<p><span style="font-size: 26px;">ಚಾಮರಾಜನಗರ:ತಾಲ್ಲೂಕಿನ ಹರದನಹಳ್ಳಿ, ಬ್ಯಾಡಮೂಡ್ಲು ಗ್ರಾಮದ ಸುತ್ತಮುತ್ತ ರೈತರು ಬೆಳೆದಿರುವ ಬಾಳೆ ತೋಟದಲ್ಲಿ ಸುಣ್ಣ ಮತ್ತು ಬೋರಾನ್ ಕೊರತೆ ಇರುವುದು ಕಂಡುಬಂದಿದೆ.</span><br /> <br /> ಲವಣಯುಕ್ತ ಮಣ್ಣಿನಲ್ಲಿ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡದಿದ್ದರೆ ಸುಣ್ಣ ಮತ್ತು ಬೋರಾನ್ ಕೊರತೆ ಕಂಡುಬರುವುದು ಸಾಮಾನ್ಯ. ಇದರ ಪರಿಣಾಮ ಬಾಳೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದರಿಂದ ಇಳುವರಿ ಕುಸಿತಕ್ಕೆ ಕಾರಣವಾಗುತ್ತದೆ.<br /> <br /> ಸುಣ್ಣದ ಕೊರತೆಯಿಂದ ಬಾಳೆ ಎಲೆಗಳು ಸರಿಯಾಗಿ ಹೊರಹೊಮ್ಮುವುದಿಲ್ಲ. ಮಧ್ಯಪಟ್ಟಿಯ ಪಕ್ಕದ ಎಲೆಯ ಭಾಗಗಳು ಗಟ್ಟಿಗೊಳ್ಳುತ್ತವೆ. ಜತೆಗೆ, ಎಲೆಗಳು ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ಯಾಲ್ಸಿಯಂ ನೈಟ್ರೇಟ್ ಸಿಂಪಡಣೆ ನೀಡುವುದರಿಂದ ಸುಣ್ಣದ ಕೊರತೆ ನೀಗಿಸಬಹುದು ಎನ್ನುತ್ತಾರೆ ಕೃಷಿ ತಜ್ಞರು.<br /> <br /> ಸಸ್ಯಗಳು ಸುಣ್ಣ ಹೀರಿಕೊಳ್ಳಲು ಹಾಗೂ ಸುಣ್ಣದ ಚಲನೆಗೆ ಬೋರಾನ್ ಪೋಷಕಾಂಶ ಸಹಕಾರಿಯಾಗಲಿದೆ. ಬೋರಾನ್ ನೀಡುವುದರಿಂದ ಸಸಿಗಳಲ್ಲಿ ಸುಣ್ಣದ ಕೊರತೆಯನ್ನು ಗಣನೀಯವಾಗಿ ನೀಗಿಸಬಹುದು. ಆಗ ಬೆಳೆಗಳಲ್ಲಿ ಗುಣಮಟ್ಟದ ವೈಶಿಷ್ಟ್ಯಗಳಾದ ಹಣ್ಣು, ಕಾಯಿಗಳ ಪಕ್ವತೆ, ಗಟ್ಟಿತನ, ಶೇಖರಣಾ ಸಾಮರ್ಥ್ಯ, ಬಣ್ಣವನ್ನು ಉತ್ತಮಗೊಳಿಸಬಹುದು.<br /> <br /> ಬೋರಾನ್ ಸಸ್ಯಗಳ ಬೇರಿನ ಬೆಳವಣಿಗೆ ಮತ್ತು ಗಿಡಗಳಲ್ಲಿ ಸಹಿಷ್ಣುತೆ ಹೆಚ್ಚಿಸಿಕೊಳ್ಳಲು ಅತ್ಯಾವಶ್ಯಕವಾಗಿದೆ. ಇದರ ಕೊರತೆಯು ಶಿಲೀಂಧ್ರ ಬಾಧೆ ಮತ್ತು ವಾತಾವರಣದ ಒತ್ತಡಕ್ಕೆ ಬೆಳೆಗಳು ತುತ್ತಾಗುವಂತೆ ಮಾಡುತ್ತದೆ. ಬೋರಾನ್ ಕೊರತೆ ಕಂಡುಬಂದಾಗ ಇದನ್ನು ನೀಗಿಸಲು ಬೋರ್ಯಾಕ್ಸ್ 2 ಗ್ರಾಂ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.<br /> <br /> `ಹರದನಹಳ್ಳಿ ಸುತ್ತಮುತ್ತ ಕೆಲವು ರೈತರು ಲವಣಯುಕ್ತ ಮಣ್ಣಿನಲ್ಲಿ ಬಾಳೆ ಬೆಳೆದಿದ್ದಾರೆ. ಹೀಗಾಗಿ, ಸುಣ್ಣ ಮತ್ತು ಬೋರಾನ್ ಕೊರತೆ ಕಂಡುಬಂದಿದೆ. ವಿಜ್ಞಾನ ಕೇಂದ್ರಕ್ಕೂ ಈ ಸಂಬಂಧ ಕೆಲವು ರೈತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಸಮಸ್ಯೆ ಕಂಡುಬಂದಿರುವ ಬಾಳೆ ಬೆಳೆದಿರುವ ರೈತರು ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು' ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಭಾಗದ ವಿಷಯ ತಜ್ಞ ಜಿ.ಎಸ್. ಯೋಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಚಾಮರಾಜನಗರ:ತಾಲ್ಲೂಕಿನ ಹರದನಹಳ್ಳಿ, ಬ್ಯಾಡಮೂಡ್ಲು ಗ್ರಾಮದ ಸುತ್ತಮುತ್ತ ರೈತರು ಬೆಳೆದಿರುವ ಬಾಳೆ ತೋಟದಲ್ಲಿ ಸುಣ್ಣ ಮತ್ತು ಬೋರಾನ್ ಕೊರತೆ ಇರುವುದು ಕಂಡುಬಂದಿದೆ.</span><br /> <br /> ಲವಣಯುಕ್ತ ಮಣ್ಣಿನಲ್ಲಿ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡದಿದ್ದರೆ ಸುಣ್ಣ ಮತ್ತು ಬೋರಾನ್ ಕೊರತೆ ಕಂಡುಬರುವುದು ಸಾಮಾನ್ಯ. ಇದರ ಪರಿಣಾಮ ಬಾಳೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದರಿಂದ ಇಳುವರಿ ಕುಸಿತಕ್ಕೆ ಕಾರಣವಾಗುತ್ತದೆ.<br /> <br /> ಸುಣ್ಣದ ಕೊರತೆಯಿಂದ ಬಾಳೆ ಎಲೆಗಳು ಸರಿಯಾಗಿ ಹೊರಹೊಮ್ಮುವುದಿಲ್ಲ. ಮಧ್ಯಪಟ್ಟಿಯ ಪಕ್ಕದ ಎಲೆಯ ಭಾಗಗಳು ಗಟ್ಟಿಗೊಳ್ಳುತ್ತವೆ. ಜತೆಗೆ, ಎಲೆಗಳು ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ಯಾಲ್ಸಿಯಂ ನೈಟ್ರೇಟ್ ಸಿಂಪಡಣೆ ನೀಡುವುದರಿಂದ ಸುಣ್ಣದ ಕೊರತೆ ನೀಗಿಸಬಹುದು ಎನ್ನುತ್ತಾರೆ ಕೃಷಿ ತಜ್ಞರು.<br /> <br /> ಸಸ್ಯಗಳು ಸುಣ್ಣ ಹೀರಿಕೊಳ್ಳಲು ಹಾಗೂ ಸುಣ್ಣದ ಚಲನೆಗೆ ಬೋರಾನ್ ಪೋಷಕಾಂಶ ಸಹಕಾರಿಯಾಗಲಿದೆ. ಬೋರಾನ್ ನೀಡುವುದರಿಂದ ಸಸಿಗಳಲ್ಲಿ ಸುಣ್ಣದ ಕೊರತೆಯನ್ನು ಗಣನೀಯವಾಗಿ ನೀಗಿಸಬಹುದು. ಆಗ ಬೆಳೆಗಳಲ್ಲಿ ಗುಣಮಟ್ಟದ ವೈಶಿಷ್ಟ್ಯಗಳಾದ ಹಣ್ಣು, ಕಾಯಿಗಳ ಪಕ್ವತೆ, ಗಟ್ಟಿತನ, ಶೇಖರಣಾ ಸಾಮರ್ಥ್ಯ, ಬಣ್ಣವನ್ನು ಉತ್ತಮಗೊಳಿಸಬಹುದು.<br /> <br /> ಬೋರಾನ್ ಸಸ್ಯಗಳ ಬೇರಿನ ಬೆಳವಣಿಗೆ ಮತ್ತು ಗಿಡಗಳಲ್ಲಿ ಸಹಿಷ್ಣುತೆ ಹೆಚ್ಚಿಸಿಕೊಳ್ಳಲು ಅತ್ಯಾವಶ್ಯಕವಾಗಿದೆ. ಇದರ ಕೊರತೆಯು ಶಿಲೀಂಧ್ರ ಬಾಧೆ ಮತ್ತು ವಾತಾವರಣದ ಒತ್ತಡಕ್ಕೆ ಬೆಳೆಗಳು ತುತ್ತಾಗುವಂತೆ ಮಾಡುತ್ತದೆ. ಬೋರಾನ್ ಕೊರತೆ ಕಂಡುಬಂದಾಗ ಇದನ್ನು ನೀಗಿಸಲು ಬೋರ್ಯಾಕ್ಸ್ 2 ಗ್ರಾಂ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.<br /> <br /> `ಹರದನಹಳ್ಳಿ ಸುತ್ತಮುತ್ತ ಕೆಲವು ರೈತರು ಲವಣಯುಕ್ತ ಮಣ್ಣಿನಲ್ಲಿ ಬಾಳೆ ಬೆಳೆದಿದ್ದಾರೆ. ಹೀಗಾಗಿ, ಸುಣ್ಣ ಮತ್ತು ಬೋರಾನ್ ಕೊರತೆ ಕಂಡುಬಂದಿದೆ. ವಿಜ್ಞಾನ ಕೇಂದ್ರಕ್ಕೂ ಈ ಸಂಬಂಧ ಕೆಲವು ರೈತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಸಮಸ್ಯೆ ಕಂಡುಬಂದಿರುವ ಬಾಳೆ ಬೆಳೆದಿರುವ ರೈತರು ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು' ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಭಾಗದ ವಿಷಯ ತಜ್ಞ ಜಿ.ಎಸ್. ಯೋಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>