<p>ಢಾಕಾ (ಪಿಟಿಐ): ಭಾರತವು ಬಾಂಗ್ಲಾದೇಶದ ಜತೆಗಿನ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಎಲ್ಲ ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಲು ಬಯಸಿದೆ.<br /> <br /> ಬಾಂಗ್ಲಾಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕವಾಗಿರುವ ಪಂಕಜ್ ಶರಣ್ ಅವರು ಶನಿವಾರ ಇಲ್ಲಿ ಬಾಂಗ್ಲಾ ವಿದೇಶಾಂಗ ಸಚಿವೆ ದೀಪು ಮೋನಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.<br /> <br /> `ಉಭಯ ದೇಶಗಳ ಬಾಂಧವ್ಯದ ಮೇಲೆ ಪರಿಣಾಮ ಬೀರುವ ಎಲ್ಲ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಲು ಬಾಂಗ್ಲಾದೊಡನೆ ಸ್ಪಂದಿಸಿ ಕಾರ್ಯನಿರ್ವಹಿಸಲು ಭಾರತ ಕಟಿಬದ್ಧವಾಗಿದೆ~ ಎಂದು ಅವರು ತಿಳಿಸಿದರು.<br /> <br /> ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪು ಮೋನಿ ಅವರೊಡನೆ ಆರೋಗ್ಯಪೂರ್ಣ ಮತ್ತು ರಚನಾತ್ಮಕ ಮಾತುಕತೆ ನಡೆಸಿರುವುದಾಗಿ ಹೇಳಿದರು. ಅಲ್ಲದೆ, ಬಾಂಗ್ಲಾದೊಡನೆ ದ್ವಿಪಕ್ಷೀಯ ವಿಷಯಗಳ ಚರ್ಚೆ ಮುಂದುವರಿಸಲು ಭಾರತ ಉತ್ಸುಕವಾಗಿರುವುದಾಗಿಯೂ ಸ್ಪಷ್ಟಪಡಿಸಿದರು.<br /> <br /> ಸಾಗರದಲ್ಲಿ ಎರಡೂ ದೇಶಗಳಿಗೆ ಹಾನಿಕಾರಕವಾದ ಯಾವುದೇ ಸಮಸ್ಯೆಯನ್ನು ಒಗ್ಗೂಡಿ ಎದುರಿಸಲು ಉಭಯ ಸರ್ಕಾರಗಳು ಇಚ್ಛಿಸಿವೆ ಎಂದು ಅವರು ನುಡಿದರು.<br /> <br /> ಬಂಗಾಳ ಕೊಲ್ಲಿಯಲ್ಲಿ ಬಾಂಗ್ಲಾ ಮತ್ತು ಮ್ಯಾನ್ಮಾರ್ ಮಧ್ಯೆ ಉಂಟಾದ ಕಡಲ ಕಲಹದಲ್ಲಿ ವಿಶ್ವಸಂಸ್ಥೆಯ ನ್ಯಾಯಮಂಡಳಿ ನೀಡಿದ ತೀರ್ಪಿಗೆ ಪ್ರತಿಕ್ರಿಯೆಯಾಗಿ ಅವರು ಮೇಲಿನಂತೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಢಾಕಾ (ಪಿಟಿಐ): ಭಾರತವು ಬಾಂಗ್ಲಾದೇಶದ ಜತೆಗಿನ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಎಲ್ಲ ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಲು ಬಯಸಿದೆ.<br /> <br /> ಬಾಂಗ್ಲಾಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕವಾಗಿರುವ ಪಂಕಜ್ ಶರಣ್ ಅವರು ಶನಿವಾರ ಇಲ್ಲಿ ಬಾಂಗ್ಲಾ ವಿದೇಶಾಂಗ ಸಚಿವೆ ದೀಪು ಮೋನಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.<br /> <br /> `ಉಭಯ ದೇಶಗಳ ಬಾಂಧವ್ಯದ ಮೇಲೆ ಪರಿಣಾಮ ಬೀರುವ ಎಲ್ಲ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಲು ಬಾಂಗ್ಲಾದೊಡನೆ ಸ್ಪಂದಿಸಿ ಕಾರ್ಯನಿರ್ವಹಿಸಲು ಭಾರತ ಕಟಿಬದ್ಧವಾಗಿದೆ~ ಎಂದು ಅವರು ತಿಳಿಸಿದರು.<br /> <br /> ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪು ಮೋನಿ ಅವರೊಡನೆ ಆರೋಗ್ಯಪೂರ್ಣ ಮತ್ತು ರಚನಾತ್ಮಕ ಮಾತುಕತೆ ನಡೆಸಿರುವುದಾಗಿ ಹೇಳಿದರು. ಅಲ್ಲದೆ, ಬಾಂಗ್ಲಾದೊಡನೆ ದ್ವಿಪಕ್ಷೀಯ ವಿಷಯಗಳ ಚರ್ಚೆ ಮುಂದುವರಿಸಲು ಭಾರತ ಉತ್ಸುಕವಾಗಿರುವುದಾಗಿಯೂ ಸ್ಪಷ್ಟಪಡಿಸಿದರು.<br /> <br /> ಸಾಗರದಲ್ಲಿ ಎರಡೂ ದೇಶಗಳಿಗೆ ಹಾನಿಕಾರಕವಾದ ಯಾವುದೇ ಸಮಸ್ಯೆಯನ್ನು ಒಗ್ಗೂಡಿ ಎದುರಿಸಲು ಉಭಯ ಸರ್ಕಾರಗಳು ಇಚ್ಛಿಸಿವೆ ಎಂದು ಅವರು ನುಡಿದರು.<br /> <br /> ಬಂಗಾಳ ಕೊಲ್ಲಿಯಲ್ಲಿ ಬಾಂಗ್ಲಾ ಮತ್ತು ಮ್ಯಾನ್ಮಾರ್ ಮಧ್ಯೆ ಉಂಟಾದ ಕಡಲ ಕಲಹದಲ್ಲಿ ವಿಶ್ವಸಂಸ್ಥೆಯ ನ್ಯಾಯಮಂಡಳಿ ನೀಡಿದ ತೀರ್ಪಿಗೆ ಪ್ರತಿಕ್ರಿಯೆಯಾಗಿ ಅವರು ಮೇಲಿನಂತೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>