<p><strong>ಭಟ್ಕಳ: </strong>ಕರ್ನಾಟಕ ಗೃಹಮಂಡಳಿಯು ಭಟ್ಕಳ ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ 57ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಬುಧವಾರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ನೂರಾರು ಕೃಷಿಕರು ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.<br /> <br /> `ತಾಲ್ಲೂಕಿನ ಗಡಿ ಗ್ರಾಮವಾದ ಬೈಲೂರು ಬಸ್ತಿಮಕ್ಕಿ ಮಜೀರೆಯಲ್ಲಿ ಒಟ್ಟು 83 ಸರ್ವೆ ನಂಬರ್ಗಳಲ್ಲಿ ಸುಮಾರು 330 ಕುಟುಂಬಗಳು ಕೃಷಿಯಾಧಾರಿತ ಬದುಕು ಸಾಗಿಸುತ್ತಿದೆ. ಈ ಗ್ರಾಮವು ಸಮುದ್ರದ ಅಂಚಿನಲ್ಲಿರುವುದರಿಂದ ಸಿ.ಆರ್.ಝೆಡ್ ವ್ಯಾಪ್ತಿಗೆ ಒಳಪಟ್ಟಿದ್ದು ಮನೆ ನಿರ್ಮಿಸಲು ಸಹ ತೊಂದರೆಯಿದೆ.<br /> <br /> ಗೃಹಮಂಡಳಿ ಈ ಗ್ರಾಮದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಜಮೀನುಗಳ ಪೂರ್ವದಿಕ್ಕಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಕೊಂಕಣ ರೈಲ್ವೆ ಹಾದುಹೋಗಿದೆ. ಈಗಾಗಲೇ ಗ್ರಾಮಸ್ಥರು ಸಾಕಷ್ಟು ಜಮೀನನ್ನು ಈ ಎರಡೂ ಯೋಜನೆಗೆ ನೀಡಿದ್ದಾರೆ. ಈಗ ಉಳಿದಿರುವ ಜಮೀನನ್ನೂ ವಶಪಡಿಸಿಕೊಂಡರೆ ಎಲ್ಲರೂ ನಿರ್ಗತಿಕರಾಗಬೇಕಾಗುತ್ತದೆ.<br /> <br /> ಅಲ್ಲದೇ ಈ ಜಮೀನಿನ ನಡುವೆಯೇ ಎರಡು ಪ್ರಾಚೀನ ಜೈನ ಬಸದಿಗಳು, ಒಂದು ಅಂಗನವಾಡಿ ಕೇಂದ್ರವಿದೆ. ಈ ಜಮೀನು ತೂದಳ್ಳಿ ಮಹಾಸತಿ ದೇವಸ್ಥಾನದ ವ್ಯಾಪ್ತಿಯ ಒಂದು ಭಾಗವೂ ಆಗಿದೆ. ಸುಮಾರು 45 ವಾಸ್ತವ್ಯದ ಮನೆ ಇದೆ. ಬಡ ಕೃಷಿಕರೇ ಇರುವ ಈ ಗ್ರಾಮದಲ್ಲಿನ ಭೂಮಿಯನ್ನು ವಶಪಡಿಸಿಕೊಂಡು ಶ್ರೀಮಂತರಿಗೆ ಗೃಹ ನಿರ್ಮಿಸಿಕೊಡುವುದರಿಂದ ಸಂವಿಧಾನ ಬದ್ಧವಾದ ವಾಸ್ತವ್ಯದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ~ ಎಂದು ಮನವಿಯಲ್ಲಿ ತಿಳಿಸಲಾಗಿದೆ.<br /> <br /> `ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಎರಡು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದ್ದರೂ,ಈಗ ಜಂಟಿಸರ್ವೆ ಕಾರ್ಯ ನಡೆಸಲಾಗುತ್ತಿದೆ. ಒಂದು ವೇಳೆ ಪ್ರಕ್ರಿಯೆಯನ್ನು ಕೈಬಿಡದಿದ್ದಲ್ಲಿ ಗ್ರಾಮದಲ್ಲಿರುವ 330 ಕುಟುಂಬಗಳ ಎಲ್ಲಾ ಸದಸ್ಯರೂ ಭೂಮಿಗಾಗಿ ಯಾವುದೇ ರೀತಿಯ ಉಗ್ರ ಹೋರಾಟಕೂ ಸಿದ್ಧರಿದ್ದೇವೆ~ ಎಂದು ಮನವಿಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಶಿರಸ್ತೆದಾರ್ ಗನಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಕಿಶನ್ಬಲ್ಸೆ, ಭಾ.ಕಿ. ಸಂಘದ ಅಧ್ಯಕ್ಷ ಈಶ್ವರ ದೊಡ್ಮನೆ ಮುಂತಾದವರು ಉಪಸ್ಥಿತರಿದ್ದರು.<br /> <br /> <strong>ಬಾಡಿಗೆ ಬಾಕಿ: ಅಂಗಡಿಗೆ ಬೀಗ</strong><br /> <strong>ಶಿರಸಿ: </strong>ಸಕಾಲದಲ್ಲಿ ಬಾಡಿಗೆ ಪಾವತಿಸಲು ಮಾಲೀಕರು ನಿರಾಕರಿಸಿದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಬೀಗ ಜಡಿದ ಘಟನೆ ಬುಧವಾರ ಹಳೆ ನಗರಸಭೆ ಕಟ್ಟಡದಲ್ಲಿ ನಡೆಸಿದೆ.ಒಂದು ವರ್ಷದಿಂದ ನಗರಸಭೆ ಕಟ್ಟಡದಲ್ಲಿ ಬಾಡಿಗೆ ಇದ್ದ ಕೆಲ ಅಂಗಡಿಕಾರರು ಬಾಡಿಗೆ ನೀಡಿರಲಿಲ್ಲ.<br /> <br /> ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಕೆ.ಬಿ.ವೀರಾಪುರ ಮತ್ತು ಸಿಬ್ಬಂದಿ ನಗರಸಭೆ ಅಧೀನದ ವಾಣಿಜ್ಯ ಸಂಕೀರ್ಣಗಳಲ್ಲಿ ಬಾಡಿಗೆ ನೀಡದ ಅಂಗಡಿಗಳಿಗೆ ಭೇಟಿ ನೀಡಿ ಬಾಡಿಗೆ ಮೊತ್ತ ಪಾವತಿಸಲು ಮಾಲೀಕರನ್ನು ಒತ್ತಾಯಿಸಿದರು. ಸಂದರ್ಭದಲ್ಲಿ ಬಾಡಿಗೆ ನೀಡಲು ನಿರಾಕರಿಸಿದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಬೀಗ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ: </strong>ಕರ್ನಾಟಕ ಗೃಹಮಂಡಳಿಯು ಭಟ್ಕಳ ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ 57ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಬುಧವಾರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ನೂರಾರು ಕೃಷಿಕರು ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.<br /> <br /> `ತಾಲ್ಲೂಕಿನ ಗಡಿ ಗ್ರಾಮವಾದ ಬೈಲೂರು ಬಸ್ತಿಮಕ್ಕಿ ಮಜೀರೆಯಲ್ಲಿ ಒಟ್ಟು 83 ಸರ್ವೆ ನಂಬರ್ಗಳಲ್ಲಿ ಸುಮಾರು 330 ಕುಟುಂಬಗಳು ಕೃಷಿಯಾಧಾರಿತ ಬದುಕು ಸಾಗಿಸುತ್ತಿದೆ. ಈ ಗ್ರಾಮವು ಸಮುದ್ರದ ಅಂಚಿನಲ್ಲಿರುವುದರಿಂದ ಸಿ.ಆರ್.ಝೆಡ್ ವ್ಯಾಪ್ತಿಗೆ ಒಳಪಟ್ಟಿದ್ದು ಮನೆ ನಿರ್ಮಿಸಲು ಸಹ ತೊಂದರೆಯಿದೆ.<br /> <br /> ಗೃಹಮಂಡಳಿ ಈ ಗ್ರಾಮದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಜಮೀನುಗಳ ಪೂರ್ವದಿಕ್ಕಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಕೊಂಕಣ ರೈಲ್ವೆ ಹಾದುಹೋಗಿದೆ. ಈಗಾಗಲೇ ಗ್ರಾಮಸ್ಥರು ಸಾಕಷ್ಟು ಜಮೀನನ್ನು ಈ ಎರಡೂ ಯೋಜನೆಗೆ ನೀಡಿದ್ದಾರೆ. ಈಗ ಉಳಿದಿರುವ ಜಮೀನನ್ನೂ ವಶಪಡಿಸಿಕೊಂಡರೆ ಎಲ್ಲರೂ ನಿರ್ಗತಿಕರಾಗಬೇಕಾಗುತ್ತದೆ.<br /> <br /> ಅಲ್ಲದೇ ಈ ಜಮೀನಿನ ನಡುವೆಯೇ ಎರಡು ಪ್ರಾಚೀನ ಜೈನ ಬಸದಿಗಳು, ಒಂದು ಅಂಗನವಾಡಿ ಕೇಂದ್ರವಿದೆ. ಈ ಜಮೀನು ತೂದಳ್ಳಿ ಮಹಾಸತಿ ದೇವಸ್ಥಾನದ ವ್ಯಾಪ್ತಿಯ ಒಂದು ಭಾಗವೂ ಆಗಿದೆ. ಸುಮಾರು 45 ವಾಸ್ತವ್ಯದ ಮನೆ ಇದೆ. ಬಡ ಕೃಷಿಕರೇ ಇರುವ ಈ ಗ್ರಾಮದಲ್ಲಿನ ಭೂಮಿಯನ್ನು ವಶಪಡಿಸಿಕೊಂಡು ಶ್ರೀಮಂತರಿಗೆ ಗೃಹ ನಿರ್ಮಿಸಿಕೊಡುವುದರಿಂದ ಸಂವಿಧಾನ ಬದ್ಧವಾದ ವಾಸ್ತವ್ಯದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ~ ಎಂದು ಮನವಿಯಲ್ಲಿ ತಿಳಿಸಲಾಗಿದೆ.<br /> <br /> `ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಎರಡು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದ್ದರೂ,ಈಗ ಜಂಟಿಸರ್ವೆ ಕಾರ್ಯ ನಡೆಸಲಾಗುತ್ತಿದೆ. ಒಂದು ವೇಳೆ ಪ್ರಕ್ರಿಯೆಯನ್ನು ಕೈಬಿಡದಿದ್ದಲ್ಲಿ ಗ್ರಾಮದಲ್ಲಿರುವ 330 ಕುಟುಂಬಗಳ ಎಲ್ಲಾ ಸದಸ್ಯರೂ ಭೂಮಿಗಾಗಿ ಯಾವುದೇ ರೀತಿಯ ಉಗ್ರ ಹೋರಾಟಕೂ ಸಿದ್ಧರಿದ್ದೇವೆ~ ಎಂದು ಮನವಿಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಶಿರಸ್ತೆದಾರ್ ಗನಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಕಿಶನ್ಬಲ್ಸೆ, ಭಾ.ಕಿ. ಸಂಘದ ಅಧ್ಯಕ್ಷ ಈಶ್ವರ ದೊಡ್ಮನೆ ಮುಂತಾದವರು ಉಪಸ್ಥಿತರಿದ್ದರು.<br /> <br /> <strong>ಬಾಡಿಗೆ ಬಾಕಿ: ಅಂಗಡಿಗೆ ಬೀಗ</strong><br /> <strong>ಶಿರಸಿ: </strong>ಸಕಾಲದಲ್ಲಿ ಬಾಡಿಗೆ ಪಾವತಿಸಲು ಮಾಲೀಕರು ನಿರಾಕರಿಸಿದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಬೀಗ ಜಡಿದ ಘಟನೆ ಬುಧವಾರ ಹಳೆ ನಗರಸಭೆ ಕಟ್ಟಡದಲ್ಲಿ ನಡೆಸಿದೆ.ಒಂದು ವರ್ಷದಿಂದ ನಗರಸಭೆ ಕಟ್ಟಡದಲ್ಲಿ ಬಾಡಿಗೆ ಇದ್ದ ಕೆಲ ಅಂಗಡಿಕಾರರು ಬಾಡಿಗೆ ನೀಡಿರಲಿಲ್ಲ.<br /> <br /> ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಕೆ.ಬಿ.ವೀರಾಪುರ ಮತ್ತು ಸಿಬ್ಬಂದಿ ನಗರಸಭೆ ಅಧೀನದ ವಾಣಿಜ್ಯ ಸಂಕೀರ್ಣಗಳಲ್ಲಿ ಬಾಡಿಗೆ ನೀಡದ ಅಂಗಡಿಗಳಿಗೆ ಭೇಟಿ ನೀಡಿ ಬಾಡಿಗೆ ಮೊತ್ತ ಪಾವತಿಸಲು ಮಾಲೀಕರನ್ನು ಒತ್ತಾಯಿಸಿದರು. ಸಂದರ್ಭದಲ್ಲಿ ಬಾಡಿಗೆ ನೀಡಲು ನಿರಾಕರಿಸಿದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಬೀಗ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>