<p><strong>ಬೆಳಗಾವಿ:</strong> `ಉನ್ನತ ಹುದ್ದೆಯನ್ನು ಹೊಂದಿ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಬಿ.ಬಿ. ಮಮದಾಪುರ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರ ನೀಡಿದ ಕೊಡುಗೆ ಮಾದರಿಯಾಗಿದೆ ಎಂದು ಪ್ರೊ. ಎಸ್.ಎಸ್. ಪಟಗುಂದಿ ಅಭಿಪ್ರಾಯಪಟ್ಟರು.<br /> <br /> ಬಿ.ಬಿ. ಮಮದಾಪುರ ಪ್ರತಿಷ್ಠಾನ ಹಾಗೂ ಕಾರಂಜಿಮಠದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಮದಾಪುರ ಅವರ 121ನೆಯ ಜನ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> `ಕೆಎಲ್ಇ ಸಂಸ್ಥೆ ಕಟ್ಟುವುದರಲ್ಲಿ ಅವರ ಪಾತ್ರ ದೊಡ್ಡದಾಗಿದೆ. ಶೈಕ್ಷಣಿಕ ರಂಗದ ಪ್ರಗತಿಗೆ ತಮ್ಮ ಆಯುಷ್ಯವನ್ನೇ ಧಾರೆ ಎರೆದಿದ್ದರು~ ಎಂದು ಅವರು ಹೇಳಿದರು.<br /> <br /> ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜನಮನದಲ್ಲಿ ನಿರಂತರವಾಗಿ ಉಳಿದಿರುವ ಮಮದಾಪುರ ಅವರ ಶೈಕ್ಷಣಿಕ ಚಿಂತನೆ, ಸಾಧನೆಗಳು ಅನುಕರಣೀಯವಾಗಿವೆ. ಮಮದಾಪುರ ಅವರು ಸೇರಿದಂತೆ ಸಪ್ತರ್ಷಿಗಳು ನೆಟ್ಟ ಕೆಎಲ್ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.<br /> <br /> ಕವಿ ಡಾ.ಬಿ.ಎ. ಸನದಿ, ಉಪನ್ಯಾಸಕರಾಗಿದ್ದ ಎಸ್.ವೈ. ನಾಯಕ, ವಕೀಲ ಎಸ್.ವೈ. ಪಾಟೀಲ ಮಾತನಾಡಿ, ಮಮದಾಪುರ ತತ್ವ, ಆದರ್ಶಗಳ ಬಗೆಗೆ ತಿಳಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತನಾಡಿ, `ಕೆಎಲ್ಇ ಸಂಸ್ಥೆ ಆರಂಭಿಸಿದ ಸಪ್ತರ್ಷಿಗಳ ಜೀವನ ಕಥೆ ಪಠ್ಯದಲ್ಲಿ ಸೇರಿಸಬೇಕು. ವಿದ್ಯಾರ್ಥಿಗಳಿಗೆ ಅವರ ಬಗೆಗೆ ತಿಳಿಯಬೇಕು~ ಎಂದರು.<br /> <br /> ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, `ಮಮದಾಪುರ ಅವರು ಸಮಾಜದ ಋಣವನ್ನು ಸಂಪೂರ್ಣವಾಗಿ ತೀರಿಸಿದ್ದಾರೆ. ಸಪ್ತರ್ಷಿಗಳು ಸದಾಕಾಲವೂ ಸ್ಮರಣೀಯರಾಗಿದ್ದಾರೆ~ ಎಂದು ಹೇಳಿದರು.<br /> <br /> <strong>ಇದೇ ಸಂದರ್ಭದಲ್ಲಿ ಕವನ ವಾಚನವೂ ನಡೆಯಿತು. <br /> </strong><br /> ವಾಮನ ಕುಲಕರ್ಣಿ (ಪ್ರಥಮ), ಡಾ.ಗುರುದೇವಿ ಹುಲೆಪ್ಪನವರಮಠ (ದ್ವಿತೀಯ), ನಾಗೇಶ ನಾಯಕ (ತೃತೀಯ) ಬಹುಮಾನ ಪಡೆದುಕೊಂಡರು.ಸುಜಾತಾ ವಸ್ತ್ರದ ಪ್ರಾರ್ಥಿಸಿದರು. ಮೋಹನ ಹೂಗಾರ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ಹೂಗಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> `ಉನ್ನತ ಹುದ್ದೆಯನ್ನು ಹೊಂದಿ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಬಿ.ಬಿ. ಮಮದಾಪುರ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರ ನೀಡಿದ ಕೊಡುಗೆ ಮಾದರಿಯಾಗಿದೆ ಎಂದು ಪ್ರೊ. ಎಸ್.ಎಸ್. ಪಟಗುಂದಿ ಅಭಿಪ್ರಾಯಪಟ್ಟರು.<br /> <br /> ಬಿ.ಬಿ. ಮಮದಾಪುರ ಪ್ರತಿಷ್ಠಾನ ಹಾಗೂ ಕಾರಂಜಿಮಠದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಮದಾಪುರ ಅವರ 121ನೆಯ ಜನ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> `ಕೆಎಲ್ಇ ಸಂಸ್ಥೆ ಕಟ್ಟುವುದರಲ್ಲಿ ಅವರ ಪಾತ್ರ ದೊಡ್ಡದಾಗಿದೆ. ಶೈಕ್ಷಣಿಕ ರಂಗದ ಪ್ರಗತಿಗೆ ತಮ್ಮ ಆಯುಷ್ಯವನ್ನೇ ಧಾರೆ ಎರೆದಿದ್ದರು~ ಎಂದು ಅವರು ಹೇಳಿದರು.<br /> <br /> ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜನಮನದಲ್ಲಿ ನಿರಂತರವಾಗಿ ಉಳಿದಿರುವ ಮಮದಾಪುರ ಅವರ ಶೈಕ್ಷಣಿಕ ಚಿಂತನೆ, ಸಾಧನೆಗಳು ಅನುಕರಣೀಯವಾಗಿವೆ. ಮಮದಾಪುರ ಅವರು ಸೇರಿದಂತೆ ಸಪ್ತರ್ಷಿಗಳು ನೆಟ್ಟ ಕೆಎಲ್ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.<br /> <br /> ಕವಿ ಡಾ.ಬಿ.ಎ. ಸನದಿ, ಉಪನ್ಯಾಸಕರಾಗಿದ್ದ ಎಸ್.ವೈ. ನಾಯಕ, ವಕೀಲ ಎಸ್.ವೈ. ಪಾಟೀಲ ಮಾತನಾಡಿ, ಮಮದಾಪುರ ತತ್ವ, ಆದರ್ಶಗಳ ಬಗೆಗೆ ತಿಳಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತನಾಡಿ, `ಕೆಎಲ್ಇ ಸಂಸ್ಥೆ ಆರಂಭಿಸಿದ ಸಪ್ತರ್ಷಿಗಳ ಜೀವನ ಕಥೆ ಪಠ್ಯದಲ್ಲಿ ಸೇರಿಸಬೇಕು. ವಿದ್ಯಾರ್ಥಿಗಳಿಗೆ ಅವರ ಬಗೆಗೆ ತಿಳಿಯಬೇಕು~ ಎಂದರು.<br /> <br /> ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, `ಮಮದಾಪುರ ಅವರು ಸಮಾಜದ ಋಣವನ್ನು ಸಂಪೂರ್ಣವಾಗಿ ತೀರಿಸಿದ್ದಾರೆ. ಸಪ್ತರ್ಷಿಗಳು ಸದಾಕಾಲವೂ ಸ್ಮರಣೀಯರಾಗಿದ್ದಾರೆ~ ಎಂದು ಹೇಳಿದರು.<br /> <br /> <strong>ಇದೇ ಸಂದರ್ಭದಲ್ಲಿ ಕವನ ವಾಚನವೂ ನಡೆಯಿತು. <br /> </strong><br /> ವಾಮನ ಕುಲಕರ್ಣಿ (ಪ್ರಥಮ), ಡಾ.ಗುರುದೇವಿ ಹುಲೆಪ್ಪನವರಮಠ (ದ್ವಿತೀಯ), ನಾಗೇಶ ನಾಯಕ (ತೃತೀಯ) ಬಹುಮಾನ ಪಡೆದುಕೊಂಡರು.ಸುಜಾತಾ ವಸ್ತ್ರದ ಪ್ರಾರ್ಥಿಸಿದರು. ಮೋಹನ ಹೂಗಾರ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ಹೂಗಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>