<p><strong>ಫಟುಲ್ಲಾ (ಪಿಟಿಐ): </strong>ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿದ್ದು, ಊಟದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೇ, 107 ರನ್ ಗಳಿಸಿದೆ.</p>.<p>ಟಾಸ್ ಗೆದ್ದು ಬ್ಯಾಟಿಂಗ್ ನಿರ್ಧಾರ ಕೈಗೊಂಡ ನಾಯಕ ವಿರಾಟ್ ಕೊಹ್ಲಿ ಯೋಚನೆ ಫಲ ನೀಡಿದೆ. ಕೊಹ್ಲಿ ನಿರ್ಧಾರ ಸಮರ್ಥಿಸುವಂತೆ ಆರಂಭಿಕ ಆಟಗಾರರಾದ ಶಿಖರ್ ಧವನ್ (74) ಹಾಗೂ ಮುರಳಿ ವಿಜಯ್ (33) ಅವರು ಉತ್ತಮ ಬುನಾದಿ ಒದಗಿಸಿದ್ದಾರೆ.</p>.<p>ಆಸ್ಟೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಂಡದಿಂದ ಹೊರ ಉಳಿದಿದ್ದ ಧವನ್ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದು, 71 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 74 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.<br /> <br /> ನಾಲ್ಕು ಸ್ಪಿನ್ನರ್ಗಳು ಹಾಗೂ ಏಕೈಕ ವೇಗಿಯೊಂದಿಗೆ ಕಣಕ್ಕಿಳಿದಿರುವ ಆತಿಥೇಯ ಬಾಂಗ್ಲಾದೇಶ ತಂಡದ ಬೌಲರ್ಗಳನ್ನು ಧವನ್ ಚೆನ್ನಾಗಿಯೇ ದಂಡಿಸುತ್ತಿದ್ದಾರೆ.</p>.<p>ಇನ್ನು, ವಿಜಯ್ ಅವರು ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದಾರೆ. 70 ಎಸೆತಗಳನ್ನು ಎದುರಿಸಿ 33 ರನ್ ಕಲೆ ಹಾಕಿದ್ದಾರೆ. <br /> <br /> 24ನೇ ಓವರ್ ವೇಳೆ ಮಳೆ ಅಡ್ಡಿ ಪಡಿಸುವ ಮುನ್ನ ಎಡಗೈ ಆಟಗಾರ ಧವನ್ ಅವರು 73 ರನ್ ಗಳಿಸಿದ್ದಾಗ ಜೀವದಾನ ಪಡೆದರು.</p>.<p>ಬಳಿಕ ಮಳೆ ಸುರಿದಿದ್ದರಿಂದ ಊಟದ ವಿರಾಮವನ್ನು ಪಡೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫಟುಲ್ಲಾ (ಪಿಟಿಐ): </strong>ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದಿದ್ದು, ಊಟದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೇ, 107 ರನ್ ಗಳಿಸಿದೆ.</p>.<p>ಟಾಸ್ ಗೆದ್ದು ಬ್ಯಾಟಿಂಗ್ ನಿರ್ಧಾರ ಕೈಗೊಂಡ ನಾಯಕ ವಿರಾಟ್ ಕೊಹ್ಲಿ ಯೋಚನೆ ಫಲ ನೀಡಿದೆ. ಕೊಹ್ಲಿ ನಿರ್ಧಾರ ಸಮರ್ಥಿಸುವಂತೆ ಆರಂಭಿಕ ಆಟಗಾರರಾದ ಶಿಖರ್ ಧವನ್ (74) ಹಾಗೂ ಮುರಳಿ ವಿಜಯ್ (33) ಅವರು ಉತ್ತಮ ಬುನಾದಿ ಒದಗಿಸಿದ್ದಾರೆ.</p>.<p>ಆಸ್ಟೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಂಡದಿಂದ ಹೊರ ಉಳಿದಿದ್ದ ಧವನ್ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದು, 71 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 74 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.<br /> <br /> ನಾಲ್ಕು ಸ್ಪಿನ್ನರ್ಗಳು ಹಾಗೂ ಏಕೈಕ ವೇಗಿಯೊಂದಿಗೆ ಕಣಕ್ಕಿಳಿದಿರುವ ಆತಿಥೇಯ ಬಾಂಗ್ಲಾದೇಶ ತಂಡದ ಬೌಲರ್ಗಳನ್ನು ಧವನ್ ಚೆನ್ನಾಗಿಯೇ ದಂಡಿಸುತ್ತಿದ್ದಾರೆ.</p>.<p>ಇನ್ನು, ವಿಜಯ್ ಅವರು ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದಾರೆ. 70 ಎಸೆತಗಳನ್ನು ಎದುರಿಸಿ 33 ರನ್ ಕಲೆ ಹಾಕಿದ್ದಾರೆ. <br /> <br /> 24ನೇ ಓವರ್ ವೇಳೆ ಮಳೆ ಅಡ್ಡಿ ಪಡಿಸುವ ಮುನ್ನ ಎಡಗೈ ಆಟಗಾರ ಧವನ್ ಅವರು 73 ರನ್ ಗಳಿಸಿದ್ದಾಗ ಜೀವದಾನ ಪಡೆದರು.</p>.<p>ಬಳಿಕ ಮಳೆ ಸುರಿದಿದ್ದರಿಂದ ಊಟದ ವಿರಾಮವನ್ನು ಪಡೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>