<p>ಕೃಷ್ಣರಾಜಪುರ: ಕೃಷ್ಣರಾಜಪುರದಿಂದ ಮಣಿಪಾಲ್ ಆಸ್ಪತ್ರೆ ಮಾರ್ಗವಾಗಿ ದೊಮ್ಮಲೂರಿಗೆ ಆರಂಭಿಸಿರುವ ಬಿಎಂಟಿಸಿ ನೂತನ ಬಸ್ ಸಂಚಾರ ಸೇವೆಗೆ ಶಾಸಕ ಎನ್.ಎಸ್.ನಂದೀಶರೆಡ್ಡಿ ಅವರು ಭಾನುವಾರ ಚಾಲನೆ ನೀಡಿದರು. <br /> <br /> ಬಳಿಕ ಮಾತನಾಡಿದ ಅವರು, ಸಮಯಕ್ಕೆ ಸರಿಯಾಗಿ ಬಸ್ ಓಡಿಸಲು ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಸಹಾಯಕ ನಿಯಂತ್ರಕ ದೇವರಾಜಪ್ಪ ಅವರಿಗೆ ಸೂಚನೆ ನೀಡಿದರು. <br /> <br /> ಈ ಬಸ್ ಸೇವೆಯಿಂದ ಎಲ್ಆರ್ಡಿಇ, ಎಚ್ಎಎಲ್, ಬಿಇಎಂಎಲ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅನುಕೂಲವಾಗಲಿದೆ. ಮಣಿಪಾಲ್ ಆಸ್ಪತ್ರೆಗೆ ತೆರಳುವವರಿಗೂ ಇದರಿಂದ ಅನುಕೂಲವಾಗಲಿದೆ. ಮುಂದೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಬಸ್ಗಳನ್ನು ಓಡಿಸಲು ಪರಿಶೀಲಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.<br /> <br /> ಬಿಬಿಎಂಪಿ ಸದಸ್ಯ ಎನ್.ವೀರಣ್ಣ, ಎಸ್.ಎಸ್.ಪ್ರಸಾದ್, ಆರ್.ಮಂಜುಳಾದೇವಿ, ಬಿಎಂಟಿಸಿ ಸಹಾಯಕ ನಿಯಂತ್ರಕ ದೇವರಾಜಪ್ಪ, ಮುಖಂಡರಾದ ಕೇಶವಮೂರ್ತಿ, ಕೆ.ಬ್ರಹ್ಮಾನಂದರೆಡ್ಡಿ, ಶಿರಪುರ ಶ್ರೀನಿವಾಸ್, ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೃಷ್ಣರಾಜಪುರ: ಕೃಷ್ಣರಾಜಪುರದಿಂದ ಮಣಿಪಾಲ್ ಆಸ್ಪತ್ರೆ ಮಾರ್ಗವಾಗಿ ದೊಮ್ಮಲೂರಿಗೆ ಆರಂಭಿಸಿರುವ ಬಿಎಂಟಿಸಿ ನೂತನ ಬಸ್ ಸಂಚಾರ ಸೇವೆಗೆ ಶಾಸಕ ಎನ್.ಎಸ್.ನಂದೀಶರೆಡ್ಡಿ ಅವರು ಭಾನುವಾರ ಚಾಲನೆ ನೀಡಿದರು. <br /> <br /> ಬಳಿಕ ಮಾತನಾಡಿದ ಅವರು, ಸಮಯಕ್ಕೆ ಸರಿಯಾಗಿ ಬಸ್ ಓಡಿಸಲು ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಸಹಾಯಕ ನಿಯಂತ್ರಕ ದೇವರಾಜಪ್ಪ ಅವರಿಗೆ ಸೂಚನೆ ನೀಡಿದರು. <br /> <br /> ಈ ಬಸ್ ಸೇವೆಯಿಂದ ಎಲ್ಆರ್ಡಿಇ, ಎಚ್ಎಎಲ್, ಬಿಇಎಂಎಲ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅನುಕೂಲವಾಗಲಿದೆ. ಮಣಿಪಾಲ್ ಆಸ್ಪತ್ರೆಗೆ ತೆರಳುವವರಿಗೂ ಇದರಿಂದ ಅನುಕೂಲವಾಗಲಿದೆ. ಮುಂದೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಬಸ್ಗಳನ್ನು ಓಡಿಸಲು ಪರಿಶೀಲಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.<br /> <br /> ಬಿಬಿಎಂಪಿ ಸದಸ್ಯ ಎನ್.ವೀರಣ್ಣ, ಎಸ್.ಎಸ್.ಪ್ರಸಾದ್, ಆರ್.ಮಂಜುಳಾದೇವಿ, ಬಿಎಂಟಿಸಿ ಸಹಾಯಕ ನಿಯಂತ್ರಕ ದೇವರಾಜಪ್ಪ, ಮುಖಂಡರಾದ ಕೇಶವಮೂರ್ತಿ, ಕೆ.ಬ್ರಹ್ಮಾನಂದರೆಡ್ಡಿ, ಶಿರಪುರ ಶ್ರೀನಿವಾಸ್, ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>