<p><strong>ವಿಶ್ವಸಂಸ್ಥೆ ಪಡೆಗಳ ಸಹಾಯಕ್ಕೆ ಕಾಂಗೊ ಪಡೆ ಕಳಿಸಲು ಒತ್ತಾಯ<br /> ಲಿಯೊಫೋರ್ಡ್ವಿಲ್, ಸೆ.</strong> 17 - ಕಟಾಂಗದ ಅಧ್ಯಕ್ಷ ಫೋಂಬೆಯ ಯುದ್ಧ ಸ್ತಂಭನ ಮಾತುಕತೆಗಳಿಗೆ ಬದಲು ವಿಫಲವಾಗಿ ರುವುದರಿಂದ ಕೇಂದ್ರ ಕಾಂಗೊ ಸರ್ಕಾರದ ಬಳಿ ಇರುವ ಪಡೆಗಳನ್ನು ಕಟಾಂಗದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ಪಡೆಗಳಿಗೆ ಬೆಂಬಲ ಕೊಡಲು ಕಳುಹಿಸಬೇಕೆಂದು ಕಾಂಗೊ ಪಾರ್ಲಿಮೆಂಟು ಇಂದು ಒತ್ತಾಯ ಪಡಿಸಿದೆ.<br /> <br /> ಯುದ್ಧಸ್ತಂಭನ ಮಾತುಕತೆಗಳು ಇನ್ನೇನು ಆರಂಭ ವಾಗಲಿದೆಯೆಂದು ವಿಶ್ವರಾಷ್ಟ್ರ ಸಂಸ್ಥೆಯ ಮುಖ್ಯ ಪ್ರತಿನಿಧಿ ಡಾ. ಕಾನೂರ್ ಕ್ರೂಸ್ ಓಬ್ರಿಯರ್ರ ಸಹಾಯಕರೊಬ್ಬರು ವಿಶ್ವ ಸಂಸ್ಥೆ ಕೇಂದ್ರಕ್ಕೆ ಕಳೆದ ರಾತ್ರಿಯೇ ತಂತಿ ಕಳುಹಿಸಿದ್ದಾರೆಂದು ವಿಶ್ವರಾಷ್ಟ್ರ ಸಂಸ್ಥೆಯ ವಕ್ತಾರರು ಇಂದು ಇಲ್ಲಿ ತಿಳಿಸಿದರು.<br /> <br /> <strong>ಸಿಕ್ ಗುರುದ್ವಾರಗಳ ಮೇಲೆ ಮತ್ತೆ ಆಕ್ರಮಣ<br /> ಭಟಿಂಡ, ಸೆ. 17</strong> - ಫರೀದ್ಕೋಟೆ ಸಬ್ಡಿವಿಷನ್ನಿನ ಜೈತು ಮತ್ತು ಕೊಟ್ಟಾಪುರ ಎಂಬ ಪ್ರದೇಶಗಳಲ್ಲಿನ ಎರಡು ಸಿಕ್ ಗುರುದ್ವಾರಗಳ ಮೇಲೆ ಇಂದು ಬೆಳಿಗ್ಗೆ ಪೊಲೀಸರು ಆಕ್ರಮಣ ನಡೆಸಿ ತಲೆತಪ್ಪಿಸಿ ಕೊಂಡಿದ್ದವರೆಂದು ಹೇಳಲಾದ ದರ್ಶನ್ ಸಿಂಗ್ ಮತ್ತು ದಯಾಲ್ ಸಿಂಗ್ ಪರ್ವಾನ ಎಂಬಿಬ್ಬರನ್ನು ದಸ್ತಗಿರಿ ಮಾಡಿದರು.<br /> ನಿನ್ನೆ ದಿನ ಕಪೂರ್ತಲದ ಎರಡು ಗುರುದ್ವಾರಗಳ ಮೇಲೆ ಪೊಲೀಸರು ಆಕ್ರಮಣ ನಡೆಸಿ, ಭರ್ಜಿಯನ್ನು ಹೊಂದಿದ್ದ ಅಪರಾಧದ ಮೇಲೆ ದೇವಾಲಯದ ಅರ್ಚಕರನ್ನೂ, ಗಸಗಸೆ ಕಾಯಿಗಳನ್ನು ಹೊಂದಿದ್ದಕ್ಕಾಗಿ ಮತ್ತೊಬ್ಬನನ್ನೂ ದಸ್ತಗಿರಿ ಮಾಡಿದರು.<br /> <br /> <strong>ನಿದ್ರಾ ರಹಿತ ತಾರಾಸಿಂಗ್<br /> ಅಮೃತಸರ, ಸೆ. 17 </strong>- ಮಾಸ್ಟರ್ ತಾರಾಸಿಂಗ್ರು ನಿನ್ನೆ ಇಡೀ ರಾತ್ರಿ ಆಯಾಸದಿಂದಿದ್ದರೆಂದೂ, ನಿದ್ದೆ ಹೋಗಲಿಲ್ಲ ವೆಂದೂ ಅವರ ಉಪವಾಸದ 33ನೇ ದಿನವಾದ ಇಂದು ಬೆಳಿಗ್ಗೆ ಹೊರಟ ವೈದ್ಯರ ಪ್ರಕಟಣೆ ತಿಳಿಸಿದೆ.<br /> <br /> ಅವರಿಗೆ ನಿಶ್ಯಕ್ತಿ ಹೆಚ್ಚಿದೆಯೆಂದು ಇಂದು ಬೆಳಿಗ್ಗೆ ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದರು. ಮೂಲವ್ಯಾಧಿಯ ಕಾರಣ ರಕ್ತಸ್ರಾವವು ಇನ್ನೂ ಆಗುತ್ತಿದ್ದರೂ ನಿನ್ನೆಗಿಂತ ಕಡಿಮೆಯಾಗಿ ದೆಯೆಂದೂ ಪ್ರಕಟಣೆ ಹೇಳಿದೆ.<br /> <br /> <strong>ಗಂಗಾನದಿಯಲ್ಲಿ ಪ್ರವಾಹ ಏರಿಕೆ<br /> ಲಕ್ನೊ, ಸೆ. 17 </strong>- ವಾರಣಾಸಿ, ಅಲಹಾಬಾದ್, ಫಾಜಪೂರ್ ಮತ್ತು ಬಲ್ಲಯಾ ಮೂಲಕ ಹರಿಯುತ್ತಿರುವ ಗಂಗಾ ನದಿಯಲ್ಲಿ ಪುನಃ ಪ್ರವಾಹ ಏರುತ್ತಿದೆಯೆಂದು ಉತ್ತರ ಪ್ರದೇಶ್ ಸರ್ಕಾರಿ ಮೂಲಗಳಿಗೆ ಬಂದಿರುವ ವರದಿಗಳು ತಿಳಿಸುತ್ತವೆ. ಶನಿವಾರ ಕಾಶಿ ಬಳಿ ಗಂಗಾ ನದಿಯಲ್ಲಿ ಪ್ರವಾಹ ಅಪಾಯ ಮಟ್ಟಕ್ಕಿಂತ ಮೂರು ಅಡಿ ಹೆಚ್ಚಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ ಪಡೆಗಳ ಸಹಾಯಕ್ಕೆ ಕಾಂಗೊ ಪಡೆ ಕಳಿಸಲು ಒತ್ತಾಯ<br /> ಲಿಯೊಫೋರ್ಡ್ವಿಲ್, ಸೆ.</strong> 17 - ಕಟಾಂಗದ ಅಧ್ಯಕ್ಷ ಫೋಂಬೆಯ ಯುದ್ಧ ಸ್ತಂಭನ ಮಾತುಕತೆಗಳಿಗೆ ಬದಲು ವಿಫಲವಾಗಿ ರುವುದರಿಂದ ಕೇಂದ್ರ ಕಾಂಗೊ ಸರ್ಕಾರದ ಬಳಿ ಇರುವ ಪಡೆಗಳನ್ನು ಕಟಾಂಗದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ಪಡೆಗಳಿಗೆ ಬೆಂಬಲ ಕೊಡಲು ಕಳುಹಿಸಬೇಕೆಂದು ಕಾಂಗೊ ಪಾರ್ಲಿಮೆಂಟು ಇಂದು ಒತ್ತಾಯ ಪಡಿಸಿದೆ.<br /> <br /> ಯುದ್ಧಸ್ತಂಭನ ಮಾತುಕತೆಗಳು ಇನ್ನೇನು ಆರಂಭ ವಾಗಲಿದೆಯೆಂದು ವಿಶ್ವರಾಷ್ಟ್ರ ಸಂಸ್ಥೆಯ ಮುಖ್ಯ ಪ್ರತಿನಿಧಿ ಡಾ. ಕಾನೂರ್ ಕ್ರೂಸ್ ಓಬ್ರಿಯರ್ರ ಸಹಾಯಕರೊಬ್ಬರು ವಿಶ್ವ ಸಂಸ್ಥೆ ಕೇಂದ್ರಕ್ಕೆ ಕಳೆದ ರಾತ್ರಿಯೇ ತಂತಿ ಕಳುಹಿಸಿದ್ದಾರೆಂದು ವಿಶ್ವರಾಷ್ಟ್ರ ಸಂಸ್ಥೆಯ ವಕ್ತಾರರು ಇಂದು ಇಲ್ಲಿ ತಿಳಿಸಿದರು.<br /> <br /> <strong>ಸಿಕ್ ಗುರುದ್ವಾರಗಳ ಮೇಲೆ ಮತ್ತೆ ಆಕ್ರಮಣ<br /> ಭಟಿಂಡ, ಸೆ. 17</strong> - ಫರೀದ್ಕೋಟೆ ಸಬ್ಡಿವಿಷನ್ನಿನ ಜೈತು ಮತ್ತು ಕೊಟ್ಟಾಪುರ ಎಂಬ ಪ್ರದೇಶಗಳಲ್ಲಿನ ಎರಡು ಸಿಕ್ ಗುರುದ್ವಾರಗಳ ಮೇಲೆ ಇಂದು ಬೆಳಿಗ್ಗೆ ಪೊಲೀಸರು ಆಕ್ರಮಣ ನಡೆಸಿ ತಲೆತಪ್ಪಿಸಿ ಕೊಂಡಿದ್ದವರೆಂದು ಹೇಳಲಾದ ದರ್ಶನ್ ಸಿಂಗ್ ಮತ್ತು ದಯಾಲ್ ಸಿಂಗ್ ಪರ್ವಾನ ಎಂಬಿಬ್ಬರನ್ನು ದಸ್ತಗಿರಿ ಮಾಡಿದರು.<br /> ನಿನ್ನೆ ದಿನ ಕಪೂರ್ತಲದ ಎರಡು ಗುರುದ್ವಾರಗಳ ಮೇಲೆ ಪೊಲೀಸರು ಆಕ್ರಮಣ ನಡೆಸಿ, ಭರ್ಜಿಯನ್ನು ಹೊಂದಿದ್ದ ಅಪರಾಧದ ಮೇಲೆ ದೇವಾಲಯದ ಅರ್ಚಕರನ್ನೂ, ಗಸಗಸೆ ಕಾಯಿಗಳನ್ನು ಹೊಂದಿದ್ದಕ್ಕಾಗಿ ಮತ್ತೊಬ್ಬನನ್ನೂ ದಸ್ತಗಿರಿ ಮಾಡಿದರು.<br /> <br /> <strong>ನಿದ್ರಾ ರಹಿತ ತಾರಾಸಿಂಗ್<br /> ಅಮೃತಸರ, ಸೆ. 17 </strong>- ಮಾಸ್ಟರ್ ತಾರಾಸಿಂಗ್ರು ನಿನ್ನೆ ಇಡೀ ರಾತ್ರಿ ಆಯಾಸದಿಂದಿದ್ದರೆಂದೂ, ನಿದ್ದೆ ಹೋಗಲಿಲ್ಲ ವೆಂದೂ ಅವರ ಉಪವಾಸದ 33ನೇ ದಿನವಾದ ಇಂದು ಬೆಳಿಗ್ಗೆ ಹೊರಟ ವೈದ್ಯರ ಪ್ರಕಟಣೆ ತಿಳಿಸಿದೆ.<br /> <br /> ಅವರಿಗೆ ನಿಶ್ಯಕ್ತಿ ಹೆಚ್ಚಿದೆಯೆಂದು ಇಂದು ಬೆಳಿಗ್ಗೆ ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದರು. ಮೂಲವ್ಯಾಧಿಯ ಕಾರಣ ರಕ್ತಸ್ರಾವವು ಇನ್ನೂ ಆಗುತ್ತಿದ್ದರೂ ನಿನ್ನೆಗಿಂತ ಕಡಿಮೆಯಾಗಿ ದೆಯೆಂದೂ ಪ್ರಕಟಣೆ ಹೇಳಿದೆ.<br /> <br /> <strong>ಗಂಗಾನದಿಯಲ್ಲಿ ಪ್ರವಾಹ ಏರಿಕೆ<br /> ಲಕ್ನೊ, ಸೆ. 17 </strong>- ವಾರಣಾಸಿ, ಅಲಹಾಬಾದ್, ಫಾಜಪೂರ್ ಮತ್ತು ಬಲ್ಲಯಾ ಮೂಲಕ ಹರಿಯುತ್ತಿರುವ ಗಂಗಾ ನದಿಯಲ್ಲಿ ಪುನಃ ಪ್ರವಾಹ ಏರುತ್ತಿದೆಯೆಂದು ಉತ್ತರ ಪ್ರದೇಶ್ ಸರ್ಕಾರಿ ಮೂಲಗಳಿಗೆ ಬಂದಿರುವ ವರದಿಗಳು ತಿಳಿಸುತ್ತವೆ. ಶನಿವಾರ ಕಾಶಿ ಬಳಿ ಗಂಗಾ ನದಿಯಲ್ಲಿ ಪ್ರವಾಹ ಅಪಾಯ ಮಟ್ಟಕ್ಕಿಂತ ಮೂರು ಅಡಿ ಹೆಚ್ಚಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>