<p><strong>ನವದೆಹಲಿ (ಪಿಟಿಐ): </strong>ಅಪರಿಚಿತರಿಂದ ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಕೋರಿ ಒಂಬತ್ತು ವರ್ಷಗಳ ಹಿಂದೆ ಗುಜರಾತ್ ಪೊಲೀಸರು ನಡೆಸಿದ್ದಾರೆಂದು ಆರೋಪಿಸಲಾಗಿರುವ `ನಕಲಿ' ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಇಶ್ರತ್ ಜಹಾನ್ ಅವರ ಕುಟುಂಬವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.<br /> <br /> ಥಾಣೆ ಸಮೀಪದ ಮುಂಬ್ರಾದಲ್ಲಿ ನೆಲೆಸಿರುವ ಇಶ್ರತ್ ಅವರ ತಾಯಿ ಶಮಿಮಾ ಕೌಸೆರ್ ಅವರು ತಮ್ಮ ವಕೀಲರ ಮೂಲಕ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.<br /> <br /> `ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೆ ಮತ್ತು ಮಕ್ಕಳಿಗೆ ಮುಕ್ತವಾಗಿ ಓಡಾಡಲು ಭಯವಾಗುತ್ತದೆ. ನಮಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಸಂಬಂಧಿ ರಾವುಫ್ ಲಾಲ್ ಮತ್ತು ಮೊಹಿನುದ್ದೀನ್ ಇಸ್ಮಾಯಿಲ್ ಸೈಯದ್ ಅವರಿಗೂ ಜೀವ ಬೆದರಿಕೆ ಇದೆ' ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.<br /> <br /> ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಶ್ರತ್ ಅವರ ಸೋದರಿ ಮುಶ್ರತ್, `ನಮ್ಮ ಕುಟುಂಬಕ್ಕೆ ಮತ್ತು ನಮಗೆ ಬೆಂಬಲ ನೀಡುತ್ತಿರುವವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ನಮ್ಮನ್ನು ಹೆದರಿಸಲಾಗುತ್ತಿದೆ' ಎಂದು ದೂರಿದರು.<br /> <br /> `ನಮ್ಮ ಮನೆಯ ಸುತ್ತ ಪೊಲೀಸರ ಪಹರೆ ಹಾಕಲಾಗಿದ್ದರೂ ಬುಧವಾರ ರಾತ್ರಿ 2.30ರ ಹೊತ್ತಿಗೆ ಪೊಲೀಸರೆಂದು ಹೇಳಿಕೊಂಡ ಗುಂಪೊಂದು ಮನೆ ಬಾಗಿಲನ್ನು ಬಡಿದು, ನಮ್ಮ ಸುರಕ್ಷತೆ ಬಗ್ಗೆ ವಿಚಾರಿಸಿತು. ಪಿಸುಮಾತನಲ್ಲಿ ತಮ್ಮಲ್ಲೇ ಮಾತನಾಡಿಕೊಂಡ ಆ ಗುಂಪು, ನಂತರ ಹೊರಟುಹೋಯಿತು. ಗುಂಪಿನ ನಡವಳಿಕೆ ನೋಡಿದರೆ ನಮಗೆ ತೊಂದರೆ ನೀಡುವ ಉದ್ದೇಶ ಹೊಂದಿತ್ತೆಂದೇ ಕಾಣುತ್ತದೆ' ಎಂದರು.<br /> <br /> `ಈ ಘಟನೆಯ ಬಗ್ಗೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದರೆ, ಅವರು ಉದಾಸೀನದಿಂದ ಉತ್ತರಿಸಿದರು' ಎಂದು ಮುಶ್ರತ್ ಆಕ್ಷೇಪಿಸಿದರು.<br /> <br /> ಇಶ್ರತ್ ಅವರ ಸಂಬಂಧಿ ರಾವುಫ್ ಲಾಲ್ ಕೂಡ ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ ಪ್ರಸಂಗವನ್ನು ವಿವರಿಸಿದರು. `ಜೂನ್ 18- 19ರ ಮಧ್ಯರಾತ್ರಿ ನಾವು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ವಾಪಸು ಬರುತ್ತಿದ್ದಾಗ ಇಬ್ಬರು ಸಶಸ್ತ್ರ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಕಾರಿನ ಹಿಂಬದಿಯ ಗಾಜನ್ನು ಒಡೆದುಹಾಕಿದರು'.<br /> <br /> `ಅವರನ್ನು ಅಲ್ಲಿದ್ದ ಜನರು ಹಿಡಿದರು. ನಂತರ ಅವರನ್ನು ಮುಂಬ್ರಾ ಠಾಣೆಗೆ ಕರೆದೊಯ್ಯಲಾಯಿತು. ಅವರ ಬಳಿ ನಾಡ ಬಂದೂಕು ಇದ್ದರೂ, ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ಸ್ಪಷ್ಟವಾಗಿದ್ದರೂ ಪೊಲೀಸರು ಅದನ್ನು ಮರೆಮಾಚಿ ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡು ಆ ವ್ಯಕ್ತಿಗಳನ್ನು ಬಿಟ್ಟುಬಿಟ್ಟರು. ನಂತರ ನಡೆದ ತನಿಖೆಯಿಂದ ಅಂದು ಕಾರಿನ ಮೇಲೆ ದಾಳಿ ಮಾಡಿದವರಲ್ಲಿ ಒಬ್ಬನ ಹೆಸರು ಫಿರೋಜ್ ಕಾಲಿಯಾ ಎಂದೂ ಆತ, ಸುಫಾರಿ ಹಂತಕನೆಂದು ತಿಳಿದುಬಂತು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಅಪರಿಚಿತರಿಂದ ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಕೋರಿ ಒಂಬತ್ತು ವರ್ಷಗಳ ಹಿಂದೆ ಗುಜರಾತ್ ಪೊಲೀಸರು ನಡೆಸಿದ್ದಾರೆಂದು ಆರೋಪಿಸಲಾಗಿರುವ `ನಕಲಿ' ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಇಶ್ರತ್ ಜಹಾನ್ ಅವರ ಕುಟುಂಬವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.<br /> <br /> ಥಾಣೆ ಸಮೀಪದ ಮುಂಬ್ರಾದಲ್ಲಿ ನೆಲೆಸಿರುವ ಇಶ್ರತ್ ಅವರ ತಾಯಿ ಶಮಿಮಾ ಕೌಸೆರ್ ಅವರು ತಮ್ಮ ವಕೀಲರ ಮೂಲಕ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.<br /> <br /> `ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೆ ಮತ್ತು ಮಕ್ಕಳಿಗೆ ಮುಕ್ತವಾಗಿ ಓಡಾಡಲು ಭಯವಾಗುತ್ತದೆ. ನಮಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಸಂಬಂಧಿ ರಾವುಫ್ ಲಾಲ್ ಮತ್ತು ಮೊಹಿನುದ್ದೀನ್ ಇಸ್ಮಾಯಿಲ್ ಸೈಯದ್ ಅವರಿಗೂ ಜೀವ ಬೆದರಿಕೆ ಇದೆ' ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.<br /> <br /> ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಶ್ರತ್ ಅವರ ಸೋದರಿ ಮುಶ್ರತ್, `ನಮ್ಮ ಕುಟುಂಬಕ್ಕೆ ಮತ್ತು ನಮಗೆ ಬೆಂಬಲ ನೀಡುತ್ತಿರುವವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ನಮ್ಮನ್ನು ಹೆದರಿಸಲಾಗುತ್ತಿದೆ' ಎಂದು ದೂರಿದರು.<br /> <br /> `ನಮ್ಮ ಮನೆಯ ಸುತ್ತ ಪೊಲೀಸರ ಪಹರೆ ಹಾಕಲಾಗಿದ್ದರೂ ಬುಧವಾರ ರಾತ್ರಿ 2.30ರ ಹೊತ್ತಿಗೆ ಪೊಲೀಸರೆಂದು ಹೇಳಿಕೊಂಡ ಗುಂಪೊಂದು ಮನೆ ಬಾಗಿಲನ್ನು ಬಡಿದು, ನಮ್ಮ ಸುರಕ್ಷತೆ ಬಗ್ಗೆ ವಿಚಾರಿಸಿತು. ಪಿಸುಮಾತನಲ್ಲಿ ತಮ್ಮಲ್ಲೇ ಮಾತನಾಡಿಕೊಂಡ ಆ ಗುಂಪು, ನಂತರ ಹೊರಟುಹೋಯಿತು. ಗುಂಪಿನ ನಡವಳಿಕೆ ನೋಡಿದರೆ ನಮಗೆ ತೊಂದರೆ ನೀಡುವ ಉದ್ದೇಶ ಹೊಂದಿತ್ತೆಂದೇ ಕಾಣುತ್ತದೆ' ಎಂದರು.<br /> <br /> `ಈ ಘಟನೆಯ ಬಗ್ಗೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದರೆ, ಅವರು ಉದಾಸೀನದಿಂದ ಉತ್ತರಿಸಿದರು' ಎಂದು ಮುಶ್ರತ್ ಆಕ್ಷೇಪಿಸಿದರು.<br /> <br /> ಇಶ್ರತ್ ಅವರ ಸಂಬಂಧಿ ರಾವುಫ್ ಲಾಲ್ ಕೂಡ ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ ಪ್ರಸಂಗವನ್ನು ವಿವರಿಸಿದರು. `ಜೂನ್ 18- 19ರ ಮಧ್ಯರಾತ್ರಿ ನಾವು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ವಾಪಸು ಬರುತ್ತಿದ್ದಾಗ ಇಬ್ಬರು ಸಶಸ್ತ್ರ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಕಾರಿನ ಹಿಂಬದಿಯ ಗಾಜನ್ನು ಒಡೆದುಹಾಕಿದರು'.<br /> <br /> `ಅವರನ್ನು ಅಲ್ಲಿದ್ದ ಜನರು ಹಿಡಿದರು. ನಂತರ ಅವರನ್ನು ಮುಂಬ್ರಾ ಠಾಣೆಗೆ ಕರೆದೊಯ್ಯಲಾಯಿತು. ಅವರ ಬಳಿ ನಾಡ ಬಂದೂಕು ಇದ್ದರೂ, ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ಸ್ಪಷ್ಟವಾಗಿದ್ದರೂ ಪೊಲೀಸರು ಅದನ್ನು ಮರೆಮಾಚಿ ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡು ಆ ವ್ಯಕ್ತಿಗಳನ್ನು ಬಿಟ್ಟುಬಿಟ್ಟರು. ನಂತರ ನಡೆದ ತನಿಖೆಯಿಂದ ಅಂದು ಕಾರಿನ ಮೇಲೆ ದಾಳಿ ಮಾಡಿದವರಲ್ಲಿ ಒಬ್ಬನ ಹೆಸರು ಫಿರೋಜ್ ಕಾಲಿಯಾ ಎಂದೂ ಆತ, ಸುಫಾರಿ ಹಂತಕನೆಂದು ತಿಳಿದುಬಂತು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>