<p>ಹೊಳೆನರಸೀಪುರ: ಹಲ್ಲಿ ಬಿದ್ದಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. <br /> <br /> ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪಲಾವ್ ತಯಾರಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಆಹಾರ ಬಡಿಸಿದ ನಂತರ ಪ್ರಾರ್ಥನೆ ಮಾಡಿ ಆಹಾರ ಸೇವಿಸುವುದು ಇಲ್ಲಿನ ನಿಯಮ. <br /> <br /> ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಬಡಿಸಿದ ಪಲಾವ್ ಜೊತೆಯಲ್ಲಿ ಬೆಂದಿದ್ದ ಹಲ್ಲಿ ಸಿಕ್ಕಿದೆ. ತಟ್ಟೆಯಲ್ಲಿ ಹಲ್ಲಿ ಕಂಡ ವಿದ್ಯಾರ್ಥಿ ಆತಂಕಗೊಂಡು ಹಲ್ಲಿ ಹಲ್ಲಿ ಎಂದು ಕೂಗಿದ್ದಾನೆ. ಆದರೆ ಪ್ರಾರ್ಥನೆಗೂ ಮೊದಲೇ ಕೆಲವು ವಿದ್ಯಾರ್ಥಿಗಳು ಪಲಾವ್ ತಿಂದಿದ್ದರು. ಆ ವಿದ್ಯಾರ್ಥಿಗಳು ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಿಕೊಂಡರು. <br /> <br /> ಕೆಲವೇ ನಿಮಿಷಗಳಲ್ಲಿ ಸುದ್ದಿ ಗ್ರಾಮದ ತುಂಬಾ ಹರಡಿತು. ಪಾಲಕರು, ಸಾರ್ವಜನಿಕರು ಶಾಲೆಗೆ ಧಾವಿಸಿದ್ದರಿಂದ ಸ್ವಲ್ಪಹೊತ್ತು ಗೊಂದಲ ಉಂಟಾಯಿತು ಎಂದು ಶಿಕ್ಷಕ ಶ್ರೀನಿವಾಸ್ ತಿಳಿಸಿದರು. <br /> <br /> ಶಾಲೆಯ ಎ್ಲ್ಲಲ ಮಕ್ಕಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸಂಜೆ ಮನೆಗೆ ಮರಳಿದರು. <br /> <br /> `ಶಾಲೆಯಲ್ಲಿ ನೀರಿನ ವ್ಯವಸ್ಥೆ ಸರಿ ಇಲ್ಲ. ಕೊಳವೆಬಾವಿಯ ಪೈಪ್ ಒಡೆದು ನೀರಿನೊಂದಿಗೆ ಗಲೀಜು ಬರುತ್ತದೆ~ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ದೇವೇಗೌಡ ಅವರಿಗೆ ಗ್ರಾಮಸ್ಥರು ದೂರು ನೀಡಿದರು. ಬಿಇಒ ಯೋಗೇಶ್, ತಾ.ಪಂ. ಸದಸ್ಯ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಮಕ್ಕಳ ಆರೋಗ್ಯ ವಿಚಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಳೆನರಸೀಪುರ: ಹಲ್ಲಿ ಬಿದ್ದಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. <br /> <br /> ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪಲಾವ್ ತಯಾರಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಆಹಾರ ಬಡಿಸಿದ ನಂತರ ಪ್ರಾರ್ಥನೆ ಮಾಡಿ ಆಹಾರ ಸೇವಿಸುವುದು ಇಲ್ಲಿನ ನಿಯಮ. <br /> <br /> ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಬಡಿಸಿದ ಪಲಾವ್ ಜೊತೆಯಲ್ಲಿ ಬೆಂದಿದ್ದ ಹಲ್ಲಿ ಸಿಕ್ಕಿದೆ. ತಟ್ಟೆಯಲ್ಲಿ ಹಲ್ಲಿ ಕಂಡ ವಿದ್ಯಾರ್ಥಿ ಆತಂಕಗೊಂಡು ಹಲ್ಲಿ ಹಲ್ಲಿ ಎಂದು ಕೂಗಿದ್ದಾನೆ. ಆದರೆ ಪ್ರಾರ್ಥನೆಗೂ ಮೊದಲೇ ಕೆಲವು ವಿದ್ಯಾರ್ಥಿಗಳು ಪಲಾವ್ ತಿಂದಿದ್ದರು. ಆ ವಿದ್ಯಾರ್ಥಿಗಳು ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಿಕೊಂಡರು. <br /> <br /> ಕೆಲವೇ ನಿಮಿಷಗಳಲ್ಲಿ ಸುದ್ದಿ ಗ್ರಾಮದ ತುಂಬಾ ಹರಡಿತು. ಪಾಲಕರು, ಸಾರ್ವಜನಿಕರು ಶಾಲೆಗೆ ಧಾವಿಸಿದ್ದರಿಂದ ಸ್ವಲ್ಪಹೊತ್ತು ಗೊಂದಲ ಉಂಟಾಯಿತು ಎಂದು ಶಿಕ್ಷಕ ಶ್ರೀನಿವಾಸ್ ತಿಳಿಸಿದರು. <br /> <br /> ಶಾಲೆಯ ಎ್ಲ್ಲಲ ಮಕ್ಕಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸಂಜೆ ಮನೆಗೆ ಮರಳಿದರು. <br /> <br /> `ಶಾಲೆಯಲ್ಲಿ ನೀರಿನ ವ್ಯವಸ್ಥೆ ಸರಿ ಇಲ್ಲ. ಕೊಳವೆಬಾವಿಯ ಪೈಪ್ ಒಡೆದು ನೀರಿನೊಂದಿಗೆ ಗಲೀಜು ಬರುತ್ತದೆ~ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ದೇವೇಗೌಡ ಅವರಿಗೆ ಗ್ರಾಮಸ್ಥರು ದೂರು ನೀಡಿದರು. ಬಿಇಒ ಯೋಗೇಶ್, ತಾ.ಪಂ. ಸದಸ್ಯ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಮಕ್ಕಳ ಆರೋಗ್ಯ ವಿಚಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>