<p><strong>ಮುಳಬಾಗಲು:</strong> ಬಹುಮುಖ ಪ್ರತಿಭೆ ಮಂಜು ಕನ್ನಿಕಾ ಅವರ `ಗೆಜ್ಜೆ ನನ್ನದು ನೃತ್ಯ ನಿನ್ನದು~ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ನ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ ಲಭಿಸಿದೆ. <br /> <br /> ವಕೀಲೆ, ಸಾಹಿತಿ, ಹವ್ಯಾಸಿ ಪತ್ರಕರ್ತೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಕಾದಂಬರಿ, ಸಣ್ಣ ಕತೆ, ಲೇಖನ, ಕವನ, ಹನಿಗವನ, ಸುಭಾಷಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಂಜು ಕನ್ನಿಕಾ ತಮ್ಮ ಛಾಪು ಮೂಡಿಸಿದ್ದಾರೆ. <br /> <br /> ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸಾಹಿತ್ಯಕ ಚರ್ಚೆ, ವಿಚಾರ ಸಂಕಿರಣಗಳಲ್ಲೂ ಅವರ ಉಪಸ್ಥಿತಿ ಕಾಣಬಹುದು. ಇನ್ನು ರೇಡಿಯೋ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸಿರುತ್ತಾರೆ. ಮಕ್ಕಳಿಗಾಗಿ ಕಾನೂನು ಅರಿವಿನ ಲೇಖನಗಳು ಬರೆದಿದ್ದಾರೆ. ಅಷ್ಟೇ ಅಲ್ಲ, ಬಾಲಕಾರ್ಮಿಕರ ನಿರ್ಮೂಲನ ಶಿಬಿರಗಳನ್ನು ನಡೆಸಿದ್ದಾರೆ. <br /> <br /> ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸೇವೆಗಾಗಿ ಹತ್ತು- ಹಲವು ಪ್ರಶಸ್ತಿ, ಗೌರವಗಳು ಲಭಿಸಿದ್ದು, ಜಿಲ್ಲೆಯ ಉದಯೋನ್ಮುಖ ಲೇಖಕಿಯರಿಗೆ ರೂಪ ಸ್ಮರಣಾರ್ಥ ಮಾಲೂರಿನ ಚೈತನ್ಯ ಕಲಾನಿಕೇತನ ನೀಡುತ್ತಿರುವ ರೂಪ ಚೈತನ್ಯ ಪ್ರಶಸ್ತಿಗೆ ಮಂಜು ಕನ್ನಿಕಾ ಆಯ್ಕೆಯಾಗಿದ್ದಾರೆ. ಜೂನ್ 16ರಂದು ಮಾಲೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಲು:</strong> ಬಹುಮುಖ ಪ್ರತಿಭೆ ಮಂಜು ಕನ್ನಿಕಾ ಅವರ `ಗೆಜ್ಜೆ ನನ್ನದು ನೃತ್ಯ ನಿನ್ನದು~ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ನ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ ಲಭಿಸಿದೆ. <br /> <br /> ವಕೀಲೆ, ಸಾಹಿತಿ, ಹವ್ಯಾಸಿ ಪತ್ರಕರ್ತೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಕಾದಂಬರಿ, ಸಣ್ಣ ಕತೆ, ಲೇಖನ, ಕವನ, ಹನಿಗವನ, ಸುಭಾಷಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಂಜು ಕನ್ನಿಕಾ ತಮ್ಮ ಛಾಪು ಮೂಡಿಸಿದ್ದಾರೆ. <br /> <br /> ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸಾಹಿತ್ಯಕ ಚರ್ಚೆ, ವಿಚಾರ ಸಂಕಿರಣಗಳಲ್ಲೂ ಅವರ ಉಪಸ್ಥಿತಿ ಕಾಣಬಹುದು. ಇನ್ನು ರೇಡಿಯೋ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸಿರುತ್ತಾರೆ. ಮಕ್ಕಳಿಗಾಗಿ ಕಾನೂನು ಅರಿವಿನ ಲೇಖನಗಳು ಬರೆದಿದ್ದಾರೆ. ಅಷ್ಟೇ ಅಲ್ಲ, ಬಾಲಕಾರ್ಮಿಕರ ನಿರ್ಮೂಲನ ಶಿಬಿರಗಳನ್ನು ನಡೆಸಿದ್ದಾರೆ. <br /> <br /> ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸೇವೆಗಾಗಿ ಹತ್ತು- ಹಲವು ಪ್ರಶಸ್ತಿ, ಗೌರವಗಳು ಲಭಿಸಿದ್ದು, ಜಿಲ್ಲೆಯ ಉದಯೋನ್ಮುಖ ಲೇಖಕಿಯರಿಗೆ ರೂಪ ಸ್ಮರಣಾರ್ಥ ಮಾಲೂರಿನ ಚೈತನ್ಯ ಕಲಾನಿಕೇತನ ನೀಡುತ್ತಿರುವ ರೂಪ ಚೈತನ್ಯ ಪ್ರಶಸ್ತಿಗೆ ಮಂಜು ಕನ್ನಿಕಾ ಆಯ್ಕೆಯಾಗಿದ್ದಾರೆ. ಜೂನ್ 16ರಂದು ಮಾಲೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>