<p dir="ltr"><strong>ಗೋಕಾಕ: </strong>ನಗರದ ಎಪಿಎಮ್ಸಿ ಮಾರ್ಗ ಸಮೀಪದ ವೃತ್ತದಲ್ಲಿರುವ ಖಾಸಗಿ ಒಡೆತನಕ್ಕೆ ಸೇರಿದ ಸೀಮಾ ಎಂಟರ್ಪ್ರೈಜಸ್ ಕಾಟನ್ ಮತ್ತು ಜಿನ್ನಿಂಗ್ ಇಂಡಸ್ಟ್ರೀಜ್ನಲ್ಲಿ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಅರಳೆ, ಹತ್ತಿ ಮತ್ತು ಹತ್ತಿಕಾಳುಗಳು ಭಸ್ಮವಾಗಿ ಅಂದಾಜು ರೂ. 6 ಲಕ್ಷ ಹಾನಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> </p>.<p dir="ltr">ಘಟನೆಯಲ್ಲಿ ಮೆ. ರಾಜಕುಮಾರ ಮಾಲಗಾಂವ ಪಾಲುದಾರಿಕೆ ಸಂಸ್ಥೆಯೊಂದರ ಒಡೆತನದ ಸಂಸ್ಥೆಯ ವಿಶ್ರಾಂತಿ ಗೃಹದಲ್ಲಿ ಬಳಸಲ್ಪಡುವ ಗಾದಿಗಳು ಹಾಗೂ ಹತ್ತಿಕಾಳು ಬೆಂಕಿಗಾಹುತಿಯಾಗಿವೆ.</p>.<p dir="ltr"><span lang="EN"> </span><span lang="KN">ಬೆಂಕಿ ಹತ್ತಿದ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದವು ಎಂದು ಸಂಸ್ಥೆಯ ಪಾಲುದಾರರು ಘಟನೆಯ ವಿವರ ನೀಡಿದರು. ರಾತ್ರಿ ಸಮಯದಲ್ಲಿ ಈ ಅವಘಡ ಸಂಭವಿಸಿದ್ದರಿಂದ ಬೆಳಕಿನ ಕೊರತೆಯಿಂದಾಗಿ ಅಪಾರ ಪ್ರಮಾಣದ ಹತ್ತಿಕಾಳು ಸುಟ್ಟು ಹೋಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p dir="ltr"><strong>ಗೋಕಾಕ: </strong>ನಗರದ ಎಪಿಎಮ್ಸಿ ಮಾರ್ಗ ಸಮೀಪದ ವೃತ್ತದಲ್ಲಿರುವ ಖಾಸಗಿ ಒಡೆತನಕ್ಕೆ ಸೇರಿದ ಸೀಮಾ ಎಂಟರ್ಪ್ರೈಜಸ್ ಕಾಟನ್ ಮತ್ತು ಜಿನ್ನಿಂಗ್ ಇಂಡಸ್ಟ್ರೀಜ್ನಲ್ಲಿ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಅರಳೆ, ಹತ್ತಿ ಮತ್ತು ಹತ್ತಿಕಾಳುಗಳು ಭಸ್ಮವಾಗಿ ಅಂದಾಜು ರೂ. 6 ಲಕ್ಷ ಹಾನಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> </p>.<p dir="ltr">ಘಟನೆಯಲ್ಲಿ ಮೆ. ರಾಜಕುಮಾರ ಮಾಲಗಾಂವ ಪಾಲುದಾರಿಕೆ ಸಂಸ್ಥೆಯೊಂದರ ಒಡೆತನದ ಸಂಸ್ಥೆಯ ವಿಶ್ರಾಂತಿ ಗೃಹದಲ್ಲಿ ಬಳಸಲ್ಪಡುವ ಗಾದಿಗಳು ಹಾಗೂ ಹತ್ತಿಕಾಳು ಬೆಂಕಿಗಾಹುತಿಯಾಗಿವೆ.</p>.<p dir="ltr"><span lang="EN"> </span><span lang="KN">ಬೆಂಕಿ ಹತ್ತಿದ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದವು ಎಂದು ಸಂಸ್ಥೆಯ ಪಾಲುದಾರರು ಘಟನೆಯ ವಿವರ ನೀಡಿದರು. ರಾತ್ರಿ ಸಮಯದಲ್ಲಿ ಈ ಅವಘಡ ಸಂಭವಿಸಿದ್ದರಿಂದ ಬೆಳಕಿನ ಕೊರತೆಯಿಂದಾಗಿ ಅಪಾರ ಪ್ರಮಾಣದ ಹತ್ತಿಕಾಳು ಸುಟ್ಟು ಹೋಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>