<p>ಮೈಸೂರು: ಕಲಾಮಂದಿರ ಆವರಣದ ರಂಗಾಯಣ ದತ್ತ ಹೆಜ್ಜೆ ಹಾಕುತ್ತಿದ್ದ ರಂಗಾಸಕ್ತರಲ್ಲಿ ಚಳಿ ನಡುಕ ಹುಟ್ಟಿಸಿದರೆ, ಅದಾಗಲೇ ನಾಟಕ ನೋಡಲು ಆಸೀನರಾದವರಿಗೆ ಅಗ್ನಿ ಮತ್ತು ಮಳೆಯ ಸ್ಪರ್ಶ..!<br /> <br /> ಹೌದು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸ ವದ ಮೂರನೇ ದಿನವಾದ ಸೋಮವಾರವೂ ರಂಗಾಯಣ ಆವರಣ ಭರ್ತಿ ಆಗಿತ್ತು. ಸಂಜೆಯಾ ಗುತ್ತಿದ್ದಂತೆ ಕಾಲೇಜಿ ವಿದ್ಯಾರ್ಥಿಗಳು, ರಂಗಾ<br /> ಸಕ್ತರು ಗುಂಪು ಗುಂಪಾಗಿ ರಂಗಾಯಣದತ್ತ ಹೆಜ್ಜೆ ಹಾಕುವ ಮೂಲಕ `ಬಹುರೂಪಿಗೆ ರಂಗು~ ತಂದರು. <br /> ವನರಂಗದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ `ಅಗ್ನಿ ಮತ್ತು ಮಳೆ~ ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಟನ ಕಲಾವಿದರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ಅನುಭವ ಕಟ್ಟಿಕೊಟ್ಟರು. ಹಿಂದಿನ ದಿನವೇ ಡಾ. ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ~ಕ್ಕೆ ತುಂಬಿ ತುಳುಕಿದ್ದ `ವನರಂಗ~ ಇಂದೂ ಕೂಡ ಭರ್ತಿಯಾಗಿತ್ತು.<br /> <br /> ಸಂಜೆ 5 ಗಂಟೆಗೆ ಮೈಸೂರಿನ ರಂಗ ಸಂಗಮ ತಂಡದ ಕಲಾವಿದರು `ಸಂಸ್ಕಾರ~ ಬೀದಿ ನಾಟಕ ಪ್ರಸ್ತುತ ಪಡಿಸಿ, ನೆರೆದ ಪ್ರೇಕ್ಷಕರನ್ನು ಸ್ವಾಗತಿಸಿದರು. ಬಳಿಕ ರಂಗಾಯಣದ ಭಾರತೀಯ ರಂಗ ಶಿಕ್ಷಣ ವಿದ್ಯಾರ್ಥಿಗಳು ಕೋಲಾಟ ನೃತ್ಯಕ್ಕೆ ಹೆಜ್ಜೆ ಹಾಕಿದರು. <br /> <br /> ಶ್ರೀರಂಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ರ `ನಾಗಮಂಡಲ~ ಚಲನಚಿತ್ರದ ಪ್ರದರ್ಶನ ನಡೆಯಿತು. ಪ್ರಕಾಶ್ ರೈ ಹಾಗೂ ನಟಿ ವಿಜಯಲಕ್ಷ್ಮೀ ಅಭಿನಯದ ನಾಗಮಂಡಲ ವಿಶಿಷ್ಟ ಭಾಷೆ ಮೂಲಕ ನೋಡುಗರ ಗಮನ ಸೆಳೆಯಿತು.<br /> <br /> ಕಲಾಮಂದಿರದಲ್ಲಿ ಗದಗಿನ ಪಂಡಿತ ಪುಟ್ಟರಾಜ ಗವಾಯಿ ನಾಟ್ಯಸಂಘದ ಕಲಾವಿದರು ಪ್ರಸ್ತುತ ಪಡಿಸಿದ `ಹೇಮರೆಡ್ಡಿ ಮಲ್ಲಮ್ಮ~ ನಾಟಕ ಅದ್ಭುತವಾಗಿತ್ತು. ಶ್ರೀಕಂಠಶಾಸ್ತ್ರಿ ನಲವಡಿ ನಿರ್ದೇಶನದ ಈ ನಾಟಕವನ್ನು ರೇವಣಸಿದ್ದಯ್ಯ ನಿರ್ದೇಶಿಸಿದ್ದಾರೆ. ಉತ್ತರ ಕನ್ನಡ ಭಾಷೆಯನ್ನು ಒಳಗೊಂಡ ನಾಟಕ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತು.<br /> <br /> ಭೂಮಿಗೀತದಲ್ಲಿ ಭುವನೇಶ್ವರದ ರಂಗಧಾರ ಅಕಾಡೆಮಿ ಮತ್ತು ರೆಪರ್ಟರಿ ಆಫ್ ಥಿಯೇಟರ್ ಆರ್ಟ್ಸ್ನ ಕಲಾವಿದರು ಪ್ರದರ್ಶಿಸಿದ ನಿಂಗುಲ್ (ಒರಿಯಾ) ನಾಟಕಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. `ಭಾಷೆ ಅರ್ಥವಾಗುವುದಿಲ್ಲ, ಆದರೆ ಭಾವಾಭಿನಯ ಮತ್ತು ಸಂಗೀತದ ಮೂಲಕ ಒಂದಿಷ್ಟು ಅರ್ಥಮಾಡಿಕೊಳ್ಳಬಹುದು~ ಎಂದು ಪ್ರೇಕ್ಷಕರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಕಲಾಮಂದಿರ ಆವರಣದ ರಂಗಾಯಣ ದತ್ತ ಹೆಜ್ಜೆ ಹಾಕುತ್ತಿದ್ದ ರಂಗಾಸಕ್ತರಲ್ಲಿ ಚಳಿ ನಡುಕ ಹುಟ್ಟಿಸಿದರೆ, ಅದಾಗಲೇ ನಾಟಕ ನೋಡಲು ಆಸೀನರಾದವರಿಗೆ ಅಗ್ನಿ ಮತ್ತು ಮಳೆಯ ಸ್ಪರ್ಶ..!<br /> <br /> ಹೌದು. ಬಹುರೂಪಿ ರಾಷ್ಟ್ರೀಯ ನಾಟಕೋತ್ಸ ವದ ಮೂರನೇ ದಿನವಾದ ಸೋಮವಾರವೂ ರಂಗಾಯಣ ಆವರಣ ಭರ್ತಿ ಆಗಿತ್ತು. ಸಂಜೆಯಾ ಗುತ್ತಿದ್ದಂತೆ ಕಾಲೇಜಿ ವಿದ್ಯಾರ್ಥಿಗಳು, ರಂಗಾ<br /> ಸಕ್ತರು ಗುಂಪು ಗುಂಪಾಗಿ ರಂಗಾಯಣದತ್ತ ಹೆಜ್ಜೆ ಹಾಕುವ ಮೂಲಕ `ಬಹುರೂಪಿಗೆ ರಂಗು~ ತಂದರು. <br /> ವನರಂಗದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ `ಅಗ್ನಿ ಮತ್ತು ಮಳೆ~ ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಟನ ಕಲಾವಿದರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ ಅನುಭವ ಕಟ್ಟಿಕೊಟ್ಟರು. ಹಿಂದಿನ ದಿನವೇ ಡಾ. ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ~ಕ್ಕೆ ತುಂಬಿ ತುಳುಕಿದ್ದ `ವನರಂಗ~ ಇಂದೂ ಕೂಡ ಭರ್ತಿಯಾಗಿತ್ತು.<br /> <br /> ಸಂಜೆ 5 ಗಂಟೆಗೆ ಮೈಸೂರಿನ ರಂಗ ಸಂಗಮ ತಂಡದ ಕಲಾವಿದರು `ಸಂಸ್ಕಾರ~ ಬೀದಿ ನಾಟಕ ಪ್ರಸ್ತುತ ಪಡಿಸಿ, ನೆರೆದ ಪ್ರೇಕ್ಷಕರನ್ನು ಸ್ವಾಗತಿಸಿದರು. ಬಳಿಕ ರಂಗಾಯಣದ ಭಾರತೀಯ ರಂಗ ಶಿಕ್ಷಣ ವಿದ್ಯಾರ್ಥಿಗಳು ಕೋಲಾಟ ನೃತ್ಯಕ್ಕೆ ಹೆಜ್ಜೆ ಹಾಕಿದರು. <br /> <br /> ಶ್ರೀರಂಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ರ `ನಾಗಮಂಡಲ~ ಚಲನಚಿತ್ರದ ಪ್ರದರ್ಶನ ನಡೆಯಿತು. ಪ್ರಕಾಶ್ ರೈ ಹಾಗೂ ನಟಿ ವಿಜಯಲಕ್ಷ್ಮೀ ಅಭಿನಯದ ನಾಗಮಂಡಲ ವಿಶಿಷ್ಟ ಭಾಷೆ ಮೂಲಕ ನೋಡುಗರ ಗಮನ ಸೆಳೆಯಿತು.<br /> <br /> ಕಲಾಮಂದಿರದಲ್ಲಿ ಗದಗಿನ ಪಂಡಿತ ಪುಟ್ಟರಾಜ ಗವಾಯಿ ನಾಟ್ಯಸಂಘದ ಕಲಾವಿದರು ಪ್ರಸ್ತುತ ಪಡಿಸಿದ `ಹೇಮರೆಡ್ಡಿ ಮಲ್ಲಮ್ಮ~ ನಾಟಕ ಅದ್ಭುತವಾಗಿತ್ತು. ಶ್ರೀಕಂಠಶಾಸ್ತ್ರಿ ನಲವಡಿ ನಿರ್ದೇಶನದ ಈ ನಾಟಕವನ್ನು ರೇವಣಸಿದ್ದಯ್ಯ ನಿರ್ದೇಶಿಸಿದ್ದಾರೆ. ಉತ್ತರ ಕನ್ನಡ ಭಾಷೆಯನ್ನು ಒಳಗೊಂಡ ನಾಟಕ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತು.<br /> <br /> ಭೂಮಿಗೀತದಲ್ಲಿ ಭುವನೇಶ್ವರದ ರಂಗಧಾರ ಅಕಾಡೆಮಿ ಮತ್ತು ರೆಪರ್ಟರಿ ಆಫ್ ಥಿಯೇಟರ್ ಆರ್ಟ್ಸ್ನ ಕಲಾವಿದರು ಪ್ರದರ್ಶಿಸಿದ ನಿಂಗುಲ್ (ಒರಿಯಾ) ನಾಟಕಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. `ಭಾಷೆ ಅರ್ಥವಾಗುವುದಿಲ್ಲ, ಆದರೆ ಭಾವಾಭಿನಯ ಮತ್ತು ಸಂಗೀತದ ಮೂಲಕ ಒಂದಿಷ್ಟು ಅರ್ಥಮಾಡಿಕೊಳ್ಳಬಹುದು~ ಎಂದು ಪ್ರೇಕ್ಷಕರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>