<p><strong>ಅಧಿವೇಶನ ಆರಂಭ</strong><br /> ಮಾಸ್ಕೊ, ಅ. 17 - ಸೋವಿಯತ್ ಕಮ್ಯುನಿಸ್ಟ್ ಪಾರ್ಟಿಯ 22ನೇ ಅಧಿವೇಶನವು ಇಂದು ಆರಂಭವಾಯಿತು. ಪ್ರತಿನಿಧಿಗಳ ಪೈಕಿ ಮಾಜಿ ಪ್ರಧಾನಿ ಬುಲ್ಗಾನಿನ್ ಸಹಾ ಇದ್ದರು. <br /> <br /> ಪ್ರಧಾನ ಮಂತ್ರಿಯೂ, ಪಕ್ಷದ ಪ್ರಥಮ ಕಾರ್ಯದರ್ಶಿಯೂ ಆದ ನಿಕಿಟಾ ಖ್ರುಶ್ಚೋವ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶಕ್ಕೆ ಆಲ್ಬೇನಿಯದಿಂದ ನಿಯೋಗ ಬಂದಿಲ್ಲವೆಂಬುದನ್ನು ವೀಕ್ಷಕರು ಗಮನಿಸಿದರು.<br /> <br /> <strong>`ಪಕ್ಷಪಾತ ನಡೆದಿದೆಯೆಂದು ತಿಳಿಯದು~</strong><br /> ಬೆಂಗಳೂರು, ಅ. 17 - ಮಂಡಲ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಿಫಾರಸು ಮಾಡುವುದರಲ್ಲಿ ಏಕಪಕ್ಷೀಯವಾದ ಭೇದ ನಡೆದಿದೆ ಎಂಬುದು ತಮಗೆ ತಿಳಿಯದೆಂದು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು. <br /> <br /> `ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಏನೇ ಹೇಳಿರಲಿ ಕಡೆಯ ಪಕ್ಷ ಮುಂದಿನ ವ್ಯವಸ್ಥೆಯಲ್ಲಾದರೂ (ಸರ್ಕಾರ) ಗುಂಪು ಹಾಗೂ ಪಕ್ಷಗಳು ಇಲ್ಲದಂತಾಗಬೇಕೆಂಬದು ನನ್ನ ಸ್ಪಷ್ಟ ನಿಲುವು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಧಿವೇಶನ ಆರಂಭ</strong><br /> ಮಾಸ್ಕೊ, ಅ. 17 - ಸೋವಿಯತ್ ಕಮ್ಯುನಿಸ್ಟ್ ಪಾರ್ಟಿಯ 22ನೇ ಅಧಿವೇಶನವು ಇಂದು ಆರಂಭವಾಯಿತು. ಪ್ರತಿನಿಧಿಗಳ ಪೈಕಿ ಮಾಜಿ ಪ್ರಧಾನಿ ಬುಲ್ಗಾನಿನ್ ಸಹಾ ಇದ್ದರು. <br /> <br /> ಪ್ರಧಾನ ಮಂತ್ರಿಯೂ, ಪಕ್ಷದ ಪ್ರಥಮ ಕಾರ್ಯದರ್ಶಿಯೂ ಆದ ನಿಕಿಟಾ ಖ್ರುಶ್ಚೋವ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶಕ್ಕೆ ಆಲ್ಬೇನಿಯದಿಂದ ನಿಯೋಗ ಬಂದಿಲ್ಲವೆಂಬುದನ್ನು ವೀಕ್ಷಕರು ಗಮನಿಸಿದರು.<br /> <br /> <strong>`ಪಕ್ಷಪಾತ ನಡೆದಿದೆಯೆಂದು ತಿಳಿಯದು~</strong><br /> ಬೆಂಗಳೂರು, ಅ. 17 - ಮಂಡಲ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಿಫಾರಸು ಮಾಡುವುದರಲ್ಲಿ ಏಕಪಕ್ಷೀಯವಾದ ಭೇದ ನಡೆದಿದೆ ಎಂಬುದು ತಮಗೆ ತಿಳಿಯದೆಂದು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು. <br /> <br /> `ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಏನೇ ಹೇಳಿರಲಿ ಕಡೆಯ ಪಕ್ಷ ಮುಂದಿನ ವ್ಯವಸ್ಥೆಯಲ್ಲಾದರೂ (ಸರ್ಕಾರ) ಗುಂಪು ಹಾಗೂ ಪಕ್ಷಗಳು ಇಲ್ಲದಂತಾಗಬೇಕೆಂಬದು ನನ್ನ ಸ್ಪಷ್ಟ ನಿಲುವು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>