<p><strong>ಯಾದಗಿರಿ:</strong> ನಗರದ ಹೊಸಳ್ಳಿ ಕ್ರಾಸ್ನಲ್ಲಿ ನಿರ್ಮಿಸಲಾಗಿರುವ ಜೈನ್ ಮಂದಿರದಲ್ಲಿ ಗುರುವಾರ ಭಗವಾನ್ ಪಾರ್ಶ್ವನಾಥರ ಮೂರ್ತಿಯನ್ನು ಸಕಲ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. <br /> <br /> ಬೆಳಿಗ್ಗೆ ನಗರಕ್ಕೆ ಆಗಮಿಸಿದ ಮೂರ್ತಿಯನ್ನು ಇಲ್ಲಿಯ ಬಸ್ನಿಲ್ದಾಣದಿಂದ ಮೆರವಣಿಗೆ ಮೂಲಕ ಮಂದಿರಕ್ಕೆ ತರಲಾಯಿತು. ಬಸ್ನಿಲ್ದಾಣದ ಬಳಿ ಮೂರ್ತಿಗೆ ಪೂರ್ಣಕುಂಭದೊಂದಿಗೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಜೈಪುರದಿಂದ ತರಲಾದ ಈ ಮೂರ್ತಿಯನ್ನು ಅಲಂಕೃವಾದ ವಾಹನದಲ್ಲಿ ಹೊಸಳ್ಳಿ ಕ್ರಾಸ್ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. <br /> <br /> ವಾದ್ಯ ವೈಭವ, ಸುಮಂಗಲಿಯರ ಕುಂಭಕಳಶಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ನಗರದ ಜೈನ್ ಸಮಾಜದ ಮುಖಂಡರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಹೊಸಳ್ಳಿ ಕ್ರಾಸ್ನಲ್ಲಿರುವ ಮಂದಿರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. <br /> <br /> ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಪಾರಸಮಲ್ ಜೈನ್, ರಮೇಶ ಕಾಂಗಠಾಣ, ಮಹೇಂದ್ರ ಭಂಡಾರಿ, ನೇಮಿಚಂದ ಸೋಲಂಕಿ, ಸುಭಾಷ ಗಾಂಧಿ, ಮಾಂಗಿಲಾಲ ಗಾಂಧಿ, ಫೂಲಚಂದ ಗಾಂಧಿ, ಸುಭಾಷ ಅಷ್ಟೇಕರ, ಕಾಂತಿಲಾಲ ಸೋಲಂಕಿ, ವಿನೋದ ಜೈನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ನಗರದ ಹೊಸಳ್ಳಿ ಕ್ರಾಸ್ನಲ್ಲಿ ನಿರ್ಮಿಸಲಾಗಿರುವ ಜೈನ್ ಮಂದಿರದಲ್ಲಿ ಗುರುವಾರ ಭಗವಾನ್ ಪಾರ್ಶ್ವನಾಥರ ಮೂರ್ತಿಯನ್ನು ಸಕಲ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. <br /> <br /> ಬೆಳಿಗ್ಗೆ ನಗರಕ್ಕೆ ಆಗಮಿಸಿದ ಮೂರ್ತಿಯನ್ನು ಇಲ್ಲಿಯ ಬಸ್ನಿಲ್ದಾಣದಿಂದ ಮೆರವಣಿಗೆ ಮೂಲಕ ಮಂದಿರಕ್ಕೆ ತರಲಾಯಿತು. ಬಸ್ನಿಲ್ದಾಣದ ಬಳಿ ಮೂರ್ತಿಗೆ ಪೂರ್ಣಕುಂಭದೊಂದಿಗೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಜೈಪುರದಿಂದ ತರಲಾದ ಈ ಮೂರ್ತಿಯನ್ನು ಅಲಂಕೃವಾದ ವಾಹನದಲ್ಲಿ ಹೊಸಳ್ಳಿ ಕ್ರಾಸ್ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. <br /> <br /> ವಾದ್ಯ ವೈಭವ, ಸುಮಂಗಲಿಯರ ಕುಂಭಕಳಶಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ನಗರದ ಜೈನ್ ಸಮಾಜದ ಮುಖಂಡರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಹೊಸಳ್ಳಿ ಕ್ರಾಸ್ನಲ್ಲಿರುವ ಮಂದಿರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. <br /> <br /> ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಪಾರಸಮಲ್ ಜೈನ್, ರಮೇಶ ಕಾಂಗಠಾಣ, ಮಹೇಂದ್ರ ಭಂಡಾರಿ, ನೇಮಿಚಂದ ಸೋಲಂಕಿ, ಸುಭಾಷ ಗಾಂಧಿ, ಮಾಂಗಿಲಾಲ ಗಾಂಧಿ, ಫೂಲಚಂದ ಗಾಂಧಿ, ಸುಭಾಷ ಅಷ್ಟೇಕರ, ಕಾಂತಿಲಾಲ ಸೋಲಂಕಿ, ವಿನೋದ ಜೈನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>