<p>ರಾಜ್ಯದಲ್ಲಿ 14,500 ಮಕ್ಕಳು ಎಚ್ಐವಿ ಸೋಂಕಿನೊಂದಿಗೆ ಬದುಕುತ್ತಿರುವ ಮಾಹಿತಿ ಆತಂಕಕಾರಿ. ಈ ಪೈಕಿ 4500 ಮಕ್ಕಳು ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಮತ್ತು ವಿಜಾಪುರ ಜಿಲ್ಲೆಗಳಿಗೆ ಸೇರಿದವರು ಎಂಬುದನ್ನು ಗಮನಿಸಬೇಕು. <br /> <br /> ವರ್ಷದಿಂದ ವರ್ಷಕ್ಕೆ ಈ ಐದು ಜಿಲ್ಲೆಗಳಲ್ಲಿ ಸೋಂಕಿಗೆ ಗುರಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಅದರಲ್ಲೂ ಕಳೆದ ಜನವರಿಯಿಂದ ಡಿಸೆಂಬರ್ವರೆಗೆ ಒಟ್ಟು 1501 ಮಕ್ಕಳು ಹೊಸದಾಗಿ ಎಚ್ಐವಿ ಸೋಂಕಿಗೆ ಗುರಿಯಾಗಿದ್ದಾರೆ ಎಂಬ ವಿಚಾರ ಇನ್ನೂ ಆಘಾತಕಾರಿ. <br /> <br /> ವಾಸ್ತವವಾಗಿ, ಎಚ್ಐವಿ ಸೋಂಕು ಹೆಚ್ಚು ವ್ಯಾಪಕವಾಗಿ ಇರುವ ಜಿಲ್ಲೆಗಳಾಗಿದ್ದರೂ ಇಲ್ಲಿ ಸೋಂಕು ತಡೆಗಾಗಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂಬ ಸಂಶಯಕ್ಕೆ ಆಸ್ಪದವಾಗಿದೆ.<br /> <br /> ಎಚ್ಐವಿ ಸೋಂಕು ಇರುವ ತಾಯಂದಿರಿಗೆ ಜನಿಸುವ ಮಕ್ಕಳು ಎಚ್ಐವಿ ಸೋಂಕು ಹೊಂದುವ ಅಪಾಯ ಇದ್ದೇ ಇರುವುದು ವಾಸ್ತವ. ಇದನ್ನು ತಪ್ಪಿಸಲೆಂದೇ ಪಿಎಂಟಿಸಿಟಿ ಕಾರ್ಯಕ್ರಮ (ಪ್ರಿವೆನ್ಷನ್ ಆಫ್ ಮದರ್ ಟು ಚೈಲ್ಡ್ ಟ್ರಾನ್ಸ್ಮಿಷನ್ - ತಾಯಿಯಿಂದ ಮಗುವಿಗೆ ಸೋಂಕು ರವಾನೆ ತಡೆ) ಜಾರಿಯಲ್ಲಿದೆ. <br /> <br /> ಆದರೆ ಬಹಳಷ್ಟು ಎಚ್ಐವಿ ಸೋಂಕಿತ ತಾಯಂದಿರಿಗೆ ಈ ಕಾರ್ಯಕ್ರಮಗಳ ಕುರಿತು ಅರಿವಿಲ್ಲ. ಚಿಕಿತ್ಸೆಗಿಂತ ಮುಂಜಾಗರೂಕತೆಯೇ ಮುಖ್ಯವಾದದ್ದರಿಂದ, ಗರ್ಭಿಣಿ ಇರುವಾಗಲೇ ಎಚ್ಐವಿ ಪರೀಕ್ಷೆಗೊಳಪಡಬೇಕಾದ ಅಗತ್ಯವನ್ನು ಜನರಿಗೆ ಮನಗಾಣಿಸಬೇಕಿದೆ. ಇಂತಹ ಕ್ರಮದಿಂದ ಎರಡು ರೀತಿಯ ಅನುಕೂಲಗಳಿವೆ.<br /> <br /> ಒಂದು ಹೆರಿಗೆಗೆ ಮುಂಚೆಯೇ ಎಚ್ಐವಿ ಸೋಂಕಿತ ಗರ್ಭಿಣಿಯನ್ನು ಸುಲಭವಾಗಿ ಗುರುತಿಸಬಹುದು. ನಂತರ ಸೂಕ್ತ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಚ್ಐವಿ ಸೋಂಕಿನಿಂದ ಮಗುವನ್ನು ರಕ್ಷಿಸುವುದು ಸಾಧ್ಯವಾಗುತ್ತದೆ. <br /> <br /> ಸಾಮಾಜಿಕ ಕಾರಣಗಳಿಗಾಗಿ ಎಚ್ಐವಿ ಪರೀಕ್ಷೆ ಕುರಿತಂತೆ ಮಹಿಳೆಯರು ಭಯ ಪಡುತ್ತಾರೆ. ಹೀಗಾಗಿ ಈ ಪರೀಕ್ಷೆಗೆ ಅವರನ್ನು ಒಪ್ಪಿಸುವುದು ಕಷ್ಟ. ಗರ್ಭಿಣಿಯ ಅನುಮತಿ ಪಡೆದು ಎಚ್ಐವಿ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಇನ್ನೂ ವ್ಯಾಪಕವಾಗಬೇಕಿವೆ.<br /> <br /> ಏಕೆಂದರೆ, ಹೆರಿಗೆಯ ಸಂದರ್ಭ ಮಾತ್ರವೇ ಎಚ್ಐವಿ ಸೋಂಕು ತಡೆಗಟ್ಟಬಹುದಾದ ಕಡೆಯ ಒಂದು ಅವಕಾಶ ಎಂಬುದನ್ನು ನಾವು ನೆನಪಿಡಬೇಕು. ಭಾರತಕ್ಕೆ ಎಚ್ಐವಿ ಸೋಂಕು ಮುಕ್ತ ಪೀಳಿಗೆಯ ಅಗತ್ಯವಿದೆ; ಯಾವ ನವಜಾತ ಶಿಶುವೂ ಸೋಂಕಿನಿಂದ ನರಳಬಾರದು ಎಂಬುದು ಆದ್ಯತೆಯಾಗಬೇಕು. <br /> <br /> ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕಿನ ರವಾನೆ ಎಂಬುದು, ಆ ಮಗುವಿನ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಸರ್ಕಾರ ಪರಿಗಣಿಸಬೇಕು. ಇದರ ಜೊತೆಗೆ, ಸೋಂಕು ಹೊಂದಿದ ಮಕ್ಕಳಿಗೆ ಹೆಚ್ಚು ಪೌಷ್ಟಿಕ ಆಹಾರದ ಅಗತ್ಯವೂ ಇದೆ. ಚಿಕಿತ್ಸೆ ಪಡೆಯುವ ಸಂದರ್ಭದಲ್ಲಂತೂ ಇದು ಅಗತ್ಯ. <br /> <br /> ಎಚ್ಐವಿ ಸೋಂಕಿನ ಜೊತೆಗೆ 6000 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂಬುದನ್ನೂ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಈ ಎಲ್ಲಾ ಸಮಸ್ಯೆಗಳಿಗೂ ಸಮಗ್ರ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪುಗೊಳಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ 14,500 ಮಕ್ಕಳು ಎಚ್ಐವಿ ಸೋಂಕಿನೊಂದಿಗೆ ಬದುಕುತ್ತಿರುವ ಮಾಹಿತಿ ಆತಂಕಕಾರಿ. ಈ ಪೈಕಿ 4500 ಮಕ್ಕಳು ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಮತ್ತು ವಿಜಾಪುರ ಜಿಲ್ಲೆಗಳಿಗೆ ಸೇರಿದವರು ಎಂಬುದನ್ನು ಗಮನಿಸಬೇಕು. <br /> <br /> ವರ್ಷದಿಂದ ವರ್ಷಕ್ಕೆ ಈ ಐದು ಜಿಲ್ಲೆಗಳಲ್ಲಿ ಸೋಂಕಿಗೆ ಗುರಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಅದರಲ್ಲೂ ಕಳೆದ ಜನವರಿಯಿಂದ ಡಿಸೆಂಬರ್ವರೆಗೆ ಒಟ್ಟು 1501 ಮಕ್ಕಳು ಹೊಸದಾಗಿ ಎಚ್ಐವಿ ಸೋಂಕಿಗೆ ಗುರಿಯಾಗಿದ್ದಾರೆ ಎಂಬ ವಿಚಾರ ಇನ್ನೂ ಆಘಾತಕಾರಿ. <br /> <br /> ವಾಸ್ತವವಾಗಿ, ಎಚ್ಐವಿ ಸೋಂಕು ಹೆಚ್ಚು ವ್ಯಾಪಕವಾಗಿ ಇರುವ ಜಿಲ್ಲೆಗಳಾಗಿದ್ದರೂ ಇಲ್ಲಿ ಸೋಂಕು ತಡೆಗಾಗಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂಬ ಸಂಶಯಕ್ಕೆ ಆಸ್ಪದವಾಗಿದೆ.<br /> <br /> ಎಚ್ಐವಿ ಸೋಂಕು ಇರುವ ತಾಯಂದಿರಿಗೆ ಜನಿಸುವ ಮಕ್ಕಳು ಎಚ್ಐವಿ ಸೋಂಕು ಹೊಂದುವ ಅಪಾಯ ಇದ್ದೇ ಇರುವುದು ವಾಸ್ತವ. ಇದನ್ನು ತಪ್ಪಿಸಲೆಂದೇ ಪಿಎಂಟಿಸಿಟಿ ಕಾರ್ಯಕ್ರಮ (ಪ್ರಿವೆನ್ಷನ್ ಆಫ್ ಮದರ್ ಟು ಚೈಲ್ಡ್ ಟ್ರಾನ್ಸ್ಮಿಷನ್ - ತಾಯಿಯಿಂದ ಮಗುವಿಗೆ ಸೋಂಕು ರವಾನೆ ತಡೆ) ಜಾರಿಯಲ್ಲಿದೆ. <br /> <br /> ಆದರೆ ಬಹಳಷ್ಟು ಎಚ್ಐವಿ ಸೋಂಕಿತ ತಾಯಂದಿರಿಗೆ ಈ ಕಾರ್ಯಕ್ರಮಗಳ ಕುರಿತು ಅರಿವಿಲ್ಲ. ಚಿಕಿತ್ಸೆಗಿಂತ ಮುಂಜಾಗರೂಕತೆಯೇ ಮುಖ್ಯವಾದದ್ದರಿಂದ, ಗರ್ಭಿಣಿ ಇರುವಾಗಲೇ ಎಚ್ಐವಿ ಪರೀಕ್ಷೆಗೊಳಪಡಬೇಕಾದ ಅಗತ್ಯವನ್ನು ಜನರಿಗೆ ಮನಗಾಣಿಸಬೇಕಿದೆ. ಇಂತಹ ಕ್ರಮದಿಂದ ಎರಡು ರೀತಿಯ ಅನುಕೂಲಗಳಿವೆ.<br /> <br /> ಒಂದು ಹೆರಿಗೆಗೆ ಮುಂಚೆಯೇ ಎಚ್ಐವಿ ಸೋಂಕಿತ ಗರ್ಭಿಣಿಯನ್ನು ಸುಲಭವಾಗಿ ಗುರುತಿಸಬಹುದು. ನಂತರ ಸೂಕ್ತ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಚ್ಐವಿ ಸೋಂಕಿನಿಂದ ಮಗುವನ್ನು ರಕ್ಷಿಸುವುದು ಸಾಧ್ಯವಾಗುತ್ತದೆ. <br /> <br /> ಸಾಮಾಜಿಕ ಕಾರಣಗಳಿಗಾಗಿ ಎಚ್ಐವಿ ಪರೀಕ್ಷೆ ಕುರಿತಂತೆ ಮಹಿಳೆಯರು ಭಯ ಪಡುತ್ತಾರೆ. ಹೀಗಾಗಿ ಈ ಪರೀಕ್ಷೆಗೆ ಅವರನ್ನು ಒಪ್ಪಿಸುವುದು ಕಷ್ಟ. ಗರ್ಭಿಣಿಯ ಅನುಮತಿ ಪಡೆದು ಎಚ್ಐವಿ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಇನ್ನೂ ವ್ಯಾಪಕವಾಗಬೇಕಿವೆ.<br /> <br /> ಏಕೆಂದರೆ, ಹೆರಿಗೆಯ ಸಂದರ್ಭ ಮಾತ್ರವೇ ಎಚ್ಐವಿ ಸೋಂಕು ತಡೆಗಟ್ಟಬಹುದಾದ ಕಡೆಯ ಒಂದು ಅವಕಾಶ ಎಂಬುದನ್ನು ನಾವು ನೆನಪಿಡಬೇಕು. ಭಾರತಕ್ಕೆ ಎಚ್ಐವಿ ಸೋಂಕು ಮುಕ್ತ ಪೀಳಿಗೆಯ ಅಗತ್ಯವಿದೆ; ಯಾವ ನವಜಾತ ಶಿಶುವೂ ಸೋಂಕಿನಿಂದ ನರಳಬಾರದು ಎಂಬುದು ಆದ್ಯತೆಯಾಗಬೇಕು. <br /> <br /> ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕಿನ ರವಾನೆ ಎಂಬುದು, ಆ ಮಗುವಿನ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಸರ್ಕಾರ ಪರಿಗಣಿಸಬೇಕು. ಇದರ ಜೊತೆಗೆ, ಸೋಂಕು ಹೊಂದಿದ ಮಕ್ಕಳಿಗೆ ಹೆಚ್ಚು ಪೌಷ್ಟಿಕ ಆಹಾರದ ಅಗತ್ಯವೂ ಇದೆ. ಚಿಕಿತ್ಸೆ ಪಡೆಯುವ ಸಂದರ್ಭದಲ್ಲಂತೂ ಇದು ಅಗತ್ಯ. <br /> <br /> ಎಚ್ಐವಿ ಸೋಂಕಿನ ಜೊತೆಗೆ 6000 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂಬುದನ್ನೂ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಈ ಎಲ್ಲಾ ಸಮಸ್ಯೆಗಳಿಗೂ ಸಮಗ್ರ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪುಗೊಳಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>