<p>ಈಗಲೂ ಗ್ರಾಮೀಣ ಪ್ರದೇಶದ ಶೇ 50ಕ್ಕೂ ಹೆಚ್ಚು ಜನರು ಬ್ಯಾಂಕಿಂಗ್ ಸೇವೆಯಿಂದ ಹೊರಗುಳಿದಿದ್ದಾರೆ. ಅವರನ್ನು ಬ್ಯಾಂಕಿಂಗ್ ಸೇವೆಗೆ ಸೇರ್ಪಡೆಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್, ಆರ್ಥಿಕ ಸೇರ್ಪಡೆ ಯೋಜನೆಯಡಿ ಮುಂದಾಗಿದೆ. <br /> <br /> ಪರಿಣಾಮ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಒಬ್ಬರೇ ಸಿಬ್ಬಂದಿ ನಿರ್ವಹಿಸುವ `ಅತಿ ಸಣ್ಣ ಶಾಖೆ (ಅಲ್ಟ್ರಾ ಸ್ಮಾಲ್ ಬ್ರಾಂಚ್) ಆರಂಭಿಸಲಾಗುತ್ತಿದೆ.<br /> <br /> ರಾಜ್ಯದ ಏಳು ಜಿಲ್ಲೆಗಳಲ್ಲಿ ಈ `ಅತಿ ಸಣ್ಣ ಶಾಖೆ~ ಬ್ಯಾಂಕಿಂಗ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಮಂಡ್ಯ ಜಿಲ್ಲೆಯೂ ಯೋಜನೆ ಜಾರಿಗೆ ಬಂದಿದೆ. ಜಿಲ್ಲೆಯ ಲೀಡ್ ಬ್ಯಾಂಕ್ ಸಹ ಆಗಿರುವ ವಿಜಯ ಬ್ಯಾಂಕ್ ಈಗಾಗಲೇ 122 ಗ್ರಾಮಗಳಲ್ಲಿ `ಅತಿ ಸಣ್ಣ ಶಾಖೆ~ಗಳನ್ನು ಆರಂಭಿಸಿದೆ.<br /> <br /> ಗ್ರಾಮ ಪಂಚಾಯಿತಿ ಅಥವಾ ಸರ್ಕಾರಕ್ಕೆ ಸೇರಿದ ಕಟ್ಟಡದ ಕೊಠಡಿಗಳಲ್ಲಿ ಈ ಶಾಖೆಗಳನ್ನು ತೆರೆಯಲಾಗಿದ್ದು, ಇದರ ನಿರ್ವಹಣೆಗಾಗಿ ಎಸ್ಎಸ್ಎಲ್ಸಿ ತೇರ್ಗಡೆಯಾಗಿರುವ ಸ್ಥಳೀಯ ಯುವಕರೊಬ್ಬರನ್ನು ವ್ಯವಹಾರ ಪ್ರತಿನಿಧಿ ಎಂದು ನೇಮಿಸಿಕೊಳ್ಳಲಾಗಿದೆ.<br /> <br /> ಗ್ರಾಮದ ಮನೆ ಮನೆಗೆ ತೆರಳಿ ಬ್ಯಾಂಕ್ಗಳಲ್ಲಿ ಯಾವುದೇ ಖಾತೆ ಹೊಂದಿರದವರ ಮನವೊಲಿಸಿ ಖಾತೆ ಆರಂಭಿಸಲಾಗುತ್ತಿದೆ. ಹೊಸ ಖಾತೆದಾರರಿಗೆ ಭಾವಚಿತ್ರ ಸಹಿತ ಸ್ಮಾರ್ಟ್ ಕಾರ್ಡ್ (ಡೆಬಿಟ್ ಕಾರ್ಡ್ ಅಳತೆ) ನೀಡಲಾಗುತ್ತದೆ. <br /> <br /> ಅದರ ಬಳಕೆ ಬಗೆಗೂ ಅವರಿಗೆ ತಿಳಿಸಿಕೊಡಲಾಗುತ್ತದೆ. ಈ ಸ್ಮಾರ್ಟ್ ಬಳಸಿಕೊಂಡು ಖಾತೆದಾರರು ದಿನದಲ್ಲಿ 10 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗೂ ಹಣ ಜಮಾ ಮಾಡಬಹುದು ಅಥವಾ ವಾಪಸ್ ಪಡೆಯಬಹುದು.<br /> <br /> ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸಲಾಗಿದ್ದು, ಖಾತೆದಾರರ ಬೆರಳಚ್ಚು ಸ್ಕ್ಯಾನ್ ಮಾಡಿ ದಾಖಲಿಸಿಕೊಳ್ಳಲಾಗಿರುತ್ತದೆ. ಈ ವ್ಯವಹಾರಕ್ಕಾಗಿಯೇ 20 ಸೆ.ಮೀ. ಅಗಲ, ಅಷ್ಟೇ ಉದ್ದ ಹಾಗೂ ಐದು ಸೆ.ಮೀಟರ್ ಎತ್ತರದ ಟರ್ಮಿನಲ್ ಮಷಿನ್ ಈ `ಅತಿ ಸಣ್ಣ ಶಾಖೆ~ಗಳಲ್ಲಿ ಅಳವಡಿಸಲಾಗಿದೆ. <br /> <br /> ಪ್ರತಿ ಬಾರಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಮುನ್ನವೂ ಖಾತೆದಾರರ ಬೆರಳನ್ನು ಟರ್ಮಿನಲ್ ಮೆಷಿನ್ ಮೇಲೆ ನಿಗದಿಪಡಿಸಿದ ಜಾಗದಲ್ಲಿಟ್ಟು, ಬೆರಳಚ್ಚನ್ನು ಯಂತ್ರ ಗುರುತಿಸಿದ ನಂತರವೇ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. <br /> <br /> ಅನಕ್ಷರಸ್ಥರಿಗೂ ಇಲ್ಲಿ ವ್ಯವಹರಿಸುವುದು ಬಹಳ ಸುಲಭ. ಬೆರಳಚ್ಚು ಗುರುತಿಸಿದ ಯಂತ್ರ ಮುಂದಿನ ಹಂತಗಳಲ್ಲಿ ಏನೇನು ಮಾಡಬೇಕು ಎಂಬುದನ್ನು ಸೂಚಿಸುತ್ತಾ ಹೋಗುತ್ತದೆ. ಜಮಾ ಮಾಡಿದ ಅಥವಾ ವಾಪಸ್ ಪಡೆದ ಮೊತ್ತವನ್ನೂ ಈ ಪುಟ್ಟ ಯಂತ್ರ ತೋರಿಸುತ್ತದೆ. ಖಾತೆದಾರರು ಮೋಸ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಆರ್ಥಿಕ ಸೇರ್ಪಡೆ ಕೋಶದ ಮುಖ್ಯ ಪ್ರಬಂಧಕ ದಯಾಕರ ರೆಡ್ಡಿ.<br /> <br /> ವಿಜಯ ಬ್ಯಾಂಕ್, ಜಿಲ್ಲೆಯ 232 ಗ್ರಾಮ ಪಂಚಾಯಿತಿಗಳಲ್ಲಿಯೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗಾಗಿ `ಎಲೆಕ್ಟ್ರಾನಿಕ್ ಬೆನಿಫಿಟ್ ಟ್ರಾನ್ಸ್ಫರ್~ ಸೌಲಭ್ಯವನ್ನು ಒದಗಿಸುತ್ತಿದೆ. ಇಲ್ಲಿಯೂ ಟರ್ಮಿನಲ್ ಮೆಷಿನ್ ಮೂಲಕ ವ್ಯವಹರಿಸಲಾಗುತ್ತದೆ. <br /> <br /> ವಿಧವಾ, ಅಂಗವಿಕಲ, ವೃದ್ಧಾಪ್ಯ ಮುಂತಾದ ಮಾಸಾಶನದ ಗೌರವ ಧನವನ್ನು ಫಲಾನುಭವಿಗಳು, ಇನ್ನು ಮುಂದೆ ಬ್ಯಾಂಕ್ ಮೂಲಕ ಪಡೆಯಲಿದ್ದಾರೆ.<br /> <br /> <strong>ಮೈಕ್ರೊ ಇನ್ಷ್ಯೂರೆನ್ಸ್: </strong>ವಿಜಯ ಬ್ಯಾಂಕ್, ಭಾರತೀಯ ಜೀವವಿಮಾ ನಿಗಮ ಹಾಗೂ ಯುನೈಟೆಡ್ ಇನ್ಷ್ಯೂರೆನ್ಸ್ ಆಫ್ ಇಂಡಿಯ ಜತೆ ಮಾಡಿಕೊಂಡ ಒಪ್ಪಂದದಂತೆ ಮೈಕ್ರೊ ಇನ್ಷ್ಯೂರೆನ್ಸ್ ಪಾಲಿಸಿಗಳನ್ನೂ ಈ ಅತಿ ಸಣ್ಣ ಶಾಖೆಗಳಲ್ಲಿ ವಿತರಿಸಲಾಗುತ್ತದೆ.<br /> <br /> ಇವು ರೈತರಿಗೆ ಅನುಕೂಲವಾಗುವಂಥ ಪಾಲಿಸಿಗಳಾಗಿದ್ದು, ಪ್ರತಿ ವರ್ಷ ಕನಿಷ್ಠ 15 ರೂಪಾಯಿ ಕಂತಿನ ಸೌಲಭ್ಯದ ಪಾಲಿಸಿಗಳೂ ಇವೆ ಎನ್ನುತ್ತಾರೆ ರೆಡ್ಡಿ.ಅತಿ ಸಣ್ಣ ಶಾಖೆಗಳನ್ನು ತೆರೆದಿರುವುದರಿಂದ 122 ಜನರಿಗೆ ಉದ್ಯೋಗ ಅವಕಾಶ ಲಭಿಸಿದೆ. ಅವರಿಗೆ ಗೌರವ ಧನವಾಗಿ 1200 ರೂಪಾಯಿ ನೀಡಲಾಗುತ್ತದೆ.<br /> <br /> ಪ್ರತಿ ವ್ಯವಹಾರಕ್ಕೆ 50 ಪೈಸೆ ಕಮಿಷನ್ ನೀಡಲಾಗುತ್ತದೆ. ಈ ಶಾಖೆಗಳು, ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7 ರಿಂದ 11 ಹಾಗೂ ಸಂಜೆ 4 ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುತ್ತವೆ. ಜತೆಗೆ ಗ್ರಾಮೀಣ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಕ್ಕಂತಾಗುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಗಲೂ ಗ್ರಾಮೀಣ ಪ್ರದೇಶದ ಶೇ 50ಕ್ಕೂ ಹೆಚ್ಚು ಜನರು ಬ್ಯಾಂಕಿಂಗ್ ಸೇವೆಯಿಂದ ಹೊರಗುಳಿದಿದ್ದಾರೆ. ಅವರನ್ನು ಬ್ಯಾಂಕಿಂಗ್ ಸೇವೆಗೆ ಸೇರ್ಪಡೆಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್, ಆರ್ಥಿಕ ಸೇರ್ಪಡೆ ಯೋಜನೆಯಡಿ ಮುಂದಾಗಿದೆ. <br /> <br /> ಪರಿಣಾಮ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಒಬ್ಬರೇ ಸಿಬ್ಬಂದಿ ನಿರ್ವಹಿಸುವ `ಅತಿ ಸಣ್ಣ ಶಾಖೆ (ಅಲ್ಟ್ರಾ ಸ್ಮಾಲ್ ಬ್ರಾಂಚ್) ಆರಂಭಿಸಲಾಗುತ್ತಿದೆ.<br /> <br /> ರಾಜ್ಯದ ಏಳು ಜಿಲ್ಲೆಗಳಲ್ಲಿ ಈ `ಅತಿ ಸಣ್ಣ ಶಾಖೆ~ ಬ್ಯಾಂಕಿಂಗ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಮಂಡ್ಯ ಜಿಲ್ಲೆಯೂ ಯೋಜನೆ ಜಾರಿಗೆ ಬಂದಿದೆ. ಜಿಲ್ಲೆಯ ಲೀಡ್ ಬ್ಯಾಂಕ್ ಸಹ ಆಗಿರುವ ವಿಜಯ ಬ್ಯಾಂಕ್ ಈಗಾಗಲೇ 122 ಗ್ರಾಮಗಳಲ್ಲಿ `ಅತಿ ಸಣ್ಣ ಶಾಖೆ~ಗಳನ್ನು ಆರಂಭಿಸಿದೆ.<br /> <br /> ಗ್ರಾಮ ಪಂಚಾಯಿತಿ ಅಥವಾ ಸರ್ಕಾರಕ್ಕೆ ಸೇರಿದ ಕಟ್ಟಡದ ಕೊಠಡಿಗಳಲ್ಲಿ ಈ ಶಾಖೆಗಳನ್ನು ತೆರೆಯಲಾಗಿದ್ದು, ಇದರ ನಿರ್ವಹಣೆಗಾಗಿ ಎಸ್ಎಸ್ಎಲ್ಸಿ ತೇರ್ಗಡೆಯಾಗಿರುವ ಸ್ಥಳೀಯ ಯುವಕರೊಬ್ಬರನ್ನು ವ್ಯವಹಾರ ಪ್ರತಿನಿಧಿ ಎಂದು ನೇಮಿಸಿಕೊಳ್ಳಲಾಗಿದೆ.<br /> <br /> ಗ್ರಾಮದ ಮನೆ ಮನೆಗೆ ತೆರಳಿ ಬ್ಯಾಂಕ್ಗಳಲ್ಲಿ ಯಾವುದೇ ಖಾತೆ ಹೊಂದಿರದವರ ಮನವೊಲಿಸಿ ಖಾತೆ ಆರಂಭಿಸಲಾಗುತ್ತಿದೆ. ಹೊಸ ಖಾತೆದಾರರಿಗೆ ಭಾವಚಿತ್ರ ಸಹಿತ ಸ್ಮಾರ್ಟ್ ಕಾರ್ಡ್ (ಡೆಬಿಟ್ ಕಾರ್ಡ್ ಅಳತೆ) ನೀಡಲಾಗುತ್ತದೆ. <br /> <br /> ಅದರ ಬಳಕೆ ಬಗೆಗೂ ಅವರಿಗೆ ತಿಳಿಸಿಕೊಡಲಾಗುತ್ತದೆ. ಈ ಸ್ಮಾರ್ಟ್ ಬಳಸಿಕೊಂಡು ಖಾತೆದಾರರು ದಿನದಲ್ಲಿ 10 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗೂ ಹಣ ಜಮಾ ಮಾಡಬಹುದು ಅಥವಾ ವಾಪಸ್ ಪಡೆಯಬಹುದು.<br /> <br /> ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸಲಾಗಿದ್ದು, ಖಾತೆದಾರರ ಬೆರಳಚ್ಚು ಸ್ಕ್ಯಾನ್ ಮಾಡಿ ದಾಖಲಿಸಿಕೊಳ್ಳಲಾಗಿರುತ್ತದೆ. ಈ ವ್ಯವಹಾರಕ್ಕಾಗಿಯೇ 20 ಸೆ.ಮೀ. ಅಗಲ, ಅಷ್ಟೇ ಉದ್ದ ಹಾಗೂ ಐದು ಸೆ.ಮೀಟರ್ ಎತ್ತರದ ಟರ್ಮಿನಲ್ ಮಷಿನ್ ಈ `ಅತಿ ಸಣ್ಣ ಶಾಖೆ~ಗಳಲ್ಲಿ ಅಳವಡಿಸಲಾಗಿದೆ. <br /> <br /> ಪ್ರತಿ ಬಾರಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಮುನ್ನವೂ ಖಾತೆದಾರರ ಬೆರಳನ್ನು ಟರ್ಮಿನಲ್ ಮೆಷಿನ್ ಮೇಲೆ ನಿಗದಿಪಡಿಸಿದ ಜಾಗದಲ್ಲಿಟ್ಟು, ಬೆರಳಚ್ಚನ್ನು ಯಂತ್ರ ಗುರುತಿಸಿದ ನಂತರವೇ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. <br /> <br /> ಅನಕ್ಷರಸ್ಥರಿಗೂ ಇಲ್ಲಿ ವ್ಯವಹರಿಸುವುದು ಬಹಳ ಸುಲಭ. ಬೆರಳಚ್ಚು ಗುರುತಿಸಿದ ಯಂತ್ರ ಮುಂದಿನ ಹಂತಗಳಲ್ಲಿ ಏನೇನು ಮಾಡಬೇಕು ಎಂಬುದನ್ನು ಸೂಚಿಸುತ್ತಾ ಹೋಗುತ್ತದೆ. ಜಮಾ ಮಾಡಿದ ಅಥವಾ ವಾಪಸ್ ಪಡೆದ ಮೊತ್ತವನ್ನೂ ಈ ಪುಟ್ಟ ಯಂತ್ರ ತೋರಿಸುತ್ತದೆ. ಖಾತೆದಾರರು ಮೋಸ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಆರ್ಥಿಕ ಸೇರ್ಪಡೆ ಕೋಶದ ಮುಖ್ಯ ಪ್ರಬಂಧಕ ದಯಾಕರ ರೆಡ್ಡಿ.<br /> <br /> ವಿಜಯ ಬ್ಯಾಂಕ್, ಜಿಲ್ಲೆಯ 232 ಗ್ರಾಮ ಪಂಚಾಯಿತಿಗಳಲ್ಲಿಯೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗಾಗಿ `ಎಲೆಕ್ಟ್ರಾನಿಕ್ ಬೆನಿಫಿಟ್ ಟ್ರಾನ್ಸ್ಫರ್~ ಸೌಲಭ್ಯವನ್ನು ಒದಗಿಸುತ್ತಿದೆ. ಇಲ್ಲಿಯೂ ಟರ್ಮಿನಲ್ ಮೆಷಿನ್ ಮೂಲಕ ವ್ಯವಹರಿಸಲಾಗುತ್ತದೆ. <br /> <br /> ವಿಧವಾ, ಅಂಗವಿಕಲ, ವೃದ್ಧಾಪ್ಯ ಮುಂತಾದ ಮಾಸಾಶನದ ಗೌರವ ಧನವನ್ನು ಫಲಾನುಭವಿಗಳು, ಇನ್ನು ಮುಂದೆ ಬ್ಯಾಂಕ್ ಮೂಲಕ ಪಡೆಯಲಿದ್ದಾರೆ.<br /> <br /> <strong>ಮೈಕ್ರೊ ಇನ್ಷ್ಯೂರೆನ್ಸ್: </strong>ವಿಜಯ ಬ್ಯಾಂಕ್, ಭಾರತೀಯ ಜೀವವಿಮಾ ನಿಗಮ ಹಾಗೂ ಯುನೈಟೆಡ್ ಇನ್ಷ್ಯೂರೆನ್ಸ್ ಆಫ್ ಇಂಡಿಯ ಜತೆ ಮಾಡಿಕೊಂಡ ಒಪ್ಪಂದದಂತೆ ಮೈಕ್ರೊ ಇನ್ಷ್ಯೂರೆನ್ಸ್ ಪಾಲಿಸಿಗಳನ್ನೂ ಈ ಅತಿ ಸಣ್ಣ ಶಾಖೆಗಳಲ್ಲಿ ವಿತರಿಸಲಾಗುತ್ತದೆ.<br /> <br /> ಇವು ರೈತರಿಗೆ ಅನುಕೂಲವಾಗುವಂಥ ಪಾಲಿಸಿಗಳಾಗಿದ್ದು, ಪ್ರತಿ ವರ್ಷ ಕನಿಷ್ಠ 15 ರೂಪಾಯಿ ಕಂತಿನ ಸೌಲಭ್ಯದ ಪಾಲಿಸಿಗಳೂ ಇವೆ ಎನ್ನುತ್ತಾರೆ ರೆಡ್ಡಿ.ಅತಿ ಸಣ್ಣ ಶಾಖೆಗಳನ್ನು ತೆರೆದಿರುವುದರಿಂದ 122 ಜನರಿಗೆ ಉದ್ಯೋಗ ಅವಕಾಶ ಲಭಿಸಿದೆ. ಅವರಿಗೆ ಗೌರವ ಧನವಾಗಿ 1200 ರೂಪಾಯಿ ನೀಡಲಾಗುತ್ತದೆ.<br /> <br /> ಪ್ರತಿ ವ್ಯವಹಾರಕ್ಕೆ 50 ಪೈಸೆ ಕಮಿಷನ್ ನೀಡಲಾಗುತ್ತದೆ. ಈ ಶಾಖೆಗಳು, ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7 ರಿಂದ 11 ಹಾಗೂ ಸಂಜೆ 4 ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುತ್ತವೆ. ಜತೆಗೆ ಗ್ರಾಮೀಣ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಕ್ಕಂತಾಗುತ್ತಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>