<p><strong>ರಾಯಚೂರು:</strong> ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 341ನೇ ಆರಾಧನಾ ಮಹೋತ್ಸವದ 2ನೇ ದಿನವಾದ ಗುರುವಾರ ಋಗ್ವೇದ, ಯಜುರ್ವೇದ, ನಿತ್ಯ ಉಪಾಕರ್ಮ, ಶಾಖೋತ್ಸವ, ರಜತ ಮಂಟಪೋತ್ಸವ ಕಾರ್ಯಕ್ರಮ ನಡೆದವು.<br /> <br /> ರಾಯರ ಆರಾಧನಾ ಮಹೋತ್ಸವದ ಪೂರ್ವಾರಾಧನೆ 3ರಂದು ನಡೆಯಲಿದ್ದು, 4ರಂದು ಮಧ್ಯಾರಾಧನೆ ನಡೆಯಲಿದೆ. ಉತ್ತರಾರಾಧನೆ 5ರಂದು ಜರುಗಲಿದೆ. ಹೀಗಾಗಿ ಆರಾಧನಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಮಂತ್ರಾಲಯಕ್ಕೆ ಧಾವಿಸುತ್ತಿದ್ದಾರೆ.<br /> <br /> ಭಕ್ತರ ಮಹಾಪೂರದಿಂದಾಗಿ ಮಂತ್ರಾಲಯದಲ್ಲಿ ವಸತಿ ಸಮಸ್ಯೆ ಈ ವರ್ಷವೂ ಹೆಚ್ಚಾಗಿದೆ. ಭಕ್ತರು ಕೊಠಡಿಗಾಗಿ ಪರದಾಡುತ್ತಿದ್ದಾರೆ. ಮಠದ ವಸತಿಗೃಹಗಳು ಭರ್ತಿಯಾಗಿದ್ದು, ದಾನಿಗಳೇ ಹೆಚ್ಚು ಕೊಠಡಿ ಪಡೆದಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.<br /> <br /> ಶ್ರೀಮಠದ್ದೇ 700ಕ್ಕೂ ಹೆಚ್ಚು ಕೊಠಡಿಗಳಿವೆ. ಕೊಠಡಿ ನಿರ್ಮಿಸಿಕೊಟ್ಟ ದಾನಿಗಳ ಕುಟುಂಬ ವರ್ಗಕ್ಕೆ ವರ್ಷದ 60 ದಿನ ಕೊಠಡಿ ದೊರಕಿಸುವ ಒಪ್ಪಂದವಿದೆ. ಹೀಗಾಗಿ ಆರಾಧನೆ ಸಂದರ್ಭದಲ್ಲಿ, ರಜೆ ಅವಧಿಯಲ್ಲಿ ಅವರು ಕೊಠಡಿ ಪಡೆಯುತ್ತಾರೆ. ಭಕ್ತರು ಸಹಕರಿಸಬೇಕು ಎಂದು ಶ್ರೀಮಠ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತದೆ."<br /> <br /> ಖಾಸಗಿ ಹೋಟೆಲ್, ವಸತಿಗೃಹಗಳು ದರಗಳನ್ನು ಮೂರು ಪಟ್ಟು ಹೆಚ್ಚಿಸಿವೆ. ಹೀಗಾಗಿ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮಠದ ಪ್ರಾಕಾರವೇ ಗತಿಯಾಗಲಿದೆ.<br /> <br /> ಭಕ್ತರ ಅನುಕೂಲಕ್ಕೆ ಕುಡಿಯವ ನೀರಿನ ವ್ಯವಸ್ಥೆ, 24 ತಾಸು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ, ಪರಿಮಳ ಪ್ರಸಾದದ ಪೊಟ್ಟಣ ಪ್ರತಿನಿತ್ಯ 1 ಲಕ್ಷ ಭಕ್ತರಿಗೆ ವಿತರಣೆಗೆ ಸಿದ್ಧಪಡಿಸಲಾಗುತ್ತಿದೆ. ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಬಾರಿ ಅನ್ನಪೂರ್ಣ ಭೋಜನ ಶಾಲೆಯಲ್ಲಿಯೇ ನಿತ್ಯ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ನಡೆಯಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 341ನೇ ಆರಾಧನಾ ಮಹೋತ್ಸವದ 2ನೇ ದಿನವಾದ ಗುರುವಾರ ಋಗ್ವೇದ, ಯಜುರ್ವೇದ, ನಿತ್ಯ ಉಪಾಕರ್ಮ, ಶಾಖೋತ್ಸವ, ರಜತ ಮಂಟಪೋತ್ಸವ ಕಾರ್ಯಕ್ರಮ ನಡೆದವು.<br /> <br /> ರಾಯರ ಆರಾಧನಾ ಮಹೋತ್ಸವದ ಪೂರ್ವಾರಾಧನೆ 3ರಂದು ನಡೆಯಲಿದ್ದು, 4ರಂದು ಮಧ್ಯಾರಾಧನೆ ನಡೆಯಲಿದೆ. ಉತ್ತರಾರಾಧನೆ 5ರಂದು ಜರುಗಲಿದೆ. ಹೀಗಾಗಿ ಆರಾಧನಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಮಂತ್ರಾಲಯಕ್ಕೆ ಧಾವಿಸುತ್ತಿದ್ದಾರೆ.<br /> <br /> ಭಕ್ತರ ಮಹಾಪೂರದಿಂದಾಗಿ ಮಂತ್ರಾಲಯದಲ್ಲಿ ವಸತಿ ಸಮಸ್ಯೆ ಈ ವರ್ಷವೂ ಹೆಚ್ಚಾಗಿದೆ. ಭಕ್ತರು ಕೊಠಡಿಗಾಗಿ ಪರದಾಡುತ್ತಿದ್ದಾರೆ. ಮಠದ ವಸತಿಗೃಹಗಳು ಭರ್ತಿಯಾಗಿದ್ದು, ದಾನಿಗಳೇ ಹೆಚ್ಚು ಕೊಠಡಿ ಪಡೆದಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.<br /> <br /> ಶ್ರೀಮಠದ್ದೇ 700ಕ್ಕೂ ಹೆಚ್ಚು ಕೊಠಡಿಗಳಿವೆ. ಕೊಠಡಿ ನಿರ್ಮಿಸಿಕೊಟ್ಟ ದಾನಿಗಳ ಕುಟುಂಬ ವರ್ಗಕ್ಕೆ ವರ್ಷದ 60 ದಿನ ಕೊಠಡಿ ದೊರಕಿಸುವ ಒಪ್ಪಂದವಿದೆ. ಹೀಗಾಗಿ ಆರಾಧನೆ ಸಂದರ್ಭದಲ್ಲಿ, ರಜೆ ಅವಧಿಯಲ್ಲಿ ಅವರು ಕೊಠಡಿ ಪಡೆಯುತ್ತಾರೆ. ಭಕ್ತರು ಸಹಕರಿಸಬೇಕು ಎಂದು ಶ್ರೀಮಠ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತದೆ."<br /> <br /> ಖಾಸಗಿ ಹೋಟೆಲ್, ವಸತಿಗೃಹಗಳು ದರಗಳನ್ನು ಮೂರು ಪಟ್ಟು ಹೆಚ್ಚಿಸಿವೆ. ಹೀಗಾಗಿ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮಠದ ಪ್ರಾಕಾರವೇ ಗತಿಯಾಗಲಿದೆ.<br /> <br /> ಭಕ್ತರ ಅನುಕೂಲಕ್ಕೆ ಕುಡಿಯವ ನೀರಿನ ವ್ಯವಸ್ಥೆ, 24 ತಾಸು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ, ಪರಿಮಳ ಪ್ರಸಾದದ ಪೊಟ್ಟಣ ಪ್ರತಿನಿತ್ಯ 1 ಲಕ್ಷ ಭಕ್ತರಿಗೆ ವಿತರಣೆಗೆ ಸಿದ್ಧಪಡಿಸಲಾಗುತ್ತಿದೆ. ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಬಾರಿ ಅನ್ನಪೂರ್ಣ ಭೋಜನ ಶಾಲೆಯಲ್ಲಿಯೇ ನಿತ್ಯ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ನಡೆಯಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>