<p><strong>ಬೆಂಗಳೂರು: </strong>ಅನಾರೋಗ್ಯದ ಸಮಸ್ಯೆಗಳನ್ನು ಮುಂದಿಟ್ಟು ಹೈಕೋರ್ಟ್ನಲ್ಲಿ ಜಾಮೀನು ಕೋರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಗುರುವಾರಕ್ಕೆ (ಅ.20) ಮುಂದೂಡಿದೆ.<br /> <br /> ಮುಖ್ಯ ಅರ್ಜಿಯು ಇತ್ಯರ್ಥಗೊಳ್ಳುವವರೆಗೆ ಸದ್ಯ ಮಧ್ಯಂತರ ಜಾಮೀನು ನೀಡುವಂತೆ ಮಂಗಳವಾರ ಅವರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ಆದರೆ ಇದು ಅನಾರೋಗ್ಯದ ಆಧಾರದ ಮೇಲೆ ಅಲ್ಲ ಎಂದು ವಿಚಾರಣೆ ವೇಳೆ ಅವರು ಸ್ಪಷ್ಟಪಡಿಸಿದರು.<br /> <br /> ಲೋಕಾಯುಕ್ತ ವಿಶೇಷ ಕೋರ್ಟ್ ಕಳೆದ ಶನಿವಾರ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರು ವಿಶೇಷ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ನಡೆಸುತ್ತಿದ್ದಾರೆ.<br /> <br /> ವಕೀಲರ ನಡುವೆ ವಾಗ್ಯುದ್ಧ: ಜಾಮೀನು ಅರ್ಜಿ ಕುರಿತಾದ ವಿಚಾರಣೆ ವೇಳೆ ರವಿ ಬಿ. ನಾಯಕ್ ಹಾಗೂ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ಅವರ ನಡುವೆ ವಾಗ್ಯುದ್ಧ ನಡೆಯಿತು.<br /> <br /> ಬೆಳಿಗ್ಗೆ ವಿಚಾರಣೆ ಆರಂಭಗೊಳ್ಳುತ್ತಿದ್ದಂತೆ, ಜಾಮೀನು ನೀಡುವಂತೆ ನಾಯಕ್ ಅವರು ನ್ಯಾಯಮೂರ್ತಿಗಳನ್ನು ಕೋರಿದರು. ಅದಕ್ಕೆ ಹನುಮಂತರಾಯ ಆಕ್ಷೇಪ ವ್ಯಕ್ತಪಡಿಸಿದರು. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕನಿಷ್ಠ ವಾರದ ಕಾಲಾವಕಾಶ ಬೇಕು.<br /> <br /> ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಲೋಕಾಯುಕ್ತ ವಿಶೇಷ ಕೋರ್ಟ್ ಹೊರಡಿಸಿರುವ ಆದೇಶವು 200ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಓದಬೇಕಿದೆ ಎಂದರು.<br /> <br /> ಆಗ ನಾಯಕ್ ಅವರು, `ಮುಖ್ಯ ಅರ್ಜಿಯ ವಿಚಾರಣೆ ನಿಧಾನ ನಡೆಯಲಿ. ಈಗ ತುರ್ತಾಗಿ ಮಧ್ಯಂತರ ಜಾಮೀನು ನೀಡಬೇಕು~ ಎಂದರು. ಅದಕ್ಕೆ ಹನುಮಂತರಾಯ ಒಪ್ಪಲಿಲ್ಲ. ತುರ್ತಾಗಿ ಮಧ್ಯಂತರ ಜಾಮೀನು ನೀಡಲೇಬಾರದು. ತಾವು ಕೇಳಿದಷ್ಟು ಕಾಲಾವಕಾಶ ನೀಡಬೇಕು ಎಂದು ವಾದಿಸಿದರು. <br /> <br /> ಈ ರೀತಿ ಕಾಲಾವಕಾಶ ಕೇಳುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ನಾಯಕ್ ಮಾತಿನ ಚಾಟಿ ಬೀಸಿದರು.ಅನಾರೋಗ್ಯದ ನೆಪ: ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹನುಮಂತರಾಯ ಅವರು, `ಯಡಿಯೂರಪ್ಪನವರು ಚಿಕ್ಕಪುಟ್ಟ ಕಾಯಿಲೆಗಳನ್ನು ಮುಂದಿಟ್ಟುಕೊಂಡು ಜಾಮೀನು ಕೇಳುತ್ತಿದ್ದಾರೆ. <br /> <br /> ಅನಾರೋಗ್ಯದ ಕಾರಣವು ನೆಪ ಮಾತ್ರ. `ವಿಪರೀತ ಸಕ್ಕರೆ ಕಾಯಿಲೆ ಇದ್ದು, ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿದ್ದೇನೆ. ವಿಪರೀತ ಜ್ವರದಿಂದ ನರಳುತ್ತಿದ್ದೇನೆ. ವೈದ್ಯರ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ~ ಇತ್ಯಾದಿ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. <br /> <br /> ಇವೆಲ್ಲ ಕಾಯಿಲೆಗಳು ಎಲ್ಲರಿಗೂ ಮಾಮೂಲು. ಇದನ್ನೇ ತೀವ್ರ ಅನಾರೋಗ್ಯ ಎಂದು ಹೇಳಿ ಜಾಮೀನು ಕೇಳುವುದು ಎಷ್ಟು ಸರಿ~ ಎಂದು ಪ್ರತಿಚಾಟಿ ಬೀಸಿದರು.<br /> <br /> ಆಗ ನಾಯಕ್ ಅವರು, `ಈಗ ನಾವು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೇಳುತ್ತಿದ್ದೇವೆ ಎಂದು ಹೇಳಿದವರು ಯಾರು, ಇದು ನಿಮ್ಮ ಕಲ್ಪನೆ ಮಾತ್ರ. ಆನಾರೋಗ್ಯದ ಆಧಾರದ ಮೇಲೆ ಜಾಮೀನು ಕೇಳುತ್ತಿಲ್ಲ~ ಎಂದರು.ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅನಾರೋಗ್ಯದ ಸಮಸ್ಯೆಗಳನ್ನು ಮುಂದಿಟ್ಟು ಹೈಕೋರ್ಟ್ನಲ್ಲಿ ಜಾಮೀನು ಕೋರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಗುರುವಾರಕ್ಕೆ (ಅ.20) ಮುಂದೂಡಿದೆ.<br /> <br /> ಮುಖ್ಯ ಅರ್ಜಿಯು ಇತ್ಯರ್ಥಗೊಳ್ಳುವವರೆಗೆ ಸದ್ಯ ಮಧ್ಯಂತರ ಜಾಮೀನು ನೀಡುವಂತೆ ಮಂಗಳವಾರ ಅವರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ಆದರೆ ಇದು ಅನಾರೋಗ್ಯದ ಆಧಾರದ ಮೇಲೆ ಅಲ್ಲ ಎಂದು ವಿಚಾರಣೆ ವೇಳೆ ಅವರು ಸ್ಪಷ್ಟಪಡಿಸಿದರು.<br /> <br /> ಲೋಕಾಯುಕ್ತ ವಿಶೇಷ ಕೋರ್ಟ್ ಕಳೆದ ಶನಿವಾರ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರು ವಿಶೇಷ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ನಡೆಸುತ್ತಿದ್ದಾರೆ.<br /> <br /> ವಕೀಲರ ನಡುವೆ ವಾಗ್ಯುದ್ಧ: ಜಾಮೀನು ಅರ್ಜಿ ಕುರಿತಾದ ವಿಚಾರಣೆ ವೇಳೆ ರವಿ ಬಿ. ನಾಯಕ್ ಹಾಗೂ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ಅವರ ನಡುವೆ ವಾಗ್ಯುದ್ಧ ನಡೆಯಿತು.<br /> <br /> ಬೆಳಿಗ್ಗೆ ವಿಚಾರಣೆ ಆರಂಭಗೊಳ್ಳುತ್ತಿದ್ದಂತೆ, ಜಾಮೀನು ನೀಡುವಂತೆ ನಾಯಕ್ ಅವರು ನ್ಯಾಯಮೂರ್ತಿಗಳನ್ನು ಕೋರಿದರು. ಅದಕ್ಕೆ ಹನುಮಂತರಾಯ ಆಕ್ಷೇಪ ವ್ಯಕ್ತಪಡಿಸಿದರು. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕನಿಷ್ಠ ವಾರದ ಕಾಲಾವಕಾಶ ಬೇಕು.<br /> <br /> ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಲೋಕಾಯುಕ್ತ ವಿಶೇಷ ಕೋರ್ಟ್ ಹೊರಡಿಸಿರುವ ಆದೇಶವು 200ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಓದಬೇಕಿದೆ ಎಂದರು.<br /> <br /> ಆಗ ನಾಯಕ್ ಅವರು, `ಮುಖ್ಯ ಅರ್ಜಿಯ ವಿಚಾರಣೆ ನಿಧಾನ ನಡೆಯಲಿ. ಈಗ ತುರ್ತಾಗಿ ಮಧ್ಯಂತರ ಜಾಮೀನು ನೀಡಬೇಕು~ ಎಂದರು. ಅದಕ್ಕೆ ಹನುಮಂತರಾಯ ಒಪ್ಪಲಿಲ್ಲ. ತುರ್ತಾಗಿ ಮಧ್ಯಂತರ ಜಾಮೀನು ನೀಡಲೇಬಾರದು. ತಾವು ಕೇಳಿದಷ್ಟು ಕಾಲಾವಕಾಶ ನೀಡಬೇಕು ಎಂದು ವಾದಿಸಿದರು. <br /> <br /> ಈ ರೀತಿ ಕಾಲಾವಕಾಶ ಕೇಳುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ನಾಯಕ್ ಮಾತಿನ ಚಾಟಿ ಬೀಸಿದರು.ಅನಾರೋಗ್ಯದ ನೆಪ: ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹನುಮಂತರಾಯ ಅವರು, `ಯಡಿಯೂರಪ್ಪನವರು ಚಿಕ್ಕಪುಟ್ಟ ಕಾಯಿಲೆಗಳನ್ನು ಮುಂದಿಟ್ಟುಕೊಂಡು ಜಾಮೀನು ಕೇಳುತ್ತಿದ್ದಾರೆ. <br /> <br /> ಅನಾರೋಗ್ಯದ ಕಾರಣವು ನೆಪ ಮಾತ್ರ. `ವಿಪರೀತ ಸಕ್ಕರೆ ಕಾಯಿಲೆ ಇದ್ದು, ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿದ್ದೇನೆ. ವಿಪರೀತ ಜ್ವರದಿಂದ ನರಳುತ್ತಿದ್ದೇನೆ. ವೈದ್ಯರ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ~ ಇತ್ಯಾದಿ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. <br /> <br /> ಇವೆಲ್ಲ ಕಾಯಿಲೆಗಳು ಎಲ್ಲರಿಗೂ ಮಾಮೂಲು. ಇದನ್ನೇ ತೀವ್ರ ಅನಾರೋಗ್ಯ ಎಂದು ಹೇಳಿ ಜಾಮೀನು ಕೇಳುವುದು ಎಷ್ಟು ಸರಿ~ ಎಂದು ಪ್ರತಿಚಾಟಿ ಬೀಸಿದರು.<br /> <br /> ಆಗ ನಾಯಕ್ ಅವರು, `ಈಗ ನಾವು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೇಳುತ್ತಿದ್ದೇವೆ ಎಂದು ಹೇಳಿದವರು ಯಾರು, ಇದು ನಿಮ್ಮ ಕಲ್ಪನೆ ಮಾತ್ರ. ಆನಾರೋಗ್ಯದ ಆಧಾರದ ಮೇಲೆ ಜಾಮೀನು ಕೇಳುತ್ತಿಲ್ಲ~ ಎಂದರು.ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>