<p><strong>ಬೆಂಗಳೂರು: </strong>ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ವಿತರಿಸುವ `ಅಕ್ರಮ-ಸಕ್ರಮ~ ಕಾರ್ಯಕ್ರಮವನ್ನು ಮತ್ತೊಮ್ಮೆ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿದೆ.<br /> <br /> ರಾಜ್ಯದಲ್ಲಿ ಅನೇಕ ಜನರು ಸರ್ಕಾರಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಬಡವರು, ಹಿಂದುಳಿದ ವರ್ಗದವರಿದ್ದು ಅರ್ಹರಿಗೆ ಮನೆಗಳ ಮೇಲಿನ ಹಕ್ಕುಗಳನ್ನು ನೀಡುವ ಹಿತದೃಷ್ಟಿಯಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94-ಸಿ ಅಡಿಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಸಲುವಾಗಿ ತಿದ್ದುಪಡಿ ತರಲು ಸರ್ಕಾರವು ಉದ್ದೇಶಿಸಿದೆ. <br /> <br /> ಈ ತಿದ್ದುಪಡಿಯನ್ನು ತರುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಿ ಈಗಾಗಲೇ ಮನೆ ಅಥವಾ ನಿವೇಶನಗಳನ್ನು ಹೊಂದಿರುವವರಿಗೆ ಹೊಸದಾಗಿ ಜಮೀನು ಮಂಜೂರು ಮಾಡದೇ ಅವಶ್ಯಕತೆಗೆ ಅನುಸಾರವಾಗಿ ಅರ್ಹರಿಗೆ ಮಾತ್ರ ಅವರ ವಾಸದ ಮನೆಯಡಿ ಸ್ಥಳವನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗುವುದು. <br /> <br /> * 4 ನಗರಗಳಲ್ಲಿ ನಗರ ಸ್ವತ್ತು ಮಾಲೀಕತ್ವದ ದಾಖಲೆಗಳ ಕ್ರಾಂತಿಕಾರಿ ಅನುಷ್ಠಾನ ಪ್ರಕ್ರಿಯೆ 9 ತಿಂಗಳಲ್ಲಿ ಪೂರ್ಣ.<br /> <br /> * 2012-13ನೇ ಸಾಲಿನಲ್ಲಿ ಬೆಂಗಳೂರು ನಗರದ 50 ವಾರ್ಡುಗಳಲ್ಲಿ ಮೊದಲ ಹಂತದಲ್ಲಿ ಅನುಷ್ಠಾನ.<br /> <br /> * ಯಾವುದೇ ಭಾಗದಲ್ಲಿ ಭೂಮಿಯನ್ನು ನೋಂದಣಿ ಮಾಡಿಸುವ ವ್ಯವಸ್ಥೆ ಸದ್ಯ ಬೆಂಗಳೂರಿನಲ್ಲಿ ಜಾರಿಯಲ್ಲಿದ್ದು, ಎಲ್ಲ ಜಿಲ್ಲೆಗಳಿಗೂ ಇದರ ವಿಸ್ತರಣೆ.<br /> <br /> * 2012-13ನೇ ಸಾಲಿನಲ್ಲಿ ನೋಂದಣಿ ಮಾಡಿಸುವ ಪ್ರತಿ ದಸ್ತಾವೇಜಿನ ಭಾಗವಾಗಿ ಏಕ ರೀತಿ ಇಂಡೆಕ್ಸ್ ಹಾಳೆಯನ್ನು ಕಡ್ಡಾಯಗೊಳಿಸುವುದರ ಮೂಲಕ ನೋಂದಣಿ ಪ್ರಕ್ರಿಯೆಯಲ್ಲಿ ಮತ್ತಷ್ಟು ಸುಧಾರಣೆ.<br /> <br /> * 2012-13ನೇ ಸಾಲಿನಲ್ಲಿ ಭೂಮಿ, ಕಾವೇರಿ ಮತ್ತು ಮೋಜಣಿ ವ್ಯವಸ್ಥೆಗಳ ನಡುವೆ ಸಂಪೂರ್ಣ<br /> ವಿದ್ಯುನ್ಮಾನ ಸಂಯೋಜನೆ.<br /> <br /> * ಸರ್ಕಾರಿ ಭೂಮಿಗಳನ್ನು ರಕ್ಷಿಸಲು ಕರ್ನಾಟಕ ಸಾರ್ವಜನಿಕ ಭೂಮಿ ನಿಗಮಕ್ಕೆ 10 ಕೋಟಿ ರೂಪಾಯಿ.<br /> <br /> <strong>ಮುಜರಾಯಿ ಇಲಾಖೆ<br /> </strong>* ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂಪಾಯಿ. <br /> <br /> * ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ 2 ಕೋಟಿ ರೂಪಾಯಿ.<br /> <br /> * ತಿಪಟೂರು ತಾಲ್ಲೂಕಿನ ಶ್ರಿ ಕಾಡಸಿದ್ಧೇಶ್ವರ ಶ್ರಿ ಮಠಕ್ಕೆ 1 ಕೋಟಿ ರೂಪಾಯಿ . <br /> <br /> * ಬೆಂಗಳೂರಿನ ಕೆಂಗೇರಿ ಬಳಿ ಇರುವ ರಾಮೋಹಳ್ಳಿಯಲ್ಲಿ ಸ್ಥಾಪಿಸಲಿರುವ ತರಬೇತಿ ಹಾಗೂ ಸಂಶೋಧನಾ ಕೇಂದ್ರಕ್ಕಾಗಿ ಶ್ರಿಸಿದ್ದಾರೂಢ ಮಿಷನ್ಗೆ 1 ಕೋಟಿ ರೂಪಾಯಿ.<br /> <br /> * ಹೊರ ರಾಜ್ಯದ ಛತ್ರಗಳ ನಿರ್ವಹಣೆಗಾಗಿ 10 ಕೋಟಿ ರೂಪಾಯಿ.<br /> <br /> * ರುದ್ರಭೂಮಿ ನಿರ್ವಹಣೆಗಾಗಿ 10 ಕೋಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ವಿತರಿಸುವ `ಅಕ್ರಮ-ಸಕ್ರಮ~ ಕಾರ್ಯಕ್ರಮವನ್ನು ಮತ್ತೊಮ್ಮೆ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿದೆ.<br /> <br /> ರಾಜ್ಯದಲ್ಲಿ ಅನೇಕ ಜನರು ಸರ್ಕಾರಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಬಡವರು, ಹಿಂದುಳಿದ ವರ್ಗದವರಿದ್ದು ಅರ್ಹರಿಗೆ ಮನೆಗಳ ಮೇಲಿನ ಹಕ್ಕುಗಳನ್ನು ನೀಡುವ ಹಿತದೃಷ್ಟಿಯಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94-ಸಿ ಅಡಿಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಸಲುವಾಗಿ ತಿದ್ದುಪಡಿ ತರಲು ಸರ್ಕಾರವು ಉದ್ದೇಶಿಸಿದೆ. <br /> <br /> ಈ ತಿದ್ದುಪಡಿಯನ್ನು ತರುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಿ ಈಗಾಗಲೇ ಮನೆ ಅಥವಾ ನಿವೇಶನಗಳನ್ನು ಹೊಂದಿರುವವರಿಗೆ ಹೊಸದಾಗಿ ಜಮೀನು ಮಂಜೂರು ಮಾಡದೇ ಅವಶ್ಯಕತೆಗೆ ಅನುಸಾರವಾಗಿ ಅರ್ಹರಿಗೆ ಮಾತ್ರ ಅವರ ವಾಸದ ಮನೆಯಡಿ ಸ್ಥಳವನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗುವುದು. <br /> <br /> * 4 ನಗರಗಳಲ್ಲಿ ನಗರ ಸ್ವತ್ತು ಮಾಲೀಕತ್ವದ ದಾಖಲೆಗಳ ಕ್ರಾಂತಿಕಾರಿ ಅನುಷ್ಠಾನ ಪ್ರಕ್ರಿಯೆ 9 ತಿಂಗಳಲ್ಲಿ ಪೂರ್ಣ.<br /> <br /> * 2012-13ನೇ ಸಾಲಿನಲ್ಲಿ ಬೆಂಗಳೂರು ನಗರದ 50 ವಾರ್ಡುಗಳಲ್ಲಿ ಮೊದಲ ಹಂತದಲ್ಲಿ ಅನುಷ್ಠಾನ.<br /> <br /> * ಯಾವುದೇ ಭಾಗದಲ್ಲಿ ಭೂಮಿಯನ್ನು ನೋಂದಣಿ ಮಾಡಿಸುವ ವ್ಯವಸ್ಥೆ ಸದ್ಯ ಬೆಂಗಳೂರಿನಲ್ಲಿ ಜಾರಿಯಲ್ಲಿದ್ದು, ಎಲ್ಲ ಜಿಲ್ಲೆಗಳಿಗೂ ಇದರ ವಿಸ್ತರಣೆ.<br /> <br /> * 2012-13ನೇ ಸಾಲಿನಲ್ಲಿ ನೋಂದಣಿ ಮಾಡಿಸುವ ಪ್ರತಿ ದಸ್ತಾವೇಜಿನ ಭಾಗವಾಗಿ ಏಕ ರೀತಿ ಇಂಡೆಕ್ಸ್ ಹಾಳೆಯನ್ನು ಕಡ್ಡಾಯಗೊಳಿಸುವುದರ ಮೂಲಕ ನೋಂದಣಿ ಪ್ರಕ್ರಿಯೆಯಲ್ಲಿ ಮತ್ತಷ್ಟು ಸುಧಾರಣೆ.<br /> <br /> * 2012-13ನೇ ಸಾಲಿನಲ್ಲಿ ಭೂಮಿ, ಕಾವೇರಿ ಮತ್ತು ಮೋಜಣಿ ವ್ಯವಸ್ಥೆಗಳ ನಡುವೆ ಸಂಪೂರ್ಣ<br /> ವಿದ್ಯುನ್ಮಾನ ಸಂಯೋಜನೆ.<br /> <br /> * ಸರ್ಕಾರಿ ಭೂಮಿಗಳನ್ನು ರಕ್ಷಿಸಲು ಕರ್ನಾಟಕ ಸಾರ್ವಜನಿಕ ಭೂಮಿ ನಿಗಮಕ್ಕೆ 10 ಕೋಟಿ ರೂಪಾಯಿ.<br /> <br /> <strong>ಮುಜರಾಯಿ ಇಲಾಖೆ<br /> </strong>* ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂಪಾಯಿ. <br /> <br /> * ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ 2 ಕೋಟಿ ರೂಪಾಯಿ.<br /> <br /> * ತಿಪಟೂರು ತಾಲ್ಲೂಕಿನ ಶ್ರಿ ಕಾಡಸಿದ್ಧೇಶ್ವರ ಶ್ರಿ ಮಠಕ್ಕೆ 1 ಕೋಟಿ ರೂಪಾಯಿ . <br /> <br /> * ಬೆಂಗಳೂರಿನ ಕೆಂಗೇರಿ ಬಳಿ ಇರುವ ರಾಮೋಹಳ್ಳಿಯಲ್ಲಿ ಸ್ಥಾಪಿಸಲಿರುವ ತರಬೇತಿ ಹಾಗೂ ಸಂಶೋಧನಾ ಕೇಂದ್ರಕ್ಕಾಗಿ ಶ್ರಿಸಿದ್ದಾರೂಢ ಮಿಷನ್ಗೆ 1 ಕೋಟಿ ರೂಪಾಯಿ.<br /> <br /> * ಹೊರ ರಾಜ್ಯದ ಛತ್ರಗಳ ನಿರ್ವಹಣೆಗಾಗಿ 10 ಕೋಟಿ ರೂಪಾಯಿ.<br /> <br /> * ರುದ್ರಭೂಮಿ ನಿರ್ವಹಣೆಗಾಗಿ 10 ಕೋಟಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>