<p><strong>ಚೆನ್ನೈ (ಪಿಟಿಐ): </strong>ರಾಜೀವ್ ಹಂತಕರ ಬಿಡುಗಡೆ ತಮಿಳರಿಗೆ ಭಾವನಾತ್ಮಕ ವಿಷಯ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.<br /> <br /> ಹಾಗಾಗಿಯೇ ಕಾಂಗ್ರೆಸ್ ಹೊರತುಪಡಿಸಿ ತಮಿಳುನಾಡಿನ ಎಲ್ಲ ಪಕ್ಷಗಳೂ ಬಿಡುಗಡೆ ನಿರ್ಧಾರವನ್ನು ಸ್ವಾಗತಿಸಿವೆ. ಈ ನಿರ್ಧಾರಕ್ಕಾಗಿ ತಮ್ಮ ಬದ್ಧ ರಾಜಕೀಯ ವೈರಿ ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಶ್ಲಾಘಿಸಿದ್ದಾರೆ.<br /> ರಾಜೀವ್ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಮೊದಲೇ ಆಗ್ರಹಿಸಿತ್ತು. ಆದರೆ ಈ ಬೇಡಿಕೆಯನ್ನೇ ಬುಧವಾರ ಜಯ ಅವರು ಲೇವಡಿ ಮಾಡಿದ್ದಾರೆ.<br /> <br /> ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಬೇಕು ಎಂದು 2011ರಲ್ಲಿ ವಿಧಾನಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಡಿಎಂಕೆ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ ಎಂದು ಜಯಾ ಆರೋಪಿಸಿದರು.<br /> <br /> <strong>ಚಿದಂಬರಂ ಎಚ್ಚರಿಕೆ ನಡೆ</strong>: ತಮಿಳುನಾಡಿನವರೇ ಆದ ಕೇಂದ್ರ ಹಣಕಾಸು ಸಚಿವ ಚಿದಂಬರಂ ‘ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿರುವುದು ಅತೃಪ್ತಿ ಉಂಟು ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ರಾಜೀವ್ ಗಾಂಧಿ ಹತ್ಯೆ ಇಂದಿಗೂ ಭರಿಸಲಾಗದ ನೋವಾಗಿಯೇ ಉಳಿದುಕೊಂಡಿದೆ’ ಎಂದು ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ.<br /> <br /> <strong>‘ಸುಪ್ರೀಂ’ ತೀರ್ಪಿಗೆ ಬದ್ಧ: ಸಿಬಲ್</strong><br /> ರಾಜೀವ್ ಹಂತಕರ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಬದ್ಧ ಎಂದು ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.<br /> <br /> ‘ರಾಜೀವ್ ಹಂತಕರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂಬುದು ಅಟಾರ್ನಿ ಜನರಲ್ ಅಭಿಪ್ರಾಯವಾಗಿದೆ. ಈಗ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮಗೆ ಒಪ್ಪಿಗೆ ಇರಲಿ, ಬಿಡಲಿ ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.<br /> </p>.<p><a href="http://www.prajavani.net/article/%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D%E2%80%8C%E0%B2%97%E0%B3%86-%E0%B2%A6%E0%B3%81%E0%B2%83%E0%B2%96-%E0%B2%A4%E0%B2%82%E0%B2%A6-%E0%B2%A8%E0%B2%BF%E0%B2%B0%E0%B3%8D%E0%B2%A7%E0%B2%BE%E0%B2%B0"><strong>*ರಾಹುಲ್ಗೆ ದುಃಖ ತಂದ ನಿರ್ಧಾರ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ): </strong>ರಾಜೀವ್ ಹಂತಕರ ಬಿಡುಗಡೆ ತಮಿಳರಿಗೆ ಭಾವನಾತ್ಮಕ ವಿಷಯ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.<br /> <br /> ಹಾಗಾಗಿಯೇ ಕಾಂಗ್ರೆಸ್ ಹೊರತುಪಡಿಸಿ ತಮಿಳುನಾಡಿನ ಎಲ್ಲ ಪಕ್ಷಗಳೂ ಬಿಡುಗಡೆ ನಿರ್ಧಾರವನ್ನು ಸ್ವಾಗತಿಸಿವೆ. ಈ ನಿರ್ಧಾರಕ್ಕಾಗಿ ತಮ್ಮ ಬದ್ಧ ರಾಜಕೀಯ ವೈರಿ ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಶ್ಲಾಘಿಸಿದ್ದಾರೆ.<br /> ರಾಜೀವ್ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಮೊದಲೇ ಆಗ್ರಹಿಸಿತ್ತು. ಆದರೆ ಈ ಬೇಡಿಕೆಯನ್ನೇ ಬುಧವಾರ ಜಯ ಅವರು ಲೇವಡಿ ಮಾಡಿದ್ದಾರೆ.<br /> <br /> ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಬೇಕು ಎಂದು 2011ರಲ್ಲಿ ವಿಧಾನಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಡಿಎಂಕೆ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ ಎಂದು ಜಯಾ ಆರೋಪಿಸಿದರು.<br /> <br /> <strong>ಚಿದಂಬರಂ ಎಚ್ಚರಿಕೆ ನಡೆ</strong>: ತಮಿಳುನಾಡಿನವರೇ ಆದ ಕೇಂದ್ರ ಹಣಕಾಸು ಸಚಿವ ಚಿದಂಬರಂ ‘ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿರುವುದು ಅತೃಪ್ತಿ ಉಂಟು ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ರಾಜೀವ್ ಗಾಂಧಿ ಹತ್ಯೆ ಇಂದಿಗೂ ಭರಿಸಲಾಗದ ನೋವಾಗಿಯೇ ಉಳಿದುಕೊಂಡಿದೆ’ ಎಂದು ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ.<br /> <br /> <strong>‘ಸುಪ್ರೀಂ’ ತೀರ್ಪಿಗೆ ಬದ್ಧ: ಸಿಬಲ್</strong><br /> ರಾಜೀವ್ ಹಂತಕರ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಬದ್ಧ ಎಂದು ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.<br /> <br /> ‘ರಾಜೀವ್ ಹಂತಕರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂಬುದು ಅಟಾರ್ನಿ ಜನರಲ್ ಅಭಿಪ್ರಾಯವಾಗಿದೆ. ಈಗ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮಗೆ ಒಪ್ಪಿಗೆ ಇರಲಿ, ಬಿಡಲಿ ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.<br /> </p>.<p><a href="http://www.prajavani.net/article/%E0%B2%B0%E0%B2%BE%E0%B2%B9%E0%B3%81%E0%B2%B2%E0%B3%8D%E2%80%8C%E0%B2%97%E0%B3%86-%E0%B2%A6%E0%B3%81%E0%B2%83%E0%B2%96-%E0%B2%A4%E0%B2%82%E0%B2%A6-%E0%B2%A8%E0%B2%BF%E0%B2%B0%E0%B3%8D%E0%B2%A7%E0%B2%BE%E0%B2%B0"><strong>*ರಾಹುಲ್ಗೆ ದುಃಖ ತಂದ ನಿರ್ಧಾರ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>