<p><strong>ಬೆಂಗಳೂರು: </strong>ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ನೈರುತ್ಯ ರೈಲ್ವೆಯ ವತಿಯಿಂದ ಬೆಂಗಳೂರಿನಿಂದ ಪಟ್ನಾಕ್ಕೆ ವಿಶೇಷ ರೈಲುಗಳನ್ನು ಓಡಿಸಲಾಗುವುದು.ಬೆಂಗಳೂರು ನಗರ-ಪಟ್ನಾ ನಡುವಿನ ವಾರದ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06513 ) ಮಂಗಳವಾರ ಬೆಳಿಗ್ಗೆ 8.10 ಕ್ಕೆ ಹೊರಟು ಗುರುವಾರ ಬೆಳಿಗ್ಗೆ 9.50 ಕ್ಕೆ ತಲುಪಲಿದೆ. <br /> <br /> ಪಟ್ನಾ- ಬೆಂಗಳೂರು ನಗರ ನಡುವಿನ ವಾರದ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06514) ವಿಶೇಷವಾಗಿ ಪಟ್ನಾದಿಂದ ಗುರುವಾರ ಬೆಳಿಗ್ಗೆ 8.10 ಕ್ಕೆ ಹೊರಟು ಬೆಂಗಳೂರು ನಗರವನ್ನು ಶನಿವಾರ 9 ಕ್ಕೆ ತಲುಪಲಿದೆ.<br /> ಈ ವಿಶೇಷ ರೈಲಿನ ವ್ಯವಸ್ಥೆಯು ಪಟ್ನಾದಿಂದ ಬೆಂಗಳೂರಿಗೆ ಜೂನ್ 12 ರಿಂದ ಜೂನ್ 26 ರವರೆಗೆ ಇರುತ್ತದೆ. ಬೆಂಗಳೂರಿನಿಂದ ಪಟ್ನಾದವರೆಗೆ ಈ ವ್ಯವಸ್ಥೆಯು ಜೂನ್ 14 ರಿಂದ ಜೂನ್ 28 ರವರೆಗೆ ಇರುತ್ತದೆ.<br /> <br /> ಈ ರೈಲು ಬೆಂಗಳೂರು ದಂಡುಪ್ರದೇಶ, ಜೋಲಾರಪೇಟೆ, ಕಾಟ್ಪಾಡಿ, ಅರಕೋಣಂ, ಚೆನ್ನೈ ಕೇಂದ್ರ, ಗುಡೂರು, ವಿಜಯವಾಡ, ನಾಗ್ಪುರ, ಮಾಣಿಕ್ಪುರ, ಮುಘಲ್ ಸರಾಯಿ, ಬಕ್ಸೂರು, ಏರಾ ಮತ್ತು ದಾನಪುರ ಮಾರ್ಗವಾಗಿ ಪಟ್ನಾ ತಲುಪಲಿದೆ.<br /> <br /> <strong>ನಿಲುಗಡೆ ರದ್ದು: </strong>ಮೈಸೂರು- ಚೆನ್ನೈ- ಮೈಸೂರು ನಡುವಿನ ಕಾವೇರಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ- 16221/16222) ರೈಲಿನ ನಿಲುಗಡೆಯನ್ನು ಜುಲೈ ಒಂದರಿಂದ ಅನ್ವಯವಾಗುವಂತೆ ಶ್ರೀರಂಗಪಟ್ಟಣದಲ್ಲಿ ನಿಲ್ಲುವುದನ್ನು ರದ್ದುಪಡಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ನೈರುತ್ಯ ರೈಲ್ವೆಯ ವತಿಯಿಂದ ಬೆಂಗಳೂರಿನಿಂದ ಪಟ್ನಾಕ್ಕೆ ವಿಶೇಷ ರೈಲುಗಳನ್ನು ಓಡಿಸಲಾಗುವುದು.ಬೆಂಗಳೂರು ನಗರ-ಪಟ್ನಾ ನಡುವಿನ ವಾರದ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06513 ) ಮಂಗಳವಾರ ಬೆಳಿಗ್ಗೆ 8.10 ಕ್ಕೆ ಹೊರಟು ಗುರುವಾರ ಬೆಳಿಗ್ಗೆ 9.50 ಕ್ಕೆ ತಲುಪಲಿದೆ. <br /> <br /> ಪಟ್ನಾ- ಬೆಂಗಳೂರು ನಗರ ನಡುವಿನ ವಾರದ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06514) ವಿಶೇಷವಾಗಿ ಪಟ್ನಾದಿಂದ ಗುರುವಾರ ಬೆಳಿಗ್ಗೆ 8.10 ಕ್ಕೆ ಹೊರಟು ಬೆಂಗಳೂರು ನಗರವನ್ನು ಶನಿವಾರ 9 ಕ್ಕೆ ತಲುಪಲಿದೆ.<br /> ಈ ವಿಶೇಷ ರೈಲಿನ ವ್ಯವಸ್ಥೆಯು ಪಟ್ನಾದಿಂದ ಬೆಂಗಳೂರಿಗೆ ಜೂನ್ 12 ರಿಂದ ಜೂನ್ 26 ರವರೆಗೆ ಇರುತ್ತದೆ. ಬೆಂಗಳೂರಿನಿಂದ ಪಟ್ನಾದವರೆಗೆ ಈ ವ್ಯವಸ್ಥೆಯು ಜೂನ್ 14 ರಿಂದ ಜೂನ್ 28 ರವರೆಗೆ ಇರುತ್ತದೆ.<br /> <br /> ಈ ರೈಲು ಬೆಂಗಳೂರು ದಂಡುಪ್ರದೇಶ, ಜೋಲಾರಪೇಟೆ, ಕಾಟ್ಪಾಡಿ, ಅರಕೋಣಂ, ಚೆನ್ನೈ ಕೇಂದ್ರ, ಗುಡೂರು, ವಿಜಯವಾಡ, ನಾಗ್ಪುರ, ಮಾಣಿಕ್ಪುರ, ಮುಘಲ್ ಸರಾಯಿ, ಬಕ್ಸೂರು, ಏರಾ ಮತ್ತು ದಾನಪುರ ಮಾರ್ಗವಾಗಿ ಪಟ್ನಾ ತಲುಪಲಿದೆ.<br /> <br /> <strong>ನಿಲುಗಡೆ ರದ್ದು: </strong>ಮೈಸೂರು- ಚೆನ್ನೈ- ಮೈಸೂರು ನಡುವಿನ ಕಾವೇರಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ- 16221/16222) ರೈಲಿನ ನಿಲುಗಡೆಯನ್ನು ಜುಲೈ ಒಂದರಿಂದ ಅನ್ವಯವಾಗುವಂತೆ ಶ್ರೀರಂಗಪಟ್ಟಣದಲ್ಲಿ ನಿಲ್ಲುವುದನ್ನು ರದ್ದುಪಡಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>