<p>ಸುರಪುರ: ಅದು ಸುರಪುರ ರಂಗಂಪೇಟೆ ಮುಖ್ಯ ರಸ್ತೆಯಲ್ಲಿರುವ ಸ್ಥಳ. ಯಾವಾಗಲು ಈ ರಸ್ತೆ ವಾಹನಗಳು ಮತ್ತು ಜನರಿಂದ ದಟ್ಟಣೆಯಾಗಿರುತ್ತದೆ. ಮಂಗಳವಾರ ಮದನಷಾ ವಲಿ ದರ್ಗಾ ಹತ್ತಿರ ಜನಸಾಗರವೇ ಸೇರಿತ್ತು. ಸೇರಿದ್ದ ಜನರಲ್ಲಿ ಕಣ್ಣೀರು ಧಾರೆ ಹರಿಯುತ್ತಿತ್ತು. ಕೆಲವರು ಅಲ್ಲಿದ್ದ ಮಹಿಳೆಯೊಬ್ಬಳಿಗೆ ವಾಚಾಮ ಗೋಚರ ನಿಂದಿಸುತ್ತಿದ್ದರು. ಇನ್ನೂ ಕೆಲವರು ಆಕೆಗೆ ಧರ್ಮದೇಟು ಹಾಕುತ್ತಿದ್ದರು.<br /> <br /> ಇದು ಮಂಗಳವಾರ ನಡೆದ ಹೃದಯವಿದ್ರಾವಕ ಘಟನೆ. ಕ್ರೂರ ತಾಯಿಯೊಬ್ಬಳು ತಾನೆ ಹೆತ್ತ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಘಟನೆ ಅಲ್ಲಿ ನಡದಿತ್ತು. ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದ ಸುಗೂರ ಓಣಿಯ ಭೀಮಬಾಯಿ ಕಲ್ಲಪ್ಪ ವಿರುಪಾಪುರ್ ಎಂಬಾಕೆ ತನ್ನ ಮಕ್ಕಳಾದ ಪ್ರತಿಭಾ (3) ಮತ್ತು ಬಸವರಾಜ (2 ತಿಂಗಳು) ನೋಡು ನೋಡುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಸತ್ತ ಮಕ್ಕಳನ್ನು ತನ್ನ ಪಕ್ಕದಲ್ಲಿ ಹಾಸಿಗೆಯ ಮೇಲೆ ಮಲಗಿಸಿ ಆಕೆ ಅಳುತ್ತಿದ್ದಳು. ಎರಡು ಹಸುಳೆಗಳ ಕಳೆ ಬರಗಳನ್ನು ನೋಡಿದರೆ ಹೃದಯ ಕಿತ್ತು ಬರುವಂತಿತ್ತು.<br /> <br /> ಭೀಮಬಾಯಿ ಮಾನಸಿಕ ಅಸ್ವಸ್ಥೆ ಎಂದು ಶಂಕಿಸಲಾಗಿದೆ. ಸೋಮವಾರವೆ ಈಕೆ ಸುರಪುರಕ್ಕೆ ಬಂದಿದ್ದಳು. ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಕ್ರಿಮಿನಾಶಕ ಕೇಳಿದ್ದಳು ಎನ್ನಲಾಗಿದೆ. ಆದರೆ ಅಂಗಡಿಯವರು ಕ್ರಿಮಿನಾಶಕ ಕೊಡಲು ನಿರಾಕರಿಸಿದ್ದಾರೆ. ಮಂಗಳವಾರ ಈ ಕೃತ್ಯ ಎಸಗಿದ್ದಾಳೆ.<br /> <br /> ದಾರಿಹೋಕರು ಈ ದೃಶ್ಯವನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಿಸಿದಾಗ ಮಕ್ಕಳನ್ನು ತಾನೆ ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ಅದು ಸುರಪುರ ರಂಗಂಪೇಟೆ ಮುಖ್ಯ ರಸ್ತೆಯಲ್ಲಿರುವ ಸ್ಥಳ. ಯಾವಾಗಲು ಈ ರಸ್ತೆ ವಾಹನಗಳು ಮತ್ತು ಜನರಿಂದ ದಟ್ಟಣೆಯಾಗಿರುತ್ತದೆ. ಮಂಗಳವಾರ ಮದನಷಾ ವಲಿ ದರ್ಗಾ ಹತ್ತಿರ ಜನಸಾಗರವೇ ಸೇರಿತ್ತು. ಸೇರಿದ್ದ ಜನರಲ್ಲಿ ಕಣ್ಣೀರು ಧಾರೆ ಹರಿಯುತ್ತಿತ್ತು. ಕೆಲವರು ಅಲ್ಲಿದ್ದ ಮಹಿಳೆಯೊಬ್ಬಳಿಗೆ ವಾಚಾಮ ಗೋಚರ ನಿಂದಿಸುತ್ತಿದ್ದರು. ಇನ್ನೂ ಕೆಲವರು ಆಕೆಗೆ ಧರ್ಮದೇಟು ಹಾಕುತ್ತಿದ್ದರು.<br /> <br /> ಇದು ಮಂಗಳವಾರ ನಡೆದ ಹೃದಯವಿದ್ರಾವಕ ಘಟನೆ. ಕ್ರೂರ ತಾಯಿಯೊಬ್ಬಳು ತಾನೆ ಹೆತ್ತ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ ಘಟನೆ ಅಲ್ಲಿ ನಡದಿತ್ತು. ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದ ಸುಗೂರ ಓಣಿಯ ಭೀಮಬಾಯಿ ಕಲ್ಲಪ್ಪ ವಿರುಪಾಪುರ್ ಎಂಬಾಕೆ ತನ್ನ ಮಕ್ಕಳಾದ ಪ್ರತಿಭಾ (3) ಮತ್ತು ಬಸವರಾಜ (2 ತಿಂಗಳು) ನೋಡು ನೋಡುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಸತ್ತ ಮಕ್ಕಳನ್ನು ತನ್ನ ಪಕ್ಕದಲ್ಲಿ ಹಾಸಿಗೆಯ ಮೇಲೆ ಮಲಗಿಸಿ ಆಕೆ ಅಳುತ್ತಿದ್ದಳು. ಎರಡು ಹಸುಳೆಗಳ ಕಳೆ ಬರಗಳನ್ನು ನೋಡಿದರೆ ಹೃದಯ ಕಿತ್ತು ಬರುವಂತಿತ್ತು.<br /> <br /> ಭೀಮಬಾಯಿ ಮಾನಸಿಕ ಅಸ್ವಸ್ಥೆ ಎಂದು ಶಂಕಿಸಲಾಗಿದೆ. ಸೋಮವಾರವೆ ಈಕೆ ಸುರಪುರಕ್ಕೆ ಬಂದಿದ್ದಳು. ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಕ್ರಿಮಿನಾಶಕ ಕೇಳಿದ್ದಳು ಎನ್ನಲಾಗಿದೆ. ಆದರೆ ಅಂಗಡಿಯವರು ಕ್ರಿಮಿನಾಶಕ ಕೊಡಲು ನಿರಾಕರಿಸಿದ್ದಾರೆ. ಮಂಗಳವಾರ ಈ ಕೃತ್ಯ ಎಸಗಿದ್ದಾಳೆ.<br /> <br /> ದಾರಿಹೋಕರು ಈ ದೃಶ್ಯವನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಿಸಿದಾಗ ಮಕ್ಕಳನ್ನು ತಾನೆ ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>