<p><strong>ಮಂಡ್ಯ: </strong>ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿ. ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಿರುವುದಕ್ಕೆ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಕಾರ್ಯಕರ್ತರ ಗೊಂದಲ, ಕೂಗಾಟ ಹೆಚ್ಚಾದಾಗ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಮೈಸೂರಿನ ‘ಮುಡಾ’ ಮಾಜಿ ಅಧ್ಯಕ್ಷ ನಾಗೇಂದ್ರ ಅರ್ಧದಲ್ಲಿಯೇ ಸಭೆಯಿಂದ ಹೊರ ನಡೆದರು.<br /> <br /> ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳುತ್ತೀರಿ. ಯಾರು ಅಭ್ಯರ್ಥಿ, ಅವರೇ ಬಂದಿಲ್ಲ. ಕಾರ್ಯಕರ್ತರನ್ನು ಕರೆದಿದ್ದೀರಿ. ಆದರೆ, ನಮಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.<br /> <br /> ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಹೊನ್ನಪ್ಪ, ಜಿಲ್ಲೆಯಿಂದ ನಾಲ್ವರ ಹೆಸರನ್ನು ಅಭ್ಯರ್ಥಿಗಾಗಿ ನೀಡಲಾಗಿತ್ತು. ಆದರೆ, ಶಿವಲಿಂಗಯ್ಯ ಅವರ ಹೆಸರನ್ನು ಘೋಷಿಸಲಾಗಿದೆ. ರಾಜ್ಯದಿಂದ ಯಾರೂ ತಿಳಿಸಿಲ್ಲ. ಅಭ್ಯರ್ಥಿಯನ್ನು ಕೇಳಿದರೆ, ಕೆಲವರು ಒತ್ತಾಯ ಮಾಡಿದ್ದರಿಂದ ನಿಂತಿದ್ದೇನೆ ಎನ್ನುತ್ತಾರೆ ಎಂದರು.<br /> <br /> ಅನೇಕ ಜನರು ಬಿಜೆಪಿಗೆ ಬಂದು, ಹೋಗಿದ್ದಾರೆ.ಡಿ.ಸಿ. ತಮ್ಮಣ್ಣ, ಮಧು ಮಾದೇಗೌಡ, ಶಿವಕುಮಾರ್, ಎಲ್ಆರ್ ಶಿವರಾಮೇಗೌಡ ಮುಂತಾದವರು. ಇವರದ್ದೂ ಹಾಗೆಯೇ ಆಗಬಾರದು. ಪಕ್ಷ ಕಟ್ಟಲು ಅವರು ಶ್ರಮಿಸಬೇಕು. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಅಭ್ಯರ್ಥಿ ಪರವಾಗಿ ಕೆಲಸ ಮಾಡೋಣ ಎಂದರು.<br /> <br /> ಮುಖಂಡ ಕಾಳೇನಹಳ್ಳಿ ನಾಗನಗೌಡ ಮಾತನಾಡಿ, ಪಕ್ಷಕ್ಕೆ ಬಂದು ಸೀಟು ಪಡೆದುವರು ನಮ್ಮೊಂದಿಗೆ ಇರಬೇಕು. ಸುಖಕ್ಕೆ ಬಂದವರು, ಕಷ್ಟದಲ್ಲಿಯೂ ಇರಬೇಕು. ಓಡಿ ಹೋಗುವವರು ಅಯೋಗ್ಯರು. ಅನೇಕರು ಓಡಿ ಹೋಗಿದ್ದಾರೆ. ನೋವಿದ್ದರೂ, ಮೋದಿಯರವನ್ನು ಪ್ರಧಾನಿಯಾಗಿಸಲು ಮರೆತು, ಪಕ್ಷಕ್ಕಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.<br /> <br /> ಮೈಸೂರಿನ ಮುಡಾ ಮಾಜಿ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಸಣ್ಣ–ಪುಟ್ಟ ಗೊಂದಲಗಳನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.<br /> <br /> ಅಪ್ಪಾಜಿಗೌಡ, ಸುಜಾತಾ ಸಿದ್ದಯ್ಯ, ಸುರೇಶ್ಬಾಬು, ಉಮಾಶಂಕರ್, ಅನುರಾಧ ರಘು, ಶ್ರೀಧರ್, ವಸಂತ ಮತ್ತಿತರರು ಪಾಲ್ಗೊಂಡಿದ್ದರು.<br /> <br /> <strong>‘ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಿ’<br /> ಮಂಡ್ಯ: </strong>ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ ಅವರು ಚುನಾವಣೆಯ ನಂತರವೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಬೇಕು ಎಂದು ಕೆಲವರು ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಗ್ರಹಿಸಿದರು.<br /> ಮುಖಂಡ ಜಿ.ಎಂ. ರವೀಂದ್ರ ಮಾತನಾಡಿ, ಈಗಿನ ಅಭ್ಯರ್ಥಿ ಚುನಾವಣೆ ನಂತರವೂ ಪಕ್ಷದಲ್ಲಿಯೇ ಇದ್ದು, ಪಕ್ಷವನ್ನು ಕಟ್ಟುತ್ತೇನೆ. ಭಗವದ್ಗೀತೆ ಮುಟ್ಟಿ ಪ್ರಮಾಣ ವಚನ ಮಾಡ ಬೇಕು. ಈ ಕುರಿತು ಶಾಸಕ ಆರ್್. ಅಶೋಕ್ ಅವರಿಗೆ ಹೇಳಿದ್ದೇವೆ. ಗುರುವಾರ ಪಕ್ಷ ಕಚೇರಿ ಉದ್ಘಾಟನೆಗೆ ಬರಲಿದ್ದು, ಆಗ ಪ್ರಮಾಣ ಮಾಡಿಸಲಿದ್ದಾರೆ. ಆ ನಂತರವೇ ಕೆಲಸ ಮಾಡುತ್ತೇವೆ ಎಂದರು.<br /> <br /> ಈ ಹಿಂದೆ ವಿವಿಧ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಬಂದವರು, ಚುನಾವಣೆಯ ನಂತರ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಅಧಿಕಾರ ಅನುಭವಿಸಿದವರೂ ಇದ್ದಾರೆ. ಮುಂದೆ ಹೀಗಾಗುವುದಿಲ್ಲ ಎಂದು ಏನು ಗ್ಯಾರಂಟಿ. ಆದ್ದರಿಂದ ಪ್ರಮಾಣ ಮಾಡಲಿ ಎಂದು ಬಹಳಷ್ಟು ಕಾರ್ಯಕರ್ತರು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿ. ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಿರುವುದಕ್ಕೆ ಮಂಗಳವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಕಾರ್ಯಕರ್ತರ ಗೊಂದಲ, ಕೂಗಾಟ ಹೆಚ್ಚಾದಾಗ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಮೈಸೂರಿನ ‘ಮುಡಾ’ ಮಾಜಿ ಅಧ್ಯಕ್ಷ ನಾಗೇಂದ್ರ ಅರ್ಧದಲ್ಲಿಯೇ ಸಭೆಯಿಂದ ಹೊರ ನಡೆದರು.<br /> <br /> ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳುತ್ತೀರಿ. ಯಾರು ಅಭ್ಯರ್ಥಿ, ಅವರೇ ಬಂದಿಲ್ಲ. ಕಾರ್ಯಕರ್ತರನ್ನು ಕರೆದಿದ್ದೀರಿ. ಆದರೆ, ನಮಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.<br /> <br /> ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಹೊನ್ನಪ್ಪ, ಜಿಲ್ಲೆಯಿಂದ ನಾಲ್ವರ ಹೆಸರನ್ನು ಅಭ್ಯರ್ಥಿಗಾಗಿ ನೀಡಲಾಗಿತ್ತು. ಆದರೆ, ಶಿವಲಿಂಗಯ್ಯ ಅವರ ಹೆಸರನ್ನು ಘೋಷಿಸಲಾಗಿದೆ. ರಾಜ್ಯದಿಂದ ಯಾರೂ ತಿಳಿಸಿಲ್ಲ. ಅಭ್ಯರ್ಥಿಯನ್ನು ಕೇಳಿದರೆ, ಕೆಲವರು ಒತ್ತಾಯ ಮಾಡಿದ್ದರಿಂದ ನಿಂತಿದ್ದೇನೆ ಎನ್ನುತ್ತಾರೆ ಎಂದರು.<br /> <br /> ಅನೇಕ ಜನರು ಬಿಜೆಪಿಗೆ ಬಂದು, ಹೋಗಿದ್ದಾರೆ.ಡಿ.ಸಿ. ತಮ್ಮಣ್ಣ, ಮಧು ಮಾದೇಗೌಡ, ಶಿವಕುಮಾರ್, ಎಲ್ಆರ್ ಶಿವರಾಮೇಗೌಡ ಮುಂತಾದವರು. ಇವರದ್ದೂ ಹಾಗೆಯೇ ಆಗಬಾರದು. ಪಕ್ಷ ಕಟ್ಟಲು ಅವರು ಶ್ರಮಿಸಬೇಕು. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಅಭ್ಯರ್ಥಿ ಪರವಾಗಿ ಕೆಲಸ ಮಾಡೋಣ ಎಂದರು.<br /> <br /> ಮುಖಂಡ ಕಾಳೇನಹಳ್ಳಿ ನಾಗನಗೌಡ ಮಾತನಾಡಿ, ಪಕ್ಷಕ್ಕೆ ಬಂದು ಸೀಟು ಪಡೆದುವರು ನಮ್ಮೊಂದಿಗೆ ಇರಬೇಕು. ಸುಖಕ್ಕೆ ಬಂದವರು, ಕಷ್ಟದಲ್ಲಿಯೂ ಇರಬೇಕು. ಓಡಿ ಹೋಗುವವರು ಅಯೋಗ್ಯರು. ಅನೇಕರು ಓಡಿ ಹೋಗಿದ್ದಾರೆ. ನೋವಿದ್ದರೂ, ಮೋದಿಯರವನ್ನು ಪ್ರಧಾನಿಯಾಗಿಸಲು ಮರೆತು, ಪಕ್ಷಕ್ಕಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.<br /> <br /> ಮೈಸೂರಿನ ಮುಡಾ ಮಾಜಿ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಸಣ್ಣ–ಪುಟ್ಟ ಗೊಂದಲಗಳನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.<br /> <br /> ಅಪ್ಪಾಜಿಗೌಡ, ಸುಜಾತಾ ಸಿದ್ದಯ್ಯ, ಸುರೇಶ್ಬಾಬು, ಉಮಾಶಂಕರ್, ಅನುರಾಧ ರಘು, ಶ್ರೀಧರ್, ವಸಂತ ಮತ್ತಿತರರು ಪಾಲ್ಗೊಂಡಿದ್ದರು.<br /> <br /> <strong>‘ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಿ’<br /> ಮಂಡ್ಯ: </strong>ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ ಅವರು ಚುನಾವಣೆಯ ನಂತರವೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡಬೇಕು ಎಂದು ಕೆಲವರು ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಗ್ರಹಿಸಿದರು.<br /> ಮುಖಂಡ ಜಿ.ಎಂ. ರವೀಂದ್ರ ಮಾತನಾಡಿ, ಈಗಿನ ಅಭ್ಯರ್ಥಿ ಚುನಾವಣೆ ನಂತರವೂ ಪಕ್ಷದಲ್ಲಿಯೇ ಇದ್ದು, ಪಕ್ಷವನ್ನು ಕಟ್ಟುತ್ತೇನೆ. ಭಗವದ್ಗೀತೆ ಮುಟ್ಟಿ ಪ್ರಮಾಣ ವಚನ ಮಾಡ ಬೇಕು. ಈ ಕುರಿತು ಶಾಸಕ ಆರ್್. ಅಶೋಕ್ ಅವರಿಗೆ ಹೇಳಿದ್ದೇವೆ. ಗುರುವಾರ ಪಕ್ಷ ಕಚೇರಿ ಉದ್ಘಾಟನೆಗೆ ಬರಲಿದ್ದು, ಆಗ ಪ್ರಮಾಣ ಮಾಡಿಸಲಿದ್ದಾರೆ. ಆ ನಂತರವೇ ಕೆಲಸ ಮಾಡುತ್ತೇವೆ ಎಂದರು.<br /> <br /> ಈ ಹಿಂದೆ ವಿವಿಧ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಬಂದವರು, ಚುನಾವಣೆಯ ನಂತರ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಅಧಿಕಾರ ಅನುಭವಿಸಿದವರೂ ಇದ್ದಾರೆ. ಮುಂದೆ ಹೀಗಾಗುವುದಿಲ್ಲ ಎಂದು ಏನು ಗ್ಯಾರಂಟಿ. ಆದ್ದರಿಂದ ಪ್ರಮಾಣ ಮಾಡಲಿ ಎಂದು ಬಹಳಷ್ಟು ಕಾರ್ಯಕರ್ತರು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>