<p><strong>ಹಾಸನ: </strong>ನಗರ, ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳ ಸ್ಥಿತಿ ಯಾವತ್ತೂ ಮಲತಾಯಿ ಮಕ್ಕಳಂತೆ. ಪಟ್ಟಣದಲ್ಲಿ ಎಲ್ಲ ಸೌಕರ್ಯಗಳಿದ್ದರೂ ಪಕ್ಕದಲ್ಲಿನ ಹಳ್ಳಿಗಳ ಸ್ಥಿತಿ ಶೋಚನೀಯ. ಇದಕ್ಕೆ ಬಿಟ್ಟಗೌಡನಹಳ್ಳಿ ಹೊರತಲ್ಲ. ಹಾಸನ ನಗರದೊಳಗೇ ಇದ್ದರೂ, ನಗರಸಭೆ ವ್ಯಾಪ್ತಿಗೆ ಬಾರದೆ ಸಮೀಪದ ಬಿಟ್ಟಗೌಡನಹಳ್ಳಿಯ ಜನರು ಇಂಥ ಸಂಕಷ್ಟ ಎದುರಿಸುತ್ತಿದ್ದಾರೆ.<br /> <br /> ಬಿಟ್ಟಗೌಡನಹಳ್ಳಿಗೆ ಹೋಗುವ ರಸ್ತೆಯೇ (ಅರಕಲಗೂಡು ರಸ್ತೆ) ಸರಿಯಾಗಿಲ್ಲ. ಗ್ರಾಮದಲ್ಲಿ ಕೆಲವು ಭಾಗಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿದ್ದರೂ, ಅವೈಜ್ಞಾನಿಕವಾಗಿವೆ. ಶುಚಿತ್ವ ಕಾಣದ ಚರಂಡಿಗಳಲ್ಲಿ ಸದಾ ಕೆಟ್ಟ ವಾಸನೆ ಹೊರಸೂಸುತ್ತದೆ.<br /> <br /> ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ ಕಾರ್ಯ ಆರಂಭವಾಗಿ ನಾಲ್ಕು ವರ್ಷವಾಗುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆರು ತಿಂಗಳ ಹಿಂದೆ ಛಾವಣಿಗೆ ಶೀಟ್ ಹಾಕಿದ್ದಾರೆ. ಇದು ಪೂರ್ಣಗೊಳ್ಳುವುದು ಯಾವತ್ತು ಎಂದು ಗ್ರಾಮಸ್ಥರನ್ನು ಕೇಳಿದರೆ ಆಕಾಶದತ್ತ ಕೈತೋರಿಸಿ ‘ಅವನಿಗೇ ಗೊತ್ತು’ ಎನ್ನುತ್ತಾರೆ.<br /> <br /> ಬಿಟ್ಟಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆದರೆ, ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.<br /> ಈ ವರ್ಷ ಇನ್ನೂ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಕುಡಿಯುವ ನೀರಿನ ಕೊರತೆ ಉಂಟಾಗಬಹುದೆಂಬ ಭೀತಿ ಜನರನ್ನು ಕಾಡುತ್ತಿದೆ. ಕಳೆದ ವರ್ಷ ಕೆಲವು ಕೊಳವೆಬಾವಿಗಳು ಬತ್ತಿದ್ದರಿಂದ ಸಮಸ್ಯೆಯಾಗಿತ್ತು. ಈ ವರ್ಷ ಈವರೆಗೆ ಅಂಥ ಗಂಭೀರ ಸಮಸ್ಯೆ ಕಾಣಿಸಿಲ್ಲ. ಮುಂದಿನ ದಿನಗಳ ಬಗ್ಗೆ ಏನನ್ನೂ ಹೇಳಲಾಗದು ಎನ್ನುತ್ತಾರೆ ಗ್ರಾಮಸ್ಥರು.<br /> <br /> <strong>ನಿರಂತರ ಕೆಟ್ಟ ವಾಸನೆ</strong><br /> ಇಡೀ ಹಾಸನ ನಗರದ ಒಳಚರಂಡಿಯ ನೀರು ಬಿಟ್ಟಗೌಡನಹಳ್ಳಿಯಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ಅದರ ಸಂಸ್ಕರಣೆಯಾಗಬೇಕು. ಆದರೆ, ಈ ಪ್ರಕ್ರಿಯೆ ಸರಿಯಾಗಿ ನಡೆಯದೆ ಇಡೀ ಹಳ್ಳಿಯಲ್ಲಿ ಸದಾ ಕೆಟ್ಟ ವಾಸನೆ ಮೂಗಿಗೆ ತಾಗುತ್ತದೆ. ಈ ಘಟಕದ ಅಕ್ಕಪಕ್ಕದಲ್ಲಿ ನಿವೇಶನ, ಮನೆ ಹೊಂದಿದ್ದವರಲ್ಲಿ ಕೆಲವರು ಮನೆ, ಭೂಮಿ ಮಾರಾಟ ಮಾಡಿ ಹೊರ ಹೋಗಿದ್ದಾರೆ. ಉಳಿದವರು ಅನಿವಾರ್ಯವಾಗಿ ದುರ್ನಾತದಲ್ಲೇ ಬದುಕುತ್ತಿದ್ದಾರೆ.<br /> <br /> ಹಿಂದೆ ಈ ಯುಜಿಡಿ ನೀರಿನಿಂದ ಉತ್ಪಾದನೆಯಾಗುವ ಗ್ಯಾಸ್ನಿಂದ ವಿದ್ಯುತ್ ತಯಾರಿಸುವ ಪ್ರಯತ್ನ ನಡೆದಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಬದಲಾಗುತ್ತಿದ್ದಂತೆ ಆ ಯೋಜನೆಗೂ ಕಲ್ಲುಬಿದ್ದಿದೆ. ಇದರಿಂದಾಗಿ ಹಳ್ಳಿ ಜನರಿಗೆ ದುರ್ವಾಸನೆ ನಿರಂತರವಾಗಿದೆ.<br /> ನಗರಸಭೆಯಿಂದ ಅನತಿ ದೂರದಲ್ಲಿರುವ ಬಿಟ್ಟಗೌಡನಹಳ್ಳಿಯನ್ನು ನಗರಸಭೆಗೆ ಸೇರಿಸಿದರೆ ನಮ್ಮ ಕೆಲವು ಸಮಸ್ಯೆಗಳಿಗಾದರೂ ಪರಿಹಾರ ಲಭಿಸಬಹುದು ಎಂದು ಈ ಗ್ರಾಮದ ಜನರು ನಿರೀಕ್ಷಿಸುತ್ತಿದ್ದಾರೆ. ಸದ್ಯದಲ್ಲಿ ಅವರ ಕನಸು ನನಸಾಗುವಂತೆ ಕಾಣಿಸುತ್ತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ನಗರ, ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳ ಸ್ಥಿತಿ ಯಾವತ್ತೂ ಮಲತಾಯಿ ಮಕ್ಕಳಂತೆ. ಪಟ್ಟಣದಲ್ಲಿ ಎಲ್ಲ ಸೌಕರ್ಯಗಳಿದ್ದರೂ ಪಕ್ಕದಲ್ಲಿನ ಹಳ್ಳಿಗಳ ಸ್ಥಿತಿ ಶೋಚನೀಯ. ಇದಕ್ಕೆ ಬಿಟ್ಟಗೌಡನಹಳ್ಳಿ ಹೊರತಲ್ಲ. ಹಾಸನ ನಗರದೊಳಗೇ ಇದ್ದರೂ, ನಗರಸಭೆ ವ್ಯಾಪ್ತಿಗೆ ಬಾರದೆ ಸಮೀಪದ ಬಿಟ್ಟಗೌಡನಹಳ್ಳಿಯ ಜನರು ಇಂಥ ಸಂಕಷ್ಟ ಎದುರಿಸುತ್ತಿದ್ದಾರೆ.<br /> <br /> ಬಿಟ್ಟಗೌಡನಹಳ್ಳಿಗೆ ಹೋಗುವ ರಸ್ತೆಯೇ (ಅರಕಲಗೂಡು ರಸ್ತೆ) ಸರಿಯಾಗಿಲ್ಲ. ಗ್ರಾಮದಲ್ಲಿ ಕೆಲವು ಭಾಗಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿದ್ದರೂ, ಅವೈಜ್ಞಾನಿಕವಾಗಿವೆ. ಶುಚಿತ್ವ ಕಾಣದ ಚರಂಡಿಗಳಲ್ಲಿ ಸದಾ ಕೆಟ್ಟ ವಾಸನೆ ಹೊರಸೂಸುತ್ತದೆ.<br /> <br /> ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ ಕಾರ್ಯ ಆರಂಭವಾಗಿ ನಾಲ್ಕು ವರ್ಷವಾಗುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆರು ತಿಂಗಳ ಹಿಂದೆ ಛಾವಣಿಗೆ ಶೀಟ್ ಹಾಕಿದ್ದಾರೆ. ಇದು ಪೂರ್ಣಗೊಳ್ಳುವುದು ಯಾವತ್ತು ಎಂದು ಗ್ರಾಮಸ್ಥರನ್ನು ಕೇಳಿದರೆ ಆಕಾಶದತ್ತ ಕೈತೋರಿಸಿ ‘ಅವನಿಗೇ ಗೊತ್ತು’ ಎನ್ನುತ್ತಾರೆ.<br /> <br /> ಬಿಟ್ಟಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆದರೆ, ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.<br /> ಈ ವರ್ಷ ಇನ್ನೂ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಕುಡಿಯುವ ನೀರಿನ ಕೊರತೆ ಉಂಟಾಗಬಹುದೆಂಬ ಭೀತಿ ಜನರನ್ನು ಕಾಡುತ್ತಿದೆ. ಕಳೆದ ವರ್ಷ ಕೆಲವು ಕೊಳವೆಬಾವಿಗಳು ಬತ್ತಿದ್ದರಿಂದ ಸಮಸ್ಯೆಯಾಗಿತ್ತು. ಈ ವರ್ಷ ಈವರೆಗೆ ಅಂಥ ಗಂಭೀರ ಸಮಸ್ಯೆ ಕಾಣಿಸಿಲ್ಲ. ಮುಂದಿನ ದಿನಗಳ ಬಗ್ಗೆ ಏನನ್ನೂ ಹೇಳಲಾಗದು ಎನ್ನುತ್ತಾರೆ ಗ್ರಾಮಸ್ಥರು.<br /> <br /> <strong>ನಿರಂತರ ಕೆಟ್ಟ ವಾಸನೆ</strong><br /> ಇಡೀ ಹಾಸನ ನಗರದ ಒಳಚರಂಡಿಯ ನೀರು ಬಿಟ್ಟಗೌಡನಹಳ್ಳಿಯಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ಅದರ ಸಂಸ್ಕರಣೆಯಾಗಬೇಕು. ಆದರೆ, ಈ ಪ್ರಕ್ರಿಯೆ ಸರಿಯಾಗಿ ನಡೆಯದೆ ಇಡೀ ಹಳ್ಳಿಯಲ್ಲಿ ಸದಾ ಕೆಟ್ಟ ವಾಸನೆ ಮೂಗಿಗೆ ತಾಗುತ್ತದೆ. ಈ ಘಟಕದ ಅಕ್ಕಪಕ್ಕದಲ್ಲಿ ನಿವೇಶನ, ಮನೆ ಹೊಂದಿದ್ದವರಲ್ಲಿ ಕೆಲವರು ಮನೆ, ಭೂಮಿ ಮಾರಾಟ ಮಾಡಿ ಹೊರ ಹೋಗಿದ್ದಾರೆ. ಉಳಿದವರು ಅನಿವಾರ್ಯವಾಗಿ ದುರ್ನಾತದಲ್ಲೇ ಬದುಕುತ್ತಿದ್ದಾರೆ.<br /> <br /> ಹಿಂದೆ ಈ ಯುಜಿಡಿ ನೀರಿನಿಂದ ಉತ್ಪಾದನೆಯಾಗುವ ಗ್ಯಾಸ್ನಿಂದ ವಿದ್ಯುತ್ ತಯಾರಿಸುವ ಪ್ರಯತ್ನ ನಡೆದಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಬದಲಾಗುತ್ತಿದ್ದಂತೆ ಆ ಯೋಜನೆಗೂ ಕಲ್ಲುಬಿದ್ದಿದೆ. ಇದರಿಂದಾಗಿ ಹಳ್ಳಿ ಜನರಿಗೆ ದುರ್ವಾಸನೆ ನಿರಂತರವಾಗಿದೆ.<br /> ನಗರಸಭೆಯಿಂದ ಅನತಿ ದೂರದಲ್ಲಿರುವ ಬಿಟ್ಟಗೌಡನಹಳ್ಳಿಯನ್ನು ನಗರಸಭೆಗೆ ಸೇರಿಸಿದರೆ ನಮ್ಮ ಕೆಲವು ಸಮಸ್ಯೆಗಳಿಗಾದರೂ ಪರಿಹಾರ ಲಭಿಸಬಹುದು ಎಂದು ಈ ಗ್ರಾಮದ ಜನರು ನಿರೀಕ್ಷಿಸುತ್ತಿದ್ದಾರೆ. ಸದ್ಯದಲ್ಲಿ ಅವರ ಕನಸು ನನಸಾಗುವಂತೆ ಕಾಣಿಸುತ್ತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>