<p><strong>ಗಂಗಾವತಿ:</strong> ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲುರನ್ನು ಮತ್ತೆ ಪಕ್ಷಕ್ಕೆ ಕರೆತರಲು ರಾಜ್ಯ ಬಿಜೆಪಿ ಸಂಸದರ ನಿಯೋಗವು ಎರಡು ದಿನದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಬಳಿ ಹೋಗಲಿದೆ ಎಂದು ಸಂಸದ ಶಿವರಾಮಗೌಡ ಹೇಳಿದರು.<br /> <br /> ಭಾನುವಾರ ಈ ಬಗ್ಗೆ ಮಾತನಾಡಿದ ಅವರು, ಬಿಎಸ್ವೈ ಮತ್ತು ಬಿಎಸ್ಆರ್ ಇಲ್ಲದೇ ರಾಜ್ಯದಲ್ಲಿ ಪಕ್ಷ ಸಂಘಟನೆ ಅಸಾಧ್ಯ ಎಂಬುವುದು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬಹುತೇಕ ಎಲ್ಲ ನಾಯಕರ ಗಮನಕ್ಕೆ ಬಂದಿದೆ.<br /> <br /> ಹೀಗಾಗಿ 2014ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಬಿಎಸ್ವೈ, ಬಿಎಸ್ಆರ್ ಅನಿವಾರ್ಯ ಎಂಬ ಕಾರಣಕ್ಕೆ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ರಾಷ್ಟ್ರೀಯ ನಾಯಕರ ಮನವೊಲಿಸಲು ಸಂಸದರ ನಿಯೋಗ ಹೋಗುತ್ತಿದೆ ಎಂದರು.<br /> <br /> <strong>ತೃತೀಯರಂಗ ಅಸಾಧ್ಯ:</strong> ದೇಶದ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ರಾಷ್ಟ್ರೀಯ ಪಕ್ಷಗಳು. ಆದರೆ ಪ್ರಾದೇಶಿಕ ಪಕ್ಷಗಳು ಈ ಎರಡು ರಾಷ್ಟ್ರೀಯ ಪಕ್ಷವನ್ನು ಬದಿಗಿಟ್ಟು ತೃತೀಯರಂಗ ರಚಿಸಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದು ಅಸಾಧ್ಯ ಎಂದು ಸಂಸದ ಹೇಳಿದರು.<br /> <br /> ರಾಷ್ಟ್ರೀಯ ಪಕ್ಷಗಳಿಗೇ ನಿರೀಕ್ಷಿತ ಮಟ್ಟದಲ್ಲಿ ಬಲ ಸಾಲದ್ದರಿಂದ ಕೇಂದ್ರದಲ್ಲಿ ಎನ್ಡಿಎ, ಯುಪಿಎ ಎಂದು ಕೂಟಕಟ್ಟಿಕೊಂಡು ಸರ್ಕಾರ ರಚಿಸಿಕೊಳ್ಳುವಂತ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸುವ ಹಂತಕ್ಕೆ ಬರುವುದು ಸಾಧ್ಯವಿಲ್ಲ ಎಂದರು.<br /> <br /> ಮೋದಿ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿರುವುದಕ್ಕೆ ಅದ್ವಾಣಿ ಅವರ ವಿರೋಧವಿಲ್ಲ. ಆದರೆ ಪಕ್ಷದಲ್ಲಿ ಕೆಲ ವೈಚಾರಿಕತೆ ವಿಭಿನ್ನ ನಿಲುವುಗಳಿವೆ. ಇಂದಿಗೂ ಅದ್ವಾನಿ ಅವರೇ ಪಕ್ಷದ ನಿರ್ಣಾಯ ನಾಯಕರು ಎಂಬುವುದರಲ್ಲಿ ಎರಡು ಮಾತಿಲ್ಲ.<br /> <br /> ಮೋದಿ ಅಲೆ ದೇಶದಾದ್ಯಂತ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳಿಂದಲೂ ಮೋದಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ನಿಲುವು ವ್ಯಕ್ತವಾಗುತ್ತಿದೆ. ಗುಜರಾತ್ ಮಾದರಿಯ ಅಭಿವೃದ್ಧಿ ದೇಶಕ್ಕೂ ವ್ಯಾಪಿಸಬೇಕೆಂಬ ಜನಸಾಮಾನ್ಯರ ನಿಲುವು ಮೋದಿಯತ್ತ ತಿರುಗಿದೆ ಎಂದು ಸಂಸದ ನುಡಿದರು.<br /> <br /> ಮುಖ್ಯಮಂತ್ರಿ ಗಾದಿಗೆ ಏರಿದ ತಕ್ಷಣ ಸಿದ್ದರಾಮಯ್ಯ, ಸಾಧಕ-ಭಾದಕ ಪರಿಶೀಲಿಸದೇ ವಿವೇಚನ ರಹಿತ ಯೋಜನೆ ಪ್ರಕಟಿಸುವುದು, ಮತ್ತೆ ಅವನ್ನು ಹಿಂದಕ್ಕೆ ಪಡೆಯುವ ಮೂಲಕ ಅಪ್ರಬುದ್ಧತೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂಸದ ಟೀಕಿಸಿದರು.<br /> <br /> ಎಪಿಎಲ್ಗೂ ಅಕ್ಕಿ, ಮತ್ತೆ ಸಾರಾಯಿ ಜಾರಿಗೆ, ಅಗ್ಗದ ಸರಾಯಿ ತಯಾರಿ, ಎಲ್ಲ ದೇವಸ್ಥಾನ ಸರ್ಕಾರದ ವಶಕ್ಕೆ ಹೀಗೆ ತರೇಹವಾರಿ ಹೇಳಿಕೆ ನೀಡಿ ಹಿಂಪಡೆಯುತ್ತಿರುವ ಸಿಎಂ ಆಡಳಿತದಲ್ಲಿ ಇನ್ನೂ ಮಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ ಎಂದು ಸಂಸದ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲುರನ್ನು ಮತ್ತೆ ಪಕ್ಷಕ್ಕೆ ಕರೆತರಲು ರಾಜ್ಯ ಬಿಜೆಪಿ ಸಂಸದರ ನಿಯೋಗವು ಎರಡು ದಿನದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಬಳಿ ಹೋಗಲಿದೆ ಎಂದು ಸಂಸದ ಶಿವರಾಮಗೌಡ ಹೇಳಿದರು.<br /> <br /> ಭಾನುವಾರ ಈ ಬಗ್ಗೆ ಮಾತನಾಡಿದ ಅವರು, ಬಿಎಸ್ವೈ ಮತ್ತು ಬಿಎಸ್ಆರ್ ಇಲ್ಲದೇ ರಾಜ್ಯದಲ್ಲಿ ಪಕ್ಷ ಸಂಘಟನೆ ಅಸಾಧ್ಯ ಎಂಬುವುದು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬಹುತೇಕ ಎಲ್ಲ ನಾಯಕರ ಗಮನಕ್ಕೆ ಬಂದಿದೆ.<br /> <br /> ಹೀಗಾಗಿ 2014ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಬಿಎಸ್ವೈ, ಬಿಎಸ್ಆರ್ ಅನಿವಾರ್ಯ ಎಂಬ ಕಾರಣಕ್ಕೆ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ರಾಷ್ಟ್ರೀಯ ನಾಯಕರ ಮನವೊಲಿಸಲು ಸಂಸದರ ನಿಯೋಗ ಹೋಗುತ್ತಿದೆ ಎಂದರು.<br /> <br /> <strong>ತೃತೀಯರಂಗ ಅಸಾಧ್ಯ:</strong> ದೇಶದ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ರಾಷ್ಟ್ರೀಯ ಪಕ್ಷಗಳು. ಆದರೆ ಪ್ರಾದೇಶಿಕ ಪಕ್ಷಗಳು ಈ ಎರಡು ರಾಷ್ಟ್ರೀಯ ಪಕ್ಷವನ್ನು ಬದಿಗಿಟ್ಟು ತೃತೀಯರಂಗ ರಚಿಸಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದು ಅಸಾಧ್ಯ ಎಂದು ಸಂಸದ ಹೇಳಿದರು.<br /> <br /> ರಾಷ್ಟ್ರೀಯ ಪಕ್ಷಗಳಿಗೇ ನಿರೀಕ್ಷಿತ ಮಟ್ಟದಲ್ಲಿ ಬಲ ಸಾಲದ್ದರಿಂದ ಕೇಂದ್ರದಲ್ಲಿ ಎನ್ಡಿಎ, ಯುಪಿಎ ಎಂದು ಕೂಟಕಟ್ಟಿಕೊಂಡು ಸರ್ಕಾರ ರಚಿಸಿಕೊಳ್ಳುವಂತ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸುವ ಹಂತಕ್ಕೆ ಬರುವುದು ಸಾಧ್ಯವಿಲ್ಲ ಎಂದರು.<br /> <br /> ಮೋದಿ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿರುವುದಕ್ಕೆ ಅದ್ವಾಣಿ ಅವರ ವಿರೋಧವಿಲ್ಲ. ಆದರೆ ಪಕ್ಷದಲ್ಲಿ ಕೆಲ ವೈಚಾರಿಕತೆ ವಿಭಿನ್ನ ನಿಲುವುಗಳಿವೆ. ಇಂದಿಗೂ ಅದ್ವಾನಿ ಅವರೇ ಪಕ್ಷದ ನಿರ್ಣಾಯ ನಾಯಕರು ಎಂಬುವುದರಲ್ಲಿ ಎರಡು ಮಾತಿಲ್ಲ.<br /> <br /> ಮೋದಿ ಅಲೆ ದೇಶದಾದ್ಯಂತ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳಿಂದಲೂ ಮೋದಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ನಿಲುವು ವ್ಯಕ್ತವಾಗುತ್ತಿದೆ. ಗುಜರಾತ್ ಮಾದರಿಯ ಅಭಿವೃದ್ಧಿ ದೇಶಕ್ಕೂ ವ್ಯಾಪಿಸಬೇಕೆಂಬ ಜನಸಾಮಾನ್ಯರ ನಿಲುವು ಮೋದಿಯತ್ತ ತಿರುಗಿದೆ ಎಂದು ಸಂಸದ ನುಡಿದರು.<br /> <br /> ಮುಖ್ಯಮಂತ್ರಿ ಗಾದಿಗೆ ಏರಿದ ತಕ್ಷಣ ಸಿದ್ದರಾಮಯ್ಯ, ಸಾಧಕ-ಭಾದಕ ಪರಿಶೀಲಿಸದೇ ವಿವೇಚನ ರಹಿತ ಯೋಜನೆ ಪ್ರಕಟಿಸುವುದು, ಮತ್ತೆ ಅವನ್ನು ಹಿಂದಕ್ಕೆ ಪಡೆಯುವ ಮೂಲಕ ಅಪ್ರಬುದ್ಧತೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂಸದ ಟೀಕಿಸಿದರು.<br /> <br /> ಎಪಿಎಲ್ಗೂ ಅಕ್ಕಿ, ಮತ್ತೆ ಸಾರಾಯಿ ಜಾರಿಗೆ, ಅಗ್ಗದ ಸರಾಯಿ ತಯಾರಿ, ಎಲ್ಲ ದೇವಸ್ಥಾನ ಸರ್ಕಾರದ ವಶಕ್ಕೆ ಹೀಗೆ ತರೇಹವಾರಿ ಹೇಳಿಕೆ ನೀಡಿ ಹಿಂಪಡೆಯುತ್ತಿರುವ ಸಿಎಂ ಆಡಳಿತದಲ್ಲಿ ಇನ್ನೂ ಮಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ ಎಂದು ಸಂಸದ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>