<p><strong>ಮೈಸೂರು:</strong> `ಈ ಬಾರಿಯ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಉದ್ಘಾಟಿಸುವರು. ಅವರಿಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಆಹ್ವಾನ ನೀಡಲಾಗುವುದು~ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.<br /> <br /> `ಬೆಂಗಳೂರಿನಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ದಸರಾ ಕಾರ್ಯಕ್ರಮಗಳ ಪಟ್ಟಿಯನ್ನು ಶೀಘ್ರವೇ ಅಂತರಜಾಲದಲ್ಲಿ ಪ್ರಕಟಿಸಲಾಗುವುದು~ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ತಿಳಿಸಿದರು.<br /> <br /> `ರಾಜ್ಯದ 150 ಕ್ಕೂ ಹೆಚ್ಚು ತಾಲ್ಲೂಕುಗಳು ಭೀಕರ ಬರ ಎದುರಿಸುತ್ತಿರುವುದರಿಂದ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸರಳ, ಅದ್ದೂರಿ ಎನ್ನುವುದಕ್ಕಿಂತ ಸಾಂಪ್ರದಾಯಿಕವಾಗಿ ನಡೆಯಲಿದೆ.<br /> <br /> ಆಯಾ ಜಿಲ್ಲೆಯ ಸಂಪ್ರದಾಯ, ಕಲೆ, ಸಾಹಿತ್ಯವನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಜಂಬೂ ಸವಾರಿಗೂ ಮುನ್ನ ಅರಮನೆ ಅಂಗಳದಲ್ಲಿ ಪ್ರದರ್ಶಿತವಾಗಲಿವೆ. ಈ ಬಾರಿಯ ದಸರಾದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದಾಗ್ಯೂ, ಯುವ ದಸರಾವನ್ನು ಕೈಬಿಡಲಾಗುತ್ತಿದೆ~ ಎಂದರು.<br /> <br /> <strong>ಗಜ ಪಯಣ:</strong> ಸೆ. 7ರಂದು ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ. ಸೆ. 10 ರಂದು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಅರಮನೆ ಅಂಗಳದಲ್ಲಿ ಎಲ್ಲ ಆನೆಗಳನ್ನೂ ಬರಮಾಡಿಕೊಳ್ಳಲಾಗುವುದು. ಮೊದಲ ತಂಡದಲ್ಲಿ ಆರು ಆನೆಗಳು ನಗರಕ್ಕೆ ಆಗಮಿಸಲಿವೆ. ಎರಡನೇ ತಂಡದಲ್ಲಿ ಮತ್ತೆ ಆರು ಆನೆಗಳು ಬರಲಿವೆ. ಎರಡನೇ ತಂಡದ ಆನೆಗಳು ಹೊರಡುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ~ ಎಂದು ತಿಳಿಸಿದರು.<br /> <br /> `ತಿತಿಮತಿ ಆನೆ ಶಿಬಿರದಿಂದ ಆನೆಗಳಾದ ಬಲರಾಮ (54), ಅಭಿಮನ್ಯು (46), ಬಳ್ಳೆ ಶಿಬಿರದಿಂದ ಅರ್ಜುನ (52), ಕೆ.ಗುಡಿಯಿಂದ ಗಜೇಂದ್ರ (57), ಬಂಡೀಪುರದಿಂದ ಕಾಂತಿ (72), ದುಬಾರೆ ಶಿಬಿರದಿಂದ ವಿಜಯ್ (55) ಮೊದಲ ತಂಡದಲ್ಲಿ ಅರಮನೆ ಅಂಗಳಕ್ಕೆ ಕಾಲಿಡಲಿವೆ. ಈ ಬಾರಿಯೂ ಬಲರಾಮನೇ ಅಂಬಾರಿ ಹೊರಲಿದ್ದು, ಜಂಬೂ ಸವಾರಿ ನೇತೃತ್ವ ವಹಿಸುವುದು ಬಹುತೇಕ ಖಚಿತವಾಗಿದೆ~ ಎಂದರು.<br /> <strong><br /> ಅ.16ರಿಂದ 24ರವರೆಗೆ ದಸರ</strong><br /> ಅ. 16 ರಿಂದ 24ರ ವರೆಗೆ ನಾಡಹಬ್ಬ ನಡೆಯಲಿದ್ದು, ಮೊದಲ ದಿನ ಮಧ್ಯಾಹ್ನ 12.30 ಗಂಟೆಗೆ ಭೈರಪ್ಪ ಅವರು ದಸರೆಗೆ ಚಾಲನೆ ನೀಡುವರು. ಅ. 24ರಂದು ಆಕರ್ಷಕ ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> `ಈ ಬಾರಿಯ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಉದ್ಘಾಟಿಸುವರು. ಅವರಿಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಆಹ್ವಾನ ನೀಡಲಾಗುವುದು~ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.<br /> <br /> `ಬೆಂಗಳೂರಿನಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ದಸರಾ ಕಾರ್ಯಕ್ರಮಗಳ ಪಟ್ಟಿಯನ್ನು ಶೀಘ್ರವೇ ಅಂತರಜಾಲದಲ್ಲಿ ಪ್ರಕಟಿಸಲಾಗುವುದು~ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ತಿಳಿಸಿದರು.<br /> <br /> `ರಾಜ್ಯದ 150 ಕ್ಕೂ ಹೆಚ್ಚು ತಾಲ್ಲೂಕುಗಳು ಭೀಕರ ಬರ ಎದುರಿಸುತ್ತಿರುವುದರಿಂದ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸರಳ, ಅದ್ದೂರಿ ಎನ್ನುವುದಕ್ಕಿಂತ ಸಾಂಪ್ರದಾಯಿಕವಾಗಿ ನಡೆಯಲಿದೆ.<br /> <br /> ಆಯಾ ಜಿಲ್ಲೆಯ ಸಂಪ್ರದಾಯ, ಕಲೆ, ಸಾಹಿತ್ಯವನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಜಂಬೂ ಸವಾರಿಗೂ ಮುನ್ನ ಅರಮನೆ ಅಂಗಳದಲ್ಲಿ ಪ್ರದರ್ಶಿತವಾಗಲಿವೆ. ಈ ಬಾರಿಯ ದಸರಾದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದಾಗ್ಯೂ, ಯುವ ದಸರಾವನ್ನು ಕೈಬಿಡಲಾಗುತ್ತಿದೆ~ ಎಂದರು.<br /> <br /> <strong>ಗಜ ಪಯಣ:</strong> ಸೆ. 7ರಂದು ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ. ಸೆ. 10 ರಂದು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಅರಮನೆ ಅಂಗಳದಲ್ಲಿ ಎಲ್ಲ ಆನೆಗಳನ್ನೂ ಬರಮಾಡಿಕೊಳ್ಳಲಾಗುವುದು. ಮೊದಲ ತಂಡದಲ್ಲಿ ಆರು ಆನೆಗಳು ನಗರಕ್ಕೆ ಆಗಮಿಸಲಿವೆ. ಎರಡನೇ ತಂಡದಲ್ಲಿ ಮತ್ತೆ ಆರು ಆನೆಗಳು ಬರಲಿವೆ. ಎರಡನೇ ತಂಡದ ಆನೆಗಳು ಹೊರಡುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ~ ಎಂದು ತಿಳಿಸಿದರು.<br /> <br /> `ತಿತಿಮತಿ ಆನೆ ಶಿಬಿರದಿಂದ ಆನೆಗಳಾದ ಬಲರಾಮ (54), ಅಭಿಮನ್ಯು (46), ಬಳ್ಳೆ ಶಿಬಿರದಿಂದ ಅರ್ಜುನ (52), ಕೆ.ಗುಡಿಯಿಂದ ಗಜೇಂದ್ರ (57), ಬಂಡೀಪುರದಿಂದ ಕಾಂತಿ (72), ದುಬಾರೆ ಶಿಬಿರದಿಂದ ವಿಜಯ್ (55) ಮೊದಲ ತಂಡದಲ್ಲಿ ಅರಮನೆ ಅಂಗಳಕ್ಕೆ ಕಾಲಿಡಲಿವೆ. ಈ ಬಾರಿಯೂ ಬಲರಾಮನೇ ಅಂಬಾರಿ ಹೊರಲಿದ್ದು, ಜಂಬೂ ಸವಾರಿ ನೇತೃತ್ವ ವಹಿಸುವುದು ಬಹುತೇಕ ಖಚಿತವಾಗಿದೆ~ ಎಂದರು.<br /> <strong><br /> ಅ.16ರಿಂದ 24ರವರೆಗೆ ದಸರ</strong><br /> ಅ. 16 ರಿಂದ 24ರ ವರೆಗೆ ನಾಡಹಬ್ಬ ನಡೆಯಲಿದ್ದು, ಮೊದಲ ದಿನ ಮಧ್ಯಾಹ್ನ 12.30 ಗಂಟೆಗೆ ಭೈರಪ್ಪ ಅವರು ದಸರೆಗೆ ಚಾಲನೆ ನೀಡುವರು. ಅ. 24ರಂದು ಆಕರ್ಷಕ ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>