡು ದಿನ ಜಾನುವಾರುಗಳಿಗೆ ಹಿಂಡಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಗೋಶಾಲೆ ಯಲ್ಲಿ ಜಾನುವಾರು ಬಿಡದೇ ಮನೆಯಲ್ಲೇ ಸಾಕುವವರಿಗೆ ಮೇವು ಖರೀದಿಗೆ ಶೇ. 50ರಷ್ಟು ಸಹಾಯಧನ ನೀಡಲಾಗುತ್ತದೆ ಹಾಗೂ ಹೊರಗಡೆಯಿಂದ ಮೇವನ್ನು ತರಿಸುವವರಿಗೆ ಸಾರಿಗೆ ವೆಚ್ಚ ನೀಡಲಾಗುತ್ತದೆ ಎಂದರು.<br /> <strong><br /> ಕುಡಿವ ನೀರು ಪೂರೈಕೆ</strong><br /> ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಇದುವರೆಗೆ ರೂ. 20.25 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ರೂ.15.64ಕೋಟಿ ವಿವಿಧ ಕಾಮಗಾರಿಗೆ ಖರ್ಚಾಗಿದೆ. ರೂ. 4 ಕೋಟಿ ಉಳಿದಿದೆ. ಇದೀಗ ನೂತನ ಮುಖ್ಯಮಂತ್ರಿಗಳು ಪ್ರತಿ ತಾಲ್ಲೂಕಿಗೆ ರೂ.1 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.<br /> ಜಿಲ್ಲೆಯಲ್ಲಿ ಇದುವರೆಗೆ 1550 ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ 1225 ಕಾಮಗಾರಿ ಪೂರ್ಣಗೊಂಡಿವೆ. 325 ಕಾಮಗಾರಿ ಆರಂಭವಾಗಬೇಕಿದೆ. ಹಣಕಾಸಿನ ಕೊರತೆ ಇಲ್ಲ ಎಂದರು.<br /> <br /> <strong>180 ಗ್ರಾಮ ಗುರುತು</strong><br /> ಜಿಲ್ಲೆಯಲ್ಲಿ ಬರ ಭೀಕರವಾಗುವ ಸಾಧ್ಯತೆ ಇರುವುದರಿಂದ 180 ಹಳ್ಳಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಗುರುತಿಸಲಾಗಿದೆ. ಈ ಸಂಬಂಧ ರೂ.3 ಕೋಟಿ ಮೊತ್ತದ ಕ್ರೀಯಾಯೋಜನೆ ರೂಪಿಸಲಾಗಿದೆ ಎಂದರು.<br /> <br /> <strong>ಬ್ಯಾರೇಜ್ ಎತ್ತರ</strong><br /> ಗಲಗಲಿ ಬ್ಯಾರೇಜ್ ಅನ್ನು ರೂ. 4.25 ಕೋಟಿ ಮೊತ್ತದಲ್ಲಿ ಎರಡು ಮೀಟರ್ ಎತ್ತರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.<br /> <br /> <strong>ರೂ. 126 ಕೋಟಿ ಹಾನಿ</strong><br /> ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಾಗದೇ ಇರುವುದರಿಂದ 26 ಸಾವಿರ ಹೆಕ್ಟೇರ್ ಕಬ್ಬು ಒಣಗಿದೆ. ಜೊತೆಗೆ ವಿವಿಧ ಬೆಳೆಗಳು ಸಹ ನೀರಿಲ್ಲದೇ ಹಾನಿಯಾಗಿದೆ. ಒಟ್ಟಾರೆ ಇದುವರೆಗೆ ರೂ. 126 ಕೋಟಿ ಬೆಳೆ ಹಾನಿ ಸಂಭವಿಸಿದೆ ಎಂದರು.<br /> <br /> ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿ ಸುತ್ತಿದೆ. ಸೂಕ್ತ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಆರೋಪಿಸಿದರು.<br /> <br /> <strong>ಸೂಚನೆ</strong><br /> ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.<br /> ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಮುರುಗೇಶ ನಿರಾಣಿ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಶಾಸಕರಾದ ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ ಪಾಟೀಲ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>.<p><strong>`ಜಾನುವಾರು ಬಿಕರಿ~ ವರದಿಗೆ ಸ್ಪಂದನೆ<br /> </strong>ಬಾಗಲಕೋಟೆ: ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ರೈತರು ತಮ್ಮ ಜಾನುವಾರುಗಳನ್ನು ಸಾಕಲಾಗದೇ, ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಇದೇ 14ರಂದು `ಪ್ರಜಾವಾಣಿ~ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.<br /> <br /> ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಸಂಬಂಧ ಸೋಮವಾರ ನಡೆದ ಜಿಲ್ಲಾ ಬರ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ವಾಸ್ತವ ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮೇವು-ನೀರಿನ ಕೊರತೆ ಇರುವುದನ್ನು ಮನಗಂಡು ಜಿಲ್ಲೆಯಲ್ಲಿ ಹೊಸದಾಗಿ 11 ಗೋಶಾಲೆ ಆರಂಭಿಸಲು ಸೂಚಿಸಿದರು.<br /> <br /> ಜಾನುವಾರುಗಳಿಗೆ ನೀಡುವ ಮೇವು ಮತ್ತು ಹಿಂಡಿಯ ಬೆಲೆ ಏರಿಕೆಯಾಗಿರುವುದರಿಂದ ರೈತರಿಗೆ ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಅಂಶವನ್ನು ಗ್ರಹಿಸಿದ ಸಚಿವರು, ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಮೇವನ್ನು ಮತ್ತು ಮೇವು ಸಾಗಾಟ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಭೆಯಲ್ಲಿ ಪ್ರಕಟಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ದಿನದಿಂದ ದಿನಕ್ಕೆ ಬರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಹೊಸದಾಗಿ 11 ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.<br /> <br /> ನವನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಬರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.<br /> <strong><br /> ಗೋಶಾಲೆ ಎಲ್ಲೆಲ್ಲಿ <br /> </strong>ಜಮಖಂಡಿ ತಾಲ್ಲೂಕಿನ ಗೋಟೆ, ಸಾವಳಗಿ, ಕನ್ನೊಳ್ಳಿ, ಕಲಬೀಳಗಿ. ಹುನಗುಂದ ತಾಲ್ಲೂಕಿನ ಸಿದ್ದನಕೊಳ್ಳ, ಇಲಾಳ. ಬಾಗಲಕೋಟೆ ತಾಲ್ಲೂಕಿನ ರಾಮತಾಳ, ನಾಯನೇಗಲಿ ಹಾಗೂ ಮುಧೋಳ ತಾಲ್ಲೂಕಿನ ಲೋಕಾಪುರ, ಸೈದಾಪುರ ಮತ್ತು ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದಲ್ಲಿ ವಾರದೊಳಗೆ ಗೋಶಾಲೆ ತೆರೆಯುವುದಾಗಿ ಹೇಳಿದರು.<br /> <br /> ಗೋಶಾಲೆಯಲ್ಲಿ ವಾರದಲ್ಲಿ ಎರಡು ದಿನ ಜಾನುವಾರುಗಳಿಗೆ ಹಿಂಡಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಗೋಶಾಲೆ ಯಲ್ಲಿ ಜಾನುವಾರು ಬಿಡದೇ ಮನೆಯಲ್ಲೇ ಸಾಕುವವರಿಗೆ ಮೇವು ಖರೀದಿಗೆ ಶೇ. 50ರಷ್ಟು ಸಹಾಯಧನ ನೀಡಲಾಗುತ್ತದೆ ಹಾಗೂ ಹೊರಗಡೆಯಿಂದ ಮೇವನ್ನು ತರಿಸುವವರಿಗೆ ಸಾರಿಗೆ ವೆಚ್ಚ ನೀಡಲಾಗುತ್ತದೆ ಎಂದರು.<br /> <strong><br /> ಕುಡಿವ ನೀರು ಪೂರೈಕೆ</strong><br /> ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಇದುವರೆಗೆ ರೂ. 20.25 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ರೂ.15.64ಕೋಟಿ ವಿವಿಧ ಕಾಮಗಾರಿಗೆ ಖರ್ಚಾಗಿದೆ. ರೂ. 4 ಕೋಟಿ ಉಳಿದಿದೆ. ಇದೀಗ ನೂತನ ಮುಖ್ಯಮಂತ್ರಿಗಳು ಪ್ರತಿ ತಾಲ್ಲೂಕಿಗೆ ರೂ.1 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.<br /> ಜಿಲ್ಲೆಯಲ್ಲಿ ಇದುವರೆಗೆ 1550 ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ 1225 ಕಾಮಗಾರಿ ಪೂರ್ಣಗೊಂಡಿವೆ. 325 ಕಾಮಗಾರಿ ಆರಂಭವಾಗಬೇಕಿದೆ. ಹಣಕಾಸಿನ ಕೊರತೆ ಇಲ್ಲ ಎಂದರು.<br /> <br /> <strong>180 ಗ್ರಾಮ ಗುರುತು</strong><br /> ಜಿಲ್ಲೆಯಲ್ಲಿ ಬರ ಭೀಕರವಾಗುವ ಸಾಧ್ಯತೆ ಇರುವುದರಿಂದ 180 ಹಳ್ಳಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಗುರುತಿಸಲಾಗಿದೆ. ಈ ಸಂಬಂಧ ರೂ.3 ಕೋಟಿ ಮೊತ್ತದ ಕ್ರೀಯಾಯೋಜನೆ ರೂಪಿಸಲಾಗಿದೆ ಎಂದರು.<br /> <br /> <strong>ಬ್ಯಾರೇಜ್ ಎತ್ತರ</strong><br /> ಗಲಗಲಿ ಬ್ಯಾರೇಜ್ ಅನ್ನು ರೂ. 4.25 ಕೋಟಿ ಮೊತ್ತದಲ್ಲಿ ಎರಡು ಮೀಟರ್ ಎತ್ತರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.<br /> <br /> <strong>ರೂ. 126 ಕೋಟಿ ಹಾನಿ</strong><br /> ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಾಗದೇ ಇರುವುದರಿಂದ 26 ಸಾವಿರ ಹೆಕ್ಟೇರ್ ಕಬ್ಬು ಒಣಗಿದೆ. ಜೊತೆಗೆ ವಿವಿಧ ಬೆಳೆಗಳು ಸಹ ನೀರಿಲ್ಲದೇ ಹಾನಿಯಾಗಿದೆ. ಒಟ್ಟಾರೆ ಇದುವರೆಗೆ ರೂ. 126 ಕೋಟಿ ಬೆಳೆ ಹಾನಿ ಸಂಭವಿಸಿದೆ ಎಂದರು.<br /> <br /> ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿ ಸುತ್ತಿದೆ. ಸೂಕ್ತ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಆರೋಪಿಸಿದರು.<br /> <br /> <strong>ಸೂಚನೆ</strong><br /> ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.<br /> ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಮುರುಗೇಶ ನಿರಾಣಿ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಶಾಸಕರಾದ ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ ಪಾಟೀಲ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>.<p><strong>`ಜಾನುವಾರು ಬಿಕರಿ~ ವರದಿಗೆ ಸ್ಪಂದನೆ<br /> </strong>ಬಾಗಲಕೋಟೆ: ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ರೈತರು ತಮ್ಮ ಜಾನುವಾರುಗಳನ್ನು ಸಾಕಲಾಗದೇ, ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಇದೇ 14ರಂದು `ಪ್ರಜಾವಾಣಿ~ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.<br /> <br /> ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಸಂಬಂಧ ಸೋಮವಾರ ನಡೆದ ಜಿಲ್ಲಾ ಬರ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ವಾಸ್ತವ ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮೇವು-ನೀರಿನ ಕೊರತೆ ಇರುವುದನ್ನು ಮನಗಂಡು ಜಿಲ್ಲೆಯಲ್ಲಿ ಹೊಸದಾಗಿ 11 ಗೋಶಾಲೆ ಆರಂಭಿಸಲು ಸೂಚಿಸಿದರು.<br /> <br /> ಜಾನುವಾರುಗಳಿಗೆ ನೀಡುವ ಮೇವು ಮತ್ತು ಹಿಂಡಿಯ ಬೆಲೆ ಏರಿಕೆಯಾಗಿರುವುದರಿಂದ ರೈತರಿಗೆ ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಅಂಶವನ್ನು ಗ್ರಹಿಸಿದ ಸಚಿವರು, ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಮೇವನ್ನು ಮತ್ತು ಮೇವು ಸಾಗಾಟ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಭೆಯಲ್ಲಿ ಪ್ರಕಟಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>