<p><strong>ನೆಲಮಂಗಲ:</strong> ತಾಲ್ಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇವಾಲಯದ ಮುಂಭಾಗದ ಸಂಪಿಗೆ ಮರಕ್ಕೆ ಬೆಟ್ಟದ ತುದಿಯಿಂದ ರಭಸವಾಗಿ ಬಂದ ಬೆಂಕಿ ಉಂಡೆಯೊಂದು ಬಿದ್ದು ಮರದ ಕೊಂಬೆ ಉರಿದು ನೆಲಕ್ಕುರುಳಿದ ವಿಚಿತ್ರ ಘಟನೆಯು ಭಾನುವಾರ ಸಂಜೆ 4 ಗಂಟೆ ವೇಳೆಗೆ ಸಂಭವಿಸಿದೆ.<br /> <br /> ಸಮುದ್ರ ಮಟ್ಟದಿಂದ 4559 ಅಡಿ ಎತ್ತರವಿರುವ ಬೆಟ್ಟದ ತುದಿಯಿಂದ ಬೆಂಕಿ ಉಂಡೆಯೊಂದು ಸಂಪಿಗೆ ಮರದ ಮಧ್ಯ ಭಾಗದ ಕೊಂಬೆಯ ಮೇಲೆ ಬಿದ್ದು ಆಶ್ಚರ್ಯಕರ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ವಿಸ್ಮಯವನ್ನು ವೀಕ್ಷಿಸಿದ ದೇವಾಲಯದ ಬಳಿಯ ವ್ಯಾಪಾರಿ ಚೇತನ್ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಫಲಕಾರಿಯಾಗದೆ ಕೊಂಬೆಯು ದಹಿಸಿ ಬಿತ್ತು. ದೇವಾಲಯದ ಮುಂಭಾಗದಲ್ಲಿ ಕಿಚ್ಚು ಹಾಕಿದಂಥ ಸನ್ನಿವೇಶ ಸೃಷ್ಟಿಯಾಗಿತ್ತು. <br /> <br /> ಸೂರ್ಯನ ಸುತ್ತ ಸುತ್ತುತ್ತಿರ್ದುವ ಆಕಾಶ ಕಾಯಗಳು ಅಥವಾ ಉಲ್ಕೆಗಳು ಭೂಮಿಗೆ ಹತ್ತಿರ ಬಂದಾಗ ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಆಕರ್ಷಿಸಲ್ಪಟ್ಟು ವೇಗವಾಗಿ ಭೂಮಿಯತ್ತ ಬರುವ ಸಾಧ್ಯತೆಗಳಿರುತ್ತವೆ ಎಂದು ಪ್ರತ್ಯಕ್ಷದರ್ಶಿ ಡಾ.ಕೆ.ಬಸವರಾಜು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ:</strong> ತಾಲ್ಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇವಾಲಯದ ಮುಂಭಾಗದ ಸಂಪಿಗೆ ಮರಕ್ಕೆ ಬೆಟ್ಟದ ತುದಿಯಿಂದ ರಭಸವಾಗಿ ಬಂದ ಬೆಂಕಿ ಉಂಡೆಯೊಂದು ಬಿದ್ದು ಮರದ ಕೊಂಬೆ ಉರಿದು ನೆಲಕ್ಕುರುಳಿದ ವಿಚಿತ್ರ ಘಟನೆಯು ಭಾನುವಾರ ಸಂಜೆ 4 ಗಂಟೆ ವೇಳೆಗೆ ಸಂಭವಿಸಿದೆ.<br /> <br /> ಸಮುದ್ರ ಮಟ್ಟದಿಂದ 4559 ಅಡಿ ಎತ್ತರವಿರುವ ಬೆಟ್ಟದ ತುದಿಯಿಂದ ಬೆಂಕಿ ಉಂಡೆಯೊಂದು ಸಂಪಿಗೆ ಮರದ ಮಧ್ಯ ಭಾಗದ ಕೊಂಬೆಯ ಮೇಲೆ ಬಿದ್ದು ಆಶ್ಚರ್ಯಕರ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ವಿಸ್ಮಯವನ್ನು ವೀಕ್ಷಿಸಿದ ದೇವಾಲಯದ ಬಳಿಯ ವ್ಯಾಪಾರಿ ಚೇತನ್ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಫಲಕಾರಿಯಾಗದೆ ಕೊಂಬೆಯು ದಹಿಸಿ ಬಿತ್ತು. ದೇವಾಲಯದ ಮುಂಭಾಗದಲ್ಲಿ ಕಿಚ್ಚು ಹಾಕಿದಂಥ ಸನ್ನಿವೇಶ ಸೃಷ್ಟಿಯಾಗಿತ್ತು. <br /> <br /> ಸೂರ್ಯನ ಸುತ್ತ ಸುತ್ತುತ್ತಿರ್ದುವ ಆಕಾಶ ಕಾಯಗಳು ಅಥವಾ ಉಲ್ಕೆಗಳು ಭೂಮಿಗೆ ಹತ್ತಿರ ಬಂದಾಗ ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಆಕರ್ಷಿಸಲ್ಪಟ್ಟು ವೇಗವಾಗಿ ಭೂಮಿಯತ್ತ ಬರುವ ಸಾಧ್ಯತೆಗಳಿರುತ್ತವೆ ಎಂದು ಪ್ರತ್ಯಕ್ಷದರ್ಶಿ ಡಾ.ಕೆ.ಬಸವರಾಜು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>