<p>ಭದ್ರಾವತಿ: ನಗರದ ಎರಡು ಪ್ರತಿಷ್ಠಿತ ಕಾರ್ಖಾನೆಗಳ ಸ್ಥಾಪನೆಗೆ ಕಾರಣರಾದ ಸರ್ ಎಂ. ವಿಶ್ವೇಶ್ವರಯ್ಯ ಅವರ ಹಲವು ದಶಕದ ಪುತ್ಥಳಿಯ ದಿಕ್ಕು ಬದಲಿಸುವ ಧಾರ್ಮಿಕ ಕಾರ್ಯವನ್ನು ನಗರಸಭೆ ಸೋಮವಾರ ನೆರವೇರಿಸಿತು.<br /> <br /> ಐದು ದಶಕದ ಇತಿಹಾಸ ಹೊಂದಿರುವ ಈ ಸರ್ಎಂವಿ ಪುತ್ಥಳಿಗೆ ಸುಂದರ ಮಂಟಪದ ಸೌಭಾಗ್ಯ ಸಹ ದೊರೆತಿತ್ತು. ಆದರೆ, ವಿಗ್ರಹ ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿತ ಆಗಿದ್ದು, ಕೆಲವರ ಚರ್ಚೆಗೆ ಕಾರಣವಾಗಿತ್ತು.<br /> <br /> ರೈಲುನಿಲ್ದಾಣ ಮುಂಭಾಗದಲ್ಲಿ ಇರುವ ಈ ವಿಗ್ರಹ ಪೂರ್ವಾಭಿಮುಖವಾಗಿ ಇದ್ದರೆ ನಗರದ ಅಭಿವೃದ್ಧಿ ಮತ್ತಷ್ಟು ಹೆಚ್ಚಲಿದೆ ಎಂದು ಹಿರಿಯರು ಹೇಳಿದ್ದರ ಫಲವಾಗಿ ಬದಲಾವಣೆ ನಡೆದಿದೆ ಎಂದು ಮಾಜಿ ನಗರಸಭಾ ಸದಸ್ಯ ಎನ್. ಕೃಷ್ಣಮೂರ್ತಿ ಸಭೆಯಲ್ಲಿ ಹೇಳುವ ಮೂಲಕ ಧಾರ್ಮಿಕ ಮಹತ್ವದ ವಿಚಾರವನ್ನು ತಿಳಿಸಿದರು.<br /> <br /> ಬೆಳಿಗ್ಗೆ ಆರಂಭವಾದ ವಿವಿಧ ಧಾರ್ಮಿಕ ವಿಧಿ-ವಿಧಾನ ನಂತರ ಹೋಮದ ಪೂರ್ಣಾಹುತಿ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ಹಾಜರಿದ್ದು, ಪೂಜೆ ನೆರವೇರಿಸಿದರು.<br /> <br /> ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ಬದುಕಿದ್ದಾಗ ನಾವು ಮಾಡುವ ಪ್ರತಿಯೊಂದು ಕೆಲಸವು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನೀಯ, ಈ ನಿಟ್ಟಿನಲ್ಲಿ ಶ್ರಮಿಸಿದವರು ಸರ್ಎಂವಿ~ ಎಂದು ಬಣ್ಣಿಸಿದರು.<br /> <br /> ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್, ಸದಸ್ಯರಾದ ಆರ್. ವೇಣುಗೋಪಾಲ್,ಶಾರದ ಭೀಮಾಬೋವಿ, ಮೆಹಬೂಬ್ಸಾಬ್, ದೇವಿಕಾ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ನಗರದ ಎರಡು ಪ್ರತಿಷ್ಠಿತ ಕಾರ್ಖಾನೆಗಳ ಸ್ಥಾಪನೆಗೆ ಕಾರಣರಾದ ಸರ್ ಎಂ. ವಿಶ್ವೇಶ್ವರಯ್ಯ ಅವರ ಹಲವು ದಶಕದ ಪುತ್ಥಳಿಯ ದಿಕ್ಕು ಬದಲಿಸುವ ಧಾರ್ಮಿಕ ಕಾರ್ಯವನ್ನು ನಗರಸಭೆ ಸೋಮವಾರ ನೆರವೇರಿಸಿತು.<br /> <br /> ಐದು ದಶಕದ ಇತಿಹಾಸ ಹೊಂದಿರುವ ಈ ಸರ್ಎಂವಿ ಪುತ್ಥಳಿಗೆ ಸುಂದರ ಮಂಟಪದ ಸೌಭಾಗ್ಯ ಸಹ ದೊರೆತಿತ್ತು. ಆದರೆ, ವಿಗ್ರಹ ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿತ ಆಗಿದ್ದು, ಕೆಲವರ ಚರ್ಚೆಗೆ ಕಾರಣವಾಗಿತ್ತು.<br /> <br /> ರೈಲುನಿಲ್ದಾಣ ಮುಂಭಾಗದಲ್ಲಿ ಇರುವ ಈ ವಿಗ್ರಹ ಪೂರ್ವಾಭಿಮುಖವಾಗಿ ಇದ್ದರೆ ನಗರದ ಅಭಿವೃದ್ಧಿ ಮತ್ತಷ್ಟು ಹೆಚ್ಚಲಿದೆ ಎಂದು ಹಿರಿಯರು ಹೇಳಿದ್ದರ ಫಲವಾಗಿ ಬದಲಾವಣೆ ನಡೆದಿದೆ ಎಂದು ಮಾಜಿ ನಗರಸಭಾ ಸದಸ್ಯ ಎನ್. ಕೃಷ್ಣಮೂರ್ತಿ ಸಭೆಯಲ್ಲಿ ಹೇಳುವ ಮೂಲಕ ಧಾರ್ಮಿಕ ಮಹತ್ವದ ವಿಚಾರವನ್ನು ತಿಳಿಸಿದರು.<br /> <br /> ಬೆಳಿಗ್ಗೆ ಆರಂಭವಾದ ವಿವಿಧ ಧಾರ್ಮಿಕ ವಿಧಿ-ವಿಧಾನ ನಂತರ ಹೋಮದ ಪೂರ್ಣಾಹುತಿ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ಹಾಜರಿದ್ದು, ಪೂಜೆ ನೆರವೇರಿಸಿದರು.<br /> <br /> ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, `ಬದುಕಿದ್ದಾಗ ನಾವು ಮಾಡುವ ಪ್ರತಿಯೊಂದು ಕೆಲಸವು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನೀಯ, ಈ ನಿಟ್ಟಿನಲ್ಲಿ ಶ್ರಮಿಸಿದವರು ಸರ್ಎಂವಿ~ ಎಂದು ಬಣ್ಣಿಸಿದರು.<br /> <br /> ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್, ಸದಸ್ಯರಾದ ಆರ್. ವೇಣುಗೋಪಾಲ್,ಶಾರದ ಭೀಮಾಬೋವಿ, ಮೆಹಬೂಬ್ಸಾಬ್, ದೇವಿಕಾ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>