<p><strong>ನವದೆಹಲಿ (ಪಿಟಿಐ): </strong>ಖನಿಜ ಸಂಪತ್ತಿನ ಮಾಲೀಕತ್ವ ಆಯಾ ನೆಲದ ಒಡೆಯನ ವಶದಲ್ಲಿ ಇರಲಿದೆಯೇ ಹೊರತು ಸರ್ಕಾರದ ಸ್ವಾಧೀನದಲ್ಲಿ ಅಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.<br /> <br /> ನ್ಯಾ.ಆರ್.ಎಂ. ಲೋಧಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು, ದೇಶದಲ್ಲಿನ ಖನಿಜ ಸಂಪತ್ತು ಸರ್ಕಾರದ ಆಸ್ತಿ ಎಂಬ ಕಾನೂನೇನೂ ಇಲ್ಲ ಎಂದು ಹೇಳಿದೆ.<br /> <br /> ಖನಿಜ ಸಂಪತ್ತು ಸರ್ಕಾರದ ಆಸ್ತಿ ಎಂದು ಕೇರಳದ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಕೇರಳದ ಕೆಲವು ಭೂಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಆದೇಶ ಜಾರಿ ಮಾಡಿದೆ.<br /> <br /> `ಖನಿಜ ಸಂಪತ್ತಿನ ಒಡೆತನ ಸರ್ಕಾರಕ್ಕೆ ಸೇರಬೇಕು ಎಂದು ಹೇಳುವಂತಹ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಆ ಸಂಪತ್ತು ಆಯಾ ಭೂಮಿಯ ಮಾಲೀಕನ ಒಡೆತನಕ್ಕೆ ಸೇರುತ್ತದೆ. ಕೆಲವೊಂದು ಪ್ರಕ್ರಿಯೆಗಳ ಮೂಲಕ ಆ ಭೂಮಿಯನ್ನು ಮಾಲೀಕನಿಂದ ಸ್ವಾಧೀನಪಡಿಸಿಕೊಂಡಿದ್ದರೆ ಮಾತ್ರ ಆ ಸಂಪತ್ತಿನ ಒಡೆತನ ಆತನಿಗೆ ಇರುವುದಿಲ್ಲ' ಎಂದೂ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.<br /> <br /> ಅಧಿಕೃತ ಪರವಾನಗಿ ಅಥವಾ ಗುತ್ತಿಗೆ ಪಡೆಯದೇ ಯಾವುದೇ ಗಣಿಗಾರಿಕೆ ನಡೆಸಲು ನಿರ್ಬಂಧಿಸುವ ಗಣಿ ಮತ್ತು ಖನಿಜಗಳ ಕಾಯ್ದೆ (ಅಭಿವೃದ್ಧಿ ಮತ್ತು ನಿಯಂತ್ರಣ) - 1957ರ 425ನೇ ವಿಭಾಗದ ಅನ್ವಯ, ಮಾಲೀಕನೊಬ್ಬ ತನ್ನ ಜಮೀನಿನಲ್ಲಿನ ಸಂಪನ್ಮೂಲಗಳ ಮೇಲೆ ಸ್ವಾಮ್ಯತೆ ಹಕ್ಕು ಪ್ರತಿಪಾದಿಸುವಂತಿಲ್ಲ ಎಂಬ ವಾದವನ್ನು ನ್ಯಾಯಪೀಠ ತಳ್ಳಿಹಾಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಖನಿಜ ಸಂಪತ್ತಿನ ಮಾಲೀಕತ್ವ ಆಯಾ ನೆಲದ ಒಡೆಯನ ವಶದಲ್ಲಿ ಇರಲಿದೆಯೇ ಹೊರತು ಸರ್ಕಾರದ ಸ್ವಾಧೀನದಲ್ಲಿ ಅಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.<br /> <br /> ನ್ಯಾ.ಆರ್.ಎಂ. ಲೋಧಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು, ದೇಶದಲ್ಲಿನ ಖನಿಜ ಸಂಪತ್ತು ಸರ್ಕಾರದ ಆಸ್ತಿ ಎಂಬ ಕಾನೂನೇನೂ ಇಲ್ಲ ಎಂದು ಹೇಳಿದೆ.<br /> <br /> ಖನಿಜ ಸಂಪತ್ತು ಸರ್ಕಾರದ ಆಸ್ತಿ ಎಂದು ಕೇರಳದ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಕೇರಳದ ಕೆಲವು ಭೂಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಆದೇಶ ಜಾರಿ ಮಾಡಿದೆ.<br /> <br /> `ಖನಿಜ ಸಂಪತ್ತಿನ ಒಡೆತನ ಸರ್ಕಾರಕ್ಕೆ ಸೇರಬೇಕು ಎಂದು ಹೇಳುವಂತಹ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಆ ಸಂಪತ್ತು ಆಯಾ ಭೂಮಿಯ ಮಾಲೀಕನ ಒಡೆತನಕ್ಕೆ ಸೇರುತ್ತದೆ. ಕೆಲವೊಂದು ಪ್ರಕ್ರಿಯೆಗಳ ಮೂಲಕ ಆ ಭೂಮಿಯನ್ನು ಮಾಲೀಕನಿಂದ ಸ್ವಾಧೀನಪಡಿಸಿಕೊಂಡಿದ್ದರೆ ಮಾತ್ರ ಆ ಸಂಪತ್ತಿನ ಒಡೆತನ ಆತನಿಗೆ ಇರುವುದಿಲ್ಲ' ಎಂದೂ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.<br /> <br /> ಅಧಿಕೃತ ಪರವಾನಗಿ ಅಥವಾ ಗುತ್ತಿಗೆ ಪಡೆಯದೇ ಯಾವುದೇ ಗಣಿಗಾರಿಕೆ ನಡೆಸಲು ನಿರ್ಬಂಧಿಸುವ ಗಣಿ ಮತ್ತು ಖನಿಜಗಳ ಕಾಯ್ದೆ (ಅಭಿವೃದ್ಧಿ ಮತ್ತು ನಿಯಂತ್ರಣ) - 1957ರ 425ನೇ ವಿಭಾಗದ ಅನ್ವಯ, ಮಾಲೀಕನೊಬ್ಬ ತನ್ನ ಜಮೀನಿನಲ್ಲಿನ ಸಂಪನ್ಮೂಲಗಳ ಮೇಲೆ ಸ್ವಾಮ್ಯತೆ ಹಕ್ಕು ಪ್ರತಿಪಾದಿಸುವಂತಿಲ್ಲ ಎಂಬ ವಾದವನ್ನು ನ್ಯಾಯಪೀಠ ತಳ್ಳಿಹಾಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>