<p><strong>ಬೆಂಗಳೂರು:</strong> `ದಲಿತರಿಗೆ ಬಹುಕಾಲದ ಮೀಸಲಾತಿಯನ್ನು ಸ್ವತಃ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಮುಂದುವರಿದ ದಲಿತರು ಮೀಸಲಾತಿ ಬೇಕು ಎನ್ನುವುದು ಅಂಬೇಡ್ಕರ್ ಅವರ ತತ್ವಕ್ಕೆ ವಿರೋಧವಾಗಿದೆ' ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.<br /> <br /> ರಾಜ್ಯ ಅಬಕಾರಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಯವನಿಕ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಸಮಾನತೆಯ ಕೂಗಿನ ಜತೆಗೆ ಸ್ವಾಭಿಮಾನದ ಕಿಚ್ಚು ಸದಾ ದಲಿತರ ಎದೆಯಲ್ಲಿ ಉರಿಯುತ್ತಿರಬೇಕು. ಆಗ ಮಾತ್ರ ಏಳಿಗೆ ಸಾಧ್ಯ. ಮೀಸಲಾತಿ ಪಡೆದುಕೊಂಡ ದಲಿತರು ಈ ಸಮಾಜದ ಏಳಿಗೆಗಾಗಿ ಶ್ರಮಿಸಿದಾಗ ಅಂಬೇಡ್ಕರ್ ಅವರ ಆಶಯಕ್ಕೆ ಅರ್ಥ ಬರುತ್ತದೆ' ಎಂದರು.<br /> <br /> `ದಲಿತಕೇರಿಗಳಲ್ಲಿ ಅಂಬೇಡ್ಕರ್ ಅವರೊಂದಿಗೆ ಬಸವಣ್ಣ ಮತ್ತು ಬುದ್ಧ ಜಯಂತ್ಸುವಗಳು ನಡೆಯಬೇಕು. ಆಡಂಬರದ ಬದುಕಿಗೆ ಸಾಲಮಾಡಿ ನಂತರ ಮಕ್ಕಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ ಸರ್ಕಾರದತ್ತ ಮುಖಮಾಡುವ ಪ್ರವೃತ್ತಿಯನ್ನು ದಲಿತರು ಬಿಡಬೇಕು' ಎಂದು ಸಲಹೆ ನೀಡಿದರು.</p>.<p>ಕವಿ ಡಾ.ಸಿದ್ಧಲಿಂಗಯ್ಯ, `ಆಧುನಿಕ ಕಾಲಘಟ್ಟದಲ್ಲಿ ಶೋಷಣೆಗಳು ಹೊಸ ರೂಪವನ್ನು ಪಡೆಯುತ್ತಿದ್ದು, ಅದನ್ನು ಹತ್ತಿಕ್ಕುವತ್ತ ದಲಿತರೆಲ್ಲರೂ ಒಂದುಗೂಡಬೇಕು' ಎಂದರು.ಇಲಾಖೆಯ ಆಯುಕ್ತ ಸಿ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ದಲಿತರಿಗೆ ಬಹುಕಾಲದ ಮೀಸಲಾತಿಯನ್ನು ಸ್ವತಃ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಮುಂದುವರಿದ ದಲಿತರು ಮೀಸಲಾತಿ ಬೇಕು ಎನ್ನುವುದು ಅಂಬೇಡ್ಕರ್ ಅವರ ತತ್ವಕ್ಕೆ ವಿರೋಧವಾಗಿದೆ' ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.<br /> <br /> ರಾಜ್ಯ ಅಬಕಾರಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಯವನಿಕ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಸಮಾನತೆಯ ಕೂಗಿನ ಜತೆಗೆ ಸ್ವಾಭಿಮಾನದ ಕಿಚ್ಚು ಸದಾ ದಲಿತರ ಎದೆಯಲ್ಲಿ ಉರಿಯುತ್ತಿರಬೇಕು. ಆಗ ಮಾತ್ರ ಏಳಿಗೆ ಸಾಧ್ಯ. ಮೀಸಲಾತಿ ಪಡೆದುಕೊಂಡ ದಲಿತರು ಈ ಸಮಾಜದ ಏಳಿಗೆಗಾಗಿ ಶ್ರಮಿಸಿದಾಗ ಅಂಬೇಡ್ಕರ್ ಅವರ ಆಶಯಕ್ಕೆ ಅರ್ಥ ಬರುತ್ತದೆ' ಎಂದರು.<br /> <br /> `ದಲಿತಕೇರಿಗಳಲ್ಲಿ ಅಂಬೇಡ್ಕರ್ ಅವರೊಂದಿಗೆ ಬಸವಣ್ಣ ಮತ್ತು ಬುದ್ಧ ಜಯಂತ್ಸುವಗಳು ನಡೆಯಬೇಕು. ಆಡಂಬರದ ಬದುಕಿಗೆ ಸಾಲಮಾಡಿ ನಂತರ ಮಕ್ಕಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ ಸರ್ಕಾರದತ್ತ ಮುಖಮಾಡುವ ಪ್ರವೃತ್ತಿಯನ್ನು ದಲಿತರು ಬಿಡಬೇಕು' ಎಂದು ಸಲಹೆ ನೀಡಿದರು.</p>.<p>ಕವಿ ಡಾ.ಸಿದ್ಧಲಿಂಗಯ್ಯ, `ಆಧುನಿಕ ಕಾಲಘಟ್ಟದಲ್ಲಿ ಶೋಷಣೆಗಳು ಹೊಸ ರೂಪವನ್ನು ಪಡೆಯುತ್ತಿದ್ದು, ಅದನ್ನು ಹತ್ತಿಕ್ಕುವತ್ತ ದಲಿತರೆಲ್ಲರೂ ಒಂದುಗೂಡಬೇಕು' ಎಂದರು.ಇಲಾಖೆಯ ಆಯುಕ್ತ ಸಿ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>