<p><strong>ಬೆಂಗಳೂರು:</strong> `ಇದಕ್ಕೆಲ್ಲಾ ಮುಖ್ಯ ಹೊಣೆ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ). ಅವರ ನಿರ್ಲಕ್ಷ್ಯದಿಂದ ಪ್ರತಿಭಾವಂತ ಆಟಗಾರನ ಜೀವಪಕ್ಷಿ ಹಾರಿ ಹೋಗಿದೆ~ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ಎ) ಅಧ್ಯಕ್ಷ ಖಲೀಲ್ ಆರೋಪಿಸಿದ್ದಾರೆ.<br /> <br /> `ಆ್ಯಂಬುಲೆನ್ಸ್ ಇಲ್ಲದೇ ಪಂದ್ಯ ನಡೆಸಿದ್ದು ಮೊದಲ ತಪ್ಪು. ಈ ಸಂದರ್ಭದಲ್ಲಿ ಸರಿಯಾದ ಸ್ಟ್ರೇಚರ್ ಕೂಡ ಇರಲಿಲ್ಲ. ಇದಕ್ಕೆ ಬಿಡಿಎಫ್ಎ ನೇರ ಹೊಣೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ~ ಎಂದು ಖಲೀಲ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ <br /> <br /> `ಕೆಎಸ್ಎಫ್ಎ ಆ್ಯಂಬುಲೆನ್ಸ್ ಖರೀದಿಸಲಿದೆ. ಆದರೆ ಎರಡು ದಿನಗಳ ಬಳಿಕ ಟೂರ್ನಿಯನ್ನು ಮುಂದುವರಿಸುತ್ತೇವೆ~ ಎಂದು ಅವರು ನುಡಿದರು. <br /> <br /> `ಫುಟ್ಬಾಲ್ನಲ್ಲಿ ಹೃದಯಾಘಾತ ಸಾಮಾನ್ಯ ವಿಷಯ. ಆದರೆ ಮುನ್ನೆಚ್ಚರಿಕೆ ಕ್ರಮ ಅಗತ್ಯ. ಮೃತ ವೆಂಕಟೇಶ್ ಕುಟುಂಬಕ್ಕೆ ನಾವು ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದ್ದೇವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಇದಕ್ಕೆಲ್ಲಾ ಮುಖ್ಯ ಹೊಣೆ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ). ಅವರ ನಿರ್ಲಕ್ಷ್ಯದಿಂದ ಪ್ರತಿಭಾವಂತ ಆಟಗಾರನ ಜೀವಪಕ್ಷಿ ಹಾರಿ ಹೋಗಿದೆ~ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ಎ) ಅಧ್ಯಕ್ಷ ಖಲೀಲ್ ಆರೋಪಿಸಿದ್ದಾರೆ.<br /> <br /> `ಆ್ಯಂಬುಲೆನ್ಸ್ ಇಲ್ಲದೇ ಪಂದ್ಯ ನಡೆಸಿದ್ದು ಮೊದಲ ತಪ್ಪು. ಈ ಸಂದರ್ಭದಲ್ಲಿ ಸರಿಯಾದ ಸ್ಟ್ರೇಚರ್ ಕೂಡ ಇರಲಿಲ್ಲ. ಇದಕ್ಕೆ ಬಿಡಿಎಫ್ಎ ನೇರ ಹೊಣೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ~ ಎಂದು ಖಲೀಲ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ <br /> <br /> `ಕೆಎಸ್ಎಫ್ಎ ಆ್ಯಂಬುಲೆನ್ಸ್ ಖರೀದಿಸಲಿದೆ. ಆದರೆ ಎರಡು ದಿನಗಳ ಬಳಿಕ ಟೂರ್ನಿಯನ್ನು ಮುಂದುವರಿಸುತ್ತೇವೆ~ ಎಂದು ಅವರು ನುಡಿದರು. <br /> <br /> `ಫುಟ್ಬಾಲ್ನಲ್ಲಿ ಹೃದಯಾಘಾತ ಸಾಮಾನ್ಯ ವಿಷಯ. ಆದರೆ ಮುನ್ನೆಚ್ಚರಿಕೆ ಕ್ರಮ ಅಗತ್ಯ. ಮೃತ ವೆಂಕಟೇಶ್ ಕುಟುಂಬಕ್ಕೆ ನಾವು ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದ್ದೇವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>