<p><strong>ಬಾಗಲಕೋಟೆ: </strong>ಜಿಲ್ಲೆಯ ಎಲ್ಲ ಬ್ಯಾಂಕುಗಳ ಖಾತೆಗಳಲ್ಲಿ ನಡೆಯುವ ಹಣದ ವ್ಯವಹಾರಗಳ ಮೇಲೆ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕಿ ಮಾಳವಿಕಾ ಮೋಹನ್ ಸೂಚಿಸಿದರು.<br /> <br /> ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಸಾರ್ವಜನಿಕರು ಹೆಚ್ಚಿನ ಪ್ರಮಾಣದ ಹಣವನ್ನು ನಗದಾಗಿ ತೆಗೆದುಕೊಂಡು ಹೋಗುವವರು ಪಾನ್ ಕಾರ್ಡ್ ಹಾಗೂ ಅದರ ಪ್ರತಿ, ವ್ಯಾಪಾರ ನೋಂದಣಿ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ಬುಕ್ ಪ್ರತಿ ಹಾಗೂ ಡ್ರಾ ಮಾಡಿರುವ ಬ್ಯಾಂಕ್ ಸ್ಟೇಟ್ಮೆಂಟ್, ನಗದು ಪಡೆಯುವವರ ವಿವರಗಳನ್ನು ಹೊಂದಿರಬೇಕು ಎಂದರು.<br /> <br /> ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಿ, ಕ್ಷೇತ್ರವಾರು ವೀಕ್ಷಣೆ ಮಾಡಿ ಪ್ರತಿದಿನದ ವೆಚ್ಚದ ವಿವರಗಳನ್ನು ನಿಖರವಾಗಿ ಸಲ್ಲಿಸಲು ತಿಳಿಸಲಾಯಿತು.<br /> <br /> ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹಾಗೂ ಚುನಾ ವಣಾ ವೆಚ್ಚದ ವಿವರಗಳನ್ನು ಅಧಿಕೃತ ವಾಗಿ ಬ್ಯಾಂಕ್ ಖಾತೆ ಮೂಲಕ ನಿರ್ವ ಹಿಸಲು ಸೂಚನೆ ನೀಡಲಾಗಿದೆ ಎಂದರು.<br /> <br /> ಸಹಾಯಕ ಚುನಾವಣಾಧಿಕಾರಿ ಪಿ.ಟಿ.ರುದ್ರಗೌಡ ಮಾತನಾಡಿ, ಸಂಶ ಯಾತ್ಮಕ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ, ಸ್ತ್ರೀಶಕ್ತಿ, ಯುವಕ ಮಂಡ ಳಿಗಳ ಖಾತೆಗಳಲ್ಲಿ ಹಣ ಸಂದಾಯದ ಮೇಲೆ ನಿಗಾವಹಿಸುವಂತೆ ಹಾಗೂ ಪ್ರತಿದಿನ 4ಕ್ಕೆ ಡಿಸಿಸಿ ಬ್ಯಾಂಕ್ ಮೂಲಕ ವರದಿ ಕಳಿಸುವಂತೆ ತಿಳಿಸಿದರು.<br /> <br /> 20 ಸಾವಿರಗಳ ಮೇಲಿನ ಎಲ್ಲ ಹಣದ ವಾಣಿಜ್ಯ ವ್ಯವಹಾರಗಳನ್ನು ಚೆಕ್ ಮೂಲಕವೇ ವ್ಯವಹರಿಸುವಂತೆ ತಿಳಿಸಿದರು. ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಎನ್.ಮುರಳಿ ಸೇರಿದಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ಜಿಲ್ಲೆಯ ಎಲ್ಲ ಬ್ಯಾಂಕುಗಳ ಖಾತೆಗಳಲ್ಲಿ ನಡೆಯುವ ಹಣದ ವ್ಯವಹಾರಗಳ ಮೇಲೆ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕಿ ಮಾಳವಿಕಾ ಮೋಹನ್ ಸೂಚಿಸಿದರು.<br /> <br /> ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಸಾರ್ವಜನಿಕರು ಹೆಚ್ಚಿನ ಪ್ರಮಾಣದ ಹಣವನ್ನು ನಗದಾಗಿ ತೆಗೆದುಕೊಂಡು ಹೋಗುವವರು ಪಾನ್ ಕಾರ್ಡ್ ಹಾಗೂ ಅದರ ಪ್ರತಿ, ವ್ಯಾಪಾರ ನೋಂದಣಿ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ಬುಕ್ ಪ್ರತಿ ಹಾಗೂ ಡ್ರಾ ಮಾಡಿರುವ ಬ್ಯಾಂಕ್ ಸ್ಟೇಟ್ಮೆಂಟ್, ನಗದು ಪಡೆಯುವವರ ವಿವರಗಳನ್ನು ಹೊಂದಿರಬೇಕು ಎಂದರು.<br /> <br /> ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಿ, ಕ್ಷೇತ್ರವಾರು ವೀಕ್ಷಣೆ ಮಾಡಿ ಪ್ರತಿದಿನದ ವೆಚ್ಚದ ವಿವರಗಳನ್ನು ನಿಖರವಾಗಿ ಸಲ್ಲಿಸಲು ತಿಳಿಸಲಾಯಿತು.<br /> <br /> ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹಾಗೂ ಚುನಾ ವಣಾ ವೆಚ್ಚದ ವಿವರಗಳನ್ನು ಅಧಿಕೃತ ವಾಗಿ ಬ್ಯಾಂಕ್ ಖಾತೆ ಮೂಲಕ ನಿರ್ವ ಹಿಸಲು ಸೂಚನೆ ನೀಡಲಾಗಿದೆ ಎಂದರು.<br /> <br /> ಸಹಾಯಕ ಚುನಾವಣಾಧಿಕಾರಿ ಪಿ.ಟಿ.ರುದ್ರಗೌಡ ಮಾತನಾಡಿ, ಸಂಶ ಯಾತ್ಮಕ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ, ಸ್ತ್ರೀಶಕ್ತಿ, ಯುವಕ ಮಂಡ ಳಿಗಳ ಖಾತೆಗಳಲ್ಲಿ ಹಣ ಸಂದಾಯದ ಮೇಲೆ ನಿಗಾವಹಿಸುವಂತೆ ಹಾಗೂ ಪ್ರತಿದಿನ 4ಕ್ಕೆ ಡಿಸಿಸಿ ಬ್ಯಾಂಕ್ ಮೂಲಕ ವರದಿ ಕಳಿಸುವಂತೆ ತಿಳಿಸಿದರು.<br /> <br /> 20 ಸಾವಿರಗಳ ಮೇಲಿನ ಎಲ್ಲ ಹಣದ ವಾಣಿಜ್ಯ ವ್ಯವಹಾರಗಳನ್ನು ಚೆಕ್ ಮೂಲಕವೇ ವ್ಯವಹರಿಸುವಂತೆ ತಿಳಿಸಿದರು. ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಎನ್.ಮುರಳಿ ಸೇರಿದಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>