<p>`ಸಂಗೀತವನ್ನು ನಮ್ಮ ಬದುಕಿನೊಂದಿಗೆ ಹೇಗೆ ಬೆಸೆಯುತ್ತೇವೆಯೋ ಹಾಗೆಯೇ ಸಂಗೀತ ಕಾರ್ಯನಿರ್ವಹಿಸುತ್ತದೆ. ಇದನ್ನು ನನ್ನ ಸಂಗೀತದ ಬದುಕಿನುದ್ದಕ್ಕೂ ಕಂಡುಕೊಂಡಿದ್ದೇನೆ. ನನ್ನಳೊಗೆ ಈ ಭಾವ ಹುಟ್ಟಲು ಸಂಗೀತ ಕುರಿತ ಆಳವಾದ ಜ್ಞಾನ, ಹಾಡಿನ ತಾತ್ವಿಕ ಅರ್ಥ ಅಥವಾ ಶಾಸ್ತ್ರೀಯ ಸಂಗೀತದಲ್ಲಿನ ಭಕ್ತಿ ಕಾರಣ ಇರಬಹುದು.~<br /> <br /> - ಖ್ಯಾತ ಕಲಾವಿದೆ ಬಾಂಬೆ ಜಯಶ್ರೀ ಸಂಗೀತವನ್ನು ವ್ಯಾಖ್ಯಾನಿಸುವ ಪರಿ ಇದು. ಸಂಗೀತವನ್ನು ಇನ್ನಿಲ್ಲದಂತೆ ಪ್ರೀತಿಸುವ, ಸಾವಿರಾರು ಗೀತೆಗಳಿಗೆ ಸುಶ್ರಾವ್ಯ ಕಂಠ ನೀಡಿರುವ ಬಿ.ಜಯಶ್ರೀ ಅವರಿಗೆ ದೇಶದ ಉದ್ದಗಲಕ್ಕೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈಗ ಬೆಂಗಳೂರು ನಗರಿಗರಿಗೆ ಜಯಶ್ರೀ ಕಂಠವನ್ನು ಮತ್ತೊಮ್ಮೆ ಆಸ್ವಾದಿಸುವ ಹಿಗ್ಗು. <br /> <br /> ಬಾಂಬೆ ಜಯಶ್ರೀ ಆಗಸ್ಟ್ 2 ಮತ್ತು 3ರಂದು `ಲಿಸನಿಂಗ್ ಟು ಲೈಫ್-ದಿ ಜರ್ನಿ ಆಫ್ ಎ ರಾಗ~ ಸಂಗೀತ ಕಾರ್ಯಕ್ರಮ ನಡೆಸಿಲಿದ್ದಾರೆ.70-80ರ ದಶಕದ ಖ್ಯಾತ ಹಾಡುಗಳನ್ನೂ ಒಳಗೊಂಡ ಈ ಕಾರ್ಯಕ್ರಮ ಆಗಸ್ಟ್ 2ರಂದು ಜೆ.ಪಿ.ನಗರದ ಬ್ರಿಗೇಡ್ ಕನ್ವೆನ್ಶನ್ ಸೆಂಟರ್ ಹಾಗೂ ಆಗಸ್ಟ್ 3ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. 90 ನಿಮಿಷ ಅವಧಿಯ ಈ ಕಾರ್ಯಕ್ರಮ ಎರಡೂ ದಿನವೂ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. <br /> <br /> ಕನ್ನಡದ ಖ್ಯಾತ ಹಾಡುಗಾರ್ತಿ ಎಂ.ಡಿ.ಪಲ್ಲವಿ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಲಿದ್ದಾರೆ. ಖುದ್ದು ಬಿ.ಜಯಶ್ರೀ ಅವರೇ ಪಲ್ಲವಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಮತ್ತೊಂದು ವಿಶೇಷ. ಹಾಗಾಗಿ ಸಂಗೀತ ಪ್ರೇಮಿಗಳು ಜಯಶ್ರೀ ಜತೆಗೆ ಪಲ್ಲವಿಯವರ ಮಧುರ ಗಾಯನವನ್ನು ಸವಿಯಬಹುದು.<br /> <br /> ಜೊತೆಗೆ ಸಾಂಪ್ರದಾಯಿಕ ಹಾಗೂ ಎಲೆಕ್ಟ್ರಾನಿಕ್ ವಯೊಲಿನ್ನಲ್ಲಿ ಎಂಬಾರ್ ಕಣ್ಣನ್, ಕೊಳಲಿನಲ್ಲಿ ನವೀನ್ ಅಯ್ಯರ್, ಪಿಯಾನೊ ಹಾಗೂ ಹಾರ್ಮೋನಿಯಂನಲ್ಲಿ ನವನೀತ್ ಸುಂದರ್ ಹಾಗೂ ಮೃದಂಗದಲ್ಲಿ ಜೆ. ವೈದ್ಯನಾಥನ್ ಮತ್ತು ಸಾಯಿ ಶ್ರವಣಂ ತಬಲಾದಲ್ಲಿ ಸಾಥ್ ನೀಡಲಿದ್ದಾರೆ. ಜಯಶ್ರೀ ಅವರ ವಿದ್ಯಾರ್ಥಿಗಳು ಕೋರಸ್ ಹಾಡಲಿದ್ದಾರೆ. <br /> <br /> ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತವಲ್ಲದೆ ಹಿಂದಿ, ತಮಿಳು ಮತ್ತು ಕನ್ನಡ ಚಲನಚಿತ್ರ ಗೀತೆಗಳು ಹಾಗೂ ಜಾನಪದ ಸಂಗೀತವೂ ಇರುತ್ತದೆ. `ಇಲ್ಲಿ ಕೇಳುಗರೇ ಮುಖ್ಯ. <br /> <br /> ಸುಮಧುರ ಸಂಗೀತಕ್ಕೆ ಕೇಳುಗರ ಹೃದಯ ಹೇಗೆ ಮಿಡಿಯುತ್ತದೆ ಎನ್ನುವುದನ್ನು ತೋರಿಸುವುದು ಈ ಸಂಗೀತ ಕಾರ್ಯಕ್ರಮದ ಗುರಿ~ ಎನ್ನುವ ಜಯಶ್ರೀ ಸ್ವತಃ ಕಾರ್ಯಕ್ರಮವನ್ನು ನಿರ್ದೇಶಿಸಿದ್ದಾರೆ. ಕಾರ್ಯಕ್ರಮದ ನಡುವೆ ಸಿಗುವ ವಿರಾಮದಲ್ಲಿ ಸಂಗೀತ ಏನು ಅರ್ಥ ನೀಡುತ್ತದೆ ಎನ್ನುವ ಕುರಿತು ಜಯಶ್ರಿ ಮಾತನಾಡಲಿದ್ದಾರೆ. <br /> <br /> <strong>ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗೆ:</strong> 4206 4969, 3989 5050, 4018 2222, 2344 3956.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಸಂಗೀತವನ್ನು ನಮ್ಮ ಬದುಕಿನೊಂದಿಗೆ ಹೇಗೆ ಬೆಸೆಯುತ್ತೇವೆಯೋ ಹಾಗೆಯೇ ಸಂಗೀತ ಕಾರ್ಯನಿರ್ವಹಿಸುತ್ತದೆ. ಇದನ್ನು ನನ್ನ ಸಂಗೀತದ ಬದುಕಿನುದ್ದಕ್ಕೂ ಕಂಡುಕೊಂಡಿದ್ದೇನೆ. ನನ್ನಳೊಗೆ ಈ ಭಾವ ಹುಟ್ಟಲು ಸಂಗೀತ ಕುರಿತ ಆಳವಾದ ಜ್ಞಾನ, ಹಾಡಿನ ತಾತ್ವಿಕ ಅರ್ಥ ಅಥವಾ ಶಾಸ್ತ್ರೀಯ ಸಂಗೀತದಲ್ಲಿನ ಭಕ್ತಿ ಕಾರಣ ಇರಬಹುದು.~<br /> <br /> - ಖ್ಯಾತ ಕಲಾವಿದೆ ಬಾಂಬೆ ಜಯಶ್ರೀ ಸಂಗೀತವನ್ನು ವ್ಯಾಖ್ಯಾನಿಸುವ ಪರಿ ಇದು. ಸಂಗೀತವನ್ನು ಇನ್ನಿಲ್ಲದಂತೆ ಪ್ರೀತಿಸುವ, ಸಾವಿರಾರು ಗೀತೆಗಳಿಗೆ ಸುಶ್ರಾವ್ಯ ಕಂಠ ನೀಡಿರುವ ಬಿ.ಜಯಶ್ರೀ ಅವರಿಗೆ ದೇಶದ ಉದ್ದಗಲಕ್ಕೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈಗ ಬೆಂಗಳೂರು ನಗರಿಗರಿಗೆ ಜಯಶ್ರೀ ಕಂಠವನ್ನು ಮತ್ತೊಮ್ಮೆ ಆಸ್ವಾದಿಸುವ ಹಿಗ್ಗು. <br /> <br /> ಬಾಂಬೆ ಜಯಶ್ರೀ ಆಗಸ್ಟ್ 2 ಮತ್ತು 3ರಂದು `ಲಿಸನಿಂಗ್ ಟು ಲೈಫ್-ದಿ ಜರ್ನಿ ಆಫ್ ಎ ರಾಗ~ ಸಂಗೀತ ಕಾರ್ಯಕ್ರಮ ನಡೆಸಿಲಿದ್ದಾರೆ.70-80ರ ದಶಕದ ಖ್ಯಾತ ಹಾಡುಗಳನ್ನೂ ಒಳಗೊಂಡ ಈ ಕಾರ್ಯಕ್ರಮ ಆಗಸ್ಟ್ 2ರಂದು ಜೆ.ಪಿ.ನಗರದ ಬ್ರಿಗೇಡ್ ಕನ್ವೆನ್ಶನ್ ಸೆಂಟರ್ ಹಾಗೂ ಆಗಸ್ಟ್ 3ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. 90 ನಿಮಿಷ ಅವಧಿಯ ಈ ಕಾರ್ಯಕ್ರಮ ಎರಡೂ ದಿನವೂ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. <br /> <br /> ಕನ್ನಡದ ಖ್ಯಾತ ಹಾಡುಗಾರ್ತಿ ಎಂ.ಡಿ.ಪಲ್ಲವಿ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಲಿದ್ದಾರೆ. ಖುದ್ದು ಬಿ.ಜಯಶ್ರೀ ಅವರೇ ಪಲ್ಲವಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಮತ್ತೊಂದು ವಿಶೇಷ. ಹಾಗಾಗಿ ಸಂಗೀತ ಪ್ರೇಮಿಗಳು ಜಯಶ್ರೀ ಜತೆಗೆ ಪಲ್ಲವಿಯವರ ಮಧುರ ಗಾಯನವನ್ನು ಸವಿಯಬಹುದು.<br /> <br /> ಜೊತೆಗೆ ಸಾಂಪ್ರದಾಯಿಕ ಹಾಗೂ ಎಲೆಕ್ಟ್ರಾನಿಕ್ ವಯೊಲಿನ್ನಲ್ಲಿ ಎಂಬಾರ್ ಕಣ್ಣನ್, ಕೊಳಲಿನಲ್ಲಿ ನವೀನ್ ಅಯ್ಯರ್, ಪಿಯಾನೊ ಹಾಗೂ ಹಾರ್ಮೋನಿಯಂನಲ್ಲಿ ನವನೀತ್ ಸುಂದರ್ ಹಾಗೂ ಮೃದಂಗದಲ್ಲಿ ಜೆ. ವೈದ್ಯನಾಥನ್ ಮತ್ತು ಸಾಯಿ ಶ್ರವಣಂ ತಬಲಾದಲ್ಲಿ ಸಾಥ್ ನೀಡಲಿದ್ದಾರೆ. ಜಯಶ್ರೀ ಅವರ ವಿದ್ಯಾರ್ಥಿಗಳು ಕೋರಸ್ ಹಾಡಲಿದ್ದಾರೆ. <br /> <br /> ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತವಲ್ಲದೆ ಹಿಂದಿ, ತಮಿಳು ಮತ್ತು ಕನ್ನಡ ಚಲನಚಿತ್ರ ಗೀತೆಗಳು ಹಾಗೂ ಜಾನಪದ ಸಂಗೀತವೂ ಇರುತ್ತದೆ. `ಇಲ್ಲಿ ಕೇಳುಗರೇ ಮುಖ್ಯ. <br /> <br /> ಸುಮಧುರ ಸಂಗೀತಕ್ಕೆ ಕೇಳುಗರ ಹೃದಯ ಹೇಗೆ ಮಿಡಿಯುತ್ತದೆ ಎನ್ನುವುದನ್ನು ತೋರಿಸುವುದು ಈ ಸಂಗೀತ ಕಾರ್ಯಕ್ರಮದ ಗುರಿ~ ಎನ್ನುವ ಜಯಶ್ರೀ ಸ್ವತಃ ಕಾರ್ಯಕ್ರಮವನ್ನು ನಿರ್ದೇಶಿಸಿದ್ದಾರೆ. ಕಾರ್ಯಕ್ರಮದ ನಡುವೆ ಸಿಗುವ ವಿರಾಮದಲ್ಲಿ ಸಂಗೀತ ಏನು ಅರ್ಥ ನೀಡುತ್ತದೆ ಎನ್ನುವ ಕುರಿತು ಜಯಶ್ರಿ ಮಾತನಾಡಲಿದ್ದಾರೆ. <br /> <br /> <strong>ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗೆ:</strong> 4206 4969, 3989 5050, 4018 2222, 2344 3956.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>