<p><strong>ಬೆಂಗಳೂರು: </strong>ಅಗ್ರ ಶ್ರೇಯಾಂಕದ ಆಟಗಾರ ಡೇನಿಯಲ್ ಎಸ್. ಫರೀದ್ `ಹೊಂಡಾ~ ಪ್ರಾಯೋಜಿತ ಫೈವ್ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಹದಿನೈದು ಮತ್ತು ಹದಿನೇಳು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡು `ಪ್ರಶಸ್ತಿ ಡಬಲ್~ ಪಡೆದ ಕೀರ್ತಿಗೆ ಪಾತ್ರರಾದರು.</p>.<p>ರಾಹುಲ್ ಭಾರದ್ವಾಜ್ ಹಾಗೂ ಅಪೇಕ್ಷಾ ನಾಯಕ್ 13 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ , ಹದಿನೈದು ವರ್ಷ ವಯಸ್ಸಿನೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗದಲ್ಲಿ ಮಹಿಮಾ ಅಗರ್ವಾಲ್, 17 ವರ್ಷ ವಯಸ್ಸಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ವೈಷ್ಣವಿ ಕೆ. ಅಯ್ಯರ್ ಪ್ರಶಸ್ತಿ ಪಡೆದುಕೊಂಡರು.</p>.<p>ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ರಹೇಜಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹದಿಮೂರು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ರಾಹುಲ್ ಭಾರದ್ವಾಜ್ 21-14, 21-6 ರಲ್ಲಿ ಎರಡನೇ ಶ್ರೇಯಾಂಕದ ಎಸ್. ವಿಘ್ನೇಶ್ ಮೇಲೂ, ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ ನಾಯಕ್ 11-21, 21-18, 21-11 ರಲ್ಲಿ ಅರ್ಚನಾ ಪೈ ವಿರುದ್ಧವೂ ಗೆದ್ದರು.</p>.<p>ಇದೇ ವಿಭಾಗದ ಬಾಲಕರ ಡಬಲ್ಸ್ ಫೈನಲ್ನಲ್ಲಿ ಕೆ.ಆರ್. ಅಭಿಷೇಕ್ ಮತ್ತು ಎಸ್. ವಿಘ್ನೇಶ್ ಜೋಡಿ 21-19, 21-18 ರಲ್ಲಿ ಅಬಿ ಅನುಧನ್ ಮತ್ತು ಬಿ.ಎಂ. ರಾಹುಲ್ ಭಾರದ್ವಾಜ್ ಮೇಲೆ ಜಯ ಸಾಧಿಸಿತು.</p>.<p>ಹದಿನೈದು ವರ್ಷ ವಯಸ್ಸಿನ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಡೇನಿಯಲ್ ಎಸ್. ಫರೀದ್ 21-13, 21-11 ರಲ್ಲಿ ಎರಡನೇ ಶ್ರೇಯಾಂಕದ ಸುದೀಪ್ ಸುರೇಶ್ ಮೇಲೂ, ಬಾಲಕಿಯರ ವಿಭಾಗದ ಸಿಂಗಲ್ಸ್ ಫೈನಲ್ನಲ್ಲಿ ಮಹಿಮಾ ಅಗರ್ವಾಲ್ 21-10, 21-7 ರಲ್ಲಿ ಅಶ್ವಿನಿ ಭಟ್ ವಿರುದ್ಧವೂ, ಬಾಲಕರ ಡಬಲ್ಸ್ ಫೈನಲ್ನಲ್ಲಿ ಮಿಥುನ್ ಮಂಜುನಾಥ್ ಮತ್ತು ಸುದೀಪ್ ಸುರೇಶ್ 21-12, 17-21, 21-19 ರಲ್ಲಿ ಆಕಾಶ್ರಾಜ್ ಮೂರ್ತಿ ಮತ್ತು ಬಿ.ಆರ್. ಸಂಕೀರ್ತ್ ಮೇಲೂ, ಬಾಲಕಿಯರ ವಿಭಾಗದಲ್ಲಿ ಅಶ್ವಿನಿ ಭಟ್ ಮತ್ತು ಯು.ಕೆ. ಮಿಥುಲಾ 21-13, 21-15 ರಲ್ಲಿ ಎಂ.ಎಸ್. ಚಿನ್ಮಯಿ ಮತ್ತು ಎಸ್. ಕೆ. ತನ್ವೀ ವಿರುದ್ಧವೂ ಜಯ ಪಡೆದು ಪ್ರಶಸ್ತಿ ಗೆದ್ದುಕೊಂಡರು.</p>.<p>ಹದಿನೇಳು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಡೇನಿಯಲ್ ಎಸ್. ಫರೀದ್ 21-10, 21-12 ರಲ್ಲಿ ರೋಹಿತ್ ಮೇಲೂ, ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಕೆ. ಅಯ್ಯರ್ 18-21, 21-12, 21-13 ರಲ್ಲಿ ಸಯೆದಾ ಸಾದತ್ ಅಶ್ರೀನ್ ವಿರುದ್ಧವೂ, ಬಾಲಕರ ಡಬಲ್ಸ್ ಫೈನಲ್ನಲ್ಲಿ ಆಕಾಶ್ರಾಜ್ ಮೂರ್ತಿ ಮತ್ತು ಬಿ.ಆರ್. ಸಂಕೀರ್ತ್ 25-27, 21-19, 21-17 ರಲ್ಲಿ ಜಸ್ವಂತ್ ಗೌಡ ಮತ್ತು ಕೆ.ವಿ. ರಕ್ಷಿತ್ ಮೇಲೂ ಗೆಲುವು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಗ್ರ ಶ್ರೇಯಾಂಕದ ಆಟಗಾರ ಡೇನಿಯಲ್ ಎಸ್. ಫರೀದ್ `ಹೊಂಡಾ~ ಪ್ರಾಯೋಜಿತ ಫೈವ್ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಹದಿನೈದು ಮತ್ತು ಹದಿನೇಳು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡು `ಪ್ರಶಸ್ತಿ ಡಬಲ್~ ಪಡೆದ ಕೀರ್ತಿಗೆ ಪಾತ್ರರಾದರು.</p>.<p>ರಾಹುಲ್ ಭಾರದ್ವಾಜ್ ಹಾಗೂ ಅಪೇಕ್ಷಾ ನಾಯಕ್ 13 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ , ಹದಿನೈದು ವರ್ಷ ವಯಸ್ಸಿನೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗದಲ್ಲಿ ಮಹಿಮಾ ಅಗರ್ವಾಲ್, 17 ವರ್ಷ ವಯಸ್ಸಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ವೈಷ್ಣವಿ ಕೆ. ಅಯ್ಯರ್ ಪ್ರಶಸ್ತಿ ಪಡೆದುಕೊಂಡರು.</p>.<p>ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ರಹೇಜಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹದಿಮೂರು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ರಾಹುಲ್ ಭಾರದ್ವಾಜ್ 21-14, 21-6 ರಲ್ಲಿ ಎರಡನೇ ಶ್ರೇಯಾಂಕದ ಎಸ್. ವಿಘ್ನೇಶ್ ಮೇಲೂ, ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ ನಾಯಕ್ 11-21, 21-18, 21-11 ರಲ್ಲಿ ಅರ್ಚನಾ ಪೈ ವಿರುದ್ಧವೂ ಗೆದ್ದರು.</p>.<p>ಇದೇ ವಿಭಾಗದ ಬಾಲಕರ ಡಬಲ್ಸ್ ಫೈನಲ್ನಲ್ಲಿ ಕೆ.ಆರ್. ಅಭಿಷೇಕ್ ಮತ್ತು ಎಸ್. ವಿಘ್ನೇಶ್ ಜೋಡಿ 21-19, 21-18 ರಲ್ಲಿ ಅಬಿ ಅನುಧನ್ ಮತ್ತು ಬಿ.ಎಂ. ರಾಹುಲ್ ಭಾರದ್ವಾಜ್ ಮೇಲೆ ಜಯ ಸಾಧಿಸಿತು.</p>.<p>ಹದಿನೈದು ವರ್ಷ ವಯಸ್ಸಿನ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಡೇನಿಯಲ್ ಎಸ್. ಫರೀದ್ 21-13, 21-11 ರಲ್ಲಿ ಎರಡನೇ ಶ್ರೇಯಾಂಕದ ಸುದೀಪ್ ಸುರೇಶ್ ಮೇಲೂ, ಬಾಲಕಿಯರ ವಿಭಾಗದ ಸಿಂಗಲ್ಸ್ ಫೈನಲ್ನಲ್ಲಿ ಮಹಿಮಾ ಅಗರ್ವಾಲ್ 21-10, 21-7 ರಲ್ಲಿ ಅಶ್ವಿನಿ ಭಟ್ ವಿರುದ್ಧವೂ, ಬಾಲಕರ ಡಬಲ್ಸ್ ಫೈನಲ್ನಲ್ಲಿ ಮಿಥುನ್ ಮಂಜುನಾಥ್ ಮತ್ತು ಸುದೀಪ್ ಸುರೇಶ್ 21-12, 17-21, 21-19 ರಲ್ಲಿ ಆಕಾಶ್ರಾಜ್ ಮೂರ್ತಿ ಮತ್ತು ಬಿ.ಆರ್. ಸಂಕೀರ್ತ್ ಮೇಲೂ, ಬಾಲಕಿಯರ ವಿಭಾಗದಲ್ಲಿ ಅಶ್ವಿನಿ ಭಟ್ ಮತ್ತು ಯು.ಕೆ. ಮಿಥುಲಾ 21-13, 21-15 ರಲ್ಲಿ ಎಂ.ಎಸ್. ಚಿನ್ಮಯಿ ಮತ್ತು ಎಸ್. ಕೆ. ತನ್ವೀ ವಿರುದ್ಧವೂ ಜಯ ಪಡೆದು ಪ್ರಶಸ್ತಿ ಗೆದ್ದುಕೊಂಡರು.</p>.<p>ಹದಿನೇಳು ವರ್ಷ ವಯಸ್ಸಿನೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಡೇನಿಯಲ್ ಎಸ್. ಫರೀದ್ 21-10, 21-12 ರಲ್ಲಿ ರೋಹಿತ್ ಮೇಲೂ, ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಕೆ. ಅಯ್ಯರ್ 18-21, 21-12, 21-13 ರಲ್ಲಿ ಸಯೆದಾ ಸಾದತ್ ಅಶ್ರೀನ್ ವಿರುದ್ಧವೂ, ಬಾಲಕರ ಡಬಲ್ಸ್ ಫೈನಲ್ನಲ್ಲಿ ಆಕಾಶ್ರಾಜ್ ಮೂರ್ತಿ ಮತ್ತು ಬಿ.ಆರ್. ಸಂಕೀರ್ತ್ 25-27, 21-19, 21-17 ರಲ್ಲಿ ಜಸ್ವಂತ್ ಗೌಡ ಮತ್ತು ಕೆ.ವಿ. ರಕ್ಷಿತ್ ಮೇಲೂ ಗೆಲುವು ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>