<p><strong>ಹುನಗುಂದ: </strong>ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮವಾಗಿ ಬರಗಾಲ ತಾಂಡವ ವಾಡುತ್ತಿದೆ. ಯಾವುದೇ ಬಿತ್ತನೆಯಾಗಿಲ್ಲ. ಸರ್ಕಾರ ಈಗಾಗಲೇ ಬರಗಾಲ ಎಂದು ಘೋಷಣೆಯನ್ನು ಮಾಡಿದೆ. ಕೃಷಿ ಸಾಲ ಮನ್ನಾ ಮಾಡಿದೆ. ತಾಲ್ಲೂಕಿನ ಬರಗಾಲ ನಿರ್ವಹಣೆಗೆ ಅನುದಾನ ನೀಡಿದೆ ಎನ್ನಲಾಗಿದೆ. ಆದರೆ ಈ ಯಾವುದನ್ನೂ ನೋಡದೇ ಬೇವಿನಮಟ್ಟಿ ಮತ್ತು ಸುತ್ತಲಿನ ರೈತರು ತಾವೇ ಮುಂದಾಗಿ ಕೆರೆಯ ಹೂಳನ್ನು ತೆಗೆಯುತ್ತಿರುವುದು ಗಮನ ಸೆಳೆದಿದೆ.<br /> <br /> ಸುಮಾರು ಅರ್ಧ ಶತಮಾನದ ಹಿನ್ನೆಲೆಯುಳ್ಳ ಈ ಕೆರೆ 28 ಎಕರೆ ಪ್ರದೇಶವನ್ನು ಹೊಂದಿದೆ. ತನ್ನ ಸುತ್ತಲಿನ ಬೇವಿನಮಟ್ಟಿ, ಹೊನ್ನರಹಳ್ಳಿ, ಯರನಕೇರಿ ಮತ್ತು ಹಿರೆಯರನಕೇರಿ ಗ್ರಾಮಗಳ ಜನರು ಮತ್ತು ದನಕರುಗಳಿಗೆ ಸಂಜೀವಿನಿ ಯಾಗಿದೆ. <br /> <br /> ನಾಲ್ಕು ವರ್ಷಗಳಿಂದ ಈ ಕೆರೆ ಬತ್ತಿತ್ತು. ಸಾಕಷ್ಟು ಹೂಳು ತುಂಬಿತ್ತು. ಸರ್ಕಾರದ ಅನುದಾನಕ್ಕಾಗಿ ಕಾಯ್ದರು. ಪ್ರಯೋಜ ನಾವಾಗಲಿಲ್ಲ. ಕೊನೆಗೆ ತಾವೇ ಮುಂದಾಗಿ ಕಳೆದ ಮೂರು ತಿಂಗಳಿಂದ ಸುಮಾರು 10 ಅಡಿ ಹೂಳು ತೆಗೆದಿದ್ದಾರೆ. <br /> <br /> ರೈತರು ತಮ್ಮ ಟ್ರ್ಯಾಕ್ಟರ್ ತಂದು ಕೆರೆಯಲ್ಲಿನ ಫಲವತ್ತಾದ ಹೂಳು ಮಣ್ಣನ್ನು ತಮ್ಮ ಹೊಲಗಳಿಗೆ ಹಾಕಿಕೊಂಡಿದ್ದಾರೆ. ಇದರಿಂದ ಅತ್ತ ಕೆರೆ ಖಾಲಿ ಇತ್ತ ಹೊಲಕ್ಕೆ ಫಲವತ್ತಾದ ಮಣ್ಣು ಬಿದ್ದಂತಾಗಿದೆ.<br /> <br /> ಶುಕ್ರವಾರ ಕೆರೆಗೆ ಭೇಟಿ ನೀಡಿದ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ರೈತರ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿ, 2005ರಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ರೂ. 15 ಲಕ್ಷ ನೆರವು ಕೊಟ್ಟಿದ್ದೆ. ಆಗೊಮ್ಮೆ ಒಂದಿಷ್ಟು ಹೂಳು ತೆಗೆದಿದ್ದರು. ಮತ್ತೆ ಆ ಕಾರ್ಯ ನಡೆದಿರಲಿಲ್ಲ. ರೈತರು ಸಂಘಟಿತರಾಗಿ ಮುಂದಾದರೆ ಏನೆಲ್ಲ ಮಾಡಬಹುದು ಎನ್ನಲು ಈ ಕಾರ್ಯ ಸಾಕ್ಷಿ ಎಂದರು.<br /> <br /> `ನಮ್ಮ ಜನಕ್ಕೆ ದೇವಸ್ಥಾನ ಮತ್ತು ಇತರ ಧಾರ್ಮಿಕ ಕಟ್ಟಡ ಕಟ್ಟುವಲ್ಲಿರುವ ಶ್ರದ್ಧೆ ತಮ್ಮ ಹೊಲ ಮತ್ತು ಮನೆಗಳ ನಿರ್ಮಾಣದಲ್ಲಿ ತೋರದಿರುವುದು ವಿಷಾದಪಡುವ ಸಂಗತಿ ಎಂದು ಹೇಳಿದರು.<br /> <br /> ಹಳ್ಳಿಗಾಡಿನ ಜನರು ಸಾಂಪ್ರದಾಯಿಕ ಕೃಷಿ ಯೊಂದಿಗೆ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಂಡು ಉನ್ನತಿಯನ್ನು ಸಾಧಿಸಬೇಕು. ತಮ್ಮ ಮಕ್ಕಳು ಕೆಲವರಾದರೂ ಕೃಷಿಯತ್ತ ವಾಲುವಂತೆ ಮಾಡಿದರೆ ಭವಿಷ್ಯದಲ್ಲಿ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು ಎಂದರು.</p>.<p><br /> ಗ್ರಾಮದ ಹಿರಿಯರಾದ ನಿಂಗನಗೌಡ ಗೌಡಪ್ಪನವರ ಮತ್ತು ಯಲ್ಲನಗೌಡ ನಡುವಿನಮನಿ ಪ್ರತಿಕ್ರಿಯಿಸಿ, `ಈ ಭಾಗದ ದೊಡ್ಡ ಕೆರೆಯಾದ ಇದನ್ನು ನಾವೆಲ್ಲ ಒಗ್ಗೂಡಿ ಹೂಳು ತೆಗೆದಿದ್ದೇವೆ. ಇದರಿಂದ ಅಂತರ್ಜಲ ವೃದ್ಧಿಗೂ ಸಹಾಯವಾಗುತ್ತದೆ. ಬರುವ ದಿನಗಳಲ್ಲೂ ಸಂಪೂರ್ಣ ಹೂಳು ತೆಗೆದು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುನಗುಂದ: </strong>ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮವಾಗಿ ಬರಗಾಲ ತಾಂಡವ ವಾಡುತ್ತಿದೆ. ಯಾವುದೇ ಬಿತ್ತನೆಯಾಗಿಲ್ಲ. ಸರ್ಕಾರ ಈಗಾಗಲೇ ಬರಗಾಲ ಎಂದು ಘೋಷಣೆಯನ್ನು ಮಾಡಿದೆ. ಕೃಷಿ ಸಾಲ ಮನ್ನಾ ಮಾಡಿದೆ. ತಾಲ್ಲೂಕಿನ ಬರಗಾಲ ನಿರ್ವಹಣೆಗೆ ಅನುದಾನ ನೀಡಿದೆ ಎನ್ನಲಾಗಿದೆ. ಆದರೆ ಈ ಯಾವುದನ್ನೂ ನೋಡದೇ ಬೇವಿನಮಟ್ಟಿ ಮತ್ತು ಸುತ್ತಲಿನ ರೈತರು ತಾವೇ ಮುಂದಾಗಿ ಕೆರೆಯ ಹೂಳನ್ನು ತೆಗೆಯುತ್ತಿರುವುದು ಗಮನ ಸೆಳೆದಿದೆ.<br /> <br /> ಸುಮಾರು ಅರ್ಧ ಶತಮಾನದ ಹಿನ್ನೆಲೆಯುಳ್ಳ ಈ ಕೆರೆ 28 ಎಕರೆ ಪ್ರದೇಶವನ್ನು ಹೊಂದಿದೆ. ತನ್ನ ಸುತ್ತಲಿನ ಬೇವಿನಮಟ್ಟಿ, ಹೊನ್ನರಹಳ್ಳಿ, ಯರನಕೇರಿ ಮತ್ತು ಹಿರೆಯರನಕೇರಿ ಗ್ರಾಮಗಳ ಜನರು ಮತ್ತು ದನಕರುಗಳಿಗೆ ಸಂಜೀವಿನಿ ಯಾಗಿದೆ. <br /> <br /> ನಾಲ್ಕು ವರ್ಷಗಳಿಂದ ಈ ಕೆರೆ ಬತ್ತಿತ್ತು. ಸಾಕಷ್ಟು ಹೂಳು ತುಂಬಿತ್ತು. ಸರ್ಕಾರದ ಅನುದಾನಕ್ಕಾಗಿ ಕಾಯ್ದರು. ಪ್ರಯೋಜ ನಾವಾಗಲಿಲ್ಲ. ಕೊನೆಗೆ ತಾವೇ ಮುಂದಾಗಿ ಕಳೆದ ಮೂರು ತಿಂಗಳಿಂದ ಸುಮಾರು 10 ಅಡಿ ಹೂಳು ತೆಗೆದಿದ್ದಾರೆ. <br /> <br /> ರೈತರು ತಮ್ಮ ಟ್ರ್ಯಾಕ್ಟರ್ ತಂದು ಕೆರೆಯಲ್ಲಿನ ಫಲವತ್ತಾದ ಹೂಳು ಮಣ್ಣನ್ನು ತಮ್ಮ ಹೊಲಗಳಿಗೆ ಹಾಕಿಕೊಂಡಿದ್ದಾರೆ. ಇದರಿಂದ ಅತ್ತ ಕೆರೆ ಖಾಲಿ ಇತ್ತ ಹೊಲಕ್ಕೆ ಫಲವತ್ತಾದ ಮಣ್ಣು ಬಿದ್ದಂತಾಗಿದೆ.<br /> <br /> ಶುಕ್ರವಾರ ಕೆರೆಗೆ ಭೇಟಿ ನೀಡಿದ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ರೈತರ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿ, 2005ರಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ರೂ. 15 ಲಕ್ಷ ನೆರವು ಕೊಟ್ಟಿದ್ದೆ. ಆಗೊಮ್ಮೆ ಒಂದಿಷ್ಟು ಹೂಳು ತೆಗೆದಿದ್ದರು. ಮತ್ತೆ ಆ ಕಾರ್ಯ ನಡೆದಿರಲಿಲ್ಲ. ರೈತರು ಸಂಘಟಿತರಾಗಿ ಮುಂದಾದರೆ ಏನೆಲ್ಲ ಮಾಡಬಹುದು ಎನ್ನಲು ಈ ಕಾರ್ಯ ಸಾಕ್ಷಿ ಎಂದರು.<br /> <br /> `ನಮ್ಮ ಜನಕ್ಕೆ ದೇವಸ್ಥಾನ ಮತ್ತು ಇತರ ಧಾರ್ಮಿಕ ಕಟ್ಟಡ ಕಟ್ಟುವಲ್ಲಿರುವ ಶ್ರದ್ಧೆ ತಮ್ಮ ಹೊಲ ಮತ್ತು ಮನೆಗಳ ನಿರ್ಮಾಣದಲ್ಲಿ ತೋರದಿರುವುದು ವಿಷಾದಪಡುವ ಸಂಗತಿ ಎಂದು ಹೇಳಿದರು.<br /> <br /> ಹಳ್ಳಿಗಾಡಿನ ಜನರು ಸಾಂಪ್ರದಾಯಿಕ ಕೃಷಿ ಯೊಂದಿಗೆ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಂಡು ಉನ್ನತಿಯನ್ನು ಸಾಧಿಸಬೇಕು. ತಮ್ಮ ಮಕ್ಕಳು ಕೆಲವರಾದರೂ ಕೃಷಿಯತ್ತ ವಾಲುವಂತೆ ಮಾಡಿದರೆ ಭವಿಷ್ಯದಲ್ಲಿ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು ಎಂದರು.</p>.<p><br /> ಗ್ರಾಮದ ಹಿರಿಯರಾದ ನಿಂಗನಗೌಡ ಗೌಡಪ್ಪನವರ ಮತ್ತು ಯಲ್ಲನಗೌಡ ನಡುವಿನಮನಿ ಪ್ರತಿಕ್ರಿಯಿಸಿ, `ಈ ಭಾಗದ ದೊಡ್ಡ ಕೆರೆಯಾದ ಇದನ್ನು ನಾವೆಲ್ಲ ಒಗ್ಗೂಡಿ ಹೂಳು ತೆಗೆದಿದ್ದೇವೆ. ಇದರಿಂದ ಅಂತರ್ಜಲ ವೃದ್ಧಿಗೂ ಸಹಾಯವಾಗುತ್ತದೆ. ಬರುವ ದಿನಗಳಲ್ಲೂ ಸಂಪೂರ್ಣ ಹೂಳು ತೆಗೆದು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>