<p><br /> </p>.<p>ಪ್ರಜಾವಾಣಿ ವಾರ್ತೆ:<br /> ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆ ವೇಳೆಯಲ್ಲಿ ಎಸ್.ಟಿ.ಎಫ್ ಮುಖ್ಯಸ್ಥರಾಗಿದ್ದ ಶಂಕರ್ ಬಿದರಿ ಮತ್ತು ಅವರ ತಂಡದ ಸದಸ್ಯರು ಸ್ಥಳೀಯ ಮಹಿಳೆಯರ ಮೇಲೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯನ್ನು ನೀಡಿದ್ದರು~ ಎಂದು ಮೃತ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮಿ ಆರೋಪಿಸಿದರು. <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಂಕರ ಬಿದರಿ ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಅನೇಕ ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡುವುದರೊಂದಿಗೆ ಅವರಿಗೆ ವಿದ್ಯುತ್ ಶಾಕ್ ನೀಡಿದ್ದರು. ಇದಲ್ಲದೆ ಆತನು ನನ್ನ ಬಳಿ ಬಂದು ನನ್ನ ಮಾಂಗಲ್ಯವನ್ನು ಕಿತ್ತು ಹಾಕುವಂತೆ ಬೆದರಿಸಿ, ನನ್ನ ಮಾಂಗಲ್ಯಕ್ಕೆ ಕೈ ಹಾಕಿದನು~. <br /> ಹಿರಿಯ ಪೊಲೀಸ್ ಅಧಿಕಾರಿಗಳಾದ ಮುಸಲೆ, ಟೈಗರ್ ಅಶೋಕ್ಕುಮಾರ್, ಬಾವ, ಕುಮಾರದಾಸ್ ಮುಂತಾದವರು ಕಾರ್ಯಚರಣೆ ವೇಳೆ ಚಿತ್ರಹಿಂಸೆ ನೀಡಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಹೇಳಿಕೆ ನೀಡಿದರೆ ಮತ್ತೆ ಚಿತ್ರ ಹಿಂಸೆ ನೀಡುವುದಾಗಿ ಬೆದರಿಕೆ ಹಾಕಿದರು ಆದ್ದರಿಂದ ನಾನು ಇಲ್ಲಿಯ ವರೆಗೆ ಆ ವಿಷಯನ್ನು ಹೇಳಲಿಲ್ಲ~ ಎಂದು ಅವರು ಇಲ್ಲಿ ಆರೋಪಿಸಿದರು. <br /> `ನನ್ನ ಪತಿ ವೀರಪ್ಪನ್ ಕೆಟ್ಟವನಲ್ಲ. ಈ ಬಗ್ಗೆ ಮಲೆಮಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ವೀರಪ್ಪನ ಕೊಲೆಗಳನ್ನು ಮಾಡಿದ್ದಾನೆ ನಿಜ, ಆದರೆ, ಅದನ್ನು ಮಾಡಲು ರಾಜಕಾರಣಿಗಳು, ಪೊಲೀಸ್ ಮತ್ತು ಅಲ್ಲಿನ ಅರಣ್ಯ ಅಧಿಕಾರಿಗಳು ಕಾರಣರಾಗಿದ್ದಾರೆ.<br /> ಪತಿ ವೀರಪ್ಪನ್ ಕುರಿತು 650 ಪುಟಗಳನ್ನು ಒಳಗೊಂಡಿರುವ ಕನ್ನಡ, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿರುವ ಪುಸ್ತಕವನ್ನು ಅತೀ ಶೀಘ್ರದಲ್ಲೇ ತರುವುದಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> </p>.<p>ಪ್ರಜಾವಾಣಿ ವಾರ್ತೆ:<br /> ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆ ವೇಳೆಯಲ್ಲಿ ಎಸ್.ಟಿ.ಎಫ್ ಮುಖ್ಯಸ್ಥರಾಗಿದ್ದ ಶಂಕರ್ ಬಿದರಿ ಮತ್ತು ಅವರ ತಂಡದ ಸದಸ್ಯರು ಸ್ಥಳೀಯ ಮಹಿಳೆಯರ ಮೇಲೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯನ್ನು ನೀಡಿದ್ದರು~ ಎಂದು ಮೃತ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮಿ ಆರೋಪಿಸಿದರು. <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಂಕರ ಬಿದರಿ ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಅನೇಕ ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡುವುದರೊಂದಿಗೆ ಅವರಿಗೆ ವಿದ್ಯುತ್ ಶಾಕ್ ನೀಡಿದ್ದರು. ಇದಲ್ಲದೆ ಆತನು ನನ್ನ ಬಳಿ ಬಂದು ನನ್ನ ಮಾಂಗಲ್ಯವನ್ನು ಕಿತ್ತು ಹಾಕುವಂತೆ ಬೆದರಿಸಿ, ನನ್ನ ಮಾಂಗಲ್ಯಕ್ಕೆ ಕೈ ಹಾಕಿದನು~. <br /> ಹಿರಿಯ ಪೊಲೀಸ್ ಅಧಿಕಾರಿಗಳಾದ ಮುಸಲೆ, ಟೈಗರ್ ಅಶೋಕ್ಕುಮಾರ್, ಬಾವ, ಕುಮಾರದಾಸ್ ಮುಂತಾದವರು ಕಾರ್ಯಚರಣೆ ವೇಳೆ ಚಿತ್ರಹಿಂಸೆ ನೀಡಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಹೇಳಿಕೆ ನೀಡಿದರೆ ಮತ್ತೆ ಚಿತ್ರ ಹಿಂಸೆ ನೀಡುವುದಾಗಿ ಬೆದರಿಕೆ ಹಾಕಿದರು ಆದ್ದರಿಂದ ನಾನು ಇಲ್ಲಿಯ ವರೆಗೆ ಆ ವಿಷಯನ್ನು ಹೇಳಲಿಲ್ಲ~ ಎಂದು ಅವರು ಇಲ್ಲಿ ಆರೋಪಿಸಿದರು. <br /> `ನನ್ನ ಪತಿ ವೀರಪ್ಪನ್ ಕೆಟ್ಟವನಲ್ಲ. ಈ ಬಗ್ಗೆ ಮಲೆಮಾದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ವೀರಪ್ಪನ ಕೊಲೆಗಳನ್ನು ಮಾಡಿದ್ದಾನೆ ನಿಜ, ಆದರೆ, ಅದನ್ನು ಮಾಡಲು ರಾಜಕಾರಣಿಗಳು, ಪೊಲೀಸ್ ಮತ್ತು ಅಲ್ಲಿನ ಅರಣ್ಯ ಅಧಿಕಾರಿಗಳು ಕಾರಣರಾಗಿದ್ದಾರೆ.<br /> ಪತಿ ವೀರಪ್ಪನ್ ಕುರಿತು 650 ಪುಟಗಳನ್ನು ಒಳಗೊಂಡಿರುವ ಕನ್ನಡ, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿರುವ ಪುಸ್ತಕವನ್ನು ಅತೀ ಶೀಘ್ರದಲ್ಲೇ ತರುವುದಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>