<p><strong>ಗಾಲ್ವನ್ ಠಾಣ್ಯದಿಂದ 200 ಗಜ ದೂರಕ್ಕೆ ಚೀಣಿ ಸೈನಿಕರ ಹಿನ್ನಡೆ</strong><br /> <strong>ದೆಹಲಿ, ಜುಲೈ 14 - </strong>ಗಾಲ್ವನ್ ಕಣಿವೆಯಲ್ಲಿ ಭಾರತ ಠಾಣ್ಯವನ್ನು ಸುತ್ತುವರಿದಿದ್ದ ಚೀಣೀ ಪಡೆಗಳು ಈ ಬೆಳಿಗ್ಗೆಯ ವೇಳೆಗೆ 200 ಗಜ ಹಿಂದಕ್ಕೆ ಸರಿದಿದ್ದವೆಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದರು.<br /> <br /> ಭಾರತದ ಸಣ್ಣ ಠಾಣ್ಯದ ಸೈನಿಕರು ದೃಢವಾದ ನಿಲುವನ್ನು ತಾಳಿದುದರಿಂದಲೂ ಚೀಣಿಯರು ಇನ್ನು ಮುಂದಕ್ಕೆ ಬಂದಲ್ಲಿ ಅವರನ್ನು ಎದುರಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದುದರಿಂದಲೂ ಭಾರತೀಯ ಸೈನಿಕರಿಗಿಂತ ಅಧಿಕ ಸಂಖ್ಯೆಯಲ್ಲಿದ್ದ ಚೀಣಿಯರು ಹಿಮ್ಮೆಟ್ಟಿದರೆಂದು ಈ ವಕ್ತಾರರು ಹೇಳಿದರು.<br /> <br /> ಆ ಠಾಣ್ಯದಲ್ಲಿರುವ ಭಾರತದ ಸೈನಿಕರ ಹದಿನೈದರಷ್ಟಕ್ಕೂ ಹೆಚ್ಚು ಚೀಣಿ ಸೈನಿಕರು ಜುಲೈ 10 ರಿಂದ ಅದನ್ನು ಮೂರು ದಿಕ್ಕುಗಳಿಂದ ಸುತ್ತುವರಿದಿದ್ದರು. ಭಾರತವು ಚೀಣಕ್ಕೆ ಪ್ರತಿಭಟನೆಗಳನ್ನು ಸಲ್ಲಿಸಿದರೂ ಸಹ ನಿನ್ನೆ ಚೀಣಿ ಸೈನಿಕರು ಆ ಠಾಣ್ಯದಿಂದ 15 ಗಜಗಳಷ್ಟು ಸಮೀಪಕ್ಕೆ ಬಂದಿದ್ದರು.<br /> <br /> ಇನ್ನಷ್ಟು ಹತ್ತಿರ ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸುವುದಾಗಿ ಠಾಣ್ಯದ ಸೈನಿಕರು ಚೀಣಿಯರಿಗೆ ಎಚ್ಚರಿಕೆ ನೀಡಿದ್ದಲ್ಲದೆ ಸಹಾಯ ಬರದಂತೆ ಆ ಠಾಣ್ಯವು ಪ್ರತ್ಯೇಕಗೊಂಡರೂ ಸಹ ಅಚಲ ನಿರ್ಧಾರ - ದಿಟ್ಟತನದಿಂದ ಅವರನ್ನು ಎದುರಿಸಿ ನಿಂತರು.<br /> <br /> ಇಂದು ಬೆಳಿಗ್ಗೆಯ ಹೊತ್ತಿಗೆ ಚೀಣಿಯರು ಆ ಠಾಣ್ಯದಿಂದ ಸುಮಾರು 200 ಗಜಗಳಷ್ಟು ದೂರಕ್ಕೆ ಹಿಮ್ಮೆಟ್ಟಿದ್ದರು.</p>.<p><strong>ಹರ್ಷಚಿತ್ತ ಪ್ರಧಾನಿ ನೆಹರೂ ಅವರಿಗೆ ನಗರದ ಸ್ವಾಗತ</strong><br /> <strong>ಬೆಂಗಳೂರು, ಜುಲೈ 14 - </strong>ಪ್ರಕೃತ ಗೊತ್ತಾಗಿರುವಂತೆ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಇಂದು ಮಧ್ಯಾಹ್ನ ಇಲ್ಲಿಗಾಗಮಿಸಿದ ಹರ್ಷಚಿತ್ತ ಪ್ರಧಾನಿ ನೆಹರೂರವರಿಗೆ ಆದರದ ಸ್ವಾಗತ ನೀಡಲಾಯಿತು.<br /> <br /> 12-17ಕ್ಕೆ ಸರಿಯಾಗಿ ಹಿಂದೂಸ್ತಾನ್ ವಿಮಾನ ನಿಲ್ದಾಣದಲ್ಲಿ ಬಂದು ನಿಂತ ರಾಜಹಂಸದಿಂದ ಅಚ್ಚ ಬಿಳಿಯ ಉಡುಪು ಧರಿಸಿ ಎಂದಿನ ನಗೆಮುಖದೊಂದಿಗೆ ಪ್ರಧಾನಿಯು ಹೊರಬಂದಾಗ ನಿನ್ನೆಯಿಂದ ನಗರದಲ್ಲಿ ಕವಿದಿರುವ ಮೋಡ ಸ್ವಲ್ಪ ತಿಳಿಗೊಂಡು ತಿಳಿಬಿಸಿಲು ಹರಡಿತ್ತು.</p>.<p><strong>`ವಿಜ್ಞಾನವೊಂದೇ ಏಷ್ಯದ ಏಳಿಗೆಗೆ ಹಾದಿ~</strong><br /> <strong>ಬೆಂಗಳೂರು, ಜುಲೈ 14 - </strong>ಆಧುನಿಕ ವಿಜ್ಞಾನ ಹಾಗೂ ಔದ್ಯೋಗಿಕ ವಿಜ್ಞಾನವನ್ನು ಅರಿಯದಿದ್ದಲ್ಲಿ ಏಷ್ಯದ ರಾಷ್ಟ್ರಗಳ ಮುನ್ನಡೆ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ನೆಹರೂ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.<br /> <br /> 1960 ರಲ್ಲಿ ಡಾ. ಎಂ. ವಿ. ಅವರ ಶತಮಾನೋತ್ಸವದ ಸಂದರ್ಭದಲ್ಲಿ ತಾವು ಹೇಳಿದುದನ್ನು ಸ್ಮರಿಸಿಕೊಂಡ ಪ್ರಧಾನಿಯು `ವಿಜ್ಞಾನವಿಲ್ಲದೆ ಹೋದರೆ, ನಾವು ನಾಶವಾಗುತ್ತೇವೆ, ಆತ್ಮ ಜ್ಞಾನವಿಲ್ಲದಿದ್ದರೂ ನಾಶರಾಗುತ್ತೇವೆ~ ಎಂದರು.<br /> <br /> ಆಧುನಿಕ ಕೈಗಾರಿಕೆ ಹಾಗೂ ಔದ್ಯೋಗಿಕ ಪ್ರಗತಿಯ ದರ್ಶನ ಮಾಡಿಕೊಡುವ ದಿವಂಗತ ಡಾ. ಎಂ. ವಿ. ಅವರ ಸ್ಮಾರಕ ಮ್ಯೂಸಿಯಂನ ಆರಂಭೋತ್ಸವವನ್ನು ಪ್ರಧಾನಿ ನೆಹರೂ ಅವರು ಸಂಜೆ ನೆರವೇರಿಸಿದರು. ಏಷ್ಯದ ರಾಷ್ಟ್ರಗಳು ಪ್ರಗತಿಯನ್ನು ಸಾಧಿಸಬೇಕಾದರೆ `ಆಧುನಿಕ ಪ್ರಪಂಚವನ್ನು~ ಅರಿತು ಅರ್ಥಮಾಡಿಕೊಂಡು ಅನುಸರಿಸುವುದೇ ಮಾರ್ಗವೆಂಬುದು 15 ನಿಮಿಷಗಳ ಕಾಲ ಮಾಡಿದ ಪ್ರಧಾನಿಯ ಭಾಷಣದ ಪ್ರಧಾನ ಅಂಶವಾಗಿತ್ತು.<br /> <br /> ಸುಮಾರು 12 ಲಕ್ಷ ರೂಪಾಯಿಗಳ ಖರ್ಚಿನಲ್ಲಿ ನಿರ್ಮಾಣವಾಗಿರುವ ಭವ್ಯ ಮ್ಯೂಸಿಯಂನ ಪಕ್ಕದಲ್ಲಿ ನಿರ್ಮಿತವಾಗಿದ್ದ ಭವ್ಯ ಚಪ್ಪರದಲ್ಲಿ ಆರಂಭೋತ್ಸವ ಸಮಾರಂಭ ನಡೆಯಿತು. ಸುಮಾರು 3 ಸಾವಿರ ಮಂದಿ ಆಹ್ವಾನಿತರು ಹಾಜರಿದ್ದರು.</p>.<p><strong>ರಷ್ಯದಲ್ಲಿ ಹತೋಟಿ ಕೇಂದ್ರ ಸ್ಥಾಪಿಸುವ ವಿಷಯವನ್ನು ತ್ಯಜಿಸಲು ಪಶ್ಚಿಮ ಸಿದ್ಧ?<br /> ಜಿನೀವ, ಜುಲೈ 14 - </strong>ಅಣು ಪ್ರಯೋಗ ನಿಷೇಧ ಉಸ್ತುವಾರಿಗೆ ರಷ್ಯದಲ್ಲಿ ಹತೋಟಿ ನೆಲೆಗಳನ್ನು ಸ್ಥಾಪಿಸಬೇಕೆಂಬ ತನ್ನ ಒತ್ತಾಯವನ್ನು ಪಶ್ಚಿಮವು ಕೈಬಿಡಬಹುದೆಂದು ಹದಿನೇಳು ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನದಲ್ಲಿನ ಅಮೆರಿಕದ ಪ್ರತಿನಿಧಿ ಆರ್ಥರ್ ಡೀನ್ ಇಂದು ಇಲ್ಲಿ ಸೂಚನೆ ಇತ್ತರು.<br /> <br /> ಸೋಮವಾರ ಪುನರಾರಂಭವಾಗಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ಡೀನ್ರಸ್ಕ್ ಜಿನೀವಾಕ್ಕೆ ವಾಪಸಾಗಿದ್ದಾರೆ. ಅಣು ಪ್ರಯೋಗ ನಿಶೇಧಕ್ಕೆ ಸಂಬಂಧಿಸಿದ ಈ ಪ್ರಮುಖ ಅಂಶವು ಸಂಧಾನದ ತೃಪ್ತಿಕರ ಪ್ರಗತಿಗೆ ಭಾರಿ ಆಶಾದಾಯಕ ಎನಿಸಿದೆ.<br /> <br /> ರಷ್ಯದಲ್ಲಿ ಹತೋಟಿ ನೆಲೆಗಳನ್ನು ಸ್ಥಾಪಿಸುವ ವಿಷಯದ ಬಗ್ಗೆ ಪ್ರಶ್ನಿಸಲು ರಷ್ಯದಲ್ಲಿ ಹತೋಟಿ ನೆಲೆಗಳನ್ನು ನಿರ್ಮಿಸುವುದೇ ಉತ್ತಮ. ಆದರೆ ಅದಕ್ಕೆ ರಷ್ಯ ಒಪ್ಪದಿದ್ದರೆ ಬೇರೊಂದು ವ್ಯವಸ್ಥೆಯನ್ನು ನಾವು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅದು ಅಷ್ಟು ಉತ್ತಮವಾಗಿರದು ಎಂದು ಡೀನ್ ನುಡಿದರು.<br /> <br /> ಅಣುಸ್ಫೋಟಗಳನ್ನು ಪತ್ತೆ ಹಚ್ಚುವ ವಿಧಾನಗಳನ್ನು ಉತ್ತಮಗೊಳಿಸುವುದು ಹಾಗೂ ಭೂಗರ್ಭ ಸ್ಪೋಟಗಳ ವಿಶ್ಲೇಷಣೆ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ವಿಜ್ಞಾನಿಗಳು ನಡೆಸಿರುವ ಕಾರ್ಯವನ್ನು ಅವರು ಪ್ರಸ್ತಾಪಿಸಿದರು. ಅವರುಗಳ ವರದಿ ಇನ್ನು 15 ದಿನಗಳಲ್ಲಿ ಸಿದ್ಧವಾಗುವುದೆಂದು ಅವರು ತಿಳಿಸಿದರು.</p>.<p><strong>ಆಸ್ಟ್ರಿಯಕ್ಕೆ ಖ್ರುಶ್ಚೋವ್ ಬೆದರಿಕೆ?</strong><br /> <strong>ಮಾಸ್ಕೊ, ಜುಲೈ 14 -</strong> ಆಸ್ಟ್ರಿಯವು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಿದರೆ ರಷ್ಯದ ಸೇನೆಗಳು ಆಸ್ಟ್ರಿಯದೊಳಕ್ಕೆ ನುಗ್ಗುವುದೆಂದು ರಷ್ಯದ ಪ್ರಧಾನ ಮಂತ್ರಿ ಖ್ರುಶ್ಚೋವ್ ಆಸ್ಟ್ರಿಯದ ಚಾನ್ಸೆಲರ್ ಡಾ. ಆಲ್ಫಾನ್ಸ್ ಗೋರ್ಚಾಚ್ರವರಿಗೆ ತಿಳಿಸಿದ್ದಾರೆಂದು ನಂಬಲರ್ಹ ಸೋವಿಯತ್ ವಲಯಗಳು ಇಂದು ಇಲ್ಲಿ ತಿಳಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಲ್ವನ್ ಠಾಣ್ಯದಿಂದ 200 ಗಜ ದೂರಕ್ಕೆ ಚೀಣಿ ಸೈನಿಕರ ಹಿನ್ನಡೆ</strong><br /> <strong>ದೆಹಲಿ, ಜುಲೈ 14 - </strong>ಗಾಲ್ವನ್ ಕಣಿವೆಯಲ್ಲಿ ಭಾರತ ಠಾಣ್ಯವನ್ನು ಸುತ್ತುವರಿದಿದ್ದ ಚೀಣೀ ಪಡೆಗಳು ಈ ಬೆಳಿಗ್ಗೆಯ ವೇಳೆಗೆ 200 ಗಜ ಹಿಂದಕ್ಕೆ ಸರಿದಿದ್ದವೆಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದರು.<br /> <br /> ಭಾರತದ ಸಣ್ಣ ಠಾಣ್ಯದ ಸೈನಿಕರು ದೃಢವಾದ ನಿಲುವನ್ನು ತಾಳಿದುದರಿಂದಲೂ ಚೀಣಿಯರು ಇನ್ನು ಮುಂದಕ್ಕೆ ಬಂದಲ್ಲಿ ಅವರನ್ನು ಎದುರಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದುದರಿಂದಲೂ ಭಾರತೀಯ ಸೈನಿಕರಿಗಿಂತ ಅಧಿಕ ಸಂಖ್ಯೆಯಲ್ಲಿದ್ದ ಚೀಣಿಯರು ಹಿಮ್ಮೆಟ್ಟಿದರೆಂದು ಈ ವಕ್ತಾರರು ಹೇಳಿದರು.<br /> <br /> ಆ ಠಾಣ್ಯದಲ್ಲಿರುವ ಭಾರತದ ಸೈನಿಕರ ಹದಿನೈದರಷ್ಟಕ್ಕೂ ಹೆಚ್ಚು ಚೀಣಿ ಸೈನಿಕರು ಜುಲೈ 10 ರಿಂದ ಅದನ್ನು ಮೂರು ದಿಕ್ಕುಗಳಿಂದ ಸುತ್ತುವರಿದಿದ್ದರು. ಭಾರತವು ಚೀಣಕ್ಕೆ ಪ್ರತಿಭಟನೆಗಳನ್ನು ಸಲ್ಲಿಸಿದರೂ ಸಹ ನಿನ್ನೆ ಚೀಣಿ ಸೈನಿಕರು ಆ ಠಾಣ್ಯದಿಂದ 15 ಗಜಗಳಷ್ಟು ಸಮೀಪಕ್ಕೆ ಬಂದಿದ್ದರು.<br /> <br /> ಇನ್ನಷ್ಟು ಹತ್ತಿರ ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸುವುದಾಗಿ ಠಾಣ್ಯದ ಸೈನಿಕರು ಚೀಣಿಯರಿಗೆ ಎಚ್ಚರಿಕೆ ನೀಡಿದ್ದಲ್ಲದೆ ಸಹಾಯ ಬರದಂತೆ ಆ ಠಾಣ್ಯವು ಪ್ರತ್ಯೇಕಗೊಂಡರೂ ಸಹ ಅಚಲ ನಿರ್ಧಾರ - ದಿಟ್ಟತನದಿಂದ ಅವರನ್ನು ಎದುರಿಸಿ ನಿಂತರು.<br /> <br /> ಇಂದು ಬೆಳಿಗ್ಗೆಯ ಹೊತ್ತಿಗೆ ಚೀಣಿಯರು ಆ ಠಾಣ್ಯದಿಂದ ಸುಮಾರು 200 ಗಜಗಳಷ್ಟು ದೂರಕ್ಕೆ ಹಿಮ್ಮೆಟ್ಟಿದ್ದರು.</p>.<p><strong>ಹರ್ಷಚಿತ್ತ ಪ್ರಧಾನಿ ನೆಹರೂ ಅವರಿಗೆ ನಗರದ ಸ್ವಾಗತ</strong><br /> <strong>ಬೆಂಗಳೂರು, ಜುಲೈ 14 - </strong>ಪ್ರಕೃತ ಗೊತ್ತಾಗಿರುವಂತೆ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಇಂದು ಮಧ್ಯಾಹ್ನ ಇಲ್ಲಿಗಾಗಮಿಸಿದ ಹರ್ಷಚಿತ್ತ ಪ್ರಧಾನಿ ನೆಹರೂರವರಿಗೆ ಆದರದ ಸ್ವಾಗತ ನೀಡಲಾಯಿತು.<br /> <br /> 12-17ಕ್ಕೆ ಸರಿಯಾಗಿ ಹಿಂದೂಸ್ತಾನ್ ವಿಮಾನ ನಿಲ್ದಾಣದಲ್ಲಿ ಬಂದು ನಿಂತ ರಾಜಹಂಸದಿಂದ ಅಚ್ಚ ಬಿಳಿಯ ಉಡುಪು ಧರಿಸಿ ಎಂದಿನ ನಗೆಮುಖದೊಂದಿಗೆ ಪ್ರಧಾನಿಯು ಹೊರಬಂದಾಗ ನಿನ್ನೆಯಿಂದ ನಗರದಲ್ಲಿ ಕವಿದಿರುವ ಮೋಡ ಸ್ವಲ್ಪ ತಿಳಿಗೊಂಡು ತಿಳಿಬಿಸಿಲು ಹರಡಿತ್ತು.</p>.<p><strong>`ವಿಜ್ಞಾನವೊಂದೇ ಏಷ್ಯದ ಏಳಿಗೆಗೆ ಹಾದಿ~</strong><br /> <strong>ಬೆಂಗಳೂರು, ಜುಲೈ 14 - </strong>ಆಧುನಿಕ ವಿಜ್ಞಾನ ಹಾಗೂ ಔದ್ಯೋಗಿಕ ವಿಜ್ಞಾನವನ್ನು ಅರಿಯದಿದ್ದಲ್ಲಿ ಏಷ್ಯದ ರಾಷ್ಟ್ರಗಳ ಮುನ್ನಡೆ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ನೆಹರೂ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.<br /> <br /> 1960 ರಲ್ಲಿ ಡಾ. ಎಂ. ವಿ. ಅವರ ಶತಮಾನೋತ್ಸವದ ಸಂದರ್ಭದಲ್ಲಿ ತಾವು ಹೇಳಿದುದನ್ನು ಸ್ಮರಿಸಿಕೊಂಡ ಪ್ರಧಾನಿಯು `ವಿಜ್ಞಾನವಿಲ್ಲದೆ ಹೋದರೆ, ನಾವು ನಾಶವಾಗುತ್ತೇವೆ, ಆತ್ಮ ಜ್ಞಾನವಿಲ್ಲದಿದ್ದರೂ ನಾಶರಾಗುತ್ತೇವೆ~ ಎಂದರು.<br /> <br /> ಆಧುನಿಕ ಕೈಗಾರಿಕೆ ಹಾಗೂ ಔದ್ಯೋಗಿಕ ಪ್ರಗತಿಯ ದರ್ಶನ ಮಾಡಿಕೊಡುವ ದಿವಂಗತ ಡಾ. ಎಂ. ವಿ. ಅವರ ಸ್ಮಾರಕ ಮ್ಯೂಸಿಯಂನ ಆರಂಭೋತ್ಸವವನ್ನು ಪ್ರಧಾನಿ ನೆಹರೂ ಅವರು ಸಂಜೆ ನೆರವೇರಿಸಿದರು. ಏಷ್ಯದ ರಾಷ್ಟ್ರಗಳು ಪ್ರಗತಿಯನ್ನು ಸಾಧಿಸಬೇಕಾದರೆ `ಆಧುನಿಕ ಪ್ರಪಂಚವನ್ನು~ ಅರಿತು ಅರ್ಥಮಾಡಿಕೊಂಡು ಅನುಸರಿಸುವುದೇ ಮಾರ್ಗವೆಂಬುದು 15 ನಿಮಿಷಗಳ ಕಾಲ ಮಾಡಿದ ಪ್ರಧಾನಿಯ ಭಾಷಣದ ಪ್ರಧಾನ ಅಂಶವಾಗಿತ್ತು.<br /> <br /> ಸುಮಾರು 12 ಲಕ್ಷ ರೂಪಾಯಿಗಳ ಖರ್ಚಿನಲ್ಲಿ ನಿರ್ಮಾಣವಾಗಿರುವ ಭವ್ಯ ಮ್ಯೂಸಿಯಂನ ಪಕ್ಕದಲ್ಲಿ ನಿರ್ಮಿತವಾಗಿದ್ದ ಭವ್ಯ ಚಪ್ಪರದಲ್ಲಿ ಆರಂಭೋತ್ಸವ ಸಮಾರಂಭ ನಡೆಯಿತು. ಸುಮಾರು 3 ಸಾವಿರ ಮಂದಿ ಆಹ್ವಾನಿತರು ಹಾಜರಿದ್ದರು.</p>.<p><strong>ರಷ್ಯದಲ್ಲಿ ಹತೋಟಿ ಕೇಂದ್ರ ಸ್ಥಾಪಿಸುವ ವಿಷಯವನ್ನು ತ್ಯಜಿಸಲು ಪಶ್ಚಿಮ ಸಿದ್ಧ?<br /> ಜಿನೀವ, ಜುಲೈ 14 - </strong>ಅಣು ಪ್ರಯೋಗ ನಿಷೇಧ ಉಸ್ತುವಾರಿಗೆ ರಷ್ಯದಲ್ಲಿ ಹತೋಟಿ ನೆಲೆಗಳನ್ನು ಸ್ಥಾಪಿಸಬೇಕೆಂಬ ತನ್ನ ಒತ್ತಾಯವನ್ನು ಪಶ್ಚಿಮವು ಕೈಬಿಡಬಹುದೆಂದು ಹದಿನೇಳು ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನದಲ್ಲಿನ ಅಮೆರಿಕದ ಪ್ರತಿನಿಧಿ ಆರ್ಥರ್ ಡೀನ್ ಇಂದು ಇಲ್ಲಿ ಸೂಚನೆ ಇತ್ತರು.<br /> <br /> ಸೋಮವಾರ ಪುನರಾರಂಭವಾಗಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ಡೀನ್ರಸ್ಕ್ ಜಿನೀವಾಕ್ಕೆ ವಾಪಸಾಗಿದ್ದಾರೆ. ಅಣು ಪ್ರಯೋಗ ನಿಶೇಧಕ್ಕೆ ಸಂಬಂಧಿಸಿದ ಈ ಪ್ರಮುಖ ಅಂಶವು ಸಂಧಾನದ ತೃಪ್ತಿಕರ ಪ್ರಗತಿಗೆ ಭಾರಿ ಆಶಾದಾಯಕ ಎನಿಸಿದೆ.<br /> <br /> ರಷ್ಯದಲ್ಲಿ ಹತೋಟಿ ನೆಲೆಗಳನ್ನು ಸ್ಥಾಪಿಸುವ ವಿಷಯದ ಬಗ್ಗೆ ಪ್ರಶ್ನಿಸಲು ರಷ್ಯದಲ್ಲಿ ಹತೋಟಿ ನೆಲೆಗಳನ್ನು ನಿರ್ಮಿಸುವುದೇ ಉತ್ತಮ. ಆದರೆ ಅದಕ್ಕೆ ರಷ್ಯ ಒಪ್ಪದಿದ್ದರೆ ಬೇರೊಂದು ವ್ಯವಸ್ಥೆಯನ್ನು ನಾವು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅದು ಅಷ್ಟು ಉತ್ತಮವಾಗಿರದು ಎಂದು ಡೀನ್ ನುಡಿದರು.<br /> <br /> ಅಣುಸ್ಫೋಟಗಳನ್ನು ಪತ್ತೆ ಹಚ್ಚುವ ವಿಧಾನಗಳನ್ನು ಉತ್ತಮಗೊಳಿಸುವುದು ಹಾಗೂ ಭೂಗರ್ಭ ಸ್ಪೋಟಗಳ ವಿಶ್ಲೇಷಣೆ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ವಿಜ್ಞಾನಿಗಳು ನಡೆಸಿರುವ ಕಾರ್ಯವನ್ನು ಅವರು ಪ್ರಸ್ತಾಪಿಸಿದರು. ಅವರುಗಳ ವರದಿ ಇನ್ನು 15 ದಿನಗಳಲ್ಲಿ ಸಿದ್ಧವಾಗುವುದೆಂದು ಅವರು ತಿಳಿಸಿದರು.</p>.<p><strong>ಆಸ್ಟ್ರಿಯಕ್ಕೆ ಖ್ರುಶ್ಚೋವ್ ಬೆದರಿಕೆ?</strong><br /> <strong>ಮಾಸ್ಕೊ, ಜುಲೈ 14 -</strong> ಆಸ್ಟ್ರಿಯವು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಿದರೆ ರಷ್ಯದ ಸೇನೆಗಳು ಆಸ್ಟ್ರಿಯದೊಳಕ್ಕೆ ನುಗ್ಗುವುದೆಂದು ರಷ್ಯದ ಪ್ರಧಾನ ಮಂತ್ರಿ ಖ್ರುಶ್ಚೋವ್ ಆಸ್ಟ್ರಿಯದ ಚಾನ್ಸೆಲರ್ ಡಾ. ಆಲ್ಫಾನ್ಸ್ ಗೋರ್ಚಾಚ್ರವರಿಗೆ ತಿಳಿಸಿದ್ದಾರೆಂದು ನಂಬಲರ್ಹ ಸೋವಿಯತ್ ವಲಯಗಳು ಇಂದು ಇಲ್ಲಿ ತಿಳಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>